• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

130 ನ್ಯೂಕ್ಲಿಯರ್ ಬಾಂಬ್ ಗಳಿವೆ, ಪ್ರದರ್ಶನಕ್ಕೆ ಇಟ್ಟಿದ್ದಲ್ಲ- ಪಾಕ್ ಸಚಿವ ಎಚ್ಚರಿಕೆ!

Tulunadu News Posted On April 28, 2025
0


0
Shares
  • Share On Facebook
  • Tweet It

ಒಂದು ವೇಳೆ ಸಿಂಧೂ ನದಿ ಜಲ ಒಪ್ಪಂದ ಶಾಶ್ವತವಾಗಿ ರದ್ದಾದರೆ ಪಾಕಿಸ್ತಾನದಲ್ಲಿರುವ 130 ನ್ಯೂಕ್ಲಿಯರ್ ಬಾಂಬ್ ಗಳನ್ನು ನಾವು ಭಾರತದ ವಿರುದ್ಧ ಬಳಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಪಾಕಿಸ್ತಾನದ ರೈಲ್ವೆ ಸಚಿವ ಅನೀಫ್ ಅಬ್ಬಾಸಿ ಹೇಳಿದ್ದಾರೆ. ಅದರೊಂದಿಗೆ ಘೋರಿ, ಶಾಹಿನ್, ಘಾಜ್ನವಿ ಮಿಸೈಲ್ ಗಳು ಕೂಡ ಭಾರತದೆಡೆ ಮುಖ ಮಾಡಿ ನಿಂತಿವೆ. ಇದನ್ನೆಲ್ಲ ನಾವು ಪ್ರದರ್ಶನಕ್ಕೆ ಇಟ್ಟಿದ್ದಲ್ಲ. ಇದು ಭಾರತದ ವಿರುದ್ಧ ಬಳಸುವುದಕ್ಕೆನೆ ನಮ್ಮ ಯೋಜನೆ ಇರುವುದು ಎಂದು ಅಬ್ಬಾಸಿ ದ್ವೇಷ ಕಿಡಿಕಾರಿದ್ದಾರೆ.

ನದಿಗಳ ನೀರನ್ನು ಭಾರತ ಬಿಡಲು ಅಡ್ಡಗಾಲು ಹಾಕಿದರೆ ಯುದ್ಧಕ್ಕೆ ಭಾರತ ತಯಾರಾಗಲೇಬೇಕಿದೆ. ಮಿಸೈಲ್ ಗಳನ್ನು ನಾವು ಚೆಂದ ನೋಡಲು ಇಟ್ಟಿದ್ದಲ್ಲ. 130 ನ್ಯೂಕ್ಲಿಯರ್ ಆಯುಧಗಳು ಮಾಡೆಲ್ ನಿರ್ಮಿಸಲು ಸಂರಕ್ಷಿಸಿ ಇಟ್ಟಿದ್ದಲ್ಲ. ಇನ್ನು ಇದನ್ನು ಪಾಕಿಸ್ತಾನದ ಯಾವ ಯಾವ ಮೂಲೆಯಲ್ಲಿ ಸಂರಕ್ಷಿಸಿ ಇಟ್ಟಿದ್ದೇವೆ ಎನ್ನುವ ಸುಳಿವು ಯಾರ ಬಳಿಯೂ ಇಲ್ಲ. ಇದು ಜಗತ್ತಿಗೆ ಗೊತ್ತಿದೆ. ಇದೆಲ್ಲಾ ಭಾರತಕ್ಕೆ ಗೊತ್ತಿಲ್ಲದೇ ಇರಲು ಸಾಧ್ಯವಿಲ್ಲ. ಇಲ್ಲದಿದ್ದರೆ ಇಷ್ಟೊತ್ತಿಗೆ ಪಾಕಿಸ್ತಾನದ ಮೇಲೆ ಭಾರತ ಸಮರ ಸಾರಿ ಆಗುತ್ತಿತ್ತು ಎಂದು ಹನೀಫ್ ಅಬ್ಬಾಸಿ ಹೇಳಿದ್ದಾರೆ.

ಒಂದು ವೇಳೆ ಭಾರತ ನೇರವಾಗಿ ಪಾಕಿಸ್ತಾನದ ಮೇಲೆ ದಾಳಿ ಮಾಡಲಿ ಎಂದೇ ಪಾಕಿಗಳ ದುಷ್ಟ ಆಡಳಿತ ಕಾಯುತ್ತಾ ಇದೆ. ಯಾಕೆಂದರೆ ಯುದ್ಧ ಆದರೆ ಮೊದಲೇ ಸತ್ತಂತಿರುವ ಪಾಕಿಸ್ತಾನಕ್ಕೆ ಕಳೆದುಕೊಳ್ಳುವುದು ಏನಿಲ್ಲ. ಅದರ ಬದಲಿಗೆ ಅದಕ್ಕೆ ಲಾಭ ಬೇರೆ. ಜಗತ್ತಿನ ಮುಂದೆ ಮತ್ತೆ ಟವಲ್ಲನ್ನು ಹಾಸಿ ನಮಗೆ ಆರ್ಥಿಕ ನೆರವನ್ನು ನೀಡಿ. ಭಾರತ ನಮ್ಮ ಮೇಲೆ ದಾಳಿ ಮಾಡುತ್ತಿದೆ ಎಂದು ಅಗಲಾಚಬಹುದು.

ಅದರದ್ದೇ ಒರಗೆಯ, ಕಸಿನ್ ನಂತಿರುವ ಕೆಲವು ರಾಷ್ಟ್ರಗಳು ಖಂಡಿತವಾಗಿಯೂ ಆರ್ಥಿಕವಾಗಿ ಸಹಾಯ ಮಾಡಲು ಮುಂದಾಗುತ್ತವೆ. ಕೆಲವು ಬಹಿರಂಗವಾಗಿ ಸಹಾಯಕ್ಕೆ ನಿಲ್ಲಬಹುದು. ಕೆಲವು ಭಾರತದ ಎದುರು ಬೆತ್ತಲಾಗುವುದು ಬೇಡಾ ಎಂದು ಹಿಂದಿನ ಬಾಗಿಲಿನಿಂದ ಸಹಾಯ ಮಾಡಬಹುದು. ಆದರೆ ಯುದ್ಧವಾದರೆ ಭಾರತದ ಆರ್ಥಿಕ ವ್ಯವಸ್ಥೆ, ರಕ್ಷಣೆಗಾಗಿ ಖರ್ಚು ಈ ಎಲ್ಲವನ್ನು ನೋಡಿಕೊಂಡೇ ಏನಾದರೂ ಹೆಜ್ಜೆ ಇಡಬೇಕಾಗುತ್ತದೆ. ಆದರೆ ಪಾಕಿಸ್ತಾನಕ್ಕೆ ಅದರ ಪರಿವೇ ಇಲ್ಲ. ಇನ್ನು ತಲೆಕೆಟ್ಟರೆ ನ್ಯೂಕ್ಲಿಯರ್ ಬಾಂಬ್ ಭಾರತದ ಮೇಲೆ  ಹಾಕಿ ಚೆಂದ ನೋಡುವುದಕ್ಕೂ ಪಾಕಿಸ್ತಾನ ಹಿಂದೆ ಮುಂದೆ ನೋಡಲಾರದು. ಯಾಕೆಂದರೆ ವಿಶ್ವಸಂಸ್ಥೆಯಲ್ಲಿ ಅದಕ್ಕೆ ಮೊದಲೇ ಮರ್ಯಾದೆ ಇಲ್ಲ. ಇನ್ನು ಭಯೋತ್ಪಾದಕ ರಾಷ್ಟ್ರ ಏನು ಮಾಡಿದರೂ ಹೊಲಸಿನಿಂದ ಮೇಲೆ ಬರಲು ಸಾಧ್ಯವಿಲ್ಲ. ಆದ್ದರಿಂದ ಪಾಕಿ ಆಡಳಿತಗಾರರು ಯುದ್ಧವಾಗಲಿ ಎಂದೇ ಬಯಸುತ್ತಿದ್ದಾರೆ. ಸತ್ತರೆ ಕೆಲವು ಭಯೋತ್ಪಾದಕರಲ್ವಾ ಎನ್ನುವ ಧೋರಣೆ ಅವರದ್ದು. ಒಂದು ವೇಳೆ ಭಾರತದ ದಾಳಿಯಲ್ಲಿ ನಾಗರಿಕರು ಸತ್ತರೆ ಅದನ್ನೇ ಹಿಡಿದು ಭಾರತದ ಇಮೇಜನ್ನು ಹಾಳು ಮಾಡಲು ಅವರು ತಂತ್ರ ಹೂಡಿ ಆಗಿರುತ್ತದೆ.

 

0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Tulunadu News December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Tulunadu News December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • 2
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 3
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 4
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

  • Privacy Policy
  • Contact
© Tulunadu Infomedia.

Press enter/return to begin your search