• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಯುಪಿಯಲ್ಲಿ ಬಿಜೆಪಿ ಸೋಲಿಸಲು ರಣವೀಳ್ಯ ಪಡೆದ ಟೀಕಾಯತ್ ಹೊಸ ಅಸ್ತ್ರ!!

Tulunadu News Posted On December 1, 2021
0


0
Shares
  • Share On Facebook
  • Tweet It

ಮಲಗಿದ್ದವರನ್ನು ಎಬ್ಬಿಸಬಹುದು, ಆದರೆ ಮಲಗಿದ್ದಂತೆ ನಾಟಕ ಮಾಡುವವರನ್ನು ಎಬ್ಬಿಸಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಅದೇ ರೀತಿಯಲ್ಲಿ ತಮ್ಮ ನೈಜ ಬೇಡಿಕೆಗಳನ್ನು ಈಡೇರಿಸಲು ಪ್ರತಿಭಟನೆ ಮಾಡುವವರನ್ನು ಸಮಾಧಾನಗೊಳಿಸಬಹುದು. ಆದರೆ ಪ್ರತಿಭಟನೆಯ ಹಿಂದೆ ಬೇರೆಯದ್ದೇ ಏಜೆಂಡಾ ಇಟ್ಟುಕೊಂಡು ಕುಳಿತವರನ್ನು ಸುಲಭದಲ್ಲಿ ಸಮಾಧಾನಿಸಲು ಸಾಧ್ಯವಿಲ್ಲ. ಅಂತಹ ಒಂದು ವಿಲಕ್ಷಣ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ದಾಮೋದರದಾಸ ಮೋದಿ ಎದುರಿಸುತ್ತಿದ್ದಾರೆ. ದೇಶವನ್ನು ಉತ್ತಮ ಮಾರ್ಗದಲ್ಲಿ ತೆಗೆದುಕೊಂಡು ಹೋಗಲು ಪರಿಶ್ರಮ ಮತ್ತು ಗುರಿ ಮಾತ್ರ ಇದ್ದರೆ ಸಾಕಾಗಲ್ಲ, ರಾಜಕೀಯ ಕೂಡ ಮಾಡಬೇಕು ಎನ್ನುವುದು ಮೋದಿಯವರಿಗೆ ಗೊತ್ತಿಲ್ಲದ ಸಂಗತಿ ಏನಾಗಿರಲಿಲ್ಲ. ಅವರು 13 ವರ್ಷ ಗುಜರಾತನ್ನು ಮತ್ತು ಏಳನೇ ವರ್ಷ ಭಾರತವನ್ನು ಮುನ್ನಡೆಸಿಕೊಂಡು ಬಂದವರು. ಆದರೆ ಚುನಾವಣೆಯಲ್ಲಿ ಗೆಲ್ಲಲು ರಾಜಕೀಯವೇ ಮಾಡಬೇಕಾಗುತ್ತದೆ ಎಂದು ಅವರಿಗೆ ಒಂದು ಪ್ರತಿಭಟನೆ ತೋರಿಸಿಕೊಟ್ಟಿತ್ತು. ಈ ದೇಶದಲ್ಲಿ ಎರಡು ವಿಷಯಗಳಲ್ಲಿ ರಾಜಕೀಯ ಮಾಡಬಹುದು ಎನ್ನುವುದನ್ನು ಈ ದೇಶವನ್ನು ಆಳಿದವರು ಮತ್ತು ಆಳುವವರು ತೋರಿಸಿಕೊಟ್ಟಿದ್ದಾರೆ. ಅದರಲ್ಲಿ ಒಬ್ಬ ಯೋಧ ಮತ್ತೊಬ್ಬ ರೈತ. ಯೋಧರು ಏರ್ ಸ್ಟ್ರೈಕ್ ಮಾಡಿದಾಗ ಮೋದಿಯವರಿಗೆ ಮೈಲೇಜ್ ಸಿಕ್ಕಿದೆ. ಅದೇ ವಿಪಕ್ಷಗಳ ಕುಮ್ಮಕ್ಕಿನಿಂದ ರೈತರ ಹೆಸರಿನಲ್ಲಿ ಕೆಲವರು ಪ್ರತಿಭಟನೆ ಮಾಡಿದಾಗ ಮೋದಿಯವರಿಗೆ ಹಿನ್ನಡೆಯಾಗಿದೆ. ಈ ಎರಡರಲ್ಲಿಯೂ ಕೇಂದ್ರ ಸರಕಾರ ಸುದ್ದಿಯಲ್ಲಿತ್ತು. ಅಷ್ಟಕ್ಕೂ ಈ ರೈತರ ಹೆಸರಿನ ಹೋರಾಟದಲ್ಲಿ ಅವರ ಮುಖ್ಯ ಉದ್ದೇಶ ಏನಿತ್ತು ಎಂದರೆ ರೈತರಿಗಾಗಿ ಮಾಡಿದ ಮೂರು ಕಾಯ್ದೆಗಳನ್ನು ಕೇಂದ್ರ ಹಿಂದೆ ಪಡೆಯಬೇಕು. ಒಬ್ಬ ರೈತ ಮಧ್ಯವರ್ತಿಗಳ ಕಪಿಮುಷ್ಟಿಯಿಂದ ಹೊರಗೆ ಬಂದು ಸ್ವತಂತ್ರವಾಗಿ ತನ್ನ ಉತ್ಪನ್ನಗಳಿಗೆ ತಾನು ಮಾರುಕಟ್ಟೆ ಕಲ್ಪಿಸಬೇಕು ಎನ್ನುವುದನ್ನು ಸೇರಿಸಿಕೊಂಡು ರೈತರಿಗಾಗಿ ಮಾಡಿದ ಈ ಯೋಜನೆ ನಿಜಕ್ಕೂ ಉಪಯುಕ್ತವಾಗಿತ್ತು. ಆದರೆ ಈ ಯೋಜನೆಯನ್ನು ನಾಗರಿಕರಿಗೆ ಅದರಲ್ಲಿಯೂ ಮುಖ್ಯವಾಗಿ ಕೃಷಿಕನಿಗೆ ತಲುಪಿಸಲು ಮೊತ್ತಮೊದಲಬಾರಿಗೆ ಕೇಂದ್ರ ಸರಕಾರ ವಿಫಲವಾಯಿತು. ಭಾರತೀಯ ಜನತಾ ಪಾರ್ಟಿಯ ಸಾಮಾಜಿಕ ಜಾಲತಾಣಗಳನ್ನು ಸೇರಿಸಿ ಮಾಧ್ಯಮಗಳ ಮೇಲಿರುವ ಹಿಡಿತವನ್ನು ಗಣನೆಗೆ ತೆಗೆದುಕೊಂಡು ವಾಗ್ಮಿಗಳ ಸಂಖ್ಯೆಯನ್ನು ಪರಿಗಣನೆ ತೆಗೆದುಕೊಂಡರೆ ಇವರ ಎದುರಿಗೆ ಕಾಂಗ್ರೆಸ್ ಏನೂ ಇಲ್ಲ. ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಶರದ್ ಪವಾರ್ ಅವರ ಗಡಿಯಾರದ ಪಕ್ಷ ಲೆಕ್ಕಕೆ ಇಲ್ಲ. ಆದರೆ ಮೋದಿಯವರ ಚಿಂತನೆಯನ್ನು ಮೊತ್ತಮೊದಲ ಬಾರಿಗೆ ರೈತರ ಹೆಸರಿನಲ್ಲಿ ಕುಳಿತಿರುವ ಪ್ರತಿಭಟನಾಕಾರರಿಗೆ ಮನವರಿಕೆ ಮಾಡಲು ಸಾಧ್ಯವಾಗಲಿಲ್ಲ. ಅದರೊಂದಿಗೆ ಈ ವಿಷಯದಲ್ಲಿ ಕೇಂದ್ರ ಸರಕಾರದ ವಿರುದ್ಧ ಎದ್ದಿರುವ ಅಲೆ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಅರ್ಧಕರ್ಧ ತಿಂದು ಹಾಕಲಿದೆ ಎನ್ನುವ ಸುದ್ದಿ ಮತ್ತು ಪಂಜಾಬ್ ನಲ್ಲಿ ಕಾಂಗ್ರೆಸ್ ಅನ್ನು ಮಣಿಸಬೇಕಾದರೆ ಅಮರೀಂದರ್ ಸಿಂಗ್ ಹಾಕಿರುವ ಷರತ್ತನ್ನು ಈಡೇರಿಸಲು ಮೋದಿ ತಮ್ಮ ರಾಜಕೀಯ ಬದುಕಿನ ಇತಿಹಾಸದಲ್ಲಿ ಮೊದಲ ಬಾರಿಗೆ ರಿವರ್ಸ್ ಹೆಜ್ಜೆ ಇಡಬೇಕಾಯಿತು. ಸಿಂಹ ನಾಲ್ಕು ಹೆಜ್ಜೆ ಹಿಂದೆ ಇಟ್ಟರೆ ಯಾವುದೋ ಹೊಸ ಬೇಟೆಗೆ ತಯಾರಾಗಿದೆ ಎಂದು ಅರ್ಥ ಎನ್ನುವುದನ್ನು ಮೋದಿ ಸಮರ್ಥಕರು ಹೇಳಿಕೊಂಡು ಬರುತ್ತಿದ್ದಾರಾದರೂ ಯಾವುದೋ ಬೇಟೆ ಎನ್ನುವುದು ಯುಪಿ, ಪಂಜಾಬ್ ಚುನಾವಣೆ ಎನ್ನುವುದು ಅವರಿಗೂ ಗೊತ್ತಿರುವ ಸಂಗತಿ. ನಾವು ಚುನಾವಣೆಗಾಗಿ ಇದನ್ನು ಹಿಂದಕ್ಕೆ ಪಡೆದುಕೊಂಡಿಲ್ಲ, ದೇಶದ ನಾಗರಿಕರಾಗಿ ಹಿಂದಕ್ಕೆ ಪಡೆದುಕೊಂಡಿದ್ದೇವೆ ಎಂದು ಬಿಜೆಪಿ ಮುಖಂಡರು ಎಷ್ಟೇ ಹೇಳಿಕೊಂಡರೂ ರೈತ ವೋಟ್ ಬ್ಯಾಂಕ್ ಮತ್ತು ಆ ವೋಟ್ ಬ್ಯಾಂಕನ್ನು ಸಮಾಧಾನಪಡಿಸದಿದ್ದರೆ ನಮಗೆ ಆಪತ್ತು ಎನ್ನುವುದು ಅವರಿಗೆ ಒಳಗೊಳಗೆ ಗೊತ್ತಿರುವ ಸಂಗತಿ. ಆದರೆ ಈ ಕಾಯ್ದೆ ಹಿಂದಕ್ಕೆ ಪಡೆದುಕೊಂಡರೆ ಮೋದಿ ಟೆನ್ಷನ್ ಸರಿಯಾಗುತ್ತಾ ಎಂದು ನಿಮಗೆ ಅನಿಸಬಹುದು. ಇಲ್ಲ, ಯುಪಿ, ಪಂಜಾಬ್ ನಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕೆಂಬ ರಣವೀಳ್ಯವನ್ನು ಪಡೆದುಕೊಂಡು ಹೊರಟಿರುವ ಟಿಕಾಯತ್ ಮತ್ತು ಬಳಗ ಈ ವಿಷಯವನ್ನು ಆ ರಾಜ್ಯಗಳ ಚುನಾವಣೆಗಳ ತನಕ ಎಳೆದೊಯ್ಯಲಿದೆ. ಅದಕ್ಕೆ ತಾಜಾ ಉದಾಹರಣೆ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಿ ಎನ್ನುವ ಬೇಡಿಕೆ.
ಒಂದು ರಾಜಕೀಯ ಪಕ್ಷ ತಾನು ವಿಪಕ್ಷದಲ್ಲಿ ಇದ್ದಾಗ ಕೊಡುವ ಹೇಳಿಕೆ ಮತ್ತು ಅದೇ ಪಕ್ಷ ಆಡಳಿತಕ್ಕೆ ಬಂದಾಗ ತೆಗೆದುಕೊಳ್ಳುವ ನಿಲುವುಗಳು ಯಾವಾಗಲೂ ತಾಳೆ ಹಾಕಲ್ಪಟ್ಟಿರುತ್ತದೆ. ಉದಾಹರಣೆಗೆ ಪೆಟ್ರೋಲ್, ಡಿಸೀಲ್ ಬೆಲೆ. ಹಿಂದೆ ಇವುಗಳ ಬೆಲೆ ಏರಿದಾಗ ಇದೇ ಬಿಜೆಪಿಯವರು ನಿರಂತರ ಪ್ರತಿಭಟನೆ ನಡೆಸಿದ್ದರು. ಈಗ ಬೆಲೆ ಲೀಟರಿಗೆ ನೂರು ಹೋದಾಗ ಜನರೇ ಬಿಜೆಪಿಗೆ ಆವತ್ತಿನ ಪ್ರತಿಭಟನೆಯನ್ನು ನೆನಪಿಸುತ್ತಿದ್ದಾರೆ. ನೀವು ಆ ಹಣವನ್ನು ಎಷ್ಟೇ ಅಭಿವೃದ್ಧಿಗೆ ತೊಡಗಿಸಿದ್ದೇವೆ ಎಂದು ಹೇಳಿದರೂ ಮಧ್ಯಮ ವರ್ಗದ ಜನಸಾಮಾನ್ಯ ಪೆಟ್ರೋಲ್ ಪಂಪಿನಲ್ಲಿ ಅದೆಲ್ಲವನ್ನು ಮರೆಯುತ್ತಾನೆ. ಇದು ಕೂಡ ಹಾಗೆ, ಇದೇ ಮೋದಿಯವರು ಗುಜಜರಾತ್ ಸಿಎಂ ಆಗಿದ್ದಾಗ ರೈತರಿಗೆ ಬೆಂಬಲ ಬೆಲೆ ಕೊಡಿಸುವ ಬಗ್ಗೆ ಪರವಾಗಿದ್ದರು. ಆಗಲೇಬೇಕು ಎಂದು ಆಗ ಯುಪಿಎ ಅಧಿಕಾರದ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದರು. ಈಗ ಟೀಕಾಯತ್ ಅದೇ ವಿಷಯವನ್ನು ಹಿಡಿದು ಮೋದಿಯವರನ್ನು ಛೇಡಿಸುತ್ತಿದ್ದಾರೆ. ಮೋದಿ ಈ ವಿಷಯಕ್ಕೆ ಒಂದು ಸೂತ್ರ ಹೆಣೆಯಲು ಸಮಿತಿಯನ್ನು ರಚಿಸಿದ್ದಾರೆ. ಕೆಲವೇ ತಿಂಗಳಲ್ಲಿ ಅದಕ್ಕೂ ಪರಿಹಾರ ಸಿಗಲಿದೆ. ಆದರೆ ಅದಾದ ಕೂಡಲೇ ರೈತರ ಹೆಸರಿನಲ್ಲಿ ಟೀಕಾಯತ್ ತಂಡ ಮಾಡುತ್ತಿರುವ ಪ್ರತಿಭಟನೆ ನಿಂತು ಹೋಗುತ್ತಾ? ನೋ ಚಾನ್ಸ್, ಅವರು ಪ್ರತಿಭಟನೆಗೆ ಕುಳಿತದ್ದೇ ಅಲ್ಲ. ಯುಪಿ, ಪಂಜಾಬ್ ನಲ್ಲಿ ಬಿಜೆಪಿ ಸೋಲಿಸುವ ಪಣ ತೊಟ್ಟು ಹೊರಟವರಿಗೆ ಬೇಡಿಕೆ ಈಡೇರುವುದು ಮುಖ್ಯವಲ್ಲ. ತಮ್ಮನ್ನು ಪೋಷಿಸುವವರ ಉದ್ದೇಶ ಈಡೇರುವದು ಮುಖ್ಯ!

0
Shares
  • Share On Facebook
  • Tweet It




Trending Now
ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
Tulunadu News September 10, 2025
ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
Tulunadu News September 10, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
    • ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ: ಮದ್ದೂರು ಪಟ್ಟಣದಲ್ಲಿ ಗಲಭೆ – ತಡೆ ಆದೇಶ ಜಾರಿಯಲ್ಲಿ
    • ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ: ಕರ್ನಾಟಕದಲ್ಲಿ ರಾಜಕೀಯ ಹೊಸ ಚರ್ಚೆ
    • ವಿವೇಕ್ ಅಗ್ನಿಹೋತ್ರಿ ನಿರ್ದೇಶನದ "ದಿ ಬೆಂಗಾಲ್ ಫೈಲ್ಸ್" ಸಿನೆಮಾಕ್ಕೆ ಪಶ್ಚಿಮ ಬಂಗಾಲದಲ್ಲಿ ಅಘೋಷಿತ ತಡೆ!
    • ಖಾರ್ ಬೂಂದಿ ತಿನ್ನುತ್ತಿದ್ದಿರಾ? ಎಚ್ಚರಿಕೆ!
    • ಸೀಟ್ ಬೆಲ್ಟ್ ಧರಿಸದ್ದಕ್ಕೆ ದಂಡ ಪಾವತಿ ಮಾಡಿದ ಸಿದ್ಧರಾಮಯ್ಯ!
  • Popular Posts

    • 1
      ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • 2
      ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • 3
      ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • 4
      ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • 5
      ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!

  • Privacy Policy
  • Contact
© Tulunadu Infomedia.

Press enter/return to begin your search