• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ದೇವಾಲಯ ತೆರವು, ಅದೇ ಮಸೀದಿಯಾಗಿದ್ದರೆ ಸಿದ್ದರಾಮಯ್ಯನವರು ಸುಮ್ಮನಿರುತ್ತಿದ್ದರೆ?

TNN Correspondent Posted On September 26, 2017


  • Share On Facebook
  • Tweet It

ಗೋವಾದ ಬೈನಾ ಬೀಚ್ ನಲ್ಲಿ ಮತ್ತೆ ಜೆಸಿಬಿ ಸದ್ದು ಕೇಳಿಸುತ್ತಿದೆ. ಕನ್ನಡಿಗರು ಅನಾಥರಾಗಿದ್ದಾರೆ. ಕನ್ನಡಿಗರು ಬಿಡಿ, ದೇವರಿರುವ ದೇವಾಲಯಗಳಿಗೇ ರಕ್ಷಣೆ ಇಲ್ಲದಂತಾಗಿದೆ.

ಇಷ್ಟಾದರೂ ಯಾರೊಬ್ಬರೂ ಬಾಯಿಬಿಡುತ್ತಿಲ್ಲ. ರಾಜ್ಯದ ಸಿದ್ದರಾಮಯ್ಯನವರೂ ಒಂದೂ ಮಾತನಾಡುತ್ತಿಲ್ಲ. ಕನ್ನಡಿಗರ, ಹಿಂದೂಗಳ, ದೇವಾಲಯಗಳ ರಕ್ಷಣೆ ಬಗ್ಗೆ ಗೋವಾ ಮುಖ್ಯಮಂತ್ರಿ ಜತೆ ಮಾತನಾಡುತ್ತಿಲ್ಲ.

ಏಕೆ…

ಏಕೆಂದರೆ ಅವರೆಲ್ಲರೂ ಹಿಂದೂಗಳು. ದೇವಾಲಯ ಹಿಂದೂಗಳವು, ದೇವರು ಹಿಂದೂ. ಅದೇ ಮಸೀದಿಯಾಗಿದ್ದರೆ, ಅಲ್ಲಿರುವರೆಲ್ಲರೂ ಮುಸ್ಲಿಮರು, ಅಲ್ಪಸಂಖ್ಯಾತರು ಆಗಿದ್ದರೆ ಇದೇ ಸಿದ್ದರಾಮಯ್ಯನವರು ಸುಮ್ಮನಾಗಿರುತ್ತಿದ್ದರೆ?

ಪರ ರಾಜ್ಯ ಬಿಡಿ ರಾಜ್ಯದಲ್ಲೇ, ಹಿಂದೂಗಳ, ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಆದರೂ ಸಿದ್ದರಾಮಯ್ಯನವರು ಯಾವುದೇ ಕ್ರಮ ಕೈಗೊಂಡಿಲ್ಲ.

ಆದರೆ ಇದೇ ಮುಖ್ಯಮಂತ್ರಿಯವರು ಹರಿಯಾಣದಲ್ಲಿ ಜುನೈದ್ ಖಾನ್ ಎಂಬ ಮುಸ್ಲಿಂ ಯುವಕನ ಹತ್ಯೆಯಾದರೆ ಕೇಂದ್ರ ಸರಕಾರದತ್ತ ಬೆರಳು ಮಾಡುತ್ತಾರೆ. ಮುಸ್ಲಿಮರ ಹತ್ಯೆಯಾದರೆ ಕರಳು ಚುರುಕ್ ಎನ್ನುತ್ತದೆ.

ಇದೇ ಇಬ್ಬಂದಿತನವೇ ಮುಖ್ಯಮಂತ್ರಿಯವರ ಬಂಡವಾಳವಾಗಿದೆ. ರಾಜ್ಯದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದರೂ ಅದಕ್ಕೆ ಸಿದ್ಧಾಂತವೇ ಕಾರಣ ಎಂದು ಷರಾ ಬರೆಯುತ್ತಾರೆ.

ರಾಜ್ಯದ ನೇತೃತ್ವ ವಹಿಸಿಕೊಂಡವರು, ಜಾತ್ಯತೀತ, ಧರ್ಮಾತೀತರಾಗಿ ನಡೆದುಕೊಳ್ಳಬೇಕು. ರಾಜ್ಯದ ಜನರ ರಕ್ಷಣೆ ಮಾಡಬೇಕು. ಆದರೆ ನಮ್ಮ ಮುಖ್ಯಮಂತ್ರಿ ಮಹೋದಯರು ಮಾತ್ರ, ಜಾತಿ, ಧರ್ಮದ ಆಧಾರದ ಮೇಲೆ ಯೋಜನೆ ಜಾರಿಗೊಳಿಸಲು ಮುಂದಾಗುತ್ತಾರೆ. ಇದಕ್ಕೆ ಶಾದಿ ಭಾಗ್ಯದಂತಹ ಯೋಜನೆಗಳೇ ಸಾಕ್ಷಿ.

ಗೋವಾದಲ್ಲಿ ಕನ್ನಡಗಿರ, ಹಿಂದೂ ದೇವಾಲಯಗಳ ಧ್ವಂಸಗೊಳಿಸಲಾಗುತ್ತಿದೆ. ಮುಖ್ಯಮಂತ್ರಿಯವರೇ ನಿಮಗೆ ಅಂತಃಕರಣ ಎಂಬುದಿದ್ದರೆ ಮೊದಲು ಅವರನ್ನು ರಕ್ಷಿಸಿ.

 

-ನವೀನ್ ಪೆಲ್ಲತಡ್ಕ, ಪತ್ರಿಕೋದ್ಯಮ ವಿದ್ಯಾರ್ಥಿ

 

 

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search