• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಜೆನೆರಿಕ್ ಔಷಧಾಲಯ ತೆರೆಯಲು ಕೇಂದ್ರ, ರಾಜ್ಯ ಮುಂದಾಗಲಿ!

TNN Correspondent Posted On September 9, 2017


  • Share On Facebook
  • Tweet It

ಪಾಪದವರ ಎರಡು ಪ್ರಮುಖ ಟೆನ್ಷನ್ ಕಡಿಮೆಯಾಗಿದೆ. ಒಂದು ಮಂಡಿಚಿಪ್ಪು ಶಸ್ತ್ರಚಿಕಿತ್ಸೆ, ಇನ್ನೊಂದು ಹಾರ್ಟ್ ಆಪರೇಶನ್‌ನಲ್ಲಿ ಸ್ಟ್ರೆೆಂಥ್ಸ್‌ ಅಳವಡಿಸುವುದು. ಎರಡಕ್ಕೂ ಎಷ್ಟು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಹಿಂದಿನ ಸಂಚಿಕೆಯಲ್ಲಿ ವಿವರಿಸಿದ್ದೇನೆ. ಇನ್ನು ಆಗಬೇಕಾಗಿರುವುದು ಕಣ್ಣಿಿನ ಕ್ಯಾಟರೆಕ್ಟ್‌ ಶಸ್ತ್ರಚಿಕಿತ್ಸೆ ನಡೆಸುವಾಗ ಅಳವಡಿಸುವ ಇನ್ಟ್ರಾಕ್ಯೂಲರ್ ಲೆನ್‌ಸ್‌‌ನ ಬೆಲೆಯನ್ನು ಹೀಗೆ ಗಣನೀಯ ಪ್ರಮಾಣದಲ್ಲಿ ಇಳಿಸುವುದು. ಇನ್ನು ಹೃದಯದಲ್ಲಿ ವಾಲ್ (ಕವಾಟ)ವನ್ನು ಅಳವಡಿಸುವ ಶಸ್ತ್ರಚಿಕಿತ್ಸೆಯನ್ನು ಕೂಡ ಕಡಿಮೆ ದರದಲ್ಲಿ ಮಾಡುವ ಪ್ರಕ್ರಿಯೆ. ಈ ಎರಡರ ಬಗ್ಗೆೆನೂ ಕೇಂದ್ರ ಯೋಚಿಸುತ್ತಿದೆ. ಅದು ಕೂಡ ಆದಷ್ಟು ಬೇಗ ಜಾರಿಯಾಗಲಿದೆ. ನಾನು ನಿನ್ನೆೆ ಹೇಳಿದ ಎರಡು ಬೃಹತ್ ಶಸ್ತ್ರಚಿಕಿತ್ಸೆ ಮತ್ತು ಇವತ್ತು ಹೇಳಿರುವ ಎರಡು ಶಸ್ತ್ರಚಿಕಿತ್ಸೆೆಗೆ ಬೆಲೆ ಕಡಿಮೆಯಾಗುವುದರಿಂದ ಸಾಮಾನ್ಯ ಜನರ ಪಾಲಿಗೆ ಇದು ನಿಜಕ್ಕೂ ತುಂಬಾ ಸಮಾಧಾನದ ಸಂಗತಿಯಾಗಲಿದೆ.

ಇನ್ನು ನೀವು ಜೆನೆರಿಕ್ ಔಷಧಿಯ ಬಗ್ಗೆೆ ಕೇಳಿರಬಹುದು. ಬಡ ಮತ್ತು ಮಧ್ಯಮ ವರ್ಗದ ರೋಗಿಗಳ ಪಾಲಿಗೆ ಕೇಂದ್ರ ಸರಕಾರ ಜೆನೆರಿಕ್ ಔಷಧಗಳನ್ನು ಜಾರಿಗೆ ತರುವ ಮೂಲಕ ಅವರಿಗೆ ಔಷಧಿಗಳ ಹೊರೆ ಕಡಿಮೆ ಮಾಡಿದೆ.

ಅಷ್ಟಕ್ಕೂ ಜೆನೆರಿಕ್ ಔಷಧಿಗಳು ಎಂದರೇನು ಎಂದು ಗೊತ್ತಿಲ್ಲದವರಿಗೆ ಒಂದೇ ವಾಕ್ಯದಲ್ಲಿ ಹೇಳಬಯಸುತ್ತೇನೆ. ಬೇರೆ ಬ್ರಾಂಡ್ ಹೊಂದಿರುವ ಔಷಧಗಳ ಗುಣಮಟ್ಟದಷ್ಟೇ ಇರುವ, ಅಷ್ಟೇ ಪ್ರಭಾವಶಾಲಿಯಾಗಿರುವ, ಹೆಸರು, ಆಕಾರ, ಬಣ್ಣದಲ್ಲಿ ವ್ಯತ್ಯಾಸ ಇದ್ದರೂ ಕಾಯಿಲೆಗಳನ್ನು ಗುಣಪಡಿಸುವ ನಿಟ್ಟಿಿನಲ್ಲಿ ಬ್ರಾಂಡ್ ಔಷಧಿಗಳಿಗೆ ಒಂದು ತೂಕ ಹೆಚ್ಚೆೆ ಸ್ಪರ್ಧೆೆ ಕೊಡಬಲ್ಲ ಆದರೆ ಬ್ರಾಂಡ್ ನೇಮ್ ಇಲ್ಲದ, ಜಾಹೀರಾತು ಹೊಂದಿಲ್ಲದ ಔಷಧಿಗಳೇ ಜೆನರಿಕ್ ಔಷಧಿಗಳು ಎನ್ನುತ್ತಾರೆ. ಆದರೆ ನನ್ನದೊಂದು ಸಲಹೆಯನ್ನು ನಾನು ಕೇಂದ್ರ ಸರಕಾರಕ್ಕೆೆ ಕೊಡಲು ಇಷ್ಟಪಡುತ್ತೇನೆ.

ಅದೇನೆಂದರೆ ನೀವು ಜೆನೆರಿಕ್ ಔಷಧಿಗಳನ್ನು ಕೊಳ್ಳಲು ಬಡರೋಗಿಗಳಿಗೆ ಕರೆ ಕೊಡುತ್ತಿದ್ದಿರಿ ನಿಜ, ಆದರೆ ಜೆನರಿಕ್ ಔಷಧಿಗಳನ್ನು ಮಾರಲು ಅಂಗಡಿಗಳು ಸಾಕಷ್ಟು ಬೇಕು. ಆದರೆ ಅಂಗಡಿಗಳನ್ನು ತೆರೆಯಬೇಕಾದರೆ ಅದಕ್ಕೆೆ ಬಂಡವಾಳ ಬೇಕು. ಆದರೆ ಜೆನೆರಿಕ್ ಔಷಧಿಗಳಲ್ಲಿ ಲಾಭದ ಮಾರ್ಜಿನ್ ಕಡಿಮೆ. ಕಡಿಮೆ ಲಾಭಕ್ಕೆೆ ಮಾರಿ ಅಂಗಡಿ ಬಾಡಿಗೆ ಕೊಟ್ಟು ಪೂರೈಸುವುದು ಕಷ್ಟ. ಅದಕ್ಕಾಗಿ ಕೇಂದ್ರ ಸರಕಾರ ಜೆನೆರಿಕ್ ಔಷಧಾಲಯಗಳನ್ನು ಸರಕಾರಿ ಆಸ್ಪತ್ರೆೆಯ ಆವರಣದಲ್ಲಿ ತೆರೆಯಬೇಕು. ಪಾಪದವರು ಅಲ್ಲಿಗೆ ಬರುವುದರಿಂದ ಅಲ್ಲಿಯೇ ಔಷಧ ಅವರಿಗೆ ಸಿಗುತ್ತದೆ. ಬೇರೆ ಕಡೆ ಅಂತಹ ಮೆಡಿಕಲ್ ಗಳನ್ನು ತೆರೆದರೆ ಶ್ರೀಮಂತರು ಕೂಡ ಖರೀದಿಸಿ ನಂತರ ಅರ‌್ಹರಿಗೆ ಕೊರತೆಯಾಗಬಹುದು. ಉದಾಹರಣೆಗೆ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆೆಯಲ್ಲಿ ಹಾಲಿನ ಬೂತ್ ಒಂದಕ್ಕೆೆ ಅವಕಾಶ ಕೊಟ್ಟಂತೆ ಜೆನೆರಿಕ್ ಶಾಪ್ ತೆರೆಯಿರಿ. ಹಾಗೆ ವೆನ್ ಲಾಕ್ ಆಸ್ಪತ್ರೆೆಯಲ್ಲಿ ಕ್ಯಾಾಂಟಿನ್ ಗೆ ಜಾಗ ಮಾಡಿಕೊಟ್ಟಂತೆ ಅಲ್ಲಿಯೂ ಜೆನೆರಿಕ್ ಅಂಗಡಿಗಳು ಓಪನ್ ಆಗಲಿ.

ಅಷ್ಟಕ್ಕೂ ಒಂದು ವಿಷಯ ಹೇಳಬಯಸುತ್ತೇನೆ. ಯಾವಾಗಲೂ ಪ್ರತಿಭಟನೆಗಳು ಆಗಬೇಕಾಗಿರುವುದು ಇಂತಹ ವಿಷಯದಲ್ಲಿ. ಕಮ್ಯುನಿಸ್ಟರು ಕೆಲವೊಮ್ಮೆ ಅಲ್ಲಲ್ಲಿ ಬೀಡಿ ಕಾರ್ಮಿಕರ, ಕಟ್ಟಡ ಕಾರ್ಮಿಕರ ಪರ ಪ್ರತಿಭಟನೆ ಮಾಡುತ್ತಾರೆ. ಆದರೆ ಅವರಿಗೆ ಜನಬಲ ಕಡಿಮೆ ಇರುವುದರಿಂದ ಮತ್ತು ಯಾವತ್ತೂ ರಾಜ್ಯದಲ್ಲಿ ಅಧಿಕಾರಕ್ಕೆೆ ಬರಲು ಸಾಧ್ಯವೇ ಇಲ್ಲವಾಗಿರುವುದರಿಂದ ಅವರ ಬೇಡಿಕೆ ಅನುಷ್ಠಾನಕ್ಕೆೆ ಬರುವುದು ಕಡಿಮೆ. ಅದಕ್ಕಾಗಿ ಜನರ ಪರ ಹೋರಾಟದಲ್ಲಿ ಬಿಜೆಪಿ, ಕಾಂಗ್ರೆೆಸ್ ಮುಂದಕ್ಕೆೆ ಬರಬೇಕು. ಜೆನೆರಿಕ್ ಮಳಿಗೆಗಳನ್ನು ಹೆಚ್ಚೆೆಚ್ಚು ತೆರೆಯಲು ಕೇಂದ್ರದ ಮೇಲೆ ಕಾಂಗ್ರೆೆಸ್ ಒತ್ತಡ ತರಲಿ. ಹಾಗೆ ಅದಕ್ಕೆೆ ಜಾಗ, ಮೂಲಭೂತ ಸೌಲಭ್ಯ ಕೊಡಿಸಲು ಬಿಜೆಪಿ ರಾಜ್ಯದ ಮೇಲೆ ಒತ್ತಡ ತರಲಿ. ಒಟ್ಟಿನಲ್ಲಿ ಅಭಿವೃದ್ಧಿ ನಮ್ಮ ಕರಾವಳಿಗೆ, ರಾಜ್ಯಕ್ಕೆೆ ಸಿಗಲಿ. ಹೇಗೂ ಮಂಗಳೂರು ಚಲೋ ಮುಗಿದಿದೆ. ನವ ಕರ್ನಾಟಕದ ಚಿಂತನೆ ನಡೆಯಲಿ ಎಂದು ಹೇಳುತ್ತಾ ವಾರವನ್ನು ಮುಗಿಸುತ್ತಿಿದ್ದೇನೆ. ಮುಂದಿನ ವಾರ ಹೊಸ ವಿಚಾರ, ಹೊಸ ಕಲ್ಪನೆಗಳೊಂದಿಗೆ ಸಿಗೋಣ!

-ಹನುಮಂತ ಕಾಮತ್, ಸಾಮಾಜಿಕ ಹೋರಾಟಗಾರರು

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search