• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಚೋಳರು ನಮ್ಮ ಕುಟುಂಬದವರು ಎಂದು ಕಮಲ್ ಹೇಳುವುದು ಮಾತ್ರ ಬಾಕಿ!!

Hanumantha Kamath Posted On October 10, 2022


  • Share On Facebook
  • Tweet It

ಕಮಲ್ ಹಾಸನ್ ಒಬ್ಬ ಉತ್ತಮ ನಟ. ತಮ್ಮ ಸಿನೆಮಾಗಳ ಮೂಲಕ ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದಾರೆ. ದಶವತಾರಂ ತರಹದ ಪುರಾಣದ ಹಿನ್ನಲೆಯ ಚಿತ್ರ ಮಾಡಿದ್ದಾರೆ. ಅವರ ಇತ್ತೀಚಿನ ಚಿತ್ರ ವಿಕ್ರಂ ಸಾಕಷ್ಟು ದೊಡ್ಡ ಹಿಟ್ ಆಗಿದೆ. ಅದರಿಂದ ತಮ್ಮ ಹಳೆಯ ಸಾಲ ಎಲ್ಲಾ ತೀರಿದೆ ಎಂದು ಕಮಲ್ ಹೇಳಿಕೊಂಡಿದ್ದಾರೆ. ಯಾವಾಗ ಆರ್ಥಿಕವಾಗಿ ಟೆನ್ಷನ್ ಇರುವುದಿಲ್ಲವೋ ಮನುಷ್ಯ ಅನಗತ್ಯವಾದ ಕೆಲಸಗಳಿಗೆ ಕೈ ಹಾಕುತ್ತಾನೆ. ಅದರಿಂದ ವಿವಾದಗಳನ್ನು ಮೈಮೇಲೆ ಹಾಕಿಕೊಳ್ಳುತ್ತಾನೆ. ಹಾಗಂತ ಕಮಲ್ ಹೇಳಿದ ವಿಷಯ ಸಂಪೂರ್ಣ ಸುಳ್ಳಲ್ಲ. ಚೋಳರ ಕಾಲದಲ್ಲಿ ಹಿಂದೂ ಧರ್ಮ ಎನ್ನುವುದು ಇರಲಿಲ್ಲ ಎನ್ನುವ ಅರ್ಥದ ಮಾತುಗಳನ್ನು ಕಮಲ್ ಹೇಳಿದ್ದಾರೆ. ಇದೇ ಈಗ ವಿಷಯ ವಿವಾದವಾಗಿರುವುದು. ಅವರು ಹೇಳಿದ್ದು ಬ್ರಿಟಿಷರು ಹಿಂದೂ ಎನ್ನುವ ಹೆಸರನ್ನು ನೀಡಿದ್ದು ಎನ್ನುವ ಅರ್ಥದ ಮಾತುಗಳನ್ನು ಅವರು ಹೇಳಿದ್ದಾರೆ. ಕಮಲ್ ಹೇಳುವಂತೆ ಹಿಂದೂ ಎನ್ನುವ ಶಬ್ದವನ್ನು ಬ್ರಿಟಿಷರು ಕೊಟ್ಟಿರಬಹುದು. ಆದರೆ ಶಬ್ದ ಕೊಟ್ಟವರು ಅದರ ಜನಕರಲ್ಲ ಎನ್ನುವ ಸಾಮಾನ್ಯ ಜ್ಞಾನ ನಟನೊಬ್ಬನಿಗೆ ಇರಲೇಬೇಕು. ಅಷ್ಟಕ್ಕೂ ಹಿಂದೂ ಎನ್ನುವುದು ಧರ್ಮ ಅಲ್ಲ. ಅದು ಜೀವನ ಪದ್ಧತಿ. ಇನ್ನು ಹಿಂದೂ ಎನ್ನುವ ಸನಾತನ ಧರ್ಮ ಯಾವಾಗ ಹುಟ್ಟಿಕೊಂಡಿತು ಎನ್ನುವ ನಿಖರವಾದ ಅಂಕಿಅಂಶಗಳಿಲ್ಲ. ಇಸ್ಲಾಂ ಹೆಚ್ಚೆಂದರೆ 1500 ವರ್ಷಗಳ ಹಿಂದೆ ಹುಟ್ಟಿದೆ. ಕ್ರಿಶ್ಚಿಯನ್ ಧರ್ಮ 2000 ವರ್ಷಗಳ ಹಿಂದೆ ಜನ್ಮ ತಾಳಿದೆ. ಅದೇ ಚೋಳರ ಸಂಸ್ಥಾನ 9 ರಿಂದ 13 ಶತಮಾನದ ಅವಧಿಯಲ್ಲಿ ಭಾರತದಲ್ಲಿ ಇತ್ತು. ಹಾಗಾದರೆ ಚೋಳರು ಮೊದಲು ಬಂದರೋ, ಹಿಂದೂ ಧರ್ಮ ಮೊದಲು ಇತ್ತೋ ಎನ್ನುವುದನ್ನು ಕಮಲ್ ಹತ್ತಿರ ಕೇಳಿದರೆ ಅವರ ಪ್ರಕಾರ ಚೋಳರ ಸಾಮ್ರಾಜ್ಯ ಮೊದಲು ಬಂದಿತ್ತು. ಯಾಕೆಂದರೆ ಆಗ ಹಿಂದೂ ಎನ್ನುವ ಶಬ್ದ ಇರಲಿಲ್ಲ. ಆದ್ದರಿಂದ ಅವರು ಹಿಂದೂಗಳಲ್ಲ ಎಂದು ಕಮಲ್ ವಾದ. ಸಿಂಧೂ ಕಣಿವೆಯಲ್ಲಿ ಹುಟ್ಟಿದ ಜನಾಂಗವನ್ನು ಸಿಂಧೂ ಎಂದು ಕರೆಯಲಾಗುತ್ತಿತ್ತು. ನಂತರ ಅದೇ ಸಿಂಧೂ ಹೋಗಿ ಹಿಂದೂ ಎನ್ನುವ ಶಬ್ದ ಬಳಕೆಯಲ್ಲಿ ಬಂತು ಎಂದು ಹೇಳಲಾಗುತ್ತದೆ. ಆದರೆ ಒಂದು ವೇಳೆ ಕಮಲ್ ಪ್ರಕಾರ ಚೋಳರು ಹಿಂದೂಗಳು ಅಲ್ಲದಿದ್ದರೆ ಅವರು ಕಟ್ಟಿದ ದೇವಾಲಯಗಳು ಏನು? ಅಷ್ಟಕ್ಕೂ ಚೋಳರು ತಮ್ಮ ಅವಧಿಯಲ್ಲಿ ಯಾವುದೇ ಮಸೀದಿ ಅಥವಾ ಚರ್ಚ್ ಕಟ್ಟಿಲ್ಲ. ಅವರು ಕಟ್ಟಿದ್ದು ದೇವಸ್ಥಾನಗಳನ್ನು. ಈ ದೇಶದ ಮೇಲೆ ಮೊಗಲರು ದಾಳಿ ಮಾಡುವ ತನಕ ಇಲ್ಲಿ ಇದ್ದದ್ದು ಹಿಂದೂ ಧರ್ಮ ಮಾತ್ರ. ಈ ಪವಿತ್ರ ನೆಲದಲ್ಲಿ ಮತಾಂಧರ ಹೆಜ್ಜೆಗಳು ಯಾವತ್ತೂ ಬೀಳದಿದ್ದರೆ ಈ ದೇಶ ಯಾವಾಗಲೂ ಹಿಂದೂ ರಾಷ್ಟ್ರವಾಗಿಯೇ ಉಳಿಯುತ್ತಿತ್ತು. ಆದರೆ ಜಿಹಾದಿಗಳು ಇಲ್ಲಿ ಬಂದು ಈ ಮಣ್ಣಿನಲ್ಲಿ ತಮ್ಮ ಧ್ವಜ ನೆಟ್ಟು ಇದನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ಇದನ್ನು ಮುಸ್ಲಿಂ ರಾಷ್ಟ್ರ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ ಎನ್ನುವುದು ಮಾತ್ರ ನಿಜ. ಆದರೆ ಈ ಪ್ರಪಂಚದ ಬೇರೆ ರಾಷ್ಟ್ರಗಳ ಮೇಲೆ ದಂಡೆತ್ತಿ ಹೋದ ಮುಸ್ಲಿಂ ರಾಜರು ಅಲ್ಲಿ ಮುಸ್ಲಿಂ ಸಾಮ್ರಾಜ್ಯವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಕಮಲ್ ತಾವೇ ಹಿಂದೆ ಒಮ್ಮೆ ಬಿಬಿಸಿಗೆ ಕೊಟ್ಟ ಸಂದರ್ಶನದಲ್ಲಿ ತಾವು ಒಂದು ಕಾಲದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಪ್ರಚಾರಪಡಿಸುತ್ತಿದ್ದೆ ಎಂದು ಕೂಡ ಹೇಳಿದ್ದಾರೆ. ಕಮಲ್ ಹಾಸನ್ ಅವರಿಗೆ ಕ್ರಿಶ್ಚಿಯನ್ ಮತದ ಬಗ್ಗೆ ಪ್ರೀತಿ ಇದ್ದಿರಬಹುದು. ಸಹಜವಾಗಿ ಪ್ರಕಾಶ್ ರೈ ತರಹ ಅವರು ಕೂಡ ತಾವು ಈಗ ಯಾವ ಧರ್ಮ ಅನುಸರಿಸಬೇಕು ಎನ್ನುವ ಗೊಂದಲದಲ್ಲಿ ಇರಬಹುದು. ಹೀಗೆ ಹಿಂದೂಗಳ ವಿರುದ್ಧ ಮಾತನಾಡುವುದನ್ನೇ ಪ್ರಗತಿಪರ ನಿಲುವು ಎಂದು ಅಂದುಕೊಂಡಿರಬಹುದು. ಆದರೆ ಒಬ್ಬ ಬರಹಗಾರರೂ ಆಗಿರುವ ಕಮಲ್ ಒಂದು ಸಿನೆಮಾ ಮಾಡುವಾಗ ಮೊದಲು ಹೆಸರು ಹುಡುಕಿ ನಂತರ ಆ ಹೆಸರಿಗೆ ತಕ್ಕಂತೆ ಸಿನೆಮಾ ಕಥೆ ಬರೆಯುತ್ತಾರಾ ಅಥವಾ ಸಿನೆಮಾ ಕಥೆ ಬರೆದು ನಂತರ ಅದಕ್ಕೆ ಸೂಕ್ತವಾಗಿರುವ ಹೆಸರು ಇಡುತ್ತಾರಾ ಎನ್ನುವುದನ್ನು ಅವರೇ ಹೇಳಬೇಕು. ಒಂದು ವೇಳೆ ಚೋಳರು ಹಿಂದೂ ಧರ್ಮವನ್ನು ಅನುಸರಿಸದೇ ಇದ್ದರೆ ಅವರು ಯಾವ ಧರ್ಮದವರಾಗಿದ್ದರು ಎಂದು ಕಮಲ್ ಹೇಳುತ್ತಾರಾ? ಒಂದು ವೇಳೆ ಅವರು ಹಿಂದೂಗಳು ಅಲ್ಲದಿದ್ದರೆ ಚೋಳರು ಕಟ್ಟಿಸಿದ ಬೃಹದೀಶ್ವರ, ಐರಾವತೇಶ್ವರ, ಗಂಗೇಯಕೊಂಡ ಚೋಳಪುರಂ ಶಿವ ದೇವಸ್ಥಾನಗಳು ಏನು ಕಮಲ್ ಕುಟುಂಬದವರು ಕಟ್ಟಿಸಿದ್ದಾ? ಇತಿಹಾಸವನ್ನು ಅರ್ಧಂಬರ್ಧವಾಗಿ ಓದಿ ತಿಳಿದುಕೊಂಡರೆ ಅಥವಾ ವಾಟ್ಸಪ್ ನಲ್ಲಿ ಬಂದ ವಿಷಯವನ್ನು ಹಿಂಬಾಲಕರು ಓದಿ ಹೇಳಿದ್ದನ್ನೇ ನಂಬಿದರೆ ಹೀಗೆ ಆಗುವುದು. ಅದೇ ಕಮಲ್ ಹಾಸನ್ ಅವರಿಗೆ ಆಗಿದೆ. ಅಷ್ಟೇ. ಹೀಗೆ ಹೇಳಿ ಕೆಲವು ನಟರು ತಮ್ಮ ಮೇಲಿದ್ದ ಅಭಿಮಾನಿಗಳ ಗೌರವವನ್ನು ಕಳೆದುಕೊಂಡಿದ್ದಾರೆ. ಈಗ ಕಮಲ್ ಸರದಿ. ಚುನಾವಣೆಗೆ ನಿಲ್ಲುವ ಗಡಿಬಿಡಿಯಲ್ಲಿ ಯಾರನ್ನೋ ಒಲಿಸಲು ಹೋಗಿ ಜಾರಿ ಬೀಳುವುದೆಂದರೆ ಹೀಗೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search