• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕೋಟ ಬಳಿ ಕೋಟಿ ಇಲ್ಲ, ಕೋಟಿ ಇದ್ದ ಕೆಜಿಎಫ್ ಬಾಬು ಗೆದ್ದಿಲ್ಲ!!

Hanumantha Kamath Posted On December 15, 2021


  • Share On Facebook
  • Tweet It

ರಾಜಕಾರಣದಲ್ಲಿ ಇಳಿಯುವವರ ಬಳಿ ಎಷ್ಟು ಕೋಟಿ ಹಣ ಇರುತ್ತದೋ ಅಷ್ಟು ಸುಲಭವಾಗಿ ಮೇಲಕ್ಕೆ ಬರಬಹುದು ಎನ್ನುವ ಜನಪದ ಮಾತಿದೆ. ಅವನಿಗೇನು ಕಣೋ, ಕೋಟಿಗಟ್ಟಲೆ ಇದೆ. ಯಾಕೆ ಶಾಸಕ ಆಗಲ್ಲ, ಆರಾಮವಾಗಿ ಗೆಲ್ಲುತ್ತಾನೆ, ನಾಳೆ ಮಂತ್ರಿಯೂ ಆಗುತ್ತಾನೆ ಎನ್ನುವ ಮಾತುಗಳನ್ನು ನೀವು ಕೇಳಿರಬಹುದು. ಅದು ಅಲ್ಲೊಂದು ಇಲ್ಲೊಂದು ಕಡೆ ಹೌದು ಎನ್ನುವಂತೆ ಕಾಣಲೂಬಹುದು. ಆದರೆ ಅದು ಸಾವರ್ತಿಕ ಅಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗಿದೆ. ನಾವು ಅಷ್ಟಾಗಿ ಅದನ್ನು ಗಮನಿಸದೇ ಇರುವುದರಿಂದ ನಮಗೆ ಸುಳ್ಳೆ ಮನಸ್ಸಿನೊಳಗೆ ಕುಳಿತುಕೊಂಡಿದೆ. ಮಂಗಳವಾರ ಹೊರಬಂದ ವಿಧಾನಪರಿಷತ್ ಚುನಾವಣಾ ಫಲಿತಾಂಶ ವಾಸ್ತವವನ್ನು ನಮ್ಮ ಮುಂದೆ ಇಟ್ಟಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಗಳೂರಿಗೆ ಒಬ್ಬ ಕೋಟಿವೀರನನ್ನು ಕಣಕ್ಕೆ ಇಳಿಸಿತ್ತು. ಆ ವ್ಯಕ್ತಿಯ ಬಳಿ ಕನಿಷ್ಟ 1700 ಕೋಟಿ ರೂಪಾಯಿ ಇದೆ ಎಂದು ಮಾಧ್ಯಮಗಳಲ್ಲಿ ಮಾಹಿತಿ ಬಂತು. ಇನ್ನು ಬಿಡಿ, ಆ ಮನುಷ್ಯ ಗ್ಯಾರಂಟಿ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಎಷ್ಟೋ ಜನ ಮನಸ್ಸಿನಲ್ಲಿಯೇ ಷರಾ ಬರೆದುಬಿಟ್ಟರು. ಯಾಕೆಂದರೆ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲ್ಲಲು ಒಂದು ಅಂದಾಜಿನ ಪ್ರಕಾರ ವಿಧಾನಸಭಾ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಗೆ ಬೇಕಾಗುವ ಹಣಕ್ಕಿಂತ ಜಾಸ್ತಿ ಹಣ ಬೇಕಾಗುತ್ತದೆ ಎನ್ನುವ ಅಂದಾಜು ಕೂಡ ಇದೆ. ಯಾಕೆಂದರೆ ಇಲ್ಲಿ ಮತದಾರರು ಕಡಿಮೆ ಇದ್ದರೂ ಒಬ್ಬೊಬ್ಬರ ಮತಗಳು ಕೂಡ ಬಹಳ ಅಮೂಲ್ಯ. ಒಂದಿಷ್ಟು ನಿರ್ಲಕ್ಷ್ಯ ಮತ್ತು ಬಂದೇ ಬರುತ್ತೆ ಬಿಡಿ, ನಮಗಲ್ಲದೆ ಯಾರಿಗೆ ಓಟ್ ಕೊಡುತ್ತಾರೆ ಎಂದು ಹೇಳುವಂತಿಲ್ಲ. ಒಂದು ರೀತಿಯಲ್ಲಿ ವಿಐಪಿ ಮತದಾರರು. ಆದ್ದರಿಂದ ಅವರಿಗೆ ಸಂತೃಪ್ತಿಗೊಳಿಸಿ ಮತ ಪಡೆಯುವುದು ಸುಲಭದ ಮಾತಲ್ಲ ಎನ್ನುವ ಮಾತು ಕೂಡ ಚಾಲ್ತಿಯಲ್ಲಿದೆ.

ಹೀಗಿರುವಾಗ ಅನಿವಾರ್ಯವಾಗಿ ಪಕ್ಷಗಳು ಕೋಟಿವೀರರನ್ನೇ ಕಣಕ್ಕೆ ಇಳಿಸುತ್ತವೆ. ಹಾಗೆ ಕೆಜಿಎಫ್ ಬಾಬು ಕೂಡ ಕಣಕ್ಕೆ ಇಳಿದಿದ್ದರು. ಅವರ ಬಳಿ ಇರುವ ಅಸಂಖ್ಯಾತ ಕೋಟಿ ರೂಪಾಯಿ ಹಣ ಅವರನ್ನು ಕಣ್ಣುಮುಚ್ಚಿ ಚುನಾವಣೆಯಲ್ಲಿ ಗೆಲ್ಲಿಸಬೇಕಿತ್ತು. ಆದರೆ ಆಯಿತಾ, ನೋ ಚಾನ್ಸ್. ನೀವು ಸಾಮಾಜಿಕ ಜಾಲತಾಣಗಳಲ್ಲಿ ಕೆಜಿಎಫ್ ಬಾಬು ಮತಕೇಂದ್ರದಿಂದ ಸಪ್ಪೆಮೋರೆ ಹಾಕಿ ಹೊರಗೆ ಬಂದು ಆಟೋದಲ್ಲಿ ಹೋಗುವ ದೃಶ್ಯ ನೋಡಿರುತ್ತೀರಿ. ಬರುವಾಗ ಆಡಿ ಕಾರು, ಹೋಗುವಾಗ ಆಟೋ ಎಂದು ಹಲವರು ಕುಹಕವಾಡುತ್ತಿದ್ದಾರೆ. ಅದರ ಅರ್ಥ ಏನು? ಬಾಬು ಸೋತಿದ್ದಾರೆ. ಅವರು ಚೆಲ್ಲಿರಬಹುದಾದ ಕೋಟಿ ಏನೂ ಉಪಯೋಗವಾಗಿಲ್ಲ.
ಅದೇ ಇನ್ನೊಂದು ಕಡೆ ದಕ್ಷಿಣ ಕನ್ನಡ-ಉಡುಪಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ತಾವೇ ಹೇಳಿದ ಹಾಗೆ ಏನೂ ಖರ್ಚು ಮಾಡದೇ ನಾಲ್ಕನೇ ಬಾರಿ ಗೆದ್ದಿದ್ದಾರೆ. ಹಾಗೆ ನೋಡಲು ಹೋದರೆ ಕೋಟ ಅವರ ಬಳಿ ಚುನಾವಣೆಗೆ ಖರ್ಚು ಮಾಡಲು ಕೋಟಿ ಇಲ್ಲ. ಅವರು ಚುನಾವಣೆಯಲ್ಲಿ ನಿಂತರೆ ಯಾವ ಮತದಾರ ಕೂಡ ಐದು ಪೈಸೆ ಕೇಳಲ್ಲ. ಇವರು ಕೂಡ ಅಧಿಕಾರದಲ್ಲಿ ಇದ್ದಾಗ ಯಾರಿಂದಲೂ ಲಂಚ ಪಡೆಯುವುದಿಲ್ಲ. ಆದರೂ ಇವತ್ತಿನ ಕಾಲದಲ್ಲಿ ಗೆಲ್ಲುತ್ತಿದ್ದಾರೆ. ಇದರ ಅರ್ಥ ಏನು? ನೀಡುವವ ಇದ್ದರೆ ಮಾತ್ರ ಕೇಳುವವರು ಕೇಳುತ್ತಾರೆ.

ನೀವು ಪ್ರಾಮಾಣಿಕರಾಗಿ ನಡೆ, ನುಡಿ ಮತ್ತು ಬದುಕಿನಲ್ಲಿ ಜನಸಾಮಾನ್ಯರಂತೆ ಜೀವಿಸಿದರೆ ನಿಮಗೆ ಮತ ಹಾಕಲು ಹಣ, ಹೆಂಡ, ಕುಕ್ಕರ್, ಸೀರೆ, ಮಿಕ್ಸಿ ಯಾವ ಬೇಡಿಕೆಯನ್ನು ಕೂಡ ಮತದಾರ ಮಾಡುವುದಿಲ್ಲ. ಹಾಗಾದರೆ ರಾಜಕಾರಣ ಹಾಳಾಗಿರುವುದು ಎಲ್ಲಿ? ಕೊಡುವವರ ತಪ್ಪೋ, ಕೇಳುವವರ ತಪ್ಪೋ. ಕೊಡುತ್ತಾರೆ ಎಂದು ಗೊತ್ತಿದ್ದಾಗ ಕೇಳುವವರು ಕೇಳದೇ ಇರುತ್ತಾರಾ? ಕೇಳುವವರು ಕೇಳುವ ಮೊದಲೇ ಕೈ ಎತ್ತಿ ಕೊಡುವವರು ಇರುವುದರಿಂದ ಕೇಳುವವರ ಸಂಖ್ಯೆ ಹೆಚ್ಚಾಗುತ್ತಾ? ಅವರು ಹಣ ಮಾಡಬಹುದು, ನಾವು ಕೇಳುವುದು ತಪ್ಪಾ ಎಂದು ವಾತಾವರಣ ಸೃಷ್ಟಿಯಾಗಲು ಯಾರು ಕಾರಣ? ಆದರೆ ಒಂದಂತೂ ನಿಜ. ಹಣ ಇದ್ರೆ ಮಾತ್ರ ನೀವು ಗೆಲ್ಲಲ್ಲ ಎಂದು ವಿಜಯ ಮಲ್ಯರ ಸಮಯದಲ್ಲಿ ಸಾಬೀತಾಗಿದೆ. ಹಣವೇ ಮುಖ್ಯವಾಗಿದ್ದರೆ ವಿಜಯ ಮಲ್ಯ ಪಕ್ಷ ಕಟ್ಟಿದಾಗ ಅವರ ಬಳಿ ಇದ್ದ ಹಣದಿಂದ 224 ಸೀಟು ಕೂಡ ಗೆಲ್ಲಬಹುದಿತ್ತು. ಆದರೂ ಒಂದೇ ಒಂದು ಸೀಟು ಕೂಡ ಗೆಲ್ಲಲಾಗಲಿಲ್ಲ. ಅವರ ಹಣದಿಂದ ಕೆಲವರು ದುಂಡಗಾಗಿ ಅಭ್ಯರ್ಥಿಗಳಿಗೆ ಉಂಡೆನಾಮ ತಿಕ್ಕಿರಬಹುದು. ಹಾಗಾದರೆ ವಾಸ್ತವ ಸತ್ಯ ಏನು? ರಾಜಕೀಯದಲ್ಲಿ ಐದು ವಿಷಯ ಮುಖ್ಯವಾಗಿರುತ್ತದೆ. ಒಂದು ಪರಿಶ್ರಮ. ಇನ್ನೊಂದು ಅದೃಷ್ಟ. ಮೂರನೇಯದ್ದು ತಾಳ್ಮೆ. ನಾಲ್ಕನೇಯದ್ದು ನಿಷ್ಟೆ. ಐದನೇಯದ್ದು ಜಾಣ್ಮೆ. ಇದು ಸಾಮಾನ್ಯವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಬೇಕಾಗುತ್ತದೆ. ಆದರೆ ಬೇರೆ ಕ್ಷೇತ್ರಗಳಲ್ಲಿ ಇದರಲ್ಲಿ ಎರಡು ಮೂರು ಇಲ್ಲದಿದ್ದರೂ ಜೀವನ ಸಾಗುತ್ತದೆ. ಆದರೆ ರಾಜಕೀಯದಲ್ಲಿ ಐದರಲ್ಲಿ ಎರಡ್ಮೂರು ಇಲ್ಲದಿದ್ದರೆ ನೀವು ಒಂದೋ ಆರಂಭದಲ್ಲಿ ಎಲ್ಲಿದ್ರೋ ಕೊನೆ ತನಕ ಅಲ್ಲಿಯೇ ಇರುತ್ತೀರಿ ಅಥವಾ ನಿರಾಸೆ ಹೊಂದಿ ಬಂಡಾಯರಾಗುತ್ತಿರಿ. ಆಯ್ಕೆ ಅವರವರದ್ದು!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search