• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

130 ನ್ಯೂಕ್ಲಿಯರ್ ಬಾಂಬ್ ಗಳಿವೆ, ಪ್ರದರ್ಶನಕ್ಕೆ ಇಟ್ಟಿದ್ದಲ್ಲ- ಪಾಕ್ ಸಚಿವ ಎಚ್ಚರಿಕೆ!

Tulunadu News Posted On April 28, 2025
0


0
Shares
  • Share On Facebook
  • Tweet It

ಒಂದು ವೇಳೆ ಸಿಂಧೂ ನದಿ ಜಲ ಒಪ್ಪಂದ ಶಾಶ್ವತವಾಗಿ ರದ್ದಾದರೆ ಪಾಕಿಸ್ತಾನದಲ್ಲಿರುವ 130 ನ್ಯೂಕ್ಲಿಯರ್ ಬಾಂಬ್ ಗಳನ್ನು ನಾವು ಭಾರತದ ವಿರುದ್ಧ ಬಳಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಪಾಕಿಸ್ತಾನದ ರೈಲ್ವೆ ಸಚಿವ ಅನೀಫ್ ಅಬ್ಬಾಸಿ ಹೇಳಿದ್ದಾರೆ. ಅದರೊಂದಿಗೆ ಘೋರಿ, ಶಾಹಿನ್, ಘಾಜ್ನವಿ ಮಿಸೈಲ್ ಗಳು ಕೂಡ ಭಾರತದೆಡೆ ಮುಖ ಮಾಡಿ ನಿಂತಿವೆ. ಇದನ್ನೆಲ್ಲ ನಾವು ಪ್ರದರ್ಶನಕ್ಕೆ ಇಟ್ಟಿದ್ದಲ್ಲ. ಇದು ಭಾರತದ ವಿರುದ್ಧ ಬಳಸುವುದಕ್ಕೆನೆ ನಮ್ಮ ಯೋಜನೆ ಇರುವುದು ಎಂದು ಅಬ್ಬಾಸಿ ದ್ವೇಷ ಕಿಡಿಕಾರಿದ್ದಾರೆ.

ನದಿಗಳ ನೀರನ್ನು ಭಾರತ ಬಿಡಲು ಅಡ್ಡಗಾಲು ಹಾಕಿದರೆ ಯುದ್ಧಕ್ಕೆ ಭಾರತ ತಯಾರಾಗಲೇಬೇಕಿದೆ. ಮಿಸೈಲ್ ಗಳನ್ನು ನಾವು ಚೆಂದ ನೋಡಲು ಇಟ್ಟಿದ್ದಲ್ಲ. 130 ನ್ಯೂಕ್ಲಿಯರ್ ಆಯುಧಗಳು ಮಾಡೆಲ್ ನಿರ್ಮಿಸಲು ಸಂರಕ್ಷಿಸಿ ಇಟ್ಟಿದ್ದಲ್ಲ. ಇನ್ನು ಇದನ್ನು ಪಾಕಿಸ್ತಾನದ ಯಾವ ಯಾವ ಮೂಲೆಯಲ್ಲಿ ಸಂರಕ್ಷಿಸಿ ಇಟ್ಟಿದ್ದೇವೆ ಎನ್ನುವ ಸುಳಿವು ಯಾರ ಬಳಿಯೂ ಇಲ್ಲ. ಇದು ಜಗತ್ತಿಗೆ ಗೊತ್ತಿದೆ. ಇದೆಲ್ಲಾ ಭಾರತಕ್ಕೆ ಗೊತ್ತಿಲ್ಲದೇ ಇರಲು ಸಾಧ್ಯವಿಲ್ಲ. ಇಲ್ಲದಿದ್ದರೆ ಇಷ್ಟೊತ್ತಿಗೆ ಪಾಕಿಸ್ತಾನದ ಮೇಲೆ ಭಾರತ ಸಮರ ಸಾರಿ ಆಗುತ್ತಿತ್ತು ಎಂದು ಹನೀಫ್ ಅಬ್ಬಾಸಿ ಹೇಳಿದ್ದಾರೆ.

ಒಂದು ವೇಳೆ ಭಾರತ ನೇರವಾಗಿ ಪಾಕಿಸ್ತಾನದ ಮೇಲೆ ದಾಳಿ ಮಾಡಲಿ ಎಂದೇ ಪಾಕಿಗಳ ದುಷ್ಟ ಆಡಳಿತ ಕಾಯುತ್ತಾ ಇದೆ. ಯಾಕೆಂದರೆ ಯುದ್ಧ ಆದರೆ ಮೊದಲೇ ಸತ್ತಂತಿರುವ ಪಾಕಿಸ್ತಾನಕ್ಕೆ ಕಳೆದುಕೊಳ್ಳುವುದು ಏನಿಲ್ಲ. ಅದರ ಬದಲಿಗೆ ಅದಕ್ಕೆ ಲಾಭ ಬೇರೆ. ಜಗತ್ತಿನ ಮುಂದೆ ಮತ್ತೆ ಟವಲ್ಲನ್ನು ಹಾಸಿ ನಮಗೆ ಆರ್ಥಿಕ ನೆರವನ್ನು ನೀಡಿ. ಭಾರತ ನಮ್ಮ ಮೇಲೆ ದಾಳಿ ಮಾಡುತ್ತಿದೆ ಎಂದು ಅಗಲಾಚಬಹುದು.

ಅದರದ್ದೇ ಒರಗೆಯ, ಕಸಿನ್ ನಂತಿರುವ ಕೆಲವು ರಾಷ್ಟ್ರಗಳು ಖಂಡಿತವಾಗಿಯೂ ಆರ್ಥಿಕವಾಗಿ ಸಹಾಯ ಮಾಡಲು ಮುಂದಾಗುತ್ತವೆ. ಕೆಲವು ಬಹಿರಂಗವಾಗಿ ಸಹಾಯಕ್ಕೆ ನಿಲ್ಲಬಹುದು. ಕೆಲವು ಭಾರತದ ಎದುರು ಬೆತ್ತಲಾಗುವುದು ಬೇಡಾ ಎಂದು ಹಿಂದಿನ ಬಾಗಿಲಿನಿಂದ ಸಹಾಯ ಮಾಡಬಹುದು. ಆದರೆ ಯುದ್ಧವಾದರೆ ಭಾರತದ ಆರ್ಥಿಕ ವ್ಯವಸ್ಥೆ, ರಕ್ಷಣೆಗಾಗಿ ಖರ್ಚು ಈ ಎಲ್ಲವನ್ನು ನೋಡಿಕೊಂಡೇ ಏನಾದರೂ ಹೆಜ್ಜೆ ಇಡಬೇಕಾಗುತ್ತದೆ. ಆದರೆ ಪಾಕಿಸ್ತಾನಕ್ಕೆ ಅದರ ಪರಿವೇ ಇಲ್ಲ. ಇನ್ನು ತಲೆಕೆಟ್ಟರೆ ನ್ಯೂಕ್ಲಿಯರ್ ಬಾಂಬ್ ಭಾರತದ ಮೇಲೆ  ಹಾಕಿ ಚೆಂದ ನೋಡುವುದಕ್ಕೂ ಪಾಕಿಸ್ತಾನ ಹಿಂದೆ ಮುಂದೆ ನೋಡಲಾರದು. ಯಾಕೆಂದರೆ ವಿಶ್ವಸಂಸ್ಥೆಯಲ್ಲಿ ಅದಕ್ಕೆ ಮೊದಲೇ ಮರ್ಯಾದೆ ಇಲ್ಲ. ಇನ್ನು ಭಯೋತ್ಪಾದಕ ರಾಷ್ಟ್ರ ಏನು ಮಾಡಿದರೂ ಹೊಲಸಿನಿಂದ ಮೇಲೆ ಬರಲು ಸಾಧ್ಯವಿಲ್ಲ. ಆದ್ದರಿಂದ ಪಾಕಿ ಆಡಳಿತಗಾರರು ಯುದ್ಧವಾಗಲಿ ಎಂದೇ ಬಯಸುತ್ತಿದ್ದಾರೆ. ಸತ್ತರೆ ಕೆಲವು ಭಯೋತ್ಪಾದಕರಲ್ವಾ ಎನ್ನುವ ಧೋರಣೆ ಅವರದ್ದು. ಒಂದು ವೇಳೆ ಭಾರತದ ದಾಳಿಯಲ್ಲಿ ನಾಗರಿಕರು ಸತ್ತರೆ ಅದನ್ನೇ ಹಿಡಿದು ಭಾರತದ ಇಮೇಜನ್ನು ಹಾಳು ಮಾಡಲು ಅವರು ತಂತ್ರ ಹೂಡಿ ಆಗಿರುತ್ತದೆ.

 

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!
  • Popular Posts

    • 1
      ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • 2
      ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!

  • Privacy Policy
  • Contact
© Tulunadu Infomedia.

Press enter/return to begin your search