• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ದೇವಾಲಯ ಕೆಡವಲು ಅಡ್ಡಬಂದವರ ಮನೆಗೆ ಬುಲ್ಡೋಜರ್!!

Hanumantha Kamath Posted On April 22, 2022
0


0
Shares
  • Share On Facebook
  • Tweet It

ಕಲ್ಲು ಬಿಸಾಡಿದವರ ಅಕ್ರಮ ಕಟ್ಟಡಗಳನ್ನು ಕೆಡವುದಕ್ಕೆ ಭಾರತೀಯ ಜನತಾ ಪಾರ್ಟಿ ಹಾಗೂ ಆಮ್ ಆದ್ಮಿ ಪಕ್ಷಗಳು ಬುಲ್ಡೋಜರ್ ಹಾಯಿಸಲು ತೊಡಗಿದಾಗ ತಮ್ಮ ಬಾಯಿ ಬಡಿದು ಬೊಬ್ಬೆ ಹಾಕುತ್ತಿದ್ದ ಎಡಪಂಥಿಯರು, ಮಮತಾ ಮತ್ತು ಕಾಂಗ್ರೆಸ್ ನಾಯಕರು ಈಗ ಏನು ಹೇಳುತ್ತಾರೆ ಎನ್ನುವುದೇ ವಿಷಯ. ನಾನು ನೇರವಾಗಿ ವಿಷಯಕ್ಕೆ ಬರುತ್ತೇನೆ. ರಾಜಸ್ಥಾನದಲ್ಲಿ ಅಲಾವರ ಎನ್ನುವ ಸ್ಥಳವಿದೆ. ಅಲ್ಲಿ ಮುನ್ನೂರು ವರ್ಷಗಳ ಹಳೆಯ ದೇವಸ್ಥಾನವಿತ್ತು. ಶಿವನ ದೇವಾಲಯ. ಸ್ಥಳೀಯರು ಅದನ್ನು ಬಹಳ ಭಯಭಕ್ತಿಗಳಿಂದ ಆರಾಧಿಸಿಕೊಂಡು ಬರುತ್ತಿದ್ದರು. ಮೊನ್ನೆ ಅಲ್ಲಿನ ಸರಕಾರ ಆ ದೇವಸ್ಥಾನ ಸಹಿತ ಒಟ್ಟು ಮೂರು ದೇವಾಲಯಗಳನ್ನು ಓಡೆಯಲು ಮುಂದಾಗಿದೆ. ಬುಲ್ಡೋಜರ್ ಬರುತ್ತಿದ್ದಂತೆ ಸ್ಥಳೀಯರು ಅಡ್ಡ ಬಂದಿದ್ದಾರೆ. ಯಾವುದೇ ಕಾರಣಕ್ಕೂ ದೇವಾಲಯ ಕೆಡವಲು ಬಿಡುವುದಿಲ್ಲ ಎಂದು ಪ್ರತಿಭಟನೆ ಮಾಡಿದ್ದಾರೆ. ನೀವು ದೇವಾಲಯ ಕೆಡವಲು ಅಡ್ಡ ಬಂದರೆ ಮೂರ್ತಿಯನ್ನು ಮುರಿದು ಚರಂಡಿಗೆ ಬಿಸಾಡುತ್ತೇವೆ ಎಂದು ಕೆಡವಲು ಬಂದವರು ಹೇಳಿದ್ದಾರೆ.

ಕೊನೆಗೆ ಆ ಶಿವ ದೇವಾಲಯವನ್ನು ಬುಲ್ಡೋಜರ್ ಬಳಸಿ ಕೆಡವಲಾಗಿದೆ. ಕೆಡವಲು ಬಂದವರು ಮೂರ್ತಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಆ ಬಳಿಕ ಇನ್ನೆರಡು ದೇವಸ್ಥಾನಗಳನ್ನು ಕೂಡ ಕೆಡವಿ ಹೋಗಿದ್ದಾರೆ. ಇದು ಒಂದು ಹಂತ. ಇಷ್ಟೇ ಆಗಿದ್ರೆ ಅಲ್ಲಿರುವುದು ಕಾಂಗ್ರೆಸ್ ಸರಕಾರ, ಅವರಿಂದ ಅಲ್ಲಿನ ಜನ ಬೇರೆ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಅಂದುಕೊಳ್ಳಬಹುದು. ಆದರೆ ಅಲ್ಲಿನ ರಾಜ್ಯ ಸರಕಾರ ಒಂದು ಹೆಜ್ಜೆ ಮುಂದೆ ಹೋಗಿ ದೇವಸ್ಥಾನದ ಪರ ಪ್ರತಿಭಟನೆ ಮಾಡಿದವರ ಮನೆಗಳನ್ನು ಬುಲ್ಡೋಜರ್ ಬಳಸಿ ಕೆಡವಿಬಿಟ್ಟಿದೆ. ಹಾಗಾದರೆ ರಾಷ್ಟ್ರಾದ್ಯಂತ ಕಾಂಗ್ರೆಸ್ ನಿಲುವು ಏನು? ಹಿಂದೂ ದೇವಾಲಯಗಳನ್ನು ಕೆಡವುದು ಎನ್ನುವುದಾ? 300 ವರ್ಷಗಳ ಹಿಂದಿನ ದೇವಾಲಯ ಅನಧಿಕೃತ ಹೇಗಾಗುತ್ತದೆ? ಇನ್ನು ದೇವಾಲಯ ಉಳಿಸಲು ಪ್ರತಿಭಟಿಸಿದವರ ಮನೆಯನ್ನು ಇವರು ಕೆಡವಿದರಲ್ಲಾ? ಈಗ ಆ ಎಡಪಂಥಿಯರು, ಮಮತಾ ಹದಿನೈದು ದಿನಗಳ ನೋಟಿಸು ಕೊಟ್ಟಿದ್ದೀರಾ ಎಂದು ಯಾಕೆ ಕೇಳುವುದಿಲ್ಲ. ಹಾಗಾದರೆ ಮುಸ್ಲಿಂ ಗಲಭೆಕೋರರ ಮನೆಗಳನ್ನು ಕೆಡವಿದರೆ ಭಾತೃತ್ವ ಪ್ರೇಮ ಹುಟ್ಟುವ ಇವರಿಗೆ ದೇವಸ್ಥಾನಕ್ಕೆ ಹೋರಾಡಿದವರ ಮನೆಯನ್ನು ಕೆಡವಿದರೆ ಮಾತನಾಡಲು ಬಾಯಿ ಬರಲ್ವಾ? ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿಯಲ್ಲಿ ಏನು ಮಾಡಿದರೋ ಅದರ ವಿರುದ್ಧವಾಗಿ ಮುಸ್ಲಿಮರನ್ನು ಸಂತುಷ್ಟಗೊಳಿಸಲು ಕಾಂಗ್ರೆಸ್ ಕೈಗೊಂಡಿರುವ ನಿರ್ಧಾರ ಅವರಿಗೆ ರಾಷ್ಟ್ರಮಟ್ಟದಲ್ಲಿ ಹಿನ್ನಡೆ ಆಗುವುದು ನಿಜ!!

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Hanumantha Kamath October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Hanumantha Kamath October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search