• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅತುಲ್ ಸುಭಾಷ್ ಹಾಗೂ ಸ್ರಿಷ್ಟಿ ತುಲಿ ಆತ್ಮಹತ್ಯೆ; ನ್ಯಾಯಾಂಗ ವ್ಯವಸ್ಥೆ ವ್ಯತ್ಯಾಸ…!?

Tulunadu News Posted On January 7, 2025


  • Share On Facebook
  • Tweet It

ಇತ್ತೀಚೆಗೆ ಎರಡು ಆತ್ಮಹತ್ಯೆ ಪ್ರಕರಣಗಳು ಇಡೀ ದೇಶದ ಗಮನ ಸೆಳೆದಿವೆ. ಒಂದು ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ. ಇನ್ನೊಂದು ಏರ್ ಇಂಡಿಯಾ ಪೈಲೆಟ್ ಸ್ರಿಷ್ಟಿ ತುಲಿ ಆತ್ಮಹತ್ಯೆ ಪ್ರಕರಣ. ಈ ಎರಡು ಪ್ರಕರಣಗಳಲ್ಲಿ ಆರೋಪಗಳು ನೇರವಾಗಿ ಅವರ ಸಂಗಾತಿಯ ಮೇಲೆಯೇ ಇದ್ದವು. ಆದರೆ ಎರಡಕ್ಕೂ ಸಾಕಷ್ಟು ವ್ಯತ್ಯಾಸ ಇತ್ತು. ಮೊದಲನೇಯದಾಗಿ ಅತುಲ್ ಸುಭಾಷ್ ಪ್ರಕರಣದಲ್ಲಿ ಮೃತ ಸುಭಾಷ್ ಸಾಯುವ ಮುನ್ನ 24 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದರು. ಅದರೊಂದಿಗೆ ಒಂದೂವರೆ ಗಂಟೆಯ ವಿಡಿಯೋ ಕೂಡ ಮಾಡಿದ್ದರು. ಅದರಲ್ಲಿ ತನ್ನ ಸಾವಿಗೆ ಪತ್ನಿ ಮತ್ತು ಆಕೆಯ ಮನೆಯವರು ಹೇಗೆ ಕಾರಣ ಎಂದು ಇಂಚಿಂಚಾಗಿ ವಿವರಿಸಿದ್ದರು. ತನ್ನ ಮೇಲೆ ಸುಳ್ಳು ವರದಕ್ಷಿಣೆ ಪೀಡನಾ ಪ್ರಕರಣ, ಮೂರು ಕೋಟಿ ರೂಪಾಯಿ ಜೀವನಾಂಶ ಬೇಕೆಂದು ಹಟ, ಮಗನನ್ನು ನೋಡಲು ಬಿಡದೇ ಇರುವುದು, ಅದಕ್ಕೂ ಹಣ ಕೇಳುವುದು. ಹೀಗೆ ಅತುಲ್ ಘೋರ ಆರೋಪಗಳನ್ನು ಮಾಡಿದ್ದರು. ಆದರೆ ಈ ಪ್ರಕರಣದಲ್ಲಿ ಪ್ರಥಮ ಮಾಹಿತಿ ವರದಿ (ಎಫ್ ಐ ಆರ್) ದಾಖಲಾದದ್ದು ಒಂದು ದಿನದ ನಂತರ. ಆರೋಪಿಗಳಾದ ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ ಮತ್ತು ಆಕೆಯ ಮನೆಯವರನ್ನು ಬಂಧಿಸಿದ್ದು ಒಂದು ವಾರದ ನಂತರ. ಅವರು ಜೈಲಿನಲ್ಲಿ ಇದ್ದದ್ದು 20 ದಿನ.

ಇನ್ನೊಂದು ಪ್ರಕರಣದಲ್ಲಿ ಏರ್ ಇಂಡಿಯಾ ಪೈಲೆಟ್ ಸ್ರಿಷ್ಟಿ ತುಲಿ ಆತ್ಮಹತ್ಯೆ ಪ್ರಕರಣದಲ್ಲಿ ಆಕೆ ಆತ್ಮಹತ್ಯೆ ಮಾಡುವ ಮೊದಲು ಯಾವುದೇ ಡೆತ್ ನೋಟ್ ಬರೆದಿರಲಿಲ್ಲ. ತನ್ನ ಸಾವಿಗೆ ತನ್ನ ಗೆಳೆಯ ಕಾರಣ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೂ ಮಹಿಳಾ ಪೈಲೆಟ್ ಆತ್ಮಹತ್ಯೆಯಾಗಿರುವುದಕ್ಕೆ ಅವಳ ತಂದೆ ಕೊಟ್ಟ ದೂರಿನಲ್ಲಿ ಅವಳ ಬಾಯ್ ಫ್ರೆಂಡ್ ಆದಿತ್ಯ ಪಂಡಿತ್ ಆಕೆಗೆ ಮಾಂಸಹಾರ ಸೇವಿಸದಂತೆ ಒತ್ತಡ ಹಾಕಿದ್ದ. ಅದಕ್ಕೆ ಅವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪಿಸಿದ್ದರು. ಇದರಿಂದ ತಕ್ಷಣ ಆದಿತ್ಯ ಪಂಡಿತ್ ಮೇಲೆ ಪ್ರಕರಣ ದಾಖಲಾಗಿ ಅದೇ ದಿನ ಆತನನ್ನು ಬಂಧಿಸಲಾಗಿತ್ತು. 31 ದಿನಗಳ ಕಾಲ ಕಾರಾಗೃಹದಲ್ಲಿಡಲಾಗಿತ್ತು. ಕೊನೆಗೆ ಏನೂ ಸಾಕ್ಷ್ಯಾಧಾರಗಳು ಇಲ್ಲ ಎನ್ನುವ ಕಾರಣ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.

ಈ ಎರಡೂ ಪ್ರಕರಣಗಳನ್ನು ಗಮನಿಸಿದಾಗ ಮೊದಲ ಪ್ರಕರಣದಲ್ಲಿ ಅತುಲ್ ತನ್ನ ಆತ್ಮಹತ್ಯೆಗೆ ಸ್ಪಷ್ಟ ಕಾರಣ ನೀಡಿದ ಬಳಿಕವೂ ನಿಖಿತಾ ಸಿಂಘಾನಿಯಾ ಅವರಿಗೆ ಜಾಮೀನು ಸಿಕ್ಕಿದ್ದು ಮತ್ತು ಆದಿತ್ಯ ಪಂಡಿತ್ ಅವರಿಗೆ ಜಾಮೀನು ಸಿಗಲು ತಡವಾಗಿರುವುದು ಎಲ್ಲವನ್ನು ಸಮಚಿತ್ತದಿಂದ ನೋಡಿದಾಗ ಎರಡು ಪ್ರಕರಣಗಳಲ್ಲಿ ಸ್ವಾಮ್ಯತೆ ಇದ್ದರೂ ಆರೋಪಿಗಳ ವಿಷಯದಲ್ಲಿ ಕಾನೂನು ಪ್ರಕ್ರಿಯೆಗಳು ಒಂದೇ ರೀತಿ ಆಗಿದ್ದರೂ ಪರಿಣಾಮ ಹೇಗೆ ಭಿನ್ನವಾಗಿತ್ತು ಎನ್ನುವುದು ತಿಳಿಯುತ್ತದೆ. ಈ ಎರಡು ಪ್ರಕರಣಗಳನ್ನು ಮುಂದಿಟ್ಟು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಪ್ರತಿಕ್ರಿಯೆಯನ್ನು ನೆಟ್ಟಿಗರು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search