• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸಿನಿಮಾ ಸುದ್ದಿ 

ಪ್ರಧಾನಿಯಾದ ಬಳಿಕ ಮೋದಿ ನೋಡಿದ ಮೊದಲ ಸಿನೆಮಾ ಇದು!

Tulunadu News Posted On December 3, 2024
0


0
Shares
  • Share On Facebook
  • Tweet It

ಖ್ಯಾತ ನಟ ಜಿತೇಂದ್ರ ಅವರು ಪಾರ್ಲಿಮೆಂಟಿನಲ್ಲಿ “ಸಾಬರಮತಿ ರಿಪೋರ್ಟ್” ಸಿನೆಮಾದ ಪ್ರದರ್ಶನವನ್ನು ವೀಕ್ಷಿಸಿ ಹೊರಗೆ ಬಂದ ಬಳಿಕ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮಾತನಾಡಿದ ಜಿತೇಂದ್ರ ” ನನ್ನ 50 ವರ್ಷಗಳ ಚಿತ್ರ ಬದುಕಿನಲ್ಲಿ ಪ್ರಧಾನ ಮಂತ್ರಿಯವರೊಂದಿಗೆ ಕುಳಿತು ಸಿನೆಮಾ ವೀಕ್ಷಿಸುವ ಅವಕಾಶ ಸಿಕ್ಕಿರಲಿಲ್ಲ. ನನ್ನ ಮಗಳ ಕಾರಣದಿಂದ ಇದು ಸಾಧ್ಯವಾಯಿತು ಎಂದು ಪ್ರಧಾನಿಯವರಿಗೆ ಹೇಳಿದೆ. ಅದಕ್ಕೆ ಅವರು ನಾನು ಕೂಡ ಪ್ರಧಾನ ಮಂತ್ರಿಯಾದ ಬಳಿಕ ನೋಡುತ್ತಿರುವ ಮೊದಲ ಸಿನೆಮಾ ಇದು ಎಂದು ಹೇಳಿದರು” ಎಂದು ಹರ್ಷಚಿತ್ತರಾಗಿ ಪ್ರತಿಕ್ರಿಯಿಸಿದರು.

ನರೇಂದ್ರ ಮೋದಿಯವರು ಪ್ರಧಾನಿಯಾಗುವ ಮೊದಲು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರ ರಾಜಕೀಯ ಜೀವನದಲ್ಲಿ ಸಾಬರಮತಿ ಎಕ್ಸಪ್ರೆಸ್ ದುರಂತದ ಕರಾಳತೆ ಯಾವತ್ತೂ ಮರೆಯಲಾಗುವುದಿಲ್ಲ. ಸಾಬರಮತಿ ರೈಲಿಗೆ ಮತಾಂಧರು ಬೆಂಕಿ ಹಚ್ಚಿದ್ದು, ಅದರ ನಂತರ ನಡೆದ ಕೋಮು ಗಲಭೆಗಳು, ಅದರ ಬಳಿಕ ಗುಜರಾತ್ ಪೊಲೀಸರು ಮುಸಲಿಯರ ಗುಂಪೊಂದು ಬೆಂಕಿ ಹಚ್ಚಿದ್ದು ಎಂದು ಆರೋಪಿಸಿದ್ದು, ಚಾರ್ಜ್ ಶೀಟ್ ನಲ್ಲಿ ಹಾಗೆ ಉಲ್ಲೇಖಿಸಲ್ಪಟ್ಟಿದ್ದು, ನಂತರ ಆ ಬಗ್ಗೆ ಆಯೋಗದ ನೇಮಕ, ಆಗ ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದದ್ದು, ಆಗ ಅದು ಅಪಘಾತ ಎಂದು ಬಿಂಬಿತವಾದದ್ದು, ಗುಜರಾತ್ ಹೈಕೋರ್ಟ್ ಆ ಆಯೋಗವೇ ಅಸಂವಿಧಾನಿಕ ಎಂದು ಘೋಷಿಸಿದ್ದು ಹೀಗೆ ಅನೇಕ ಘಟನೆಗಳ ಸುತ್ತ ಈ ಸಿನೆಮಾ ಸುತ್ತುತ್ತದೆ.

ಈ ಸಿನೆಮಾವನ್ನು ಜಿತೇಂದ್ರ ಅವರ ಮಗಳು ಏಕ್ತಾ ಕಪೂರ್ ಹಾಗೂ ಪತ್ನಿ ಶೋಭಾ ಕಪೂರ್ ಅವರು ಬಾಲಾಜಿ ಮೋಶನ್ ಫಿಚ್ಚರ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಅವರೊಂದಿಗೆ ವಿಪಿನ್ ಅಗ್ನಿಹೋತ್ರಿ ಫಿಲಂ ಹಾಗೂ ವಿಖಿರ್ ಫಿಲಂ ಪ್ರೋಡಕ್ಷನ್ ಅವರು ಜೊತೆಯಾಗಿದ್ದಾರೆ. ಆರಂಭದಲ್ಲಿ ರಂಜನ್ ಚಂಡೆಲ್ ಅವರು ನಿರ್ದೇಶನದ ಹೊಣೆಯನ್ನು ಹೊತ್ತಿದ್ದು ನಂತರ ವಿವಿಧ ಕಾರಣಗಳಿಂದಾಗಿ ಸಿನೆಮಾದಿಂದ ಹೊರಬಂದಿದ್ದರು. ಆ ಬಳಿಕ ದೀರಜ್ ಸರ್ಣಾ ಅವರು ಈ ಸಿನೆಮಾದ ನಿರ್ದೇಶಕರಾದರು. 12 ಥ್ ಫೇಲ್ ಸಿನೆಮಾದಿಂದ ಖ್ಯಾತರಾಗಿದ್ದ ವಿಕ್ರಾಂತ್ ಮೆಸ್ಸಿ ಇದರ ನಾಯಕನಟರಾಗಿದ್ದರೆ, ರಾಶಿ ಖನ್ನಾ ಇದರ ನಾಯಕಿನಟಿಯಾಗಿದ್ದಾರೆ.

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!
  • Popular Posts

    • 1
      ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • 2
      ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!

  • Privacy Policy
  • Contact
© Tulunadu Infomedia.

Press enter/return to begin your search