• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ತಿರುಪತಿ ತಿಮ್ಮಪ್ಪನ ಕಿರೀಟದಂತೆ ಗೋಚರಿಸಿದ ವಿಕ್ರಮ್ ಲ್ಯಾಂಡರ್!

Tulunadu News Posted On August 24, 2023


  • Share On Facebook
  • Tweet It

ಇಡೀ ಜಗತ್ತು ಬುಧವಾರ ಚಂದ್ರಯಾನ -3 ಕ್ಕೆ ಸಾಕ್ಷಿಯಾಯಿತು. ಭಾರತದ ಮೂಲೆಮೂಲೆಗಳಲ್ಲಿ ಇದರ ಸಂಭ್ರಮಾಚರಣೆ ನಡೆಯಿತು. ಭಾರತದ ಜನಸಾಮಾನ್ಯನಿಂದ ಹಿಡಿದು ತಾರೆಯರ ತನಕ ಎಲ್ಲರೂ ಇಸ್ರೋವನ್ನು ಮತ್ತು ಇದರ ಯಶಸ್ಸಿನ ಹಿಂದಿರುವ ಪ್ರಮುಖರನ್ನು ಕೊಂಡಾಡಿದರು. ಈ ನಡುವೆ ಇದರ ಕ್ರೆಡಿಟ್ ಪಡೆಯುವ ಕೆಲಸದಲ್ಲಿಯೂ ರಾಜಕೀಯ ನಡೆದಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾವು ಗಮನಿಸಿದ್ದೇವೆ.
ಈಗ ವಿಷಯ ಏನೆಂದರೆ ವಿಕ್ರಮ್ ಲ್ಯಾಂಡರ್ ಅನ್ನು ನೀವು ಬಹಳ ಸೂಕ್ಷ್ಮವಾಗಿ ಗಮನಿಸಿರಬಹುದು. ಅದೇ ಹೊತ್ತಿಗೆ ತಿರುಪತಿ ತಿಮ್ಮಪ್ಪನ ಫೋಟೋವನ್ನು ಮನದಲ್ಲಿ ಕಲ್ಪಿಸಿಕೊಳ್ಳಿ. ಬೇಕಾದರೆ ನಾವು ಈಗ ಪೋಸ್ಟ್ ಮಾಡಿದ ಫೋಟೋವನ್ನು ಕಣ್ಣಾರೆ ನೋಡಿ. ತಿರುಪತಿ ತಿಮ್ಮಪ್ಪನ ಕಿರೀಟ ಹಾಗೂ ವಿಕ್ರಮ್ ಲ್ಯಾಂಡರ್ ಬಹುತೇಕ ಒಂದೇ ರೀತಿಯಲ್ಲಿ ಕಾಣುತ್ತವೆ. ನಾಸ್ತಿಕರು ಇದನ್ನು ಅತಿರೇಕದ ಹೋಲಿಕೆ ಎಂದು ಬಣ್ಣಿಸಬಹುದು. ಆದರೆ ದೈವಿಕ ದೃಷ್ಟಿಯಿಂದ ನೋಡಿದರೆ ಇದೆರಡು ಒಂದೇ ತರಹ ಕಾಣುವುದರಲ್ಲಿ ಸಂಶಯವಿಲ್ಲ. ಚಂದ್ರಯಾನ -3 ಉಡಾವಣೆಯ ಮೊದಲು ಇಸ್ರೋ ಪ್ರಮುಖರು ತಿರುಪತಿ ದೇವಸ್ಥಾನಕ್ಕೆ ತೆರಳಿ ತಿಮ್ಮಪ್ಪನ ಆರ್ಶೀವಾದವನ್ನು ಕೋರಿದ್ದರು. ಅದನ್ನು ಕೆಲವು ಎಡಪಂಥಿಯ ಚಿಂತಕರು ಟೀಕಿಸಿದ್ದರು. ಚಂದ್ರಯಾನ-3 ತಿಮ್ಮಪ್ಪನ ಪಾದಕ್ಕೆ ಎಂದು ಹಂಗಿಸಿದ್ದರು. ಕೊನೆಗೂ ಚಂದ್ರಯಾನ-3 ಯಶಸ್ಸಾಗುವುದರೊಂದಿಗೆ ದೇವರ ಆರ್ಶೀವಾದ ಈ ಯೋಜನೆಯ ಮೇಲಿತ್ತು ಎಂದು ಆಸ್ತಿಕರು ಧೈರ್ಯದಿಂದ ಹೇಳಬಹುದು. ಅದೇ ರೀತಿ ಟೀಕಾಕಾರರ ಬಾಯಿಯನ್ನು ಮುಚ್ಚಿಸಬಹುದು. ಚಂದ್ರಯಾನ -3 ಯಶಸ್ವಿಯಾಗುವ ಮೊದಲು ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದನ್ನು ನಾವು ಸ್ಮರಿಸಬಹುದು.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search