• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಆಗುಂಬೆ ಸಾಹುಕಾರರ ಮಾಲ್ಗುಡಿ ಡೇಸಿನ ಹೆಜ್ಜೆಗುರುತು ಹುಡುಕುತ್ತಾ…!

Nag Shenoy Posted On October 19, 2023
0


0
Shares
  • Share On Facebook
  • Tweet It

ಇವತ್ತಿಗೂ ಮಾಲ್ಗುಡಿ ಡೇಸ್ ಧಾರಾವಾಹಿಯ ಟ್ಯೂನ್ ನಿಮ್ಮ ಮನಪಟಲದಲ್ಲಿ ತಣ್ಣನೆಯ ತಂತಿಯನ್ನು ಮೀಟುತ್ತಿದೆ ಎಂದರೆ ಅದಕ್ಕೆ ಕಾರಣ ಶಂಕರನಾಗ್. 1986 ರಲ್ಲಿ ಅವರು ಪ್ರಕೃತಿ ಮಾತೆ ಪುರುಸೊತ್ತಿನಲ್ಲಿ ಕ್ಯಾನ್ ವಾಸ್ ಮೇಲೆ ಹಸಿರು ಬಣ್ಣವನ್ನು ಮಾತ್ರ ಬಳಸಿ ರಚಿಸಿರುವ ಆಗುಂಬೆಗೆ ಕಾಲಿಟ್ಟರಲ್ಲ, ಆಗಲೇ ಮಾಲ್ಗುಡಿ ಡೇಸ್ ಕಿರುತೆರೆ ಇತಿಹಾಸದ ಸುವರ್ಣ ಅಧ್ಯಾಯದಲ್ಲಿ ದಾಖಲಾಗಿ ಹೋಯಿತು. ಮಾಲ್ಗುಡಿ ಡೇಸ್ ಆಗುಂಬೆಯಲ್ಲಿ ಚಿತ್ರೀಕರಣವಾಗುವ ಸಮಯದಲ್ಲಿ ಅವರಿಗೆ ಕಥೆಗೆ ಅಗತ್ಯವಿರುವಂತೆ ಒಂದು ದೊಡ್ಡ ಮನೆ ಬೇಕಾಗಿತ್ತು. ಅದಕ್ಕೆ ತಕ್ಕಂತೆ ಅವರಿಗೆ ಸಿಕ್ಕಿದ್ದು ಆಗುಂಬೆ ಸಾಹುಕಾರರ ಮನೆ. ನಂತರ ಆ ಮನೆ ಕೂಡ ಆ ಧಾರಾವಾಹಿಯಂತೆ ಚರಿತ್ರೆಯಲ್ಲಿ ತನ್ನ ಛಾಪನ್ನು ಉಳಿಸಿಬಿಟ್ಟಿದೆ. ಆ ಬಳಿಕ ಅಲ್ಲಿ ಕಿಚ್ಚ ಸುದೀಪ್ ನಟನೆ, ನಿರ್ಧೇಶನದ ಮೈ ಆಟೋಗ್ರಾಪ್, ಇತ್ತೀಚೆಗೆ ಮಾನ್ಸೂನ್ ರಾಗ ಹೀಗೆ ಹಲವು ಸಿನೆಮಾಗಳು ಕೂಡ ಚಿತ್ರೀಕರಣಗೊಂಡಿವೆ.

ಆಗುಂಬೆ ಗ್ರಾಮ ಪಂಚಾಯತ್ ಕಚೇರಿಯ ಸನಿಹದಲ್ಲಿ ರಸ್ತೆ ಬದಿಯಲ್ಲಿಯೇ ಈ ಮನೆ ಇದೆ. ಇನ್ನು ನೀವು ಆಗುಂಬೆಗೆ ಹೋದರೆ ಆ ಮನೆಯನ್ನು ಒಮ್ಮೆ ನೋಡಿಕೊಂಡು ಬನ್ನಿ. ಭರ್ತಿ ಎರಡೂವರೆ ಅಡಿಯಷ್ಟು ದಪ್ಪದ ಗೋಡೆ. 135 ವರ್ಷಗಳ ಹಿಂದೆ ನಿರ್ಮಾಣವಾದ ಮನೆಯನ್ನು ಕಟ್ಟಲು ಸಿಮೆಂಟ್ ಬಳಸಲೇ ಇಲ್ಲ. ಅದನ್ನು ವಜ್ರಗಾರೆ ಎನ್ನುವ ಆಯಾಮದಲ್ಲಿ ಕಟ್ಟಲಾಗಿದೆ. ಮೊಳೆ ಹೊಡೆಯುವುದು ಕನಸಿನ ಮಾತು. ಚೌಕಾಕಾರದಲ್ಲಿ ನಿರ್ಮಿಸಿರುವ ಮನೆಗೆ ಬೀಗ ಹಾಕುವ ಕ್ರಮ ಇಲ್ಲ. ಯಾರಾದರೊಬ್ಬರು ಇರಲೇಬೇಕು. ಯಾಕೆಂದರೆ ಒಳಗೆ ನಿತ್ಯ ಶಾಸ್ತ್ರೋಕ್ತವಾಗಿ ದೇವರ ಪೂಜೆ ನಡೆಯಬೇಕು. ಮನೆಯ ಒಳಗೆ ಅಂಡರ್ ಗ್ರೌಂಡ್ ವ್ಯವಸ್ಥೆಯನ್ನು ಕಟ್ಟುವಾಗಲೇ ಮಾಡಲಾಗಿದೆ. ಅಲ್ಲಿ ಹೋಗಲು ಮೆಟ್ಟಿಲುಗಳಿವೆ. ಮನೆಯ ಹಿಂದೆ ಮೂರು ಬಾವಿಗಳಿವೆ. ಈ ಮನೆಯನ್ನು ನೋಡಲು ಸ್ವತ: ಮೈಸೂರಿನ ದಿವಾನರಾಗಿರುವ ಶ್ರೀ ಎಂ ವಿಶ್ವೇಶ್ವರಯ್ಯನವರು ಕೂಡ ಬಂದಿದ್ದರು. ಅವರು ಈ ಮನೆಯ ವಾಸ್ತುಶೈಲಿ, ವಿಶೇಷತೆಗಳನ್ನು ನೋಡಿ ಬೆರಗಾಗಿದ್ದರಂತೆ.


ಐದು ತಲೆಮಾರಿನ ಕುಟುಂಬಗಳು ಇಲ್ಲಿ ವಾಸಿಸಿವೆ. ಈಗಲೂ ಶತಾಯುಷಿ ಹಿರಿಯ ಜೀವವೊಂದು ಅಲ್ಲಿ ಇದ್ದಾರೆ. ಮನೆಯ ಈಗಿನ ಪೀಳಿಗೆಯ ಪ್ರಮುಖರಾಗಿ ರವಿಕುಮಾರ್ ಮತ್ತು ಅವರ ಕುಟುಂಬ ಈಗ ಮನೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಹಳೆಯ ಕಾಲದ ಮನೆಯಾಗಿರುವುದರಿಂದ ಆಗಾಗ ರಿಪೇರಿ ಕಾರ್ಯ ಮಾಡಬೇಕಾಗುತ್ತದೆ. ಒಂದಿಷ್ಟು ಬದಲಾವಣೆಯೊಂದಿಗೆ ಅದೇ ಹಳೆಯ ವಿನ್ಯಾಸವನ್ನು ಈಗಲೂ ಉಳಿಸಿಕೊಂಡು ಬರಲಾಗಿದೆ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಈ ಮನೆಯ ಕುಟುಂಬದವರು ವರ್ಷಕ್ಕೆ ಕೆಲವು ಸಲ ಎಲ್ಲರೂ ಒಟ್ಟು ಸೇರುತ್ತಾರೆ. ಮನೆಯ ಒಳಗೆ ಪುಟ್ಟ ರಥವನ್ನು ಎಳೆಯುತ್ತಾರೆ. ಒಂದು ಕಾಲದಲ್ಲಿ 70 – 80 ಜನ ವಾಸಿಸುತ್ತಿದ್ದ ಈ ಮನೆಯಲ್ಲಿ ಈಗ ಮೂರ್ನಾಕು ಜನ ಮಾತ್ರ ಇದ್ದಾರೆ. ಆಗುಂಬೆಯ ತೊಟ್ಟಿಲಲ್ಲಿರುವ ಈ ದೊಡ್ಡ ಮನೆಯಿಂದ ನಾವು ಹೊರಗೆ ಬರುತ್ತಿದ್ದಂತೆ ವರುಣ ದೇವ ಇಳೆಯ ಮೇಲೆ ಧುಮ್ಮಿಕ್ಕುತ್ತಿದ್ದ!!

0
Shares
  • Share On Facebook
  • Tweet It




Trending Now
ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!
Nag Shenoy August 21, 2025
ಕಾನೂನು ಸ್ಪಷ್ಟವಾಗಿದೆ, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ: ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ
Nag Shenoy August 21, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!
    • ಕಾನೂನು ಸ್ಪಷ್ಟವಾಗಿದೆ, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ: ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ
    • ಡಿಜೆ ಬಳಕೆಗೆ ವಿರೋಧವಿದೆ, ಆದರೆ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಅಡ್ಡಿ ಪಡಿಸುವ ನಿಯಮ ಸಲ್ಲದು!
    • ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
    • ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!
    • ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು...
    • ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!
    • ಕೆಂಪುಕಲ್ಲು ಓವರ್ ಲೋಡ್ ಸಾಗಾಟ! ಕೇಸ್ ದಾಖಲು
    • ಮುಂದಿನ ಚುನಾವಣೆಯಲ್ಲಿಯೂ ನನ್ನ ಕೈ ಹಿಡಿಯಿರಿ: ವರುಣಾದಲ್ಲಿ ಸಿಎಂ ಮನವಿ!
    • ಮಂಗಳೂರು: ಈಜುತ್ತಿರುವಾಗಲೇ ಹೃದಯಾಘಾತ: ಮೃತಪಟ್ಟ ಕೋಚ್!
  • Popular Posts

    • 1
      ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!
    • 2
      ಕಾನೂನು ಸ್ಪಷ್ಟವಾಗಿದೆ, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ: ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ
    • 3
      ಡಿಜೆ ಬಳಕೆಗೆ ವಿರೋಧವಿದೆ, ಆದರೆ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಅಡ್ಡಿ ಪಡಿಸುವ ನಿಯಮ ಸಲ್ಲದು!
    • 4
      ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
    • 5
      ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!

  • Privacy Policy
  • Contact
© Tulunadu Infomedia.

Press enter/return to begin your search