• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅಮಿತಾಬ್ ಯಾರ ಕಾಲು ಮುಟ್ಟಿ ನಮಸ್ಕರಿಸಿದ್ದು – ಅಷ್ಟು ದೊಡ್ಡ ವ್ಯಕ್ತಿ ಯಾರದು?

Tulunadu News Posted On June 20, 2024


  • Share On Facebook
  • Tweet It

81 ವಯಸ್ಸಿನ ಅಮಿತಾಬ್ ಬಚ್ಚನ್ ಅವರು ಇವತ್ತಿಗೂ ಸಿನೆಮಾ, ಜಾಹೀರಾತು ಎಂದು ಬ್ಯುಸಿ ಇರುತ್ತಾರೆ. ಅವರ ಹೊಸ ಸಿನೆಮಾ ಕಲ್ಕಿ 2898 ಎಡಿ ಚಿತ್ರದ ಪ್ರೀ – ರಿಲೀಸ್ ಕಾರ್ಯಕ್ರಮದ ವೇದಿಕೆಯಲ್ಲಿ ಒಂದು ಆಶ್ಚರ್ಯಕರ ಸಂಗತಿ ನಡೆಯಿತು. ಸಾಮಾನ್ಯವಾಗಿ ಅಮಿತಾಬ್ ಬಚ್ಚನ್ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡರೆ ಜನರು ಅವರ ಪಾದ ಮುಟ್ಟಿ ನಮಸ್ಕರಿಸುತ್ತಾರೆ. ಆದರೆ ಬಚ್ಚನ್ ಮುಂಬೈಯಲ್ಲಿ ಒಂದು ಸಿನೆಮಾ ಕಾರ್ಯಕ್ರಮದಲ್ಲಿ ಯಾರಾದಾದರೂ ಕಾಲು ಮುಟ್ಟಿ ಅದು ಕೂಡ ಬಹಿರಂಗವಾಗಿ ನಮಸ್ಕರಿಸುವುದೆಂದರೆ ಅಲ್ಲಿದ್ದ ಎಲ್ಲರಿಗೂ ಅವರ ಸಜ್ಜನಿಕೆ ಕಂಡು ಆಶ್ಚರ್ಯವಾಗುವುದು ಸಹಜ. ಅಷ್ಟಕ್ಕೂ ಅಮಿತಾಬ್ ಕಾಲು ಮುಟ್ಟಿ ನಮಸ್ಕರಿಸಲು ಹೋಗಿದ್ದು ಯಾರನ್ನ? ಅವರು ಬೇರೆ ಯಾರೂ ಅಲ್ಲ. ತೆಲುಗು ಚಿತ್ರರಂಗದ ನಿರ್ಮಾಪಕ ಅಶ್ವಿನಿ ದತ್.

ಅಶ್ವಿನಿ ದತ್ ಅವರ ವೈಜಯಂತಿ ಮೂವೀಸ್ ಬ್ಯಾನರ್ ತೆಲುಗು ಸಿನೆಮಾರಂಗದಲ್ಲಿ ಅತೀ ದೊಡ್ಡ ಹೆಸರು. ಈ ಸಂಸ್ಥೆಯ ಮಾಲೀಕರೇ ಅಶ್ವಿನಿದತ್. 1974 ರಲ್ಲಿ ” ವೈಜಯಂತಿ ಮೂವೀಸ್” ಆರಂಭವಾಯಿತು. ಎನ್ ಟಿಆರ್, ಎಎನ್ ಆರ್, ಕೃಷ್ಣ, ಚಿರಂಜೀವಿ, ವೆಂಕಟೇಶ್, ನಾಗಾರ್ಜುನ ಮುಂತಾದ ಸ್ಟಾರ್ ನಟರ ಸಿನೆಮಾಗಳಿಗೆ ಅಶ್ವಿನಿದತ್ ಬಂಡವಾಳ ಹೂಡಿದ್ದಾರೆ. ಇದೇ ಸಂಸ್ಥೆ ಈಗ ಕಲ್ಕಿ 2898 ಎಡಿ ಸಿನೆಮಾ ನಿರ್ಮಿಸಿದೆ.

ಇವರ ಬಗ್ಗೆ ಮಾತನಾಡಿದ ಸಿನಿಯರ್ ಬಚ್ಚನ್ ” ಇವರು ವೈಜಯಂತಿ ಮೂವೀಸ್ ನ ಮಾಲೀಕರು. ಇವರ ಇಬ್ಬರ ಮಕ್ಕಳಾದ ಸ್ವಪ್ನ ಹಾಗೂ ಪ್ರಿಯಾಂಕಾ ಕೂಡ ನಿರ್ಮಾಪಕರು. ಅಶ್ವಿನಿ ದತ್ ಅವರಿಗಿಂತ ಸರಳ ಮತ್ತು ವಿನಮ್ರ ವ್ಯಕ್ತಿಯನ್ನು ನಾನು ನೋಡಿಲ್ಲ. ಪ್ರತಿ ಬಾರಿಯೂ ಶೂಟಿಂಗ್ ಸೆಟ್ ಗೆ ಅವರೇ ಮೊದಲು ಬರುತ್ತಾರೆ. ವಿಮಾನ ನಿಲ್ದಾಣಕ್ಕೆ ಬಂದು ನಿಮ್ಮನ್ನು ಸ್ವಾಗತಿಸುತ್ತಾರೆ. ನಿಮ್ಮ ಸುರಕ್ಷತೆಯನ್ನು ನೋಡಿಕೊಳ್ಳುತ್ತಾರೆ. ಯಾರೂ ಕೂಡ ಅವರ ರೀತಿ ಆಲೋಚನೆ ಮಾಡುವುದಿಲ್ಲ” ಎಂದು ಹೇಳಿದ ಬಳಿಕ ಅಮಿತಾಬ್ ಅವರು ಅಶ್ವಿನಿ ದತ್ ಕಾಲಿಗೆ ನಮಸ್ಕರಿಸಿದರು.

ಅಮಿತಾಬ್ ಬಚ್ಚನ್ ಅವರ ಇಂತಹ ನಡೆಯಿಂದ ಸಿನೆಮಾ ನಟರು ಕಲಿಯುವುದು ಸಾಕಷ್ಟಿದೆ. ಒಂದು ಕಾಲದಲ್ಲಿ ಡಾ. ರಾಜಕುಮಾರ್ ಅವರು ನಿರ್ಮಾಪಕರನ್ನು ಅನ್ನದಾತರೆಂದು ಕರೆಯುತ್ತಿದ್ದರು. ಆದರೆ ಇತ್ತಿಚಿನ ತಲೆಮಾರಿನಲ್ಲಿ ಕೆಲವು ಸ್ಟಾರ್ ನಟರು ನಿರ್ಮಾಪಕರನ್ನು ಕೇವಲವಾಗಿ ಕರೆಯುವುದು, ಹೀಯಾಳಿಸುವುದನ್ನು ನೋಡಿದಾಗ ನಿಜಕ್ಕೂ ಚಿತ್ರರಂಗ ಎತ್ತ ಸಾಗುತ್ತಿದೆ ಎಂದು ಸಿನೆಮಾ ರಂಗದಲ್ಲಿ ಇರುವವರಿಗೆ ಆತಂಕವಾಗುತ್ತಿತ್ತು. ಆದರೆ ಅಮಿತಾಬ್ ಬಚ್ಚನ್ ಅವರು ತಾವು ಏರಿರುವ ಎತ್ತರವನ್ನು ಮರೆತು ಒಬ್ಬ ನಿರ್ಮಾಪಕರ ಕಾಲಿಗೆ ನಮಸ್ಕರಿಸಿರುವುದನ್ನು ನೋಡಿದಾಗ ಅಂದಿನ ಕಲಾವಿದರು ಹೇಗೆ ಬೆಳೆದರು ಎಂದು ತಿಳಿಯುತ್ತದೆ.
ಇನ್ನು ಕಲ್ಕಿ 2898 ಎಡಿ ಸಿನೆಮಾದಲ್ಲಿ ಬಚ್ಚನ್ ಅವರೊಂದಿಗೆ ಪ್ರಭಾಸ್, ದೀಪಿಕಾ ಪಡುಕೋಣೆ, ರಾಣಾ ದಗ್ಗುಬಾಟಿ, ಕಮಲ್ ಹಾಸನ್ ಸಹಿತ ಅನೇಕ ಕಲಾವಿದರ ದಂಡು ಇದೆ.

  • Share On Facebook
  • Tweet It


- Advertisement -


Trending Now
ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ - ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!
Tulunadu News May 30, 2025
ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!
Tulunadu News May 30, 2025
Leave A Reply

  • Recent Posts

    • ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ - ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!
    • ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!
    • ಪೊಲೀಸ್ ಕಮೀಷನರ್, ಎಸ್ಪಿ ವರ್ಗಾವಣೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಮಾಡಿದ ಸರಕಾರ!
    • ಜಬ್ಬಾರ್ ನಿಂದ ರಹೀಂ ತನಕ, ದಕ್ಷಿಣ ಕನ್ನಡದ ಅಧ್ಯಾಯದಲ್ಲಿ ರಕ್ತದ ಸಹಿ ಕಂಡ ಪುಟಗಳು!
    • ಹುಬ್ಬಳ್ಳಿ ಕ್ರಿಮಿನಲ್ ಪ್ರಕರಣ ಹಿಂದೆಗೆದುಕೊಳ್ಳುವಂತಿಲ್ಲ - ಹೈಕೋರ್ಟ್ ಆದೇಶ... ರಾಜ್ಯ ಸರಕಾರಕ್ಕೆ ಮುಖಭಂಗ!
    • ಹನಿಮೂನಿಗೆ ಶಿಲ್ಲಾಂಗಿಗೆ ಹೋದ ನವಜೋಡಿ ಕಣ್ಮರೆ! ನಾಪತ್ತೆಯಾದ ಪ್ರದೇಶ ತುಂಬಾ ಡೇಂಜರ್!
    • ತಮಿಳಿನಿಂದಲೇ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಲ್ಲಿ ವಿರೋಧ..
    • ಬೆಂಗಳೂರಿನಲ್ಲಿ ಟ್ರೋಯಿಂಗ್ ಶುರು, ಮಂಗಳೂರಿನಲ್ಲಿಯೂ ಆರಂಭವಾಗಬೇಕಾ?
    • ಸೋಮಶೇಖರ್, ಹೆಬ್ಬಾರ್ ಬಿಜೆಪಿಯಿಂದ ಕೊನೆಗೂ ಗೇಟ್ ಪಾಸ್!
    • ಕೋವಿಡ್ ಏರಿಕೆ: ಮಕ್ಕಳ, ವೃದ್ಧರ, ಗರ್ಭೀಣಿಯರ ಬಗ್ಗೆ ಸರಕಾರ ಹೇಳಿದ್ದೇನು?
  • Popular Posts

    • 1
      ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ - ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!
    • 2
      ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!
    • 3
      ಪೊಲೀಸ್ ಕಮೀಷನರ್, ಎಸ್ಪಿ ವರ್ಗಾವಣೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಮಾಡಿದ ಸರಕಾರ!
    • 4
      ಜಬ್ಬಾರ್ ನಿಂದ ರಹೀಂ ತನಕ, ದಕ್ಷಿಣ ಕನ್ನಡದ ಅಧ್ಯಾಯದಲ್ಲಿ ರಕ್ತದ ಸಹಿ ಕಂಡ ಪುಟಗಳು!
    • 5
      ಹುಬ್ಬಳ್ಳಿ ಕ್ರಿಮಿನಲ್ ಪ್ರಕರಣ ಹಿಂದೆಗೆದುಕೊಳ್ಳುವಂತಿಲ್ಲ - ಹೈಕೋರ್ಟ್ ಆದೇಶ... ರಾಜ್ಯ ಸರಕಾರಕ್ಕೆ ಮುಖಭಂಗ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search