• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಕಾಂಗ್ರೆಸ್ಸಿನೊದಿಗೆ ವ್ಯಾಪಾರಿಗಳು ಕೂಡ ಬೀದಿಗೆ ಬೀಳುವಂತಾಯಿತು!!

Hanumantha Kamath Posted On April 16, 2022
0


0
Shares
  • Share On Facebook
  • Tweet It

ಮಂಗಳೂರಿನ ಕೇಂದ್ರ ಮಾರುಕಟ್ಟೆ ಜರ್ಜರಿತವಾಗಿ ದಶಕದ ಮೇಲಾಗಿದೆ. ಅಲ್ಲಿ ಒಳಗೆ ವ್ಯಾಪಾರ ಮಾಡುವವರಿಗಾಗಲಿ ಅಥವಾ ಗ್ರಾಹಕರಿಗೆ ಆಗಲಿ ಅದು ಯಾವತ್ತೂ ರಿಸ್ಕ್ ಎನ್ನುವುದು ಕುರುಡನಿಗೂ ಗೊತ್ತಾಗುತ್ತಿದ್ದ ವಿಷಯ. ಮಧ್ಯರಾತ್ರಿ 12 ಗಂಟೆಯಿಂದ 2 ಗಂಟೆ ಬಿಟ್ಟು ಉಳಿದ 22 ಗಂಟೆ ಕೂಡ ಸೆಂಟ್ರಲ್ ಮಾರ್ಕೆಟ್ ಬಿಝಿ ಇರುತ್ತದೆ. ಏನು ಹೆಚ್ಚುಕಡಿಮೆ ಆದರೂ ಸಾವು ನೋವು ಗ್ಯಾರಂಟಿ ಇತ್ತು. ಅದನ್ನು ಹಾಗೆ ಬಿಡುವಂತಿರಲಿಲ್ಲ. ತಾತ್ಕಾಲಿಕ ತೇಪೆ ಹಚ್ಚಿದರೂ ಅದರಿಂದ ಪ್ರಯೋಜನವಿರಲಿಲ್ಲ. ಹಾಗಿರುವಾಗ ಅದನ್ನು ಸಂಪೂರ್ಣ ಕೆಡವಿ ಹೊಸ ಮಾರುಕಟ್ಟೆ ಕಟ್ಟುವುದಕ್ಕೆ ಸಿದ್ಧತೆ ನಡೆದಿತ್ತು. ಆದರೆ ಕೋಟಿಗಟ್ಟಲೆ ಹಣ ಬೇಕಲ್ಲ. ಕೊನೆಗೆ ನಮ್ಮ ನಸೀಬು ಚೆನ್ನಾಗಿತ್ತು. ಸ್ಮಾರ್ಟ್ ಸಿಟಿ ಫಂಡ್ ಬಂತು. ಅದರಿಂದ ಕಟ್ಟುವುದು ಎಂದು ನಿರ್ಧಾರವಾಯಿತು.
ಅಂಗಡಿಗಳನ್ನು ಖಾಲಿ ಮಾಡದೇ ಕಟ್ಟಲು ಸಾಧ್ಯವಿರಲಿಲ್ಲ. ಖಾಲಿ ಮಾಡಿ ಎಂದು ಸೂಚನೆ ಕೊಡಲಾಯಿತು. ಆದರೆ ಯಾವಾಗ ಕೆಡುವುದು ಎನ್ನುವ ಪ್ರಶ್ನೆ ಪ್ರತಿ ಬಾರಿ ಉದ್ಭವವಾಗುತ್ತಿತ್ತು. ವ್ಯಾಪಾರಿಗಳು ಕೋರ್ಟಿಗೆ ಹೋಗಿ ಸ್ಟೇ ತಂದರು. ಅದು ತೆರವು ಆದಾಗ ಕೆಡವೋಣ ಎಂದು ನಿರ್ಧಾರವಾಯಿತು. ಅದಕ್ಕೆ ಸರಿಯಾಗಿ ಕೋವಿಡ್ ಬಂತು. ಕೋವಿಡ್ ಬಂದಾಗ ಜನರಿಗೆ ಮನೆಯ ಹತ್ತಿರದಲ್ಲಿಯೇ ಇರುವ ಅಂಗಡಿಗಳಿಂದ ಖರೀದಿಸಿ ಎಂದು ಸಲಹೆ ನೀಡಿದರೂ ಅನೇಕರು ಸೆಂಟ್ರಲ್ ಮಾರುಕಟ್ಟೆಗೆ ಬರುತ್ತಿದ್ದರು. ಇದರಿಂದ ನಿತ್ಯ ಬೆಳಿಗ್ಗೆ ಸೆಂಟ್ರಲ್ ಮಾರುಕಟ್ಟೆ ಜಾತ್ರೆಯ ಸ್ವರೂಪ ಪಡೆಯುತ್ತಿತ್ತು. ಮಾಧ್ಯಮಗಳು ಇದರ ವಿರುದ್ಧ ಧ್ವನಿ ಎತ್ತಿದ್ದವು. ಆದ್ದರಿಂದ ತೀವ್ರ ಮುಜುಗರಕ್ಕೆ ಒಳಗಾದ ಜಿಲ್ಲಾಡಳಿತ ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಕೆಡವುಹ ನಿರ್ಧಾರಕ್ಕೆ ಬಂದಿತ್ತು. ಆದರೆ ಕೆಲವರು ಮತ್ತೆ ಅದರ ವಿರುದ್ಧ ನ್ಯಾಯಾಲಯಕ್ಕೆ ಹೋದರು. ಸ್ಟೇ ನೀಡಿ ಎಂದು ದಂಬಾಲು ಬಿದ್ದರು. ನ್ಯಾಯಾಲಯ ಸೆಂಟ್ರಲ್ ಮಾರುಕಟ್ಟೆ ಕಟ್ಟಡ ಕೆಡವಲು ತಡೆಯಾಜ್ಞೆ ನೀಡಿತು. ಅಲ್ಲಿಗೆ ಒಂದು ಹಂತ ಮುಗಿದಿತ್ತು.

ಆದರೆ ಅಲ್ಲಿ ಒಳಗೆ ಎಷ್ಟೋ ವರ್ಷಗಳಿಂದ ವ್ಯಾಪಾರಕ್ಕೆ ಕುಳಿತವರನ್ನು ಏಕಾಏಕಿ ಹೊರಗೆ ಹಾಕಿ ಬಿಲ್ಡಿಂಗ್ ಕೆಡವಲು ಸಾಧ್ಯವಾ ಎನ್ನುವ ಮಾನವೀಯ ಪ್ರಶ್ನೆ ಉದ್ಭವವಾಗಿತ್ತಲ್ಲ. ಅದಕ್ಕೆ ಅವರ ಕಷ್ಟ ಅರಿತ ಶಾಸಕ ವೇದವ್ಯಾಸ ಕಾಮತ್ ಫುಟ್ ಪಾತ್ ಮೈದಾನದ ಸಮೀಪ ಮೈದಾನಕ್ಕೆ ಏನೂ ತೊಂದರೆ ಆಗದೇ 5.5 ಕೋಟಿ ರೂಪಾಯಿ ವೆಚ್ಚದಲ್ಲಿ ತಾತ್ಕಾಲಿಕ ಮಾರುಕಟ್ಟೆಗೆ ವ್ಯವಸ್ಥೆ ಮಾಡುವ ನಿರ್ಧಾರ ಮಾಡಿದರು. ತಾತ್ಕಾಲಿಕ ಮಾರುಕಟ್ಟೆಯ ನಿರ್ಮಾಣದ ಕಾಮಗಾರಿ ಆರಂಭವಾಗುತ್ತಿದ್ದಂತೆ ಕೆಲವರು ಅದಕ್ಕೂ ಸ್ಟೇ ತಂದರು. ನಂತರ ಏನು ಮಾಡುವುದು? ರಖಂ ವ್ಯಾಪಾರಿಗಳನ್ನು ಬೈಕಂಪಾಡಿಯ ಎಪಿಎಂಸಿ ಪ್ರಾಂಗಣಕ್ಕೆ ಶಿಫ್ಟ್ ಮಾಡುವ ರೂಪುರೇಶೆ ಸಿದ್ಧವಾಯಿತು. ಅಲ್ಲಿ ಮೂಲಭೂತ ಸೌಕರ್ಯಕ್ಕೆ ಬೇಕಾದ ವ್ಯವಸ್ಥೆ ಮಾಡಲಾಯಿತು. ಆದರೆ ವ್ಯಾಪಾರಿಗಳು ಅಲ್ಲಿ ಹೋಗಲು ಉತ್ಸಾಹ ತೋರಲಿಲ್ಲ. ಇದರ ನಂತರ ಕೆಲವು ವ್ಯಾಪಾರಿಗಳು ಕಲ್ಲಾಪುವಿನಲ್ಲಿ ಖಾಸಗಿ ಮಾರುಕಟ್ಟೆ ಮಾಡಿಕೊಂಡು ಅಲ್ಲಿಗೆ ಶಿಫ್ಟ್ ಆದರು.

ಈಗ ನ್ಯಾಯಾಲಯದ ತಡೆಯಾಜ್ಞೆ ಮುಗಿದಿದೆ. ಕಟ್ಟಡ ಕೆಡವುದಕ್ಕೆ ಯಾವುದೇ ವಿರೋಧ ಇಲ್ಲ. ಮುಂದಿನ ದಿನಗಳಲ್ಲಿ ಹೊಸ ಕಟ್ಟಡ ಆಗುವುದು ನಿಶ್ಚಿತ. ಹಿಂದೆ ಯಾರೆಲ್ಲ ಅಲ್ಲಿ ಬಾಡಿಗೆ ಇದ್ದರೋ ಅವರಿಗೆ ಮತ್ತೆ ಹೊಸ ಕಟ್ಟಡದಲ್ಲಿ ಬಾಡಿಗೆಗೆ ಅಂಗಡಿ ಕೊಡಬೇಕಾಗಿಲ್ಲ. ಯಾಕೆಂದರೆ ಒಂದು ಅಂಗಡಿಯವರು 12 ವರ್ಷ ಸರಕಾರಿ ಕಟ್ಟಡದಲ್ಲಿ ಬಾಡಿಗೆಗೆ ಇದ್ರೆ ಅಲ್ಲಿ ಅವರನ್ನು ಮುಂದುವರೆಸಬೇಕು ಎನ್ನುವ ಯಾವ ನಿಯಮ ಇಲ್ಲ. ಅಲ್ಲಿ ರೀ ಎಲಂ ಮಾಡಬೇಕಾಗುತ್ತದೆ. ಅದರಲ್ಲಿ ಹೊಸ ವ್ಯಾಪಾರಿಗಳು ಕೂಡ ಸ್ಪರ್ಧಿಸಬಹುದು. ಹಳೆ ವ್ಯಾಪಾರಿಗಳು ಕೂಡ ಎಲಂನಲ್ಲಿ ಭಾಗವಹಿಸಬಹುದು. ಅದು ಮಾತ್ರವಲ್ಲ, ಇವರಿಗೆ ಮಾನವೀಯ ದೃಷ್ಟಿಯಲ್ಲಿ ತಾತ್ಕಾಲಿಕ ಮಾರುಕಟ್ಟೆ ಕೂಡ ಕಟ್ಟಿಕೊಡಬೇಕಾಗಿರಲಿಲ್ಲ. ಆದರೂ ಕಟ್ಟಿ ಕೊಡುವ ವ್ಯವಸ್ಥೆ ಮಾಡಲಾಗಿತ್ತು. ಇವರು ಅದಕ್ಕೆ ಕೂಡ ಕಲ್ಲು ಹಾಕಿದ್ದರು. ಒಂದು ವೇಳೆ ತೆಪ್ಪಗೆ ಅಲ್ಲಿ ಇದ್ದು ಯಾವುದೇ ಸ್ಟೇ ತರದೇ ಹೋಗಿದ್ದರೆ ಈಗ ಹೊಸ ಕಟ್ಟಡ ಕೂಡ ಅರ್ಧ ಆಗುತ್ತಿತ್ತು. ಇನ್ನು ಹೊಸ ಅಂಗಡಿಗೆ ಇವರು ಪರೋಕ್ಷವಾಗಿ ಕಾಯ್ದಿರಿಸಿದಂತೆ ಆಗುತ್ತಿತ್ತು. ಆದರೆ ಇವರು ಅದನ್ನು ಕೈಯಾರೆ ಹಾಳುಮಾಡಿಕೊಂಡಿದ್ದಾರೆ. ಅದರೊಂದಿಗೆ ಬೈಕಂಪಾಡಿಗೆ ಹೋಗದೇ ಇನ್ನೊಂದು ತಪ್ಪು ಕೂಡ ಮಾಡಿದ್ದಾರೆ. ಒಟ್ಟಿನಲ್ಲಿ ಈಗ ಇರುವ ಕಾಯ್ದೆಯ ಪ್ರಕಾರ ಯಾರು ಬೇಕಾದರೂ ಹೊಸ ಕಟ್ಟಡದಲ್ಲಿ ಅಂಗಡಿಗಾಗಿ ಎಲಂ ಹಾಕಬಹುದು. ಒಂದು ವೇಳೆ ರಾಜಕೀಯ ಕಾರಣಗಳನ್ನು ಇಟ್ಟುಕೊಂಡು ತಮ್ಮವರಿಗೆ ಕೊಟ್ಟರೆ ಅಥವಾ ಮಾನವೀಯ ದೃಷ್ಟಿಯಲ್ಲಿ ಕೊಟ್ಟರೂ ಬೇರೆಯವರು ನ್ಯಾಯಾಲಯಕ್ಕೆ ಹೋದರೆ ಜಿಲ್ಲಾಡಳಿತಕ್ಕೆ, ಜನಪ್ರತಿನಿಧಿಗಳಿಗೆ ಹಿನ್ನಡೆಯಾಗಲಿದೆ. ಅದಕ್ಕೆ ಹೇಳುವುದು ಏನೆಂದರೆ ಯಾವಾಗಲೂ ನಾವು ನಮ್ಮ ಆತ್ಮಸಾಕ್ಷಿಯಂತೆ ನಡೆಯಬೇಕೆ ವಿನ: ಯಾರೋ ಕುಮ್ಮಕ್ಕು ಕೊಟ್ಟರು ಎನ್ನುವ ಕಾರಣಕ್ಕೆ ವಿರುದ್ಧ ಗತಿಯಲ್ಲಿ ಈಜಲು ಹೋಗಬಾರದು. ಹೊಸ ಮಾರುಕಟ್ಟೆ ಕಟ್ಟಡ ಕಟ್ಟಲು ಭಾರತೀಯ ಜನತಾ ಪಾರ್ಟಿಯ ಶಾಸಕರಿಗೆ ಬಿಡಬಾರದು ಎನ್ನುವುದು ಕಾಂಗ್ರೆಸ್ಸಿಗರ ಒಳಸಂಚಾಗಿತ್ತು. ಯಾಕೆಂದರೆ ಹೊಸ ಮಾರುಕಟ್ಟೆ ಆದರೆ ಅದರ ಕ್ರೆಡಿಟ್ ಬಿಜೆಪಿಗೆ ಹೋಗಿ ನಂತರ ಅವರನ್ನು ಅಲ್ಲಾಡಿಸಲು ಆಗುವುದಿಲ್ಲ. ಇಡೀ ಜಿಲ್ಲೆಯ ಹೆಗ್ಗುರುತು ಆಗಿರುವ ಮಾರುಕಟ್ಟೆ ಕಟ್ಟಡ ಜನರಿಗೂ ಖುಷಿಯಾಗುತ್ತದೆ ಎನ್ನುವ ಆತಂಕ ಕಾಂಗ್ರೆಸ್ಸಿಗೆ ಇತ್ತು. ಈಗ ಅವರ ಷಡ್ಯಂತ್ರಕ್ಕೆ ಸೋಲಾಗಿದೆ. ಅದರೊಂದಿಗೆ ಹಳೆ ವ್ಯಾಪಾರಿಗಳು ಕೂಡ ಬೀದಿಗೆ ಬೀಳಲು ಕಾಂಗ್ರೆಸ್ ಕಾರಣವಾಗಿದೆ!!

0
Shares
  • Share On Facebook
  • Tweet It




Trending Now
ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
Hanumantha Kamath September 15, 2025
ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
Hanumantha Kamath September 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
  • Popular Posts

    • 1
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 2
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 3
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 4
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 5
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ

  • Privacy Policy
  • Contact
© Tulunadu Infomedia.

Press enter/return to begin your search