• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?

Hanumantha Kamath Posted On June 25, 2022
0


0
Shares
  • Share On Facebook
  • Tweet It

ಒಂದು ಕಾರ್ಯಕ್ರಮ ತಮಗೆ ಇಷ್ಟವಾಗದಿದ್ದರೆ ಅದರ ವಿರುದ್ಧ ಅಸಮಾಧಾನದ ಅಂಗವಾಗಿ ಕೆಲವರು ಪ್ರತಿಭಟನೆ ಮಾಡುತ್ತಾರೆ. ಕೆಲವರಿಗೆ ಜೀವನಕ್ಕೆ ಅದೇ ಆಧಾರ ಕೂಡ ಆಗಿರುತ್ತದೆ. ಆದರೆ ಪ್ರತಿಭಟನೆಯ ಹಿಂದೆ ಸತ್ಯ ವಿಚಾರ ಇರಬೇಕು. ರಾಷ್ಟ್ರೀಯವಾದಿ ಲೇಖಕ ರೋಹಿತ್ ಚಕ್ರತೀರ್ಥ ನಾಗರಿಕ ಸನ್ಮಾನದ ವಿರುದ್ಧ ಬೆರಳೆಣಿಕೆಯ ಎಡಪಂಥಿಯರು ಕೆಲವು ಬಿಲ್ಲವ ನಾಯಕರೆನಿಸಿಕೊಂಡು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಾ ಶಾಸಕರಾಗುವ ಆಸೆಯನ್ನು ತುಂಬುಕಣ್ಣಿನಿಂದ ಕಾಣುತ್ತಿರುವವರನ್ನು ಸೇರಿಸಿಕೊಂಡು ಪ್ರತಿಭಟನೆ ಮಾಡಲು ಹೊರಡುವ ಮೊದಲು ಒಮ್ಮೆ ತಮ್ಮ ಉದ್ದೇಶದ ಬಗ್ಗೆ ಖಚಿತತೆ ಇಟ್ಟುಕೊಳ್ಳಬೇಕಿತ್ತು. ಅದೇನೆಂದರೆ ತಾವು ಎಷ್ಟು ಸಚ್ಚಾರಿತ್ರ್ಯ ಹೊಂದಿರುವವರು ಎಂದು ನೋಡಬೇಕು. ಕೇರಳದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಶಿಲುಬೆಗೆ ಏರಿಸಿದ್ದ ಟ್ಯಾಬ್ಲೋವನ್ನು ಕರಾವಳಿಯ ಬಿಲ್ಲವರು ನೋಡಿದ್ದಾರೆ. ಇದರಿಂದ ಕಮ್ಯೂನಿಸ್ಟರಿಗೆ ಗುರುಗಳ ಬಗ್ಗೆ ಎಷ್ಟು ಗೌರವ ಇದೆ ಎಂದು ಗೊತ್ತಾಗುತ್ತದೆ. ಆದರೆ ಇಲ್ಲಿ ಮಾತ್ರ ಅಂತವರು ಬ್ರಹ್ಮಶ್ರೀ ನಾರಾಯಣ ಗುರುಗಳ ಮಹಾನ್ ಹಿಂಬಾಲಕರಂತೆ ಫೋಸ್ ಕೊಡುತ್ತಿರುವುದರಿಂದ ಎಡಪಂಥಿಯರ ಜೊತೆ ಬೆರಳೆಣಿಕೆಯ ಬಿಲ್ಲವರು ಬಿಟ್ಟರೆ ಬೇರೆ ಯಾರೂ ಇಲ್ಲ. ಬ್ರಹ್ಮಶ್ರೀ ನಾರಾಯಣ ಗುರುಗಳು ಬಿಲ್ಲವರಿಗೆ ಮಾತ್ರ ಪೂಜ್ಯರು ಎಂದು ತಪ್ಪು ಕಲ್ಪನೆ ಯಾರಿಗೂ ಬೇಡಾ. ಅವರು ಎಲ್ಲಾ ಸಮುದಾಯಗಳಿಂದಲೂ ಆರಾಧಿಸಲ್ಪಡುವವರು. ಅವರನ್ನು ಸಮಾಜ ವಿಜ್ಞಾನದಿಂದ ಕನ್ನಡ ಪಾಠಕ್ಕೆ ತಂದ ಬಗ್ಗೆ ಅಸಮಾಧಾನ ಇದ್ದರೆ ಅದು ರೋಹಿತ್ ಚಕ್ರತೀರ್ಥ ಅವರ ಕಾರ್ಯಕ್ರಮಕ್ಕೆ ತಾವು ಬಹಿಷ್ಕರಿಸುತ್ತೇವೆ ಎಂದು ಹೇಳಬಹುದು. ಆದರೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಮುತ್ತಿಗೆ ಹಾಕುವುದಾಗಿ ಕರೆ ಕೊಡುವುದು, ಅದಕ್ಕೆ ಕೆಲವರು ಮುಖಕ್ಕೆ ಮಸಿ ಬಳಿಯಬೇಕು ಎಂದು ಒಗ್ಗರಣೆ ಹಾಕುವುದು, ಇನ್ನು ಕೆಲವರು ಇದೇ ಸಮಯದಲ್ಲಿ ದುರ್ಲಾಭ ಪಡೆದು ಹಲ್ಲೆಗೆ ಸ್ಕೆಚ್ ಹಾಕುವುದು ಎಷ್ಟರ ಮಟ್ಟಿಗೆ ಪ್ರಜ್ಞಾವಂತರ ನಾಡಿನಲ್ಲಿ ಒಪ್ಪತಕ್ಕದ್ದು ಎಂದು ಪ್ರತಿಭಟನಾಕಾರರಿಗೆ ಗೊತ್ತು. ಕೇರಳದಲ್ಲಿ ಅವರದ್ದೇ ಸರಕಾರ ಇರುವುದರಿಂದ ಬಹುಶ: ಹೀಗೆ ಮಾಡುತ್ತಾರೇನೋ? ಆದರೆ ಇಲ್ಲಿ ಸರಿನಾ? ಬೆಂಗಳೂರಿನಲ್ಲಿ ಟಿಕಾಯತ್ ಮುಖಕ್ಕೆ ಮಸಿ ಬಳಿದವರು ಬಂಧಿತರಾದ ನಂತರ ತಾವು ಪ್ರಚಾರಕ್ಕಾಗಿ ಹಾಗೆ ಮಾಡಿದ್ದು ಎಂದಿದ್ದರು. ಇಲ್ಲಿ ಕೂಡ ಹೀಗೆ ಪ್ರಸಿದ್ಧರಾಗಲು ಸಂಚು ನಡೆದಿತ್ತಾ ಎನ್ನುವುದನ್ನು ಪೊಲೀಸ್ ಅಧಿಕಾರಿಗಳು ಗಮನಿಸಿದ್ದಾರೆ.

ಇನ್ನು ಪ್ರತಿಭಟನಾಕಾರರ ಮುಖ್ಯ ಟಾರ್ಗೆಟ್ ಇದ್ದದ್ದು ರೋಹಿತ್ ಚಕ್ರತೀರ್ಥ ಎನ್ನುವುದಕ್ಕಿಂತ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಎನ್ನುವುದು ಹೋರಾಟಗಾರರೆನಿಸಿಕೊಂಡವರ ರಣತಂತ್ರದಿಂದಲೇ ಸ್ಪಷ್ಟವಾಗಿತ್ತು. ಪ್ರತಿಯೊಬ್ಬರು ಸೋಶಿಯಲ್ ಮೀಡಿಯಾಗಳಲ್ಲಿ, ಎಡಪಂಥಿಯ ವಾಹಿನಿಗಳಲ್ಲಿ ಮಾತನಾಡುವಾಗ ಸ್ಪಷ್ಟ ಗುರಿ ಇಟ್ಟು ಕಲ್ಲು ಹೊಡೆದದ್ದು ವೇದವ್ಯಾಸ ಕಾಮತ್ ಅವರಿಗೆ. ಇದರ ಅರ್ಥ ಏನೆಂದು ಎಲ್ಲರಿಗೂ ಗೊತ್ತಾಗುತ್ತದೆ. ಅಷ್ಟಕ್ಕೂ ರೋಹಿತ್ ಅವರೇನೂ ಸಮಾಜದಿಂದ ಬಹಿಷ್ಕಾರಕ್ಕೆ ಗುರಿಯಾದವರಲ್ಲ. ಅವರಿಗೆ ದೇಶದಿಂದ ಗಡಿಪಾರಿನ ಶಿಕ್ಷೆ ಏನೂ ಆಗಿಲ್ಲ. ಅವರು ರಾಜ್ಯ ಸರಕಾರವೇ ನೇಮಿಸಿದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿ ಇದ್ದವರು. ಅವರು ಮೊಗಲರ, ಟಿಪ್ಪುವಿನ ಪಠ್ಯ ಕಡಿತಗೊಳಿಸಿದ್ದನ್ನು ಸಹಿಸಲಾರದೇ ಅವರ ಮೇಲೆ ಇಲ್ಲಸಲ್ಲದ ಆರೋಪ ಹಾಕುತ್ತಿರುವ ಸಿದ್ದು ಜೊತೆಗೆ ಸೇರಿರುವ ಎಡಪಂಥಿಯರು ರೋಹಿತ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈಗ ಚಕ್ರತೀರ್ಥ ಸಮಿತಿಯಿಂದ ಆದ ಬೆರಳೆಣಿಕೆಯ ತಪ್ಪಿಗೂ, ಬರಗೂರು ಸಮಿತಿಯಿಂದ ಆದ 107 ತಪ್ಪುಗಳನ್ನು ತುಲನೆ ಮಾಡಿದರೆ ಬರಗೂರು ಉಸಿರಾಡುವುದು ಕೂಡ ತಪ್ಪಾಗುತ್ತದೆ. ಹಾಗಿರುವಾಗ ಅದ್ಯಾವುದೂ ಮಾತನಾಡದೇ ಕೇವಲ ರೋಹಿತ್ ಬಗ್ಗೆ ಮಾತ್ರ ಬೆಂಕಿ ಕಾರುವುದು ಆಶ್ಚರ್ಯವಾಗಿದೆ. ಮಂಗಳೂರಿನಲ್ಲಂತೂ ರೋಹಿತ್ ಹೆಗಲ ಮೇಲೆ ಬಂದೂಕು ಇಟ್ಟು ಶಾಸಕ ಕಾಮತ್ ಅವರನ್ನು ಶೂಟ್ ಮಾಡಿದಂತೆ ಕಾಣುತ್ತಿತ್ತು.

ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ (ರಿ) ಒಂದು ಖಾಸಗಿ ಸಂಸ್ಥೆ. ಅದು ಬಡವರಿಗೆ, ನಿರ್ಗತಿಕರಿಗೆ, ಅಸಹಾಯಕರಿಗೆ ಔಷಧ ಪಿಂಚಣಿ, ಫೀಸ್, ಮನೆ ಸಹಿತ ವಿವಿಧ ಸಹಾಯಗಳನ್ನು ಮಾಡುತ್ತಾ ಬರುತ್ತಿದೆ. ಕೊರೊನಾ ಅವಧಿಯಲ್ಲಿ ಅದರ ನಿತ್ಯ ಸೇವಾ ಚಟುವಟಿಕೆ ಬಗ್ಗೆ ಹೇಳಿದರೆ ಅದೇ ಒಂದು ಪುಟವಾದಿತು. ಈ ಟ್ರಸ್ಟ್ ಈ ಹಿಂದೆ ಸುಬ್ರಹ್ಮಣ್ಯಂ ಸ್ವಾಮಿಯವರನ್ನು ಮಂಗಳೂರಿಗೆ ಕರೆಸಿ ಸಂವಾದ ಏರ್ಪಡಿಸಿತ್ತು. ಈ ಟ್ರಸ್ಟಿಗೆ ಎರಡು ದಶಕಗಳ ಸೇವಾ ಅನುಭವವಿದೆ. ವೇದವ್ಯಾಸ ಕಾಮತ್ ಆರಂಭದಿಂದಲೂ ಇದರ ಅಧ್ಯಕ್ಷರು, ಈಗಲೂ ಅಧ್ಯಕ್ಷರು, ಮುಂದೆಯೂ ಅಧ್ಯಕ್ಷರಾಗಿ ಮುಂದುವರೆಯಬಹುದು. ಅದರಲ್ಲಿ ತಪ್ಪಿಲ್ಲ. ತಮ್ಮ ಆದಾಯದ ಪಾಲನ್ನು ಜನಸೇವೆಗೆ ಅವರು ವಿನಿಯೋಗಿಸುತ್ತಿದ್ದಾರೆ. ಎರಡು ದಶಕಗಳ ಹಿಂದಿನಿಂದಲೂ ಯಾವುದೇ ಫಲಾಪೇಕ್ಷೆ ಇಲ್ಲದೆ ದುಡಿದಿದ್ದಾರೆ. ಈಗ ಅವರು ಜನರ ಆರ್ಶೀವಾದ, ಪಕ್ಷದ ಬೆಂಬಲ, ಪಕ್ಷದ ಮುಖಂಡರ ಸಹಕಾರದಿಂದ ಶಾಸಕರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹೆಸರು ಕೆಡಿಸಿಕೊಳ್ಳುವಂತಹ ಯಾವುದೇ ಕೆಲಸ ಅವರು ನಾಲ್ಕು ವರ್ಷಗಳಲ್ಲಿ ಮಾಡಿಲ್ಲ. ಅವರ ಮೊದಲ ಅವಧಿ ಶುದ್ಧ ಪ್ರಾಮಾಣಿಕ ನೆಲೆಯಲ್ಲಿ ಹೋಗುತ್ತಿರುವುದರಿಂದ ಪಕ್ಷ ಮತ್ತು ಜನರು ಬಯಸಿದರೆ ಅವರು ಎರಡನೇ ಅವಧಿಗೂ ಶಾಸಕರಾಗಿ ಮುಂದುವರೆಯುವುದು ಅಸಾಧ್ಯವೇನಲ್ಲ. ಆದ್ದರಿಂದ ಹೇಗಾದರೂ ಮಾಡಿ ಒಂದು ಸಣ್ಣ ಕೂದಲು ಸಿಕ್ಕಿದರೂ ಅದನ್ನೇ ಜಟೆ ಎಂದು ಸಾಬೀತು ಪಡಿಸಲು ಹೆಣಗುತ್ತಿರುವ ಪಡೆ ತಯಾರಾಗಿ ನಿಂತಿದೆ. ಅದರ ಒಂದು ಸ್ಯಾಂಪಲ್ ರೋಹಿತ್ ಕೋಪದಲ್ಲಿ ಕಾಮತ್ ಹೆಸರು ಕೆಡಿಸಲು ನೋಡಿದ್ದು ಬಿಟ್ಟರೆ ಬೇರೆ ಏನೂ ಇಲ್ಲ!

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Hanumantha Kamath July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Hanumantha Kamath July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search