• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ದೇಶದ ಟಾಪ್ ನ್ಯೂಸ್ ನಿರೂಪಕ ಸುಧೀರ್ ಚೌಧರಿ ಇನ್ನು ಡಿಡಿಯಲ್ಲಿ 15 ಕೋಟಿ ಸಂಬಳ!

Tulunadu News Posted On March 20, 2025
0


0
Shares
  • Share On Facebook
  • Tweet It

ದಶಕದ ತನಕ ಝಿ ನ್ಯೂಸ್ ವಾಹಿನಿಯಲ್ಲಿ ಕೆಲಸ ನಿರ್ವಹಿಸಿ ನಂತರ ಪ್ರಸ್ತುತ ಆಜ್ ತಕ್ ನಲ್ಲಿ ಕನ್ಸಲ್ಟಿಂಗ್ ಎಡಿಟರ್ ಆಗಿರುವ ಸುಧೀರ್ ಚೌಧರಿ ಇನ್ನು ಮುಂದೆ ಪ್ರಸಾರ ಭಾರತಿ ಬೋರ್ಡ್ ಇದರ ಡಿಡಿ ನ್ಯೂಸ್ ನಲ್ಲಿ ದಿನಕ್ಕೆ ಒಂದು ಗಂಟೆ ಕಾರ್ಯಕ್ರಮ ನಿರ್ವಹಿಸಿ ಕೊಡಲಿದ್ದಾರೆ ಎನ್ನುವ ವಿಷಯ ಹೊರಬಿದ್ದಿದೆ. ಈ ಬಗ್ಗೆ ಡಿಡಿ ನ್ಯೂಸ್ ಅಧಿಕೃತವಾಗಿ ಮಾಹಿತಿ ನೀಡದಿದ್ದರೂ ಈ ಬಗ್ಗೆ ಮಾಧ್ಯಮಗಳಲ್ಲಿ ವಿಷಯ ಚರ್ಚೆಯಲ್ಲಿರುವುದು ಮಾತ್ರ ನಿಜ.

ಒಂದು ವೇಳೆ ಇದು ಅನುಷ್ಠಾನಕ್ಕೆ ಬಂದರೆ ದೇಶದಲ್ಲಿಯೇ ಅತೀ ಹೆಚ್ಚು ಸಂಭಾವನೆ ಪಡೆಯುವ ನ್ಯೂಸ್ ನಿರೂಪಕರಲ್ಲಿ ಇವರು ಅಗ್ರಗಣ್ಯರೆನಿಸಿಕೊಳ್ಳಲಿದ್ದಾರೆ. ಇವರು ನಿತ್ಯ ಫ್ರೈಮ್ ಟೈಮ್ ನಲ್ಲಿ ಒಂದು ಗಂಟೆ ಡಿಡಿಯಲ್ಲಿ ಕಾಣಿಸಿಕೊಳ್ಳಲಿದ್ದು, ವಾರಕ್ಕೆ ಐದು ದಿನ ಕಾರ್ಯಕ್ರಮ ನಡೆಸಿಕೊಳ್ಳಲಿದ್ದಾರೆ. ಇದರಿಂದ ವರ್ಷಕ್ಕೆ ಒಟ್ಟು 260 ಎಪಿಸೋಡ್ ಗಳನ್ನು ಅವರು ನಿರ್ವಹಣೆ ಮಾಡಿಕೊಟ್ಟಂತೆ ಆಗಲಿದೆ. ಇದಕ್ಕಾಗಿ ಅವರ ಸಂಭಾವನೆ 15 ಕೋಟಿ ವರ್ಷಕ್ಕೆ ನಿಗದಿಯಾಗಿದ್ದು ಮತ್ತು ಜಿಎಸ್ ಟಿ ಪ್ರತ್ಯೇಕ ನೀಡಲಾಗುತ್ತದೆ. ಇನ್ನು ಅದರೊಂದಿಗೆ ವಾರ್ಷಿಕವಾಗಿ 10 ಶೇಕಡಾ ಸಂಭಾವನೆ ಹೆಚ್ಚಿಸುವ ಒಪ್ಪಂದವೂ ಆಗಿದೆ. ಸರಕಾರಿ ಸ್ವಾಮ್ಯದ ಅಂಗಸಂಸ್ಥೆಯೊಂದು ಇಷ್ಟು ದೊಡ್ಡ ಮೊತ್ತವನ್ನು ಒಬ್ಬ ನಿರೂಪಕನ ಒಂದು ಗಂಟೆಯ ಕಾರ್ಯಕ್ರಮಕ್ಕೆ ಖರ್ಚು ಮಾಡುತ್ತಿರುವುದು ಮಾಧ್ಯಮ ಪಂಡಿತರ ಹುಬ್ಬೇರಿಸುವಂತೆ ಮಾಡಿದೆ. ಅಷ್ಟಕ್ಕೂ ಸುಧೀರ್ ಚೌಧರಿಯವರ ಆಯ್ಕೆ ಹೇಗೆ ಆಯಿತು ಎನ್ನುವುದೇ ಈಗಿರುವ ಕುತೂಹಲ.

ಆರಂಭದಲ್ಲಿ ಪ್ರಸಾರ ಭಾರತಿ ಬೋರ್ಡ್ ಒಂದು ಸಂಶೋಧನೆ ಮತ್ತು ಆಯ್ಕೆಯ ಸಮಿತಿಯನ್ನು ರಚಿಸಿತು. ಅದರ ನೇತೃತ್ವವನ್ನು ಪ್ರಸಾರ ಭಾರತಿ ಬೋರ್ಡಿನ ಸದಸ್ಯ ಅಶೋಕ್ ಟೆಂಡನ್ ಅವರಿಗೆ ನೀಡಿತು. ಈ ಸಮಿತಿ ಡಿಡಿ ನ್ಯೂಸ್ ಹೆಚ್ಚು ಸ್ಟ್ರಾಂಗ್ ಆಗಿ ಮೂಡಿ ಬರಲು ಮಾಡಬೇಕಾದ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿತು. ನಿರೂಪಕರುಗಳ ಟಿಆರ್ ಪಿ ರೆಕಾರ್ಡ್, ವಿಶ್ವಾಸಾರ್ಹತೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಭಾವ ಎಲ್ಲವನ್ನು ಪರಾಮರ್ಶಿಸಿ ಕೊನೆಗೆ ಈ ನಿರ್ಧಾರಕ್ಕೆ ಬಂದಿದೆ. ಈ ಕಾರ್ಯಕ್ರಮವನ್ನು ಇಎಸ್ ಎಸ್ ಪಿಆರ್ ಐಟಿ ಪ್ರೈ ಲಿ ನಿರ್ವಹಿಸಿಕೊಂಡು ಬರಲಿದೆ. ಡಿಡಿ ನ್ಯೂಸ್ ಸ್ಟುಡಿಯೋ, ಹಾರ್ಡ್ ವೇರ್ ಮತ್ತು ನ್ಯೂಸ್ ಏಜೆನ್ಸಿ ಸೇವೆಗಳನ್ನು ಪೂರೈಸಲಿದೆ.
ಇನ್ನು ಕಚೇರಿ ಕೆಲಸದ ನಿಮಿತ್ತ ತಿರುಗಾಟಕ್ಕೆ ಹೋಗುವಾಗ ಡಿಡಿ ವಾಹಿನಿಯಿಂದ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಮತ್ತು ಫೈವ್ ಸ್ಟಾರ್ ಹೋಟೇಲ್ ಆತಿಥ್ಯವೂ ನೀಡುವ ಮಾತುಕತೆ ನಡೆದಿದೆ. ಇನ್ನು ವಾರ್ತೆಗಳ ಬೌದ್ಧಿಕ ಹಕ್ಕುಗಳ ಒಡೆತನ ಡಿಡಿ ನ್ಯೂಸ್ ವಾಹಿನಿಯಲ್ಲಿಯೇ ಉಳಿಯಲಿದೆ.

0
Shares
  • Share On Facebook
  • Tweet It




Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Tulunadu News May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
  • Popular Posts

    • 1
      ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್

  • Privacy Policy
  • Contact
© Tulunadu Infomedia.

Press enter/return to begin your search