• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕಾಂಗ್ರೆಸ್ಸಿನೊದಿಗೆ ವ್ಯಾಪಾರಿಗಳು ಕೂಡ ಬೀದಿಗೆ ಬೀಳುವಂತಾಯಿತು!!

Hanumantha Kamath Posted On April 16, 2022


  • Share On Facebook
  • Tweet It

ಮಂಗಳೂರಿನ ಕೇಂದ್ರ ಮಾರುಕಟ್ಟೆ ಜರ್ಜರಿತವಾಗಿ ದಶಕದ ಮೇಲಾಗಿದೆ. ಅಲ್ಲಿ ಒಳಗೆ ವ್ಯಾಪಾರ ಮಾಡುವವರಿಗಾಗಲಿ ಅಥವಾ ಗ್ರಾಹಕರಿಗೆ ಆಗಲಿ ಅದು ಯಾವತ್ತೂ ರಿಸ್ಕ್ ಎನ್ನುವುದು ಕುರುಡನಿಗೂ ಗೊತ್ತಾಗುತ್ತಿದ್ದ ವಿಷಯ. ಮಧ್ಯರಾತ್ರಿ 12 ಗಂಟೆಯಿಂದ 2 ಗಂಟೆ ಬಿಟ್ಟು ಉಳಿದ 22 ಗಂಟೆ ಕೂಡ ಸೆಂಟ್ರಲ್ ಮಾರ್ಕೆಟ್ ಬಿಝಿ ಇರುತ್ತದೆ. ಏನು ಹೆಚ್ಚುಕಡಿಮೆ ಆದರೂ ಸಾವು ನೋವು ಗ್ಯಾರಂಟಿ ಇತ್ತು. ಅದನ್ನು ಹಾಗೆ ಬಿಡುವಂತಿರಲಿಲ್ಲ. ತಾತ್ಕಾಲಿಕ ತೇಪೆ ಹಚ್ಚಿದರೂ ಅದರಿಂದ ಪ್ರಯೋಜನವಿರಲಿಲ್ಲ. ಹಾಗಿರುವಾಗ ಅದನ್ನು ಸಂಪೂರ್ಣ ಕೆಡವಿ ಹೊಸ ಮಾರುಕಟ್ಟೆ ಕಟ್ಟುವುದಕ್ಕೆ ಸಿದ್ಧತೆ ನಡೆದಿತ್ತು. ಆದರೆ ಕೋಟಿಗಟ್ಟಲೆ ಹಣ ಬೇಕಲ್ಲ. ಕೊನೆಗೆ ನಮ್ಮ ನಸೀಬು ಚೆನ್ನಾಗಿತ್ತು. ಸ್ಮಾರ್ಟ್ ಸಿಟಿ ಫಂಡ್ ಬಂತು. ಅದರಿಂದ ಕಟ್ಟುವುದು ಎಂದು ನಿರ್ಧಾರವಾಯಿತು.
ಅಂಗಡಿಗಳನ್ನು ಖಾಲಿ ಮಾಡದೇ ಕಟ್ಟಲು ಸಾಧ್ಯವಿರಲಿಲ್ಲ. ಖಾಲಿ ಮಾಡಿ ಎಂದು ಸೂಚನೆ ಕೊಡಲಾಯಿತು. ಆದರೆ ಯಾವಾಗ ಕೆಡುವುದು ಎನ್ನುವ ಪ್ರಶ್ನೆ ಪ್ರತಿ ಬಾರಿ ಉದ್ಭವವಾಗುತ್ತಿತ್ತು. ವ್ಯಾಪಾರಿಗಳು ಕೋರ್ಟಿಗೆ ಹೋಗಿ ಸ್ಟೇ ತಂದರು. ಅದು ತೆರವು ಆದಾಗ ಕೆಡವೋಣ ಎಂದು ನಿರ್ಧಾರವಾಯಿತು. ಅದಕ್ಕೆ ಸರಿಯಾಗಿ ಕೋವಿಡ್ ಬಂತು. ಕೋವಿಡ್ ಬಂದಾಗ ಜನರಿಗೆ ಮನೆಯ ಹತ್ತಿರದಲ್ಲಿಯೇ ಇರುವ ಅಂಗಡಿಗಳಿಂದ ಖರೀದಿಸಿ ಎಂದು ಸಲಹೆ ನೀಡಿದರೂ ಅನೇಕರು ಸೆಂಟ್ರಲ್ ಮಾರುಕಟ್ಟೆಗೆ ಬರುತ್ತಿದ್ದರು. ಇದರಿಂದ ನಿತ್ಯ ಬೆಳಿಗ್ಗೆ ಸೆಂಟ್ರಲ್ ಮಾರುಕಟ್ಟೆ ಜಾತ್ರೆಯ ಸ್ವರೂಪ ಪಡೆಯುತ್ತಿತ್ತು. ಮಾಧ್ಯಮಗಳು ಇದರ ವಿರುದ್ಧ ಧ್ವನಿ ಎತ್ತಿದ್ದವು. ಆದ್ದರಿಂದ ತೀವ್ರ ಮುಜುಗರಕ್ಕೆ ಒಳಗಾದ ಜಿಲ್ಲಾಡಳಿತ ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಕೆಡವುಹ ನಿರ್ಧಾರಕ್ಕೆ ಬಂದಿತ್ತು. ಆದರೆ ಕೆಲವರು ಮತ್ತೆ ಅದರ ವಿರುದ್ಧ ನ್ಯಾಯಾಲಯಕ್ಕೆ ಹೋದರು. ಸ್ಟೇ ನೀಡಿ ಎಂದು ದಂಬಾಲು ಬಿದ್ದರು. ನ್ಯಾಯಾಲಯ ಸೆಂಟ್ರಲ್ ಮಾರುಕಟ್ಟೆ ಕಟ್ಟಡ ಕೆಡವಲು ತಡೆಯಾಜ್ಞೆ ನೀಡಿತು. ಅಲ್ಲಿಗೆ ಒಂದು ಹಂತ ಮುಗಿದಿತ್ತು.

ಆದರೆ ಅಲ್ಲಿ ಒಳಗೆ ಎಷ್ಟೋ ವರ್ಷಗಳಿಂದ ವ್ಯಾಪಾರಕ್ಕೆ ಕುಳಿತವರನ್ನು ಏಕಾಏಕಿ ಹೊರಗೆ ಹಾಕಿ ಬಿಲ್ಡಿಂಗ್ ಕೆಡವಲು ಸಾಧ್ಯವಾ ಎನ್ನುವ ಮಾನವೀಯ ಪ್ರಶ್ನೆ ಉದ್ಭವವಾಗಿತ್ತಲ್ಲ. ಅದಕ್ಕೆ ಅವರ ಕಷ್ಟ ಅರಿತ ಶಾಸಕ ವೇದವ್ಯಾಸ ಕಾಮತ್ ಫುಟ್ ಪಾತ್ ಮೈದಾನದ ಸಮೀಪ ಮೈದಾನಕ್ಕೆ ಏನೂ ತೊಂದರೆ ಆಗದೇ 5.5 ಕೋಟಿ ರೂಪಾಯಿ ವೆಚ್ಚದಲ್ಲಿ ತಾತ್ಕಾಲಿಕ ಮಾರುಕಟ್ಟೆಗೆ ವ್ಯವಸ್ಥೆ ಮಾಡುವ ನಿರ್ಧಾರ ಮಾಡಿದರು. ತಾತ್ಕಾಲಿಕ ಮಾರುಕಟ್ಟೆಯ ನಿರ್ಮಾಣದ ಕಾಮಗಾರಿ ಆರಂಭವಾಗುತ್ತಿದ್ದಂತೆ ಕೆಲವರು ಅದಕ್ಕೂ ಸ್ಟೇ ತಂದರು. ನಂತರ ಏನು ಮಾಡುವುದು? ರಖಂ ವ್ಯಾಪಾರಿಗಳನ್ನು ಬೈಕಂಪಾಡಿಯ ಎಪಿಎಂಸಿ ಪ್ರಾಂಗಣಕ್ಕೆ ಶಿಫ್ಟ್ ಮಾಡುವ ರೂಪುರೇಶೆ ಸಿದ್ಧವಾಯಿತು. ಅಲ್ಲಿ ಮೂಲಭೂತ ಸೌಕರ್ಯಕ್ಕೆ ಬೇಕಾದ ವ್ಯವಸ್ಥೆ ಮಾಡಲಾಯಿತು. ಆದರೆ ವ್ಯಾಪಾರಿಗಳು ಅಲ್ಲಿ ಹೋಗಲು ಉತ್ಸಾಹ ತೋರಲಿಲ್ಲ. ಇದರ ನಂತರ ಕೆಲವು ವ್ಯಾಪಾರಿಗಳು ಕಲ್ಲಾಪುವಿನಲ್ಲಿ ಖಾಸಗಿ ಮಾರುಕಟ್ಟೆ ಮಾಡಿಕೊಂಡು ಅಲ್ಲಿಗೆ ಶಿಫ್ಟ್ ಆದರು.

ಈಗ ನ್ಯಾಯಾಲಯದ ತಡೆಯಾಜ್ಞೆ ಮುಗಿದಿದೆ. ಕಟ್ಟಡ ಕೆಡವುದಕ್ಕೆ ಯಾವುದೇ ವಿರೋಧ ಇಲ್ಲ. ಮುಂದಿನ ದಿನಗಳಲ್ಲಿ ಹೊಸ ಕಟ್ಟಡ ಆಗುವುದು ನಿಶ್ಚಿತ. ಹಿಂದೆ ಯಾರೆಲ್ಲ ಅಲ್ಲಿ ಬಾಡಿಗೆ ಇದ್ದರೋ ಅವರಿಗೆ ಮತ್ತೆ ಹೊಸ ಕಟ್ಟಡದಲ್ಲಿ ಬಾಡಿಗೆಗೆ ಅಂಗಡಿ ಕೊಡಬೇಕಾಗಿಲ್ಲ. ಯಾಕೆಂದರೆ ಒಂದು ಅಂಗಡಿಯವರು 12 ವರ್ಷ ಸರಕಾರಿ ಕಟ್ಟಡದಲ್ಲಿ ಬಾಡಿಗೆಗೆ ಇದ್ರೆ ಅಲ್ಲಿ ಅವರನ್ನು ಮುಂದುವರೆಸಬೇಕು ಎನ್ನುವ ಯಾವ ನಿಯಮ ಇಲ್ಲ. ಅಲ್ಲಿ ರೀ ಎಲಂ ಮಾಡಬೇಕಾಗುತ್ತದೆ. ಅದರಲ್ಲಿ ಹೊಸ ವ್ಯಾಪಾರಿಗಳು ಕೂಡ ಸ್ಪರ್ಧಿಸಬಹುದು. ಹಳೆ ವ್ಯಾಪಾರಿಗಳು ಕೂಡ ಎಲಂನಲ್ಲಿ ಭಾಗವಹಿಸಬಹುದು. ಅದು ಮಾತ್ರವಲ್ಲ, ಇವರಿಗೆ ಮಾನವೀಯ ದೃಷ್ಟಿಯಲ್ಲಿ ತಾತ್ಕಾಲಿಕ ಮಾರುಕಟ್ಟೆ ಕೂಡ ಕಟ್ಟಿಕೊಡಬೇಕಾಗಿರಲಿಲ್ಲ. ಆದರೂ ಕಟ್ಟಿ ಕೊಡುವ ವ್ಯವಸ್ಥೆ ಮಾಡಲಾಗಿತ್ತು. ಇವರು ಅದಕ್ಕೆ ಕೂಡ ಕಲ್ಲು ಹಾಕಿದ್ದರು. ಒಂದು ವೇಳೆ ತೆಪ್ಪಗೆ ಅಲ್ಲಿ ಇದ್ದು ಯಾವುದೇ ಸ್ಟೇ ತರದೇ ಹೋಗಿದ್ದರೆ ಈಗ ಹೊಸ ಕಟ್ಟಡ ಕೂಡ ಅರ್ಧ ಆಗುತ್ತಿತ್ತು. ಇನ್ನು ಹೊಸ ಅಂಗಡಿಗೆ ಇವರು ಪರೋಕ್ಷವಾಗಿ ಕಾಯ್ದಿರಿಸಿದಂತೆ ಆಗುತ್ತಿತ್ತು. ಆದರೆ ಇವರು ಅದನ್ನು ಕೈಯಾರೆ ಹಾಳುಮಾಡಿಕೊಂಡಿದ್ದಾರೆ. ಅದರೊಂದಿಗೆ ಬೈಕಂಪಾಡಿಗೆ ಹೋಗದೇ ಇನ್ನೊಂದು ತಪ್ಪು ಕೂಡ ಮಾಡಿದ್ದಾರೆ. ಒಟ್ಟಿನಲ್ಲಿ ಈಗ ಇರುವ ಕಾಯ್ದೆಯ ಪ್ರಕಾರ ಯಾರು ಬೇಕಾದರೂ ಹೊಸ ಕಟ್ಟಡದಲ್ಲಿ ಅಂಗಡಿಗಾಗಿ ಎಲಂ ಹಾಕಬಹುದು. ಒಂದು ವೇಳೆ ರಾಜಕೀಯ ಕಾರಣಗಳನ್ನು ಇಟ್ಟುಕೊಂಡು ತಮ್ಮವರಿಗೆ ಕೊಟ್ಟರೆ ಅಥವಾ ಮಾನವೀಯ ದೃಷ್ಟಿಯಲ್ಲಿ ಕೊಟ್ಟರೂ ಬೇರೆಯವರು ನ್ಯಾಯಾಲಯಕ್ಕೆ ಹೋದರೆ ಜಿಲ್ಲಾಡಳಿತಕ್ಕೆ, ಜನಪ್ರತಿನಿಧಿಗಳಿಗೆ ಹಿನ್ನಡೆಯಾಗಲಿದೆ. ಅದಕ್ಕೆ ಹೇಳುವುದು ಏನೆಂದರೆ ಯಾವಾಗಲೂ ನಾವು ನಮ್ಮ ಆತ್ಮಸಾಕ್ಷಿಯಂತೆ ನಡೆಯಬೇಕೆ ವಿನ: ಯಾರೋ ಕುಮ್ಮಕ್ಕು ಕೊಟ್ಟರು ಎನ್ನುವ ಕಾರಣಕ್ಕೆ ವಿರುದ್ಧ ಗತಿಯಲ್ಲಿ ಈಜಲು ಹೋಗಬಾರದು. ಹೊಸ ಮಾರುಕಟ್ಟೆ ಕಟ್ಟಡ ಕಟ್ಟಲು ಭಾರತೀಯ ಜನತಾ ಪಾರ್ಟಿಯ ಶಾಸಕರಿಗೆ ಬಿಡಬಾರದು ಎನ್ನುವುದು ಕಾಂಗ್ರೆಸ್ಸಿಗರ ಒಳಸಂಚಾಗಿತ್ತು. ಯಾಕೆಂದರೆ ಹೊಸ ಮಾರುಕಟ್ಟೆ ಆದರೆ ಅದರ ಕ್ರೆಡಿಟ್ ಬಿಜೆಪಿಗೆ ಹೋಗಿ ನಂತರ ಅವರನ್ನು ಅಲ್ಲಾಡಿಸಲು ಆಗುವುದಿಲ್ಲ. ಇಡೀ ಜಿಲ್ಲೆಯ ಹೆಗ್ಗುರುತು ಆಗಿರುವ ಮಾರುಕಟ್ಟೆ ಕಟ್ಟಡ ಜನರಿಗೂ ಖುಷಿಯಾಗುತ್ತದೆ ಎನ್ನುವ ಆತಂಕ ಕಾಂಗ್ರೆಸ್ಸಿಗೆ ಇತ್ತು. ಈಗ ಅವರ ಷಡ್ಯಂತ್ರಕ್ಕೆ ಸೋಲಾಗಿದೆ. ಅದರೊಂದಿಗೆ ಹಳೆ ವ್ಯಾಪಾರಿಗಳು ಕೂಡ ಬೀದಿಗೆ ಬೀಳಲು ಕಾಂಗ್ರೆಸ್ ಕಾರಣವಾಗಿದೆ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search