• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ವಿಶ್ವಸಂಸ್ಥೆಯಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಮುಖಭಂಗ: ಭಾರತದ ಟೊಮ್ಯಾಟೋ ಬೇಡ ಎಂದ ಪಾಕಿ

TNN Correspondent Posted On September 27, 2017
0


0
Shares
  • Share On Facebook
  • Tweet It

ಈ ಪಾಕಿಸ್ತಾನವೇ ಹೀಗೆ, ನೇರಾ ನೇರ ಯುದ್ಧ ಮಾಡುವುದಿಲ್ಲ. ಹುರುಳಿರುವ ವಾದ ಮಾಡುವುದಿಲ್ಲ. ಬೆಟ್ಟಕ್ಕೆ ನಾಯಿ ಬೊಗಳಿ ಸತ್ತಿತು ಎಂಬ ಮಾತಿನಂತೆ ಭಾರತದ ವಿರುದ್ಧ ಆಗಾಗ ಗುಟುರು ಹಾಕುತ್ತದೆ. ಗುರ್ ಎನ್ನುತ್ತದೆ. ನಾವೇನು ಸುಮ್ಮನೆ ಇರುತ್ತೇವೆಯೇ? ಪಾಕಿಸ್ತಾನದ ತಲೆಗೊಂದು ಮೊಟಕುತ್ತೇವೆ. ಆಗ ಪಾಕಿಸ್ತಾನ ತೋಯ್ದ ಕೋಳಿಯಂತಾಗುತ್ತದೆ. ಅದಾದ ಬಳಿಕ ಮತ್ತೆ ಕೈಲಾಗದ ನರಿಯಂತೆ ಮೆಲ್ಲಗೆ ಹಿಂಬಾಗಿಲಿನಿಂದ ಏನು ಕುತಂತ್ರ ಮಾಡಬೇಕು ಎಂದು ಹೊಂಚು ಹಾಕುತ್ತದೆ.

ಈ ಅದೇ ಪಾಕಿಸ್ತಾನ ಎಂಬ ಕಳ್ಳಬೆಕ್ಕು ಮತ್ತೊಂದು ಹೊಂಚು ಹಾಕಿದೆ.

ಹೌದು, ವಿಶ್ವಸಂಸ್ಥೆಯಲ್ಲಿ ಭಾರತದಿಂದ ಭಾರಿ ಮುಖಭಂಕ್ಕೀಡಾಗಿರುವ ಪಾಕಿಸ್ತಾನ ಈಗ ಭಾರತದಿಂದ ಟೊಮ್ಯಾಟೊ ಆಮದು ಮಾಡಿಕೊಳ್ಳುವುದಿಲ್ಲ ಎಂಬ ಮೊಂಡು ವಾದ ಮುಂದಿಟ್ಟಿದೆ. ಈ ಕುರಿತು ಆಹಾರ ಸಚಿವ ಸಿಕಂದರ್ ಹಯಾತ್ ಬೋಸನ್ ತಿಳಿಸಿದ್ದಾರೆ.

ಆದರೆ ಇಂಥ ಮೊಂಡು ಹಾಗೂ ಅಹಂಕಾರದ ನಿರ್ಧಾರದಿಂದ ಪಾಕಿಸ್ತಾನಕ್ಕೇ ನಷ್ಟ. ಏಕೆಂದರೆ ಸದ್ಯ ಪಾಕಿಸ್ತಾನದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಟೊಮ್ಯಾಟೊ, ಈರುಳ್ಳಿ ಬೆಲೆ 300 ರೂಪಾಯಿಗೆ ಏರಿಕೆಯಾಗಿತ್ತು. ಇದನ್ನು ಸರಿದೂಗಿಸಲು ಪಾಕಿಸ್ತಾನ ಭಾರತದಿಂದ ಟೊಮ್ಯಾಟೊ, ಈರುಳ್ಳಿ ಆಮದು ಮಾಡಿಕೊಂಡು, 150-160 ರೂಪಾಯಿಗೆ ಕೆ.ಜಿ.ಯಂತೆ ಮಾರಾಟ ಮಾಡುತ್ತಿತ್ತು.

ಆದರೆ ಈಗ ಯಾವುದೋ ಕಾರಣಕ್ಕೆ ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದರೆ ಇದರಿಂದ ಪಾಕಿಸ್ತಾನಕ್ಕೇ ನಷ್ಟ ಎಂಬದನ್ನು ನೆರೆರಾಷ್ಟ್ರ ಮರೆತಂತಿದೆ. ಆದಾಗ್ಯೂ, ಈ ಆಮದು ಸ್ಥಗಿತದಿಂದ ಭಾರತಕ್ಕೇನು ನಷ್ಟವಿಲ್ಲದಿದ್ದರೂ, ದ್ವಿಪಕ್ಷೀಯ ಸಂಬಂಧ ಬಿಗಡಾಯಿಸುವ ಸಾಧ್ಯತೆಯಿದೆ.

 

0
Shares
  • Share On Facebook
  • Tweet It




Trending Now
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
Tulunadu News April 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
  • Popular Posts

    • 1
      ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!

  • Privacy Policy
  • Contact
© Tulunadu Infomedia.

Press enter/return to begin your search