• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ವೈದ್ಯರ ಪ್ರಮಾದಕ್ಕೆ ಮೆದುಳು ರೋಗದಿಂದ ಬಳಲುತ್ತಿರುವ ದಿವ್ಯಾಳಿಗೆ ನೆರವು ಬೇಕಿದೆ!

Satish Acharya Posted On September 21, 2017


  • Share On Facebook
  • Tweet It

ಭಗವಂತ ನೀನು ಹೀಗೆಕೆ ಮಾಡಿದೆ ಎಂದು ಒಂದು ಕುಟುಂಬ ಕೇಳುತ್ತದೆ. ಯಾಕೆಂದರೆ ಹಾಡುತ್ತಾ ಕುಣಿಯುತ್ತಾ ಬಾಲ್ಯ ಕಳೆಯ ಬೇಕಿದ್ದ ಬಾಲಕಿಯ ಮೆದುಳು ,ಕೈ ಕಾಲು ಸ್ವಾಧೀನ ಕಿತ್ತುಕೊಂಡು ಹಾಸಿಗೆ ಹಿಡಿಯುವಂತೆ ಮಾಡಿದ ಹೃದಯ ವಿದ್ರಾವಕ ಘಟನೆ ನೋಡಿದರೆ ಎಂತಹವರ ಕರುಳು ಚುರುಕ್ ಎನ್ನದಿರದು.

ಎಲ್ಲಾ ಮಕ್ಕಳಂತೆ ಆಟವಾಡುತ್ತಾ , ನಲಿಯುತ್ತಾ ಶಾಲೆಯಲ್ಲಿ ಇರ ಬೇಕಾದ ದಿವ್ಯಾ (15)ಇಂದು ದೇಹ ಸ್ವಾಧೀನ ಕಳೆದುಕೊಂಡು ಬಡ ತಂದೆ ತಾಯಿಯ ಆಶ್ರಯದಲ್ಲಿ ದಿನ ಕಳೆಯ ಬೇಕಾಗಿದೆ.ಸುರತ್ಕಲ್ ಸಮೀಪದ ಚೊಕ್ಕಬೆಟ್ಟುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಕೂಲಿ ಕಾರ್ಮಿಕ ಹರೀಶ್ ಪೂಜಾರಿ ದಂಪತಿಗಳ ಪ್ರಥಮ ಪುತ್ರಿ ದಿವ್ಯಾ ಹುಟ್ಟು ಸಂದರ್ಭ ಆಸ್ಪತ್ರೆಯಲ್ಲಿ ಆದ ಪ್ರಮಾದಕ್ಕೆ ದಿವ್ಯಾಳ ತಂದೆ ತಾಯಿ ಮಾತ್ರವಲ್ಲ, ಸ್ವತಃ ಅಂಗವೈಕಲ್ಯಕ್ಕೆ ಒಳಗಾಗಿ ಹೂವಿನಂತಹ ಬಾಳನ್ನು ದಿವ್ಯಾ ಕಳೆದುಕೊಂಡಿದ್ದಾಳೆ.

ಒಂದೆಡೆ ನರದ ಸಮಸ್ಯೆಯಿಂದ ಮೆದುಳು ಸ್ವಾಧೀನ ಕಳೆದುಕೊಂಡಿದ್ದರೆ ,ಇನ್ನೊಂದೆಡೆ ಕೈಕಾಲು ಸ್ವಾಧೀನವಿಲ್ಲದೆ ಇನ್ನೊಬ್ಬರ ನೆರವಿಲ್ಲದೆ ಓಡಾಡಲೂ ಆಗದ ಸ್ಥಿತಿಯಲ್ಲಿದ್ದಾಳೆ. ಮುಖದಲ್ಲಿ ಸದಾ ನಿಷ್ಕಲ್ಮಶ ನಗು. ತಂದೆ ತಾಯಿ , ಅಕ್ಕ ಎಂದು ಹೇಳುವುದನ್ನು ಬಿಟ್ಟರೆ ಬೇರೆ ಮಾತು ಬಾರದು. ಕೇವಲ ನಗುವಿನಲ್ಲಿಯೇ ಸಂತಸ ವ್ಯಕ್ತ ಪಡಿಸುತ್ತಾಳೆ.

ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಡುತ್ತಿರುವುದರಿಂದ ಆಸ್ಪತ್ರೆಗೆ ನಿತ್ಯ ಹೋಗುವುದು ತಪ್ಪದು. ಒಂದು ಸಲ ಆಸ್ಪತ್ರೆಯ ಖರ್ಚು ಇಪ್ಪತ್ತು ಮೂವತ್ತು ಸಾವಿರ ರೂಪಾಯಿಗಳು. ಹರೀಶ್ ಅವರು ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದು ಇಬ್ಬರು ಪುತ್ರಿಯರನ್ನು ಸಲಹುವ ಜವಾಬ್ದಾರಿಯಿದೆ. ಸಾವಿರ ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಚಿಕಿತ್ಸೆ ನೀಡುವ ಸ್ಥಿತಿಯಲ್ಲಿಲ್ಲ. ಈಗಾಗಲೇ ಲಕ್ಷಾಂತರ ಕೈ ಸಾಲ ಮಾಡಿ ಮಗಳಿಗೆ ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ದಾನಿಗಳ , ಸಂಘ ಸಂಸ್ಥೆಗಳ ನೆರವು ಅಗತ್ಯವಿದೆ. ಸಹಾಯ ಮಾಡಲಿಚ್ಚಿಸುವವರು ದಿವ್ಯ ಎಂ.ಜಿ.ತುಳಸಿ ,Kulur Branch ಕಾರ್ಪೋರೇಶನ್ ಬ್ಯಾಂಕ್ ಖಾತೆ ಸಂಖ್ಯೆ 520101000001755 ಗೆ ನೀಡ ಬಹುದು. IFSC CODE: CORP0003140

  • Share On Facebook
  • Tweet It


- Advertisement -
Helping hand to Divya


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Satish Acharya May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Satish Acharya May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search