• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

25 ರ ನಂತರ ಹೆಣ್ಣು ಮದುವೆಯಾಗಬಾರದು ಎನ್ನುವ ನಿಯಮ ತರಲು ಆಗ್ರಹಿಸಿದ ನಾಯಕ!

Tulunadu News Posted On November 14, 2024
0


0
Shares
  • Share On Facebook
  • Tweet It

ಜನಸಂಖ್ಯೆ ಒಂದು ದೇಶದ ಸಂಪತ್ತು. ಅದು ಲೆಕ್ಕಕ್ಕಿಂತ ಹೆಚ್ಚಾದರೆ ಆಪತ್ತು. ಕಡಿಮೆಯಾದರೆ ವಿಪತ್ತು. ಚೀನಾ ಮತ್ತು ಭಾರತದಲ್ಲಿ ಜನಸಂಖ್ಯೆ ಲೆಕ್ಕಕ್ಕಿಂತ ಹೆಚ್ಚಾಗಿದ್ದರೆ ಜಪಾನ್ ನಂತಹ ರಾಷ್ಟ್ರಗಳು ಹೇಗಾದರೂ ಮಾಡಿ ಜನಸಂಖ್ಯೆಯನ್ನು ಹೆಚ್ಚಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇಲ್ಲಿ ಪುರುಷರು ಮತ್ತು ಯುವತಿಯರು ಮದುವೆಯಾದ ನಂತರ ಮಕ್ಕಳನ್ನು ಹುಟ್ಟಿಸಲು ಅಷ್ಟಾಗಿ ಆಸಕ್ತಿಯನ್ನು ತೋರಿಸುತ್ತಿಲ್ಲ. ಅನೇಕರು ತುಂಬಾ ತಡವಾಗಿ ಮದುವೆಯಾಗುತ್ತಿದ್ದಾರೆ ಮತ್ತು ಮಕ್ಕಳಿಗೆ ಜನ್ಮ ನೀಡುವ ವಿಷಯದಲ್ಲಿ ನಿರಾಸಕ್ತಿಯನ್ನು ತೋರಿಸುತ್ತಿದ್ದಾರೆ. ಅದರಿಂದ ಅಲ್ಲಿನ ಸರಕಾರ ಚಿಂತೆಗೆ ಬಿದ್ದಿದೆ. ಯುವಜನಾಂಗದ ಸಂಖ್ಯೆ ಅಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸರಾಸರಿ 1.20 ಮಕ್ಕಳ ಜನನ ಪ್ರಮಾಣ ಇದ್ದು, ಇದರಿಂದ ಮುಂದೇನು ಎಂಬ ಪ್ರಶ್ನೆ ಅಲ್ಲಿ ಪೆಡಂಭೂತವಾಗಿ ಆಡಳಿತಗಾರರನ್ನು ಕಾಡುತ್ತಿದೆ.

ಜಪಾನ್ ದೇಶದ ಕನ್ಸರವೇಟಿವ್ ಪಕ್ಷದ ಸ್ಥಾಪಕ ನಾಒಕಿ ಹೈಕುಟಾ ಎನ್ನುವ ರಾಜಕಾರಣಿ ಈ ಜನಸಂಖ್ಯೆಯನ್ನು ಹೆಚ್ಚಿಸಲು ವಿಭಿನ್ನ ಐಡಿಯಾವೊಂದನ್ನು ಅವಿಷ್ಕರಿಸಿದ್ದಾರೆ. ಅವರ ಪ್ರಕಾರ ಹೆಣ್ಣುಮಕ್ಕಳಿಗೆ 18 ವರ್ಷದ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ನಿಷೇಧಿಸಬೇಕು. ಇದರಿಂದ ಅವರು ಮಕ್ಕಳನ್ನು ಹುಟ್ಟಿಸಲು ಹೆಚ್ಚು ಏಕಾಗ್ರತೆಯನ್ನು ಹೊಂದಲು ಸಮಯ ಸಿಗಲಿದೆ. ಇನ್ನು 25 ವರ್ಷಗಳ ನಂತರ ಮದುವೆಯಾಗುವುದನ್ನು ನಿಷೇಧಿಸಬೇಕು. ಆಗ ಜನಸಂಖ್ಯೆ ಹೆಚ್ಚಳವಾಗುತ್ತದೆ ಎಂದು ಅವರು ಹೇಳಿರುವುದಾಗಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಹೈಕುಟಾ ಅವರ ಈ ಅಭಿಪ್ರಾಯವನ್ನು ವಿರೋಧಿಸಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಐಡಿಯಾಗಳನ್ನು ಹೇಳಲು ಹೇಗೆ ತಾನೇ ಮನಸ್ಸಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಯಾಮಾನ್ಸೀ ಗಾಕುನ್ ವಿಶ್ವವಿದ್ಯಾನಿಲಯದ ಅಧ್ಯಾಪಕಿ ಸುಮೈ ಕಾವಾಕಾಮಿ ಈ ಬಗ್ಗೆ ಪ್ರತಿಕ್ರಿಯಿಸಿ ” ಜಪಾನಿನ ರಾಜಕಾರಣಿಯೊಬ್ಬರು ಹೀಗೆ ಹೇಳುತ್ತಾರೆ ಎನ್ನುವುದೇ ನಾಚಿಕೆಗೇಡಿನ ಸಂಗತಿ. ಇದು ಒಂದು ರೀತಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಇನ್ನೊಂದು ರೂಪವಾಗಲಿದೆ” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು 30 ವರ್ಷದೊಳಗೆ ಮಕ್ಕಳನ್ನು ಮಾಡಿಕೊಳ್ಳದಿದ್ದರೆ ಅಂತವರ ಗರ್ಭಾಕೋಶವನ್ನು ತೆಗೆಯಬೇಕು ಎನ್ನುವ ಕಠಿಣ ನಿಯಮಗಳ ಬಗ್ಗೆನೂ ಹೇಳಿರುವ ಹೈಕುಟಾ ಅವರ ಬಗ್ಗೆ ಸಿನೆಮಾ ತಾರೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವನ್ನು ಮಾಡಿಕೊಳ್ಳದವರ ಗರ್ಭಾಕೋಶವನ್ನು ತೆಗೆಯುವುದು ಎನ್ನುವುದು ಮಕ್ಕಳನ್ನು ಹೆಚ್ಚಿಸಲು ಮಾಡುವ ಆತಂಕಕಾರಿ ಸೂಚನೆ ಎಂದು ಹೈಕುಟಾ ಅಂದುಕೊಂಡಿದ್ದರೆ ಅದಕ್ಕಿಂತ ಮೂರ್ಖತನ ಬೇರೊಂದಿಲ್ಲ ಎಂದಿರುವ ನಟಿಯರು ಜನಸಂಖ್ಯೆ ಕಡಿಮೆಯಾಗಲು ಕೇವಲ ಹೆಣ್ಣುಮಕ್ಕಳು ಮಾತ್ರ ಕಾರಣ ಎಂದು ಅಂದುಕೊಳ್ಳುವುದೇ ಬಾಲಿಶತನ ಎಂದಿದ್ದಾರೆ.
ಸದ್ಯ ಹೈಕುಟಾ ಅವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ. ಮತ್ತು ತಮ್ಮ ಹೇಳಿಕೆಯಿಂದ ನೊಂದಿರುವ ಹೆಣ್ಣುಮಕ್ಕಳ ಕ್ಷಮೆ ಕೇಳಿದ್ದಾರೆ. ಇನ್ನು ಜಪಾನಿನ ಹೆಣ್ಣುಮಕ್ಕಳು ಮಾತನಾಡಿ, ನಾವು ಒಂದು ವೇಳೆ ಹೈಕುಟಾ ಹೇಳಿಕೆಯನ್ನು ವಿರೋಧಿಸದಿದ್ದರೆ ಜಪಾನಿನ ಹೊರಗಿನ ಜನರು ಇಲ್ಲಿ ಜನಸಂಖ್ಯೆ ಕಡಿಮೆಯಾಗಲು ಹೆಣ್ಣುಮಕ್ಕಳೇ ಕಾರಣ ಎಂದು ನಂಬುವ ಪರಿಸ್ಥಿತಿ ಬರುತ್ತಿತ್ತು. ಕಡಿಮೆ ಸಂಖ್ಯೆಯಲ್ಲಾದರೂ ಜಪಾನಿನ ಹೆಣ್ಣುಮಕ್ಕಳು ಬಹಿರಂಗವಾಗಿ ಆಕ್ರೋಶ ಹೊರಗೆ ಹಾಕಿದ್ದು ಒಳ್ಳೆಯ ಬೆಳವಣಿಗೆ ಎಂದು ಹೇಳಿದ್ದಾರೆ .

0
Shares
  • Share On Facebook
  • Tweet It




Trending Now
ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
Tulunadu News December 10, 2025
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Tulunadu News December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
  • Popular Posts

    • 1
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • 2
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 3
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 4
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search