• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಯುವತಿಯರೊಂದಿಗೆ ಸೆಲ್ಫಿ ತೆಗೆಸಲು ರಾಜಕಾರಣಿಗಳು ಹಿಂದೇಟು! ಹನಿಟ್ರಾಪ್ ಇಫೆಕ್ಟ್!

Tulunadu News Posted On March 24, 2025
0


0
Shares
  • Share On Facebook
  • Tweet It

ಕರ್ನಾಟಕದಲ್ಲಿ ಈಗ ಹನಿಟ್ರಾಪಿನದ್ದೇ ಸುದ್ದಿ. ಯಾವಾಗ ಅಧಿವೇಶನದಲ್ಲಿಯೇ ಸಚಿವ ರಾಜಣ್ಣ ತಮ್ಮ ಮೇಲೆ ಹನಿಟ್ರಾಪಿನ ಪ್ರಯತ್ನ ನಡೆದಿದೆ ಎಂದು ಹೇಳಿದರೋ ಅದರ ನಂತರ ಹನಿಟ್ರಾಪ್ ವಿಷಯ ರಾಜ್ಯದಲ್ಲಿ ಜೋರಾಗಿ ಚಲಾವಣೆಯಲ್ಲಿದೆ. ಇನ್ನು ಆಡಳಿತ, ವಿಪಕ್ಷದ ಒಟ್ಟು 48 ಶಾಸಕರ ಹನಿಟ್ರಾಪ್ ನಡೆದಿದೆ ಎನ್ನುವ ವಿಷಯದಲ್ಲಿ ಪ್ರತಿ ಶಾಸಕರೂ ಹೆದರುವ ಪ್ರಸಂಗ ಉದ್ಭವಿಸಿದೆ. ಯಾರಾದರೂ ಯುವತಿ ಫೋನ್ ಮಾಡಿದರೆ ಮಾತನಾಡಲು ನೂರು ಸಲ ಯೋಚಿಸುವ ಪರಿಸ್ಥಿತಿಗೆ ಕರ್ನಾಟಕದ ಶಾಸಕರು ಬಂದಿದ್ದಾರೆ. ಇನ್ನು ಯುವತಿಯರು ಯಾರಾದರೂ ಸಿಂಗಲ್ ಆಗಿ ಭೇಟಿ ಮಾಡಲು ಬಂದರೆ ತಕ್ಷಣ ಯಾರೂ ಇಲ್ಲದಿದ್ದರೆ ಕನಿಷ್ಟ ಕಚೇರಿಯ ಸಿಬ್ಬಂದಿಗಳನ್ನಾದರೂ ಕರೆಸಿ ಮಾತನಾಡುವ ಪ್ರಸಂಗ ಇದೆ. ಇದಕ್ಕೆಲ್ಲಾ ಕಾರಣ ಹನಿಟ್ರಾಪ್. ಒಂದು ವೇಳೆ ಫೋಟೋ ತೆಗೆಯಲೇಬೇಕು ಎಂದು ಯುವತಿ ಒತ್ತಾಯ ಮಾಡಿದರೆ ಗ್ರೂಪ್ ಫೋಟೋ ಮಾತ್ರ ಎನ್ನುವ ಕಂಡೀಷನ್ ಹಾಕುವ ಅನಿವಾರ್ಯತೆ ಇದೆ. ಯಾಕೆಂದರೆ ಯಾರು ಹನಿ ಟ್ರಾಪ್ ಮಾಡಲು ಬಂದವರು, ಯಾರು ನಿಜವಾಗಿ ಕಷ್ಟ, ಸುಖ ಹೇಳಲು ಬಂದವರು ಎಂದು ಗೊತ್ತಾಗದೇ ಸಾರ್ವಜನಿಕ ಜೀವನದಲ್ಲಿರುವ ಶಾಸಕರು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದ್ದಾರೆ.

ಇಂತಹ ಸ್ಥಿತಿ ಪ್ರತಿ ಶಾಸಕರಿಗೂ ಬಂದಿದ್ದರೂ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿಯವರು ಮಾತ್ರ ಈ ವಿಷಯವನ್ನು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಒಪ್ಪಿಕೊಂಡರು. ಬಿಜೆಪಿಯ ಯಾರಿಗೆಲ್ಲಾ ಹನಿಟ್ರಾಪಿನಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ನಾರಾಯಣ ತಮ್ಮ ಸಾರ್ವಜನಿಕ ಜೀವನ ಕ್ರಮ ಬದಲಾಗಿರುವುದರ ಹಿಂದಿನ ಹಿಂಟ್ ಕೊಟ್ಟರು.

ಯಾರಾದರೂ ಯುವತಿ ಫೋನ್ ಮಾಡಿದರೆ ಮೊದಲಿಗೆ ಅವರ ಕಚೇರಿಯ ಸಿಬ್ಬಂದಿಯೇ ಮಾತನಾಡುತ್ತಾರಂತೆ. ಅವರು ಮಾತನಾಡಿ ಎನು ವಿಷಯ ಎಂದು ಕೂಲಂಕುಶವಾಗಿ ಕೇಳಿ ನಂತರ ಅಗತ್ಯ ಬಿದ್ದರೆ ನಾರಾಯಣ ಸ್ವಾಮಿಯವರಿಗೆ ಕೊಡುತ್ತಾರಂತೆ. ಸೆಲ್ಫಿ ಅಥವಾ ಸಿಂಗಲ್ ಫೋಟೋಗೆ ನೋ ಎಂದು ಹೇಳುವ ಪರಿಪಾಠ ಆರಂಭಿಸಿದ್ದಾರಂತೆ. ಏನಿದ್ದರೂ ಗ್ರೂಪ್ ಫೋಟೋ ಮಾತ್ರ. ಕಚೇರಿಯಲ್ಲಿ ಸಿಬ್ಬಂದಿಯವರ ಜೊತೆ, ಸಾರ್ವಜನಿಕರ ಜೊತೆಯಲ್ಲಿ ಕುಳಿತು ಯುವತಿಯರೊಂದಿಗೆ ಮಾತುಕತೆ ಮಾತ್ರ. ಬಹಿರಂಗವಾಗಿ ಹೇಳಬೇಕು. ಅದು ಬಿಟ್ಟು ಪರ್ಸನಲ್ ಆಗಿ ಇಲ್ಲವೇ ಇಲ್ಲ. ಏಕೆಂದರೆ ಒಮ್ಮೆ ಹನಿಟ್ರಾಪಿಗೆ ಸಿಲುಕಿದರೆ ನಂತರ ಆ ಪಾಡು ಯಾರಿಗೂ ಬೇಡಾ ಎಂದು ನಾರಾಯಣ ಸ್ವಾಮಿ ಹೇಳಿದ್ದಾರೆ.

ಈಗ ಬಹುತೇಕ ಶಾಸಕರು, ಸಚಿವರು ಇದನ್ನೇ ಅನುಸರಿಸುತ್ತಿದ್ದಾರೆ. ಹಾಗಂತ ಬಹಿರಂಗವಾಗಿ ಹೇಳಲಾಗದ ಸ್ಥಿತಿ. ಪರಿಚಯದ ಮಹಿಳೆ ಬಂದು ಫೋಟೋ ಕೇಳಿದರೂ ಇಲ್ಲವೆನ್ನಲಾಗದ ಕಥೆ. ಯಾಕೆಂದರೆ ಯಾವಾಗ, ಎಲ್ಲಿ ಗ್ರಹಚಾರ ಕೆಟ್ಟಿದೆ ಎಂದು ಹೇಳಲು ಆಗುವುದಿಲ್ಲವಲ್ಲ.

0
Shares
  • Share On Facebook
  • Tweet It




Trending Now
ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
Tulunadu News September 11, 2025
ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
Tulunadu News September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
  • Popular Posts

    • 1
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 2
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 3
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 4
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 5
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ

  • Privacy Policy
  • Contact
© Tulunadu Infomedia.

Press enter/return to begin your search