• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಗೋವಾ, ರಾಜ್ ಕೋಟ್ ಟೂರ್ ನಿಂದ ಪಾಲಿಕೆಗೆ ಆದ ಪ್ರಯೋಜನ ಸೊನ್ನೆ, ಈಗ ಮುಂಬೈ, ಪುಣೆ ಬೇಕಾ!

Hanumantha Kamath Posted On September 28, 2017


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು ಹಿಂದೆ ಗೋವಾಕ್ಕೆ ಹೋಗಿದ್ದರು. ಅಲ್ಲಿ ಡ್ರೈನೇಜ್ ಸಿಸ್ಟಮ್ ನೋಡಿ ಬರೋಣ, ಅಲ್ಲಿನ ಯುಜಿಡಿ ವ್ಯವಸ್ಥೆ ನಮ್ಮಲ್ಲೂ ಅಳವಡಿಸೋಣ ಎಂದು ಹೋಗಿದ್ದರು. ಎಷ್ಟು ಬಿಯರ್ ಬಾಟಲಿ ಖಾಲಿ ಮಾಡಿ ಬಂದ್ರೋ ಗೊತ್ತಿಲ್ಲ, ಬಂದ ಮೇಲೆ ಡ್ರೈನೇಜ್ ನ ಸುದ್ದಿಯೇ ಇರಲಿಲ್ಲ. ಅದರ ನಂತರ ಯಾರೋ ಗುಜರಾತಿನ ರಾಜಕೋಟ್ ನೋಡಲು ಚೆನ್ನಾಗಿರಬೇಕು ಎಂದು ಹೇಳಿದ್ರು ಅಂತ ಅನಿಸುತ್ತೆ. ಪಾಲಿಕೆಯ ಪಟಾಲಂ ರಾಜಕೋಟ್ ಗೆ ಹೋಯಿತು. ಅಲ್ಲಿ ಶಾಪಿಂಗ್ ಎಲ್ಲಾ ಮಾಡಿದ ನಂತರ ಬಂದ್ರು. ರಾಜಕೋಟಿನಲ್ಲಿ ಏನು ನೋಡಿದ್ರು, ಅದರಿಂದ ಪಾಲಿಕೆಗೆ ಏನು ಲಾಭವಾಯಿತು, ಯಾರೂ ಒಂದು ಸಲವೂ ಮಾತನಾಡಿಲ್ಲ. ಹೀಗೆ ಬೇರೆ ಬೇರೆ ಟೂರಿಸಂ ಸ್ಥಳಗಳಿಗೆ ಹೋಗಿ ತಿರುಗಾಡಿ ಬರುವುದು, ನಂತರ ಆ ಬಗ್ಗೆ ತಮ್ಮ ಗೆಳೆಯರ ಬಳಗದಲ್ಲಿ ಕೊಚ್ಚಿಕೊಳ್ಳುವುದು ಬಿಟ್ಟರೆ ಇವರ ಯಾವ ಟೂರಿನಿಂದಲೂ ಪಾಲಿಕೆಗೆ ಒಂದು ರೂಪಾಯಿ ಲಾಭ ಇಲ್ಲ.
ಇದರ ಬದಲಿಗೆ ನಾವು ವರ್ಷಕ್ಕೊಮ್ಮೆ ಟೂರ್ ಹೋಗ್ತೀವಿ, ಅದಕ್ಕೆ ಜನರ ತೆರಿಗೆಯ ಹಣ ಬಳಸ್ತಿವಿ, ಯಾರಿಗಾದರೂ ಎದುರು ಮಾತನಾಡುವ ಧೈರ್ಯ ಇದ್ರೆ ಪಾಲಿಕೆಗೆ ಬನ್ನಿ ಎಂದು ಒಂದು ಪತ್ರಿಕಾ ಹೇಳಿಕೆ ಮೇಯರ್ ಕಡೆಯಿಂದ ಬಂದ್ರೆ ಮುಗಿಯಿತು. ಅದರ ನಂತರ ಇವರು ಮುಂಬೈಗೆ ಬೇಕಾದರೆ ಹೋಗಲಿ, ದುಬೈಗೆ ಬೇಕಾದರೆ ಹೋಗಲಿ.
ಇವರು ಈ ಬಾರಿ ಮುಂಬೈಗೆ ಹೋಗಿ ಸ್ವಚ್ಚತೆಯ ಬಗ್ಗೆ ಅಧ್ಯಯನ ಮಾಡಿ ಬರುತ್ತೇವೆ ಎಂದು ಹೊರಟಿರುವ ಬಗ್ಗೆ ನನ್ನ ಆಕ್ಷೇಪ ಏಕೆಂದರೆ ಇವರು ಕನಿಷ್ಟ ಒಂದು ಸಿಗರೇಟು ಪ್ಯಾಕಿನಷ್ಟು ದೊಡ್ಡ ಕಾಗದದ ಮೇಲೆಯಾದರೂ ತಾವು ಅಲ್ಲಿ ಏನು ನೋಡಿ ಬಂದೆ ಎಂದು ಬರೆಯುವಷ್ಟು ವಿಷಯ ಅಧ್ಯಯನ ಮಾಡಿದರೂ ಪಾಲಿಕೆ ಇವರನ್ನು ಕಳುಹಿಸಿದಕ್ಕೆ ಧನ್ಯವಾಗುತ್ತಿತ್ತು. ಆದರೆ ಇವರು ಬರೆಯುವುದು ಬಿಡಿ, ಇವರ ಬಾಯಿಗೆ ಬಡಿದರೂ ತಾವು ಅಧ್ಯಯನ ಮಾಡಿದ ಒಂದೇ ಒಂದು ಶಬ್ದ ಹೊರಗೆ ಬರುವುದಿಲ್ಲ. ಅಷ್ಟಿರುವಾಗ ಇವರನ್ನು ಕಳುಹಿಸುವುದು ಸರಿ ಎನಿಸುತ್ತಾ? ಇದು ಕೇವಲ ಈ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದೆ, ಹೋಗುವುದು ವೇಸ್ಟ್ ಎಂದಲ್ಲ, ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೂ ಮಾಡುವುದು ಹೀಗೆನೆ? ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಅಧ್ಯಯನ ಪ್ರವಾಸ ಆಗಿದೆ. ಏನು ಲಾಭ ಆಗಿದೆ?
ಒಂದು ಅಧ್ಯಯನ ಪ್ರವಾಸಕ್ಕೆಂದು ಹೋಗುವ ಸ್ಥಾಯಿ ಸಮಿತಿ ಸದಸ್ಯರು ಮತ್ತು ಅವರೊಂದಿಗೆ ಎರಡ್ಮೂರು ಅಧಿಕಾರಿಗಳು ಏನು ಮಾಡಬೇಕು? ಬಂದ ನಂತರ ನೀಟಾಗಿ ಕುಳಿತು ತಾವು ನೋಡಿದ, ಅಭ್ಯಸಿಸಿದ ವಿಷಯಗಳ ಬಗ್ಗೆ ನೋಟ್ ಮಾಡಬೇಕು. ಅದರ ನಂತರ ಅದನ್ನು ಒಂದು ವರದಿ ಮಾಡಬೇಕು. ಅದನ್ನು ನಂತರ ಮೇಯರ್ ಅವರಿಗೋ, ಕಮೀಷನರ್ ಅವರಿಗೋ ಸಲ್ಲಿಸಬೇಕು. ಅದರ ಬಳಿಕ ಅದು ಪರಿಷತ್ ಸಭೆಯಲ್ಲಿ ಚರ್ಚೆಗೆ ಇಡಬೇಕು. ಬಳಿಕ ಮೇಯರ್ ಸುದ್ದಿಗೋಷ್ಟಿ ಕರೆದು ನಮ್ಮ ಹೆಮ್ಮೆಯ ಸದಸ್ಯರು ಇಂತಿಂತಹ ವಿಷಯದ ಮೇಲೆ ಅಧ್ಯಯನ ಮಾಡಲು ಇಂತಹ ಸ್ಥಳಕ್ಕೆ ಪ್ರವಾಸ ಹೋಗಿದ್ದರು. ಅವರು ಅಧ್ಯಯನ ಮಾಡಿ ಸಿದ್ಧಪಡಿಸಿದ ವರದಿಯ ಮೇಲೆ ಚರ್ಚೆ ನಡೆದಿದೆ. ಅದನ್ನು ಅನುಷ್ಟಾನಕ್ಕೆ ತರಲು ಇಂತಿಂತಹ ಶೈಲಿಯಲ್ಲಿ ಕಾಮಗಾರಿ ಮಾಡಲಾಗುವುದು ಎಂದು ಹೇಳಿದರೆ ಆಗ ಇವರ ಅಧ್ಯಯನ ಪ್ರವಾಸ ಒಪ್ಪಬಹುದು. ಒಂದು ವೇಳೆ ಮೇಯರ್ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಇಷ್ಟು ಸದಸ್ಯರು ಹೋಗಿದ್ದರು, ಇಷ್ಟು ಖರ್ಚು ಆಗಿದೆ ಎನ್ನುವ ಲೆಕ್ಕವನ್ನು ವಿವರವಾಗಿ ಕೊಟ್ಟಲ್ಲಿ ಅದಕ್ಕಿಂತ ಬೇರೆ ಉತ್ತಮ ಹೆಜ್ಜೆ ಇಲ್ಲ. ಆದರೆ ಅಂತಹುದು ಇಲ್ಲಿಯ ತನಕ ಆಗಲೇ ಇಲ್ಲ. ಈಗ ಅಧ್ಯಯನ ಪ್ರವಾಸ ಹೋಗುವುದು, ನಂತರ ಬಂದು ಕಾಲು ಚಾಚಿ ಮಲಗುವುದು ಇಷ್ಟೇ ನಡೆಯುತ್ತಿದೆ. ಸದಸ್ಯರೊಂದಿಗೆ ಕೆಲವು ಅಧಿಕಾರಿಗಳು ಕೂಡ ಹೋಗುವುದರಿಂದ ಅಧಿಕಾರಿವಲಯ ಕೂಡ ಮೌನವಾಗಿರುತ್ತದೆ.
ಅಷ್ಟಕ್ಕೂ ಈ ಪ್ರವಾಸಕ್ಕೆ ಹೋಗಲು ಆತುರ ತೋರುವವರಿಗೆ ನಾನು ಇನ್ನೊಂದು ವಿಷಯ ಇವತ್ತು ಕೇಳುತ್ತೆನೆ. ಅದೇನೆಂದರೆ ಈ ಮ್ಯಾನ್ ಹೋಲ್ ಇದೆಯಲ್ಲ, ಅದರಲ್ಲಿ ಹಿಂದಿನ ಹಾಗೆ ಸ್ವಚ್ಚತೆಯ ಕಾರ್ಮಿಕರನ್ನು ಇಳಿಸಿ ಅಮಾನುಷವಾಗಿ ನಡೆಸುವಂತಹ ಕೆಲಸ ಈಗ ನಿಂತಿರುವುದು ನಮ್ಮೆಲ್ಲರಿಗೂ ಗೊತ್ತಿದೆ. ಆದರೆ ಅದರ ಬದಲು desilting machine ಇದೆ. ಅಂತಹುದು ನಮ್ಮ ಪಾಲಿಕೆಯಲ್ಲಿ ನಾಲ್ಕು ಇದೆ. ಅದನ್ನು ಟೆಂಡರ್ ಕರೆದು ಗುತ್ತಿಗೆ ಕೊಡುವ ಕ್ರಮ ಇದೆ. ಆ ಗುತ್ತಿಗೆ ಪಡೆದವರು desilting machine ಬಳಸಿ ಮ್ಯಾನ್ ಹೋಲ್ ಕ್ಲೀನ್ ಮಾಡಬೇಕು. ಆಗ ಏನಾಗುತ್ತದೆ ಎಂದರೆ ಮಳೆಗಾಲದಲ್ಲಿ ಜೋರಾಗಿ ಮಳೆ ಬರುವಾಗ ಈ ಮ್ಯಾನ್ ಹೋಲ್ ಗಳು ತುಂಬಿ ಅದರಿಂದ ಗಲೀಜು ಹೊರಗೆ ಬರುವುದು ನಿಲ್ಲುತ್ತದೆ. ಆದರೆ ಪಾಲಿಕೆಯಲ್ಲಿರುವ desilting machine ಗಳ ಬಗ್ಗೆ ಒಂದು ಲಾಗ್ ಬುಕ್ ಇಲ್ಲ. ಅವು ಎಲ್ಲಿ, ಏನು ಕೆಲಸ ಮಾಡುತ್ತಿವೆ ಎನ್ನುವ ಬಗ್ಗೆ ಯಾವ ಸದಸ್ಯನಿಗೆ ತಾನೆ ಗೊತ್ತಿದೆ. ಮೊದಲು ಅದನ್ನು ಶಿಸ್ತುಬದ್ಧವಾಗಿ ಮಾಡಿ, ಆಗ ಅಲ್ಲಲ್ಲಿ ಮ್ಯಾನ್ ಹೋಲ್ ತುಂಬಿ ರಸ್ತೆಯ ಮೇಲೆ ತ್ಯಾಜ್ಯ ಹರಿಯುವುದು ನಿಲ್ಲುತ್ತದೆ. ಅದು ಬಿಟ್ಟು ಮುಂಬೈಗೆ ಹೋಗಿ ನೋಡಿ ಬರುತ್ತೇವೆ ಎಂದು ಹಟ ಮಾಡಿದರೆ ಹೋಗುವವರ ಹೆಸರು, ಪಕ್ಷವನ್ನು ಸಾಮಾಜಿಕ ತಾಣದಲ್ಲಿ ಹಾಕಿ ಬಂದ ನಂತರ ವರದಿ ಕೇಳುತ್ತೇನೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search