• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸಿನಿಮಾ ಸುದ್ದಿ 

ಅಮಿತಾಬ್ ಯಾರ ಕಾಲು ಮುಟ್ಟಿ ನಮಸ್ಕರಿಸಿದ್ದು – ಅಷ್ಟು ದೊಡ್ಡ ವ್ಯಕ್ತಿ ಯಾರದು?

Tulunadu News Posted On June 20, 2024
0


0
Shares
  • Share On Facebook
  • Tweet It

81 ವಯಸ್ಸಿನ ಅಮಿತಾಬ್ ಬಚ್ಚನ್ ಅವರು ಇವತ್ತಿಗೂ ಸಿನೆಮಾ, ಜಾಹೀರಾತು ಎಂದು ಬ್ಯುಸಿ ಇರುತ್ತಾರೆ. ಅವರ ಹೊಸ ಸಿನೆಮಾ ಕಲ್ಕಿ 2898 ಎಡಿ ಚಿತ್ರದ ಪ್ರೀ – ರಿಲೀಸ್ ಕಾರ್ಯಕ್ರಮದ ವೇದಿಕೆಯಲ್ಲಿ ಒಂದು ಆಶ್ಚರ್ಯಕರ ಸಂಗತಿ ನಡೆಯಿತು. ಸಾಮಾನ್ಯವಾಗಿ ಅಮಿತಾಬ್ ಬಚ್ಚನ್ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡರೆ ಜನರು ಅವರ ಪಾದ ಮುಟ್ಟಿ ನಮಸ್ಕರಿಸುತ್ತಾರೆ. ಆದರೆ ಬಚ್ಚನ್ ಮುಂಬೈಯಲ್ಲಿ ಒಂದು ಸಿನೆಮಾ ಕಾರ್ಯಕ್ರಮದಲ್ಲಿ ಯಾರಾದಾದರೂ ಕಾಲು ಮುಟ್ಟಿ ಅದು ಕೂಡ ಬಹಿರಂಗವಾಗಿ ನಮಸ್ಕರಿಸುವುದೆಂದರೆ ಅಲ್ಲಿದ್ದ ಎಲ್ಲರಿಗೂ ಅವರ ಸಜ್ಜನಿಕೆ ಕಂಡು ಆಶ್ಚರ್ಯವಾಗುವುದು ಸಹಜ. ಅಷ್ಟಕ್ಕೂ ಅಮಿತಾಬ್ ಕಾಲು ಮುಟ್ಟಿ ನಮಸ್ಕರಿಸಲು ಹೋಗಿದ್ದು ಯಾರನ್ನ? ಅವರು ಬೇರೆ ಯಾರೂ ಅಲ್ಲ. ತೆಲುಗು ಚಿತ್ರರಂಗದ ನಿರ್ಮಾಪಕ ಅಶ್ವಿನಿ ದತ್.

ಅಶ್ವಿನಿ ದತ್ ಅವರ ವೈಜಯಂತಿ ಮೂವೀಸ್ ಬ್ಯಾನರ್ ತೆಲುಗು ಸಿನೆಮಾರಂಗದಲ್ಲಿ ಅತೀ ದೊಡ್ಡ ಹೆಸರು. ಈ ಸಂಸ್ಥೆಯ ಮಾಲೀಕರೇ ಅಶ್ವಿನಿದತ್. 1974 ರಲ್ಲಿ ” ವೈಜಯಂತಿ ಮೂವೀಸ್” ಆರಂಭವಾಯಿತು. ಎನ್ ಟಿಆರ್, ಎಎನ್ ಆರ್, ಕೃಷ್ಣ, ಚಿರಂಜೀವಿ, ವೆಂಕಟೇಶ್, ನಾಗಾರ್ಜುನ ಮುಂತಾದ ಸ್ಟಾರ್ ನಟರ ಸಿನೆಮಾಗಳಿಗೆ ಅಶ್ವಿನಿದತ್ ಬಂಡವಾಳ ಹೂಡಿದ್ದಾರೆ. ಇದೇ ಸಂಸ್ಥೆ ಈಗ ಕಲ್ಕಿ 2898 ಎಡಿ ಸಿನೆಮಾ ನಿರ್ಮಿಸಿದೆ.

ಇವರ ಬಗ್ಗೆ ಮಾತನಾಡಿದ ಸಿನಿಯರ್ ಬಚ್ಚನ್ ” ಇವರು ವೈಜಯಂತಿ ಮೂವೀಸ್ ನ ಮಾಲೀಕರು. ಇವರ ಇಬ್ಬರ ಮಕ್ಕಳಾದ ಸ್ವಪ್ನ ಹಾಗೂ ಪ್ರಿಯಾಂಕಾ ಕೂಡ ನಿರ್ಮಾಪಕರು. ಅಶ್ವಿನಿ ದತ್ ಅವರಿಗಿಂತ ಸರಳ ಮತ್ತು ವಿನಮ್ರ ವ್ಯಕ್ತಿಯನ್ನು ನಾನು ನೋಡಿಲ್ಲ. ಪ್ರತಿ ಬಾರಿಯೂ ಶೂಟಿಂಗ್ ಸೆಟ್ ಗೆ ಅವರೇ ಮೊದಲು ಬರುತ್ತಾರೆ. ವಿಮಾನ ನಿಲ್ದಾಣಕ್ಕೆ ಬಂದು ನಿಮ್ಮನ್ನು ಸ್ವಾಗತಿಸುತ್ತಾರೆ. ನಿಮ್ಮ ಸುರಕ್ಷತೆಯನ್ನು ನೋಡಿಕೊಳ್ಳುತ್ತಾರೆ. ಯಾರೂ ಕೂಡ ಅವರ ರೀತಿ ಆಲೋಚನೆ ಮಾಡುವುದಿಲ್ಲ” ಎಂದು ಹೇಳಿದ ಬಳಿಕ ಅಮಿತಾಬ್ ಅವರು ಅಶ್ವಿನಿ ದತ್ ಕಾಲಿಗೆ ನಮಸ್ಕರಿಸಿದರು.

ಅಮಿತಾಬ್ ಬಚ್ಚನ್ ಅವರ ಇಂತಹ ನಡೆಯಿಂದ ಸಿನೆಮಾ ನಟರು ಕಲಿಯುವುದು ಸಾಕಷ್ಟಿದೆ. ಒಂದು ಕಾಲದಲ್ಲಿ ಡಾ. ರಾಜಕುಮಾರ್ ಅವರು ನಿರ್ಮಾಪಕರನ್ನು ಅನ್ನದಾತರೆಂದು ಕರೆಯುತ್ತಿದ್ದರು. ಆದರೆ ಇತ್ತಿಚಿನ ತಲೆಮಾರಿನಲ್ಲಿ ಕೆಲವು ಸ್ಟಾರ್ ನಟರು ನಿರ್ಮಾಪಕರನ್ನು ಕೇವಲವಾಗಿ ಕರೆಯುವುದು, ಹೀಯಾಳಿಸುವುದನ್ನು ನೋಡಿದಾಗ ನಿಜಕ್ಕೂ ಚಿತ್ರರಂಗ ಎತ್ತ ಸಾಗುತ್ತಿದೆ ಎಂದು ಸಿನೆಮಾ ರಂಗದಲ್ಲಿ ಇರುವವರಿಗೆ ಆತಂಕವಾಗುತ್ತಿತ್ತು. ಆದರೆ ಅಮಿತಾಬ್ ಬಚ್ಚನ್ ಅವರು ತಾವು ಏರಿರುವ ಎತ್ತರವನ್ನು ಮರೆತು ಒಬ್ಬ ನಿರ್ಮಾಪಕರ ಕಾಲಿಗೆ ನಮಸ್ಕರಿಸಿರುವುದನ್ನು ನೋಡಿದಾಗ ಅಂದಿನ ಕಲಾವಿದರು ಹೇಗೆ ಬೆಳೆದರು ಎಂದು ತಿಳಿಯುತ್ತದೆ.
ಇನ್ನು ಕಲ್ಕಿ 2898 ಎಡಿ ಸಿನೆಮಾದಲ್ಲಿ ಬಚ್ಚನ್ ಅವರೊಂದಿಗೆ ಪ್ರಭಾಸ್, ದೀಪಿಕಾ ಪಡುಕೋಣೆ, ರಾಣಾ ದಗ್ಗುಬಾಟಿ, ಕಮಲ್ ಹಾಸನ್ ಸಹಿತ ಅನೇಕ ಕಲಾವಿದರ ದಂಡು ಇದೆ.

0
Shares
  • Share On Facebook
  • Tweet It




Trending Now
ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
Tulunadu News August 20, 2025
ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!
Tulunadu News August 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
    • ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!
    • ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು...
    • ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!
    • ಕೆಂಪುಕಲ್ಲು ಓವರ್ ಲೋಡ್ ಸಾಗಾಟ! ಕೇಸ್ ದಾಖಲು
    • ಮುಂದಿನ ಚುನಾವಣೆಯಲ್ಲಿಯೂ ನನ್ನ ಕೈ ಹಿಡಿಯಿರಿ: ವರುಣಾದಲ್ಲಿ ಸಿಎಂ ಮನವಿ!
    • ಮಂಗಳೂರು: ಈಜುತ್ತಿರುವಾಗಲೇ ಹೃದಯಾಘಾತ: ಮೃತಪಟ್ಟ ಕೋಚ್!
    • ಅಗಸ್ಟ್ 16 ರಂದು ಧರ್ಮಸ್ಥಳ ಚಲೋ ಅಭಿಯಾನ - ಶಾಸಕ ವಿಶ್ವನಾಥ!
    • ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ:- ಶಾಸಕ ಕಾಮತ್
    • ಎದೆಹಾಲು ದಾನದಲ್ಲಿ ದಾಖಲೆ ಬರೆದ ತಮಿಳುನಾಡಿನ ಮಹಿಳೆ!
  • Popular Posts

    • 1
      ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
    • 2
      ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!
    • 3
      ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು...
    • 4
      ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!

  • Privacy Policy
  • Contact
© Tulunadu Infomedia.

Press enter/return to begin your search