• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಆಗುಂಬೆ ಸಾಹುಕಾರರ ಮಾಲ್ಗುಡಿ ಡೇಸಿನ ಹೆಜ್ಜೆಗುರುತು ಹುಡುಕುತ್ತಾ…!

Nag Shenoy Posted On October 19, 2023


  • Share On Facebook
  • Tweet It

ಇವತ್ತಿಗೂ ಮಾಲ್ಗುಡಿ ಡೇಸ್ ಧಾರಾವಾಹಿಯ ಟ್ಯೂನ್ ನಿಮ್ಮ ಮನಪಟಲದಲ್ಲಿ ತಣ್ಣನೆಯ ತಂತಿಯನ್ನು ಮೀಟುತ್ತಿದೆ ಎಂದರೆ ಅದಕ್ಕೆ ಕಾರಣ ಶಂಕರನಾಗ್. 1986 ರಲ್ಲಿ ಅವರು ಪ್ರಕೃತಿ ಮಾತೆ ಪುರುಸೊತ್ತಿನಲ್ಲಿ ಕ್ಯಾನ್ ವಾಸ್ ಮೇಲೆ ಹಸಿರು ಬಣ್ಣವನ್ನು ಮಾತ್ರ ಬಳಸಿ ರಚಿಸಿರುವ ಆಗುಂಬೆಗೆ ಕಾಲಿಟ್ಟರಲ್ಲ, ಆಗಲೇ ಮಾಲ್ಗುಡಿ ಡೇಸ್ ಕಿರುತೆರೆ ಇತಿಹಾಸದ ಸುವರ್ಣ ಅಧ್ಯಾಯದಲ್ಲಿ ದಾಖಲಾಗಿ ಹೋಯಿತು. ಮಾಲ್ಗುಡಿ ಡೇಸ್ ಆಗುಂಬೆಯಲ್ಲಿ ಚಿತ್ರೀಕರಣವಾಗುವ ಸಮಯದಲ್ಲಿ ಅವರಿಗೆ ಕಥೆಗೆ ಅಗತ್ಯವಿರುವಂತೆ ಒಂದು ದೊಡ್ಡ ಮನೆ ಬೇಕಾಗಿತ್ತು. ಅದಕ್ಕೆ ತಕ್ಕಂತೆ ಅವರಿಗೆ ಸಿಕ್ಕಿದ್ದು ಆಗುಂಬೆ ಸಾಹುಕಾರರ ಮನೆ. ನಂತರ ಆ ಮನೆ ಕೂಡ ಆ ಧಾರಾವಾಹಿಯಂತೆ ಚರಿತ್ರೆಯಲ್ಲಿ ತನ್ನ ಛಾಪನ್ನು ಉಳಿಸಿಬಿಟ್ಟಿದೆ. ಆ ಬಳಿಕ ಅಲ್ಲಿ ಕಿಚ್ಚ ಸುದೀಪ್ ನಟನೆ, ನಿರ್ಧೇಶನದ ಮೈ ಆಟೋಗ್ರಾಪ್, ಇತ್ತೀಚೆಗೆ ಮಾನ್ಸೂನ್ ರಾಗ ಹೀಗೆ ಹಲವು ಸಿನೆಮಾಗಳು ಕೂಡ ಚಿತ್ರೀಕರಣಗೊಂಡಿವೆ.

ಆಗುಂಬೆ ಗ್ರಾಮ ಪಂಚಾಯತ್ ಕಚೇರಿಯ ಸನಿಹದಲ್ಲಿ ರಸ್ತೆ ಬದಿಯಲ್ಲಿಯೇ ಈ ಮನೆ ಇದೆ. ಇನ್ನು ನೀವು ಆಗುಂಬೆಗೆ ಹೋದರೆ ಆ ಮನೆಯನ್ನು ಒಮ್ಮೆ ನೋಡಿಕೊಂಡು ಬನ್ನಿ. ಭರ್ತಿ ಎರಡೂವರೆ ಅಡಿಯಷ್ಟು ದಪ್ಪದ ಗೋಡೆ. 135 ವರ್ಷಗಳ ಹಿಂದೆ ನಿರ್ಮಾಣವಾದ ಮನೆಯನ್ನು ಕಟ್ಟಲು ಸಿಮೆಂಟ್ ಬಳಸಲೇ ಇಲ್ಲ. ಅದನ್ನು ವಜ್ರಗಾರೆ ಎನ್ನುವ ಆಯಾಮದಲ್ಲಿ ಕಟ್ಟಲಾಗಿದೆ. ಮೊಳೆ ಹೊಡೆಯುವುದು ಕನಸಿನ ಮಾತು. ಚೌಕಾಕಾರದಲ್ಲಿ ನಿರ್ಮಿಸಿರುವ ಮನೆಗೆ ಬೀಗ ಹಾಕುವ ಕ್ರಮ ಇಲ್ಲ. ಯಾರಾದರೊಬ್ಬರು ಇರಲೇಬೇಕು. ಯಾಕೆಂದರೆ ಒಳಗೆ ನಿತ್ಯ ಶಾಸ್ತ್ರೋಕ್ತವಾಗಿ ದೇವರ ಪೂಜೆ ನಡೆಯಬೇಕು. ಮನೆಯ ಒಳಗೆ ಅಂಡರ್ ಗ್ರೌಂಡ್ ವ್ಯವಸ್ಥೆಯನ್ನು ಕಟ್ಟುವಾಗಲೇ ಮಾಡಲಾಗಿದೆ. ಅಲ್ಲಿ ಹೋಗಲು ಮೆಟ್ಟಿಲುಗಳಿವೆ. ಮನೆಯ ಹಿಂದೆ ಮೂರು ಬಾವಿಗಳಿವೆ. ಈ ಮನೆಯನ್ನು ನೋಡಲು ಸ್ವತ: ಮೈಸೂರಿನ ದಿವಾನರಾಗಿರುವ ಶ್ರೀ ಎಂ ವಿಶ್ವೇಶ್ವರಯ್ಯನವರು ಕೂಡ ಬಂದಿದ್ದರು. ಅವರು ಈ ಮನೆಯ ವಾಸ್ತುಶೈಲಿ, ವಿಶೇಷತೆಗಳನ್ನು ನೋಡಿ ಬೆರಗಾಗಿದ್ದರಂತೆ.


ಐದು ತಲೆಮಾರಿನ ಕುಟುಂಬಗಳು ಇಲ್ಲಿ ವಾಸಿಸಿವೆ. ಈಗಲೂ ಶತಾಯುಷಿ ಹಿರಿಯ ಜೀವವೊಂದು ಅಲ್ಲಿ ಇದ್ದಾರೆ. ಮನೆಯ ಈಗಿನ ಪೀಳಿಗೆಯ ಪ್ರಮುಖರಾಗಿ ರವಿಕುಮಾರ್ ಮತ್ತು ಅವರ ಕುಟುಂಬ ಈಗ ಮನೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಹಳೆಯ ಕಾಲದ ಮನೆಯಾಗಿರುವುದರಿಂದ ಆಗಾಗ ರಿಪೇರಿ ಕಾರ್ಯ ಮಾಡಬೇಕಾಗುತ್ತದೆ. ಒಂದಿಷ್ಟು ಬದಲಾವಣೆಯೊಂದಿಗೆ ಅದೇ ಹಳೆಯ ವಿನ್ಯಾಸವನ್ನು ಈಗಲೂ ಉಳಿಸಿಕೊಂಡು ಬರಲಾಗಿದೆ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಈ ಮನೆಯ ಕುಟುಂಬದವರು ವರ್ಷಕ್ಕೆ ಕೆಲವು ಸಲ ಎಲ್ಲರೂ ಒಟ್ಟು ಸೇರುತ್ತಾರೆ. ಮನೆಯ ಒಳಗೆ ಪುಟ್ಟ ರಥವನ್ನು ಎಳೆಯುತ್ತಾರೆ. ಒಂದು ಕಾಲದಲ್ಲಿ 70 – 80 ಜನ ವಾಸಿಸುತ್ತಿದ್ದ ಈ ಮನೆಯಲ್ಲಿ ಈಗ ಮೂರ್ನಾಕು ಜನ ಮಾತ್ರ ಇದ್ದಾರೆ. ಆಗುಂಬೆಯ ತೊಟ್ಟಿಲಲ್ಲಿರುವ ಈ ದೊಡ್ಡ ಮನೆಯಿಂದ ನಾವು ಹೊರಗೆ ಬರುತ್ತಿದ್ದಂತೆ ವರುಣ ದೇವ ಇಳೆಯ ಮೇಲೆ ಧುಮ್ಮಿಕ್ಕುತ್ತಿದ್ದ!!

  • Share On Facebook
  • Tweet It


- Advertisement -


Trending Now
ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ - ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!
Nag Shenoy May 30, 2025
ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!
Nag Shenoy May 30, 2025
Leave A Reply

  • Recent Posts

    • ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ - ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!
    • ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!
    • ಪೊಲೀಸ್ ಕಮೀಷನರ್, ಎಸ್ಪಿ ವರ್ಗಾವಣೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಮಾಡಿದ ಸರಕಾರ!
    • ಜಬ್ಬಾರ್ ನಿಂದ ರಹೀಂ ತನಕ, ದಕ್ಷಿಣ ಕನ್ನಡದ ಅಧ್ಯಾಯದಲ್ಲಿ ರಕ್ತದ ಸಹಿ ಕಂಡ ಪುಟಗಳು!
    • ಹುಬ್ಬಳ್ಳಿ ಕ್ರಿಮಿನಲ್ ಪ್ರಕರಣ ಹಿಂದೆಗೆದುಕೊಳ್ಳುವಂತಿಲ್ಲ - ಹೈಕೋರ್ಟ್ ಆದೇಶ... ರಾಜ್ಯ ಸರಕಾರಕ್ಕೆ ಮುಖಭಂಗ!
    • ಹನಿಮೂನಿಗೆ ಶಿಲ್ಲಾಂಗಿಗೆ ಹೋದ ನವಜೋಡಿ ಕಣ್ಮರೆ! ನಾಪತ್ತೆಯಾದ ಪ್ರದೇಶ ತುಂಬಾ ಡೇಂಜರ್!
    • ತಮಿಳಿನಿಂದಲೇ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಲ್ಲಿ ವಿರೋಧ..
    • ಬೆಂಗಳೂರಿನಲ್ಲಿ ಟ್ರೋಯಿಂಗ್ ಶುರು, ಮಂಗಳೂರಿನಲ್ಲಿಯೂ ಆರಂಭವಾಗಬೇಕಾ?
    • ಸೋಮಶೇಖರ್, ಹೆಬ್ಬಾರ್ ಬಿಜೆಪಿಯಿಂದ ಕೊನೆಗೂ ಗೇಟ್ ಪಾಸ್!
    • ಕೋವಿಡ್ ಏರಿಕೆ: ಮಕ್ಕಳ, ವೃದ್ಧರ, ಗರ್ಭೀಣಿಯರ ಬಗ್ಗೆ ಸರಕಾರ ಹೇಳಿದ್ದೇನು?
  • Popular Posts

    • 1
      ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ - ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!
    • 2
      ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!
    • 3
      ಪೊಲೀಸ್ ಕಮೀಷನರ್, ಎಸ್ಪಿ ವರ್ಗಾವಣೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಮಾಡಿದ ಸರಕಾರ!
    • 4
      ಜಬ್ಬಾರ್ ನಿಂದ ರಹೀಂ ತನಕ, ದಕ್ಷಿಣ ಕನ್ನಡದ ಅಧ್ಯಾಯದಲ್ಲಿ ರಕ್ತದ ಸಹಿ ಕಂಡ ಪುಟಗಳು!
    • 5
      ಹುಬ್ಬಳ್ಳಿ ಕ್ರಿಮಿನಲ್ ಪ್ರಕರಣ ಹಿಂದೆಗೆದುಕೊಳ್ಳುವಂತಿಲ್ಲ - ಹೈಕೋರ್ಟ್ ಆದೇಶ... ರಾಜ್ಯ ಸರಕಾರಕ್ಕೆ ಮುಖಭಂಗ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search