• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಕಿಸ್ ಕೊಟ್ಟವಳ ಯೂನಿಫಾರಂ ಎಲ್ಲಾ ಕಥೆ ಹೇಳುತ್ತಿತ್ತು!!

Hanumantha Kamath Posted On July 21, 2022
0


0
Shares
  • Share On Facebook
  • Tweet It

ಮಂಗಳೂರಿನಲ್ಲಿ ರಸ್ತೆಯೊಂದಕ್ಕೆ ಹೆಸರಿಡುವ ವಿಚಾರದಲ್ಲಿ ಸಾಕಷ್ಟು ಸುದ್ದಿಯಾಗಿದ್ದ ಶಿಕ್ಷಣ ಸಂಸ್ಥೆಯೊಂದು ಈಗ ಕಿಸ್ಸಿಂಗ್ ವಿಚಾರದಲ್ಲಿ ಸಾಕಷ್ಟು ಸುದ್ದಿಯಾಗಿದೆ. ಯುವಕನೊಬ್ಬ ಯುವತಿಗೆ ಫ್ರೆಂಚ್ ಕಿಸ್ ಎಂದು ಕರೆಯಲಾಗುವ ಕಿಸ್ ಒಂದನ್ನು ಬಹಳ ಆಳವಾಗಿ ನೀಡುವುದನ್ನು ಆ ಕೋಣೆಯಲ್ಲಿರುವ ಮತ್ತೊಬ್ಬ ಯುವಕ ಚಿತ್ರೀಕರಿಸಿದ್ದು ಅದೀಗ ವೈರಲ್ ಆಗಿದೆ. ಈಗ ಅದು ಮೊಬೈಲ್ ಗಳಲ್ಲಿ ಹರಿದಾಡುತ್ತಿದ್ದು, ಯುವತಿಯ ಮುಖ ಬಹಳ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದೇ ಕೋಣೆಯಲ್ಲಿ ಇನ್ನೊಂದು ಯುವತಿ ಯುವಕನೊಬ್ಬನ ತೊಡೆಯ ಮೇಲೆ ಮಲಗಿದಂತೆ ಕಾಣಿಸುತ್ತಿದ್ದಾಳೆ. ಇನ್ನೊಂದೆರಡು ಯುವಕರು ಆ ಕೋಣೆಯಲ್ಲಿ ಇರುವುದು ಸ್ಪಷ್ಟ. ಇದು ವಿದೇಶಗಳಲ್ಲಿ ಆಡುವ ಟ್ರೂತ್ ಅಂಡ್ ಡೇರ್ ಎನ್ನುವ ಆಟವಾಗಿದ್ದು ಅಲ್ಲಿ ಸಾಕಷ್ಟು ಪ್ರಸಿದ್ಧಿಯಾಗಿದೆ. ಆಟಗಾರರಲ್ಲಿ ಒಬ್ಬನಿಂದ ಇನ್ನೊಬ್ಬ ಆಟಗಾರನಿಗೆ ಎರಡು ಟಾಸ್ಕ್ ಕೊಡಲಾಗುತ್ತದೆ. ಅದರಲ್ಲಿ ಒಂದನ್ನು ಟಾಸ್ಕ್ ತೆಗೆದುಕೊಂಡವ/ಳ ಆಟಗಾರ ಮಾಡಲೇಬೇಕು. ಆ ಕಂಡಿಷನ್ ಮೇಲೆ ಆಟ ನಡೆಯುತ್ತದೆ. ಅದರಲ್ಲಿ ಒಂದು ಟಾಸ್ಕ್ ಹೀಗೆ ಕಿಸ್ ಕೊಡುವುದು ಕೂಡ ಇರಬಹುದು. ಕಿಸ್ ಕೊಡದೇ ಇದ್ದರೆ ಮೊದಲ ಆಟಗಾರ ಕೇಳುವ ಪ್ರಶ್ನೆಗೆ ಇನ್ನೊಬ್ಬ ಅಥವಾ ಇನ್ನೊಬ್ಬಳು ನೈಜ ಉತ್ತರ ಕೊಡಬೇಕು. ಆ ಪ್ರಶ್ನೆ ಯಾವುದೇ ತುಂಬಾ ವೈಯಕ್ತಿಕವಾಗಿಯೂ ಇರಬಹುದು. ಈ ರೀತಿ ಆಟ ಸಾಗುತ್ತದೆ. ನಾವು ಅಲ್ಲಿ ಏನೂ ಮಾಡಿಲ್ಲ, ಒಂದು ಆಟ ಆಡುತ್ತಿದ್ವಿ ಎಂದು ಆ ಯುವಕ, ಯುವತಿಯರು ಹೇಳುತ್ತಿದ್ದಾರಂತೆ. ಇದನ್ನು ಒಂದು ಆಟ ಎಂದು ಅಂದುಕೊಳ್ಳುವುದೇ ಭಾರತೀಯ ಸಂಸ್ಕೃತಿಗೆ ಮಾಡುವ ಮೋಸ.

ವಿದೇಶದಲ್ಲಿ ಸ್ವಚ್ಚಂದತೆಗೆ ವ್ಯಾಪಕ ಅವಕಾಶಗಳಿರಬಹುದು. ಆದರೆ ಭಾರತದಲ್ಲಿ ಇಂತಹ ಆಟಗಳು ನಿಷಿದ್ಧ. ಯಾಕೆಂದರೆ ಇದು ನಮ್ಮ ಸಂಸ್ಕೃತಿ ಅಲ್ಲ. ಹಾಗಾದರೆ ನಮಗೆ ಒಂದು ಆಟವಾಡುವುದಕ್ಕೂ ಸ್ವಾತಂತ್ರ್ಯವಿಲ್ಲವೇ ಎಂದು ಯುವಕ, ಯುವತಿಯರು ಕೇಳಬಹುದು. ಇಂತಹ ಆಟ ಏನೇ ಇರಲಿ, ಆದರೆ ಇದರ ಹಿಂದೆ ಆ ಯುವತಿಯ ಕುಟುಂಬದ ಮರ್ಯಾದೆ ಕೂಡ ಅಡಕವಾಗಿದೆ. ನಮ್ಮ ಮಗಳು ಹೀಗೆ ಕಿಸ್ ಕೊಟ್ಟರೆ ಅವಳ ಸ್ವಾತಂತ್ರ್ಯ ಅದು, ನಮಗೇನು ಅಡ್ಡಿ ಇಲ್ಲ ಎಂದು ಹೆತ್ತವರು ಹೇಳಿದ್ದರೆ ಅದು ಬೇರೆ ಮಾತು. ಇಲ್ಲದಿದ್ದರೆ ಇಂತಹ ಆಟದಿಂದ ಅದ್ಯಾವ ಖುಷಿ ಸಿಗುತ್ತೋ ಅವರಿಗೆ ಮಾತ್ರ ಗೊತ್ತು. ಇನ್ನು ಆಕೆ ಕಲಿಯುತ್ತಿರುವ ಕಾಲೇಜು ಒಂದು ಕಾಲದಲ್ಲಿ ಬಹಳ ಕಟ್ಟುನಿಟ್ಟಿಗೆ ಹೆಸರುವಾಸಿಯಾಗಿತ್ತು. ನಮ್ಮ ಮಕ್ಕಳನ್ನು ಅಲ್ಲಿ ಓದಲು ಕಲಿಸಿದರೆ ಬಹಳ ಒಳ್ಳೆಯದು ಎಂದು ಪೋಷಕರು ಮಾತನಾಡಿಕೊಳ್ಳುತ್ತಿದ್ದರು. ಆ ಕಾಲೇಜಿನ ಕಾರಿಡಾರ್ ನಲ್ಲಿ ನಡೆದುಕೊಂಡು ಹೋಗುವಾಗಲೂ ವಿದ್ಯಾರ್ಥಿನಿಯರು ತಲೆ ಕೆಳಗೆ ಮಾಡಿ ನಡೆಯುತ್ತಿದ್ದರು. ಕ್ಯಾಂಪಸ್ ನಲ್ಲಿ ಬಹಳ ಶಿಸ್ತಿನ ವಾತಾವರಣ ಇತ್ತು. ಶಿಕ್ಷಕರು ಅಕ್ಷರಶ: “ಫಾದರ್”ಗಳಂತೆ ಸ್ಟಿಕ್ಟ್ ಆಗಿರುತ್ತಿದ್ದರು. ಅದೇ ಕಾರಣಕ್ಕೆ ಕಾಲೇಜು ಹೆಸರುವಾಸಿಯಾಗಿತ್ತು. ಆಗ ಆ ಕಾಲೇಜಿಗೆ ಸೇರಲು ವಿದ್ಯಾರ್ಥಿಗಳು ಹೆದರುತ್ತಿದ್ದವು.

ಪ್ರಸ್ತುತ ಈ ಕಾಲೇಜಿಗೆ ಸೇರಲು ವಿದ್ಯಾರ್ಥಿಗಳು ಹಾತೊರೆಯುತ್ತಿದ್ದಾರೆ. ಯಾಕೆ ಗೊತ್ತಾ? ಅಲ್ಲಿ ಸಿಗುತ್ತಿರುವ ಸ್ವೇಚ್ಚಾಚಾರ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅದರ ಒಂದು ಸ್ಯಾಂಪಲ್ ಈಗ ವೈರಲ್ ಆಗುತ್ತಿದೆ. ಹಾಗಾದರೆ ಇದನ್ನು ತಡೆಯುವುದು ಹೇಗೆ? ಒಂದು ಕಿಸ್ ಕೊಟ್ಟ ಕೂಡಲೇ ಜಗತ್ತು ಮುಳುಗಿ ಹೋಗುವುದಿಲ್ಲ ಎಂದು ಪ್ರಗತಿಪರರು ಹೇಳಬಹುದು. ಆದರೆ ಇಲ್ಲಿ ಕಾಲೇಜಿನ ಆಡಳಿತ ಮಂಡಳಿ ಮೌನವಾಗಿದ್ದರೆ ಇದು ವೈರಸ್ ನಂತೆ ಇಡೀ ಕಾಲೇಜನ್ನು ಆವರಿಸಿಕೊಳ್ಳಲು ತಡವಾಗುವುದಿಲ್ಲ. ಹಿಂದೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಎಲ್ಲಿಯಾದರೂ ಕದ್ದು ಮುಚ್ಚಿ ಸಿಗರೇಟ್ ಸೇದಲು ಕೂಡ ಭಯಪಡುತ್ತಿದ್ದರು. ಯಾರಾದರೂ ನೋಡಿ ಮನೆಯಲ್ಲಿ ಅಪ್ಪ, ಅಮ್ಮನಿಗೆ ಹೇಳಿದರೆ ಚರ್ಮ ಸುಳಿಯುವಂತೆ ಬಾರಿಸುತ್ತಾರೆ ಎನ್ನುವ ಆತಂಕ ಇತ್ತು. ಅದರ ನಂತರ ಶಿಕ್ಷಕರಿಗೂ ಹೆದರುವಂತಹ ವಾತಾವರಣ ಇತ್ತು. ಆದರೆ ಮಕ್ಕಳಿಗೆ ಹೊಡೆಯಬಾರದು ಎಂದು ಸರಕಾರ ನಿಯಮ ಹೊರಡಿಸಿದ ನಂತರ ಮಕ್ಕಳಿಗೆ ಹೊಡೆಯಲು ಶಿಕ್ಷಕರು ಹಿಂದೇಟು ಹಾಕಿದರು. ಇನ್ನು ಎಷ್ಟೋ ಸಲ ಶಿಕ್ಷಕರು ಬುದ್ಧಿಮಾತಿಗೆ ಮಕ್ಕಳಿಗೆ ಎರಡು ಪೆಟ್ಟು ಹೊಡೆದದ್ದನ್ನೇ ಪೋಷಕರು ಶಾಲೆಗೆ ಬಂದು ರಂಪಾಟ ಮಾಡಿದುಂಟು. ಇದರಿಂದ ಅಂತಿಮವಾಗಿ ವಿಲನ್ ಆದದ್ದು ಶಿಕ್ಷಕರು.

ಇನ್ನು ವಿಡಿಯೋದಲ್ಲಿ ಕಾಣಿಸುವ ಯುವತಿ, ಯುವಕ ಪ್ರೀತಿಯ ಬಲೆಯಲ್ಲಿ ಬಿದ್ದು ಕಿಸ್ ಕೊಟ್ಟು ಕೊಳ್ಳುತ್ತಿದ್ದಾರೆ ಎಂದು ಯಾರಾದರೂ ಹೇಳಿದರೆ ಅವರು ನಿಮ್ಮ ಕಿವಿಯ ಮೇಲೆ ಯಾವ ಸೀಸನ್ನಿನ ಹೂ ಇಟ್ಟುಕೊಂಡಿದ್ದಾರೆ ಎಂದು ನೋಡಿಕೊಳ್ಳಿ. ಯಾಕೆಂದರೆ ಅಪ್ಪನ ಪಾಕೆಟ್ ಮನಿಯಲ್ಲಿ ಕಾಲೇಜಿಗೆ ಬರುವ ಯುವಕ, ಯುವತಿಯರು ಲವ್ ಗೆ ಬಿದ್ದು ಹೀಗೆ ಮುತ್ತಿನಾಟ ಆಡಿ ಅದರಿಂದ ಹೆಚ್ಚು ಕಡಿಮೆಯಾಗಿ ಭವಿಷ್ಯ ಹಾಳಾದರೆ ಆಗ ಹುಟ್ಟಿಸಿದ ತಪ್ಪಿಗೆ ಅದೇ ಅಪ್ಪ, ಅಮ್ಮ ಏನು ಮಾಡಬೇಕು. ಕಾಲೇಜು ಜೀವನ ಎಂದರೆ ಅದೊಂದು ರೀತಿಯಲ್ಲಿ ತಪಸ್ಸು ಇದ್ದಂತೆ. ಅಲ್ಲಿ ಕಳೆಯುವ ಒಂದೊಂದು ಗಂಟೆಯೂ ಮಕ್ಕಳ ಬದುಕಿನ ಯಶಸ್ಸಿನ ಮೆಟ್ಟಿಲುಗಳಾಗಬಹುದು. ಹಾಗಾದರೆ ಕಾಲೇಜಿನಲ್ಲಿ ಪುಂಡರಾಗಿದ್ದವರು ಬದುಕಿನಲ್ಲಿ ಉನ್ನತ ಸ್ಥಾನ ಪಡೆದಿಲ್ಲವೇ ಎಂದು ಕೇಳಬಹುದು. ಆದರೆ ಯಶಸ್ಸು ಚೆನ್ನಾಗಿ ಕಲಿತು, ಉತ್ತಮ ಸಂಸ್ಕಾರ ಪಡೆದುಕೊಂಡಾಗಲೂ ಸಿಗುತ್ತದೆ. ಆತ ನಮ್ಮ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿ ಎಂದು ಶಿಕ್ಷಕರು, ಆಡಳಿತ ಮಂಡಳಿಯವರು ಹೇಳುವ ಹಾಗೆ ಶಿಕ್ಷಣ ಮುಗಿಸಬೇಕು. ಆತ ಅಥವಾ ಆಕೆ ನನ್ನ ಮಗಳು ಎಂದು ಹೆತ್ತವರು ಹೆಮ್ಮೆಯಿಂದ ಹೇಳುವ ಹಾಗೆ ಇರಬೇಕು. ಇಲ್ಲದಿದ್ದರೆ ಈಗಿನ ಕಾಲದಲ್ಲಿ ವಿಡಿಯೋ ನೋಡಿ ಮೊದಲು ಕಂಡು ಹಿಡಿಯುವುದೇ ಆಕೆ ಯಾವ ಕಾಲೇಜಿನವಳು ಎನ್ನುವುದು. ಯಾಕೆಂದರೆ ಧರಿಸಿದ ಸಮವಸ್ತ್ರವೇ ಎಲ್ಲವನ್ನು ಹೇಳುತ್ತದೆ!

0
Shares
  • Share On Facebook
  • Tweet It




Trending Now
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Hanumantha Kamath January 30, 2026
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
Hanumantha Kamath January 28, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
  • Popular Posts

    • 1
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • 2
      ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search