• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಗಣ್ಯರೊಂದಿಗೆ ಫೋಟೊ, ರಾಜ್ಯೋತ್ಸವ ಪ್ರಶಸ್ತಿ, ವೇಶ್ಯಾವಾಟಿಕೆ ಮತ್ತು ಅಂದರ್!!

Hanumantha Kamath Posted On March 24, 2022
0


0
Shares
  • Share On Facebook
  • Tweet It

ಯಾರು ಆಗಾಗ ಶಾಸಕರನ್ನು, ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಪದೇ ಪದೇ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾರೋ ಅಂತವರ ಬಗ್ಗೆ ಶಾಸಕರ ಆಪ್ತರು, ಪೊಲೀಸ್ ಅಧಿಕಾರಿಗಳ ಕಚೇರಿ ಸಿಬ್ಬಂದಿ ಒಂದು ಕಣ್ಣು ಇಡುವುದು ಒಳ್ಳೆಯದು. ಯಾಕೆಂದರೆ ನಿಜವಾಗಿಯೂ ಜನರ ಪರವಾಗಿ ಕೆಲಸ ಮಾಡಲು ಜನಪ್ರತಿನಿಧಿಗಳನ್ನು, ಪೊಲೀಸರನ್ನು ಭೇಟಿಯಾಗುವವರು ಸೈಲೆಂಟಾಗಿ ತಮ್ಮ ಕೆಲಸ ಮಾಡಿಸಿಕೊಂಡು ಹೋಗುತ್ತಾರೆ. ಆದರೆ ನಿಮ್ಮ ಜೊತೆ ಒಂದು ಫೋಟೋ ಬೇಕು ಸರ್ ಎಂದು ಒಬ್ಬ ಕೇಳಿದ ತಕ್ಷಣ ಬೋಳೆಬಸವರಂತೆ ಕೆಲವರು ಫೋಟೋಗೆ ನಿಲ್ಲುವುದುಂಟು. ಆತ ಫೇಸ್ ಬುಕ್ಕಿಗೆ ಅಪಲೋಡ್ ಮಾಡಿದರೆ ತಮಗೆ ಪುಕ್ಸಟೆ ಪ್ರಚಾರ ಸಿಗುತ್ತದೆ ಎಂದು ಇವರು ಅಂದುಕೊಳ್ಳಬಹುದು. ಆದರೆ ಆತ ಅದೇ ಫೋಟೋ ಹಿಡಿದು ಯಾವ ಡಿಲೀಂಗಿಗೆ ಕುಳಿತುಕೊಂಡಿದ್ದಾನೆ ಎಂದು ಯಾರಿಗೆ ಗೊತ್ತು. ಯಾರೂ ಯಾರೊಂದಿಗೂ ಧರ್ಮಕ್ಕೆ ಫೋಟೋ ತೆಗೆಸಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರಲಿ. ಇನ್ನು ಕೆಲವರಿಗೆ ಪ್ರಭಾವಿಗಳನ್ನು ಭೇಟಿಯಾಗಲು ಒಂದು ಕಾರಣ ಬೇಕಲ್ಲ, ಅದಕ್ಕಾಗಿ ತಮ್ಮದೇ ಆದ ಒಂದು ಸಂಘಟನೆಯನ್ನು ಆರಂಭಿಸುತ್ತಾರೆ. ನಾವು ಸಮಾಜಸೇವೆ ಮಾಡುತ್ತಿದ್ದೇವೆ ಎಂದು ಫೋಸ್ ಕೊಡುತ್ತಾರೆ. ಇವರು ಒಂದು ಹೆಜ್ಜೆ ಹೆಚ್ಚೆ ರಿಸ್ಕ್.

ಈಗ ಮಂಗಳೂರು ಪೊಲೀಸರಿಂದ ಬಂಧಿತನಾಗಿರುವ ಅಬ್ದುಲ್ ರಝೀಕ್ ಕೂಡ ಇದೇ ಕ್ಯಾಟಗರಿಗೆ ಸೇರುತ್ತಾನೆ. ಈತ ಬಂಧಿತನಾಗಿರುವುದು ವೇಶ್ಯಾವಾಟಿಕೆ ಮಾಡುತ್ತಿದ್ದ ಎನ್ನುವ ಕಾರಣಕ್ಕೆ. ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರೇ “ರಝೀಕ್” ನನ್ನು ಬಂಧಿಸಿದ್ದಾರೆ ಎಂದರೆ ಅದರ ಹಿಂದೆ ಬಲಯುತವಾದ ಸಾಕ್ಷ್ಯ ಇದೆ ಎಂದೇ ಅರ್ಥ. ಅವರು ಇಂತವರನ್ನು ಸುಮ್ಮಸುಮ್ಮನೆ ಬಂಧಿಸುವ ಗೋಜಿಗೆ ಹೋಗುವುದಿಲ್ಲ. ರಝೀಕ್ ಬಂಧನವಾಗುತ್ತಿದ್ದಂತೆ ಮೊದಲ ಶಾಕ್ ಗೆ ಒಳಗಾದವರು ಶಾಸಕ ಯು.ಟಿ.ಖಾದರ್. ಯಾಕೆಂದರೆ ಇತನ ಸಂಘಟನೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಿದ್ದು ಇದೇ ಖಾದರ್. ಖಾದರ್ ಎಷ್ಟೇ ಜಾತ್ಯಾತೀತ ಎಂದು ಹೊರಗಿನ ಪ್ರಪಂಚಕ್ಕೆ ಅನಿಸಿದರೂ ಇಂತವರನ್ನು ಹೇಗೆ ಬೆಳೆಸಬೇಕು ಎನ್ನುವ ಗೊತ್ತಿಲ್ಲದಷ್ಟು ಅಮಾಯಕರಲ್ಲ. ಆದ್ದರಿಂದ ರಝೀಕ್ ಗೆ ಖಾದರ್ ಆಸ್ಥಾನದಲ್ಲಿ ಸುಲಭಕ್ಕೆ ಪ್ರವೇಶ ಸಿಕ್ಕಿತು. ಹೇಗೂ ಜಾತಿಬಾಂಧವ ಬಿಟ್ಟಾಕಲು ಆಗುತ್ತಾ, ಖಾದರ್ ಶಿಫಾರಸ್ಸು ಮಾಡಿ ಒಂದು ಪ್ರಶಸ್ತಿ ಕೂಡ ಕೊಡಿಸಿದರು. ನೀವು ಸರಿಯಾಗಿ ನೋಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಂದು ರೀತಿಯಲ್ಲಿ ಮುಂದಿನ ಚುನಾವಣೆಗೆ ಮತಬ್ಯಾಂಕಿನ ಕೀಲಿಕೈ ಇದ್ದ ಹಾಗೆ. ಈ ಪ್ರಶಸ್ತಿಗಳನ್ನು ಯಾವಾಗ ಶಾಸಕ, ಸಚಿವರು, ಸಂಸದರು ತಮ್ಮ ಆಪ್ತರಿಗೆ, ಮುಂದಿನ ಚುನಾವಣೆಗೆ ಸಹಾಯಕ್ಕೆ ಬರುವವರಿಗೆ, ಜಾತಿ ಲೆಕ್ಕದಲ್ಲಿ ಕೊಡಲು ಶುರು ಮಾಡಿದರೋ ಅಂದಿನಿಂದ ಅದರ ಮೂಲ”ಬೆಲೆ”ಯೇ ನಾಶವಾಗಿ ಹೋಯಿತು. ಪದ್ಮಶ್ರೀ ಪ್ರಶಸ್ತಿಗಳನ್ನು ಮೋದಿ ಅರ್ಹರಿಗೆ, ಎಲೆಮರೆಯ ಕಾಯಿಯಾಗಿ ಸೇವೆ ಸಲ್ಲಿಸುವವರಿಗೆ ಕೊಡುವಾಗ ಭಾರತೀಯ ಜನತಾ ಪಾರ್ಟಿಯವರು ಅದನ್ನು ತಮ್ಮ ಫೇಸ್ ಬುಕ್, ಟ್ವೀಟರ್ ನಲ್ಲಿ ಹಾಕಿ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ, ಅದೇ ತಮ್ಮ ಜಿಲ್ಲೆಯಲ್ಲಿ ಅರ್ಹರಿಗೆ ಕೊಡಿಸಲು ಒಂದು ಸಾಸಿವೆ ಕಾಳಿನಷ್ಟು ಪ್ರಯತ್ನ ಕೂಡ ಮಾಡುವುದಿಲ್ಲ. ಹಾಗಿರುವಾಗ ರಝೀಕ್ ಗೆ ಈ ಪ್ರಶಸ್ತಿ ಸಿಕ್ಕಿದ್ದು ವಿಶೇಷವಾಗಿರಲಿಲ್ಲ. ಕೆಲವರು ತಮಗೆ ಪ್ರಶಸ್ತಿ ಸಿಕ್ಕಿದ ಋಣಕ್ಕೆ ಒಂದಿಷ್ಟು ಸಮಾಜಕ್ಕೆ ಒಳ್ಳೇದು ಆಗುವಂತದ್ದು ಮಾಡಲೂಬಹುದು. ಆದರೆ ಪ್ರಶಸ್ತಿಗೆ ಕಳಂಕ ಬರುವ ಹಾಗೆ ಮಾಡಿದರೆ ದೇವರು ಅಂತವರನ್ನು ಮೆಚ್ಚುವುದಿಲ್ಲ. ಆದರೆ ಒಂದು ಪಾವಿನಷ್ಟಾದರೂ ಮರ್ಯಾದೆ ಇದ್ದ ಆ ಪ್ರಶಸ್ತಿಯನ್ನು ಮುಂದಿನ ಸಲ ಯಾರಾದರೂ ಪಡೆದುಕೊಳ್ಳಲು ಕೂಡ ನಾಚಿಕೆ ಪಡಬೇಕು ಹಾಗೆ ರಝೀಕ್ ಮಾಡಿಬಿಟ್ಟಿದ್ದಾನೆ.

ಈ ಮನುಷ್ಯ ಸಮಾಜಸೇವೆ ಮಾಡುತ್ತಾನೆ ಎಂದು ನಂಬಿದ ಇಬ್ಬರು ಹೆಣ್ಣುಮಕ್ಕಳು ಇವನ ಬಳಿ ಸಹಾಯ ಕೇಳಿ ಹೋಗಿದ್ದಾರೆ. ಅವರನ್ನು ಇವನು ನಂದಿಗುಡ್ಡೆಯ ವಸತಿಗೃಹಕ್ಕೆ ಕರೆಸಿದ್ದಾನೆ. ನಂತರ ಏನಾಯಿತು ಎನ್ನುವುದು ನಾವು ಇಲ್ಲಿ ಬರೆಯುವ ಅಗತ್ಯ ಇಲ್ಲ. ಅದನ್ನು ಆ ಹೆಣ್ಣುಮಕ್ಕಳು ಪೊಲೀಸರ ಎದುರು ವಿವರವಾಗಿ ಹೇಳಿದ್ದಾರೆ. ಈತ ಎಷ್ಟು ಚಾಲಾಕು ಎಂದರೆ ತನ್ನ ಮೇಲೆ ದೂರು ಬರುತ್ತೆ ಎಂದು ಸಂಶಯ ಬಂದ ಕೂಡಲೇ ವಿದೇಶಕ್ಕೆ ಹಾರಿ ಹೋಗಿದ್ದ. ಅಲ್ಲಿಯೇ ಕುಳಿತು ತಾನು ತಪ್ಪಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಿದ್ದ. ಆದರೆ ಎಲ್ಲಾ ಪ್ರಯತ್ನಗಳು ವಿಫಲವಾದ ನಂತರ ಭಾರತಕ್ಕೆ ಹಿಂತಿರುಗಿದ್ದಾನೆ. ಈಗಾಗಲೇ ಈ ಪ್ರಕರಣದಲ್ಲಿ 15 ಮಂದಿಯನ್ನು ಬಂಧಿಸಿ ಬಾಯಿಬಿಡಿಸಲಾಗಿತ್ತು. ಅದರಿಂದ ಸಾಕಷ್ಟು ಸಾಕ್ಷ್ಯ ಸಂಗ್ರಹವಾಗಿತ್ತು. ಆದ್ದರಿಂದ ಇವನನ್ನು ಬಂಧಿಸದೇ ಪೊಲೀಸರಿಗೂ ಬೇರೆ ವಿಧಿ ಇರಲಿಲ್ಲ. ಒಂದು ಕಡೆ ರಿವಾಲ್ವರ್ ಇಟ್ಟುಕೊಂಡು ಫೋಸ್ ಕೊಡುತ್ತಿದ್ದ ರಝೀಕ್ ತನ್ನ ಮೇಲೆ ಯಾರಾದರೂ ದೂರು ಕೊಡಲು ಹೋಗುವುದಾದರೆ ಅವರಿಗೆ ತಾನು ಎಷ್ಟು ಪ್ರಭಾವಿ ಎಂದು ತೋರಿಸಲು ಗಣ್ಯರೊಂದಿಗೆ ತಾನಿದ್ದ ಫೋಟೋ ಬಳಸುತ್ತಿದ್ದ. ರಾಜ್ಯೋತ್ಸವ ಪ್ರಶಸ್ತಿಯನ್ನು ಎದುರಿಗೆ ಇಡುತ್ತಿದ್ದ. ಅದರಿಂದ ಇವನ ವಿರುದ್ಧ ಯಾರೂ ದೂರು ಕೊಡಲು ಹೋಗುತ್ತಿರಲಿಲ್ಲ. ನೋಡಲು ಪಕ್ಕಾ ಅಮಾಯಕನಂತೆ ಕಾಣುವ, ಐಟಿ ಉದ್ಯೋಗಿಯಂತೆ ತೋರುವ ಈ ಮನುಷ್ಯನ ತಪ್ಪು ಮಾಡಿದ್ದು ಸಾಬೀತಾಗಿ ಶಿಕ್ಷೆ ಆದರೆ ಅಮಾಯಕ ಹೆಣ್ಣುಮಕ್ಕಳ ಕಣ್ಣೀರಿಗೆ ನ್ಯಾಯ ಸಿಕ್ಕಿತು….!

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Hanumantha Kamath July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Hanumantha Kamath July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search