• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ

ದೇಶಕ್ಕಾಗಿ 30 ವರ್ಷ ಸೇವೆ ಸಲ್ಲಿಸಿದ ಯೋಧನಿಗೆ ನಾವು ಕೊಡುವ ಗೌರವ ಇದೇನಾ?

TNN Correspondent Posted On October 2, 2017
0


0
Shares
  • Share On Facebook
  • Tweet It

2003ರಲ್ಲಿ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಯೋಧರಿಗೆ ನೀಡಿದ ಪ್ರಮಾಣ ಪತ್ರ.

ಪ್ರಾಯಶಃ, ನಮ್ಮ ದೇಶದಲ್ಲಿ ಮಾತ್ರ ಹೀಗೆ ಆಗಲು ಸಾಧ್ಯವೇನೋ?

ಅತ್ತ ಬಾಂಗ್ಲಾದೇಶದಿಂದ ಬರುವ ಅಕ್ರಮ ವಲಸಿಗರಿಗೆ ಮಮತಾ ಬ್ಯಾನರ್ಜಿ ಸರಕಾರ ಚುನಾವಣೆ ಗುರುತಿನ ಚೀಟಿ, ಆಧಾರ್ ಕಾರ್ಡ್ ನೀಡಿ ಸಲಹುತ್ತದೆ. ಇತ್ತ ಅಸಾದುದ್ದೀನ್ ಓವೈಸಿಯಂಥ ರಾಜಕಾರಣಿಗಳು ದೇಶಕ್ಕೇ ತಲೆನೋವಾಗುವ ಸಾಧ್ಯತೆಯಿರುವ ರೋಹಿಂಗ್ಯಾ ಮುಸ್ಲಿಮರನ್ನು ಸಹೋದರರಂತೆ ಕಾಣಬೇಕು, ಸಾಕಬೇಕು ಎಂದು ಹೇಳುತ್ತಾರೆ…

ಅಸ್ಸಾಂನಲ್ಲಿ ಮಾತ್ರ ದೇಶಕ್ಕಾಗಿ 30 ವರ್ಷ ದುಡಿದ ನಿವೃತ್ತ ಸೈನಿಕನಿಗೆ ದೇಶದ ನಾಗರಿಕತ್ವ ಸಾಬೀತುಪಡಿಸಿ ಎಂದು ವಿದೇಶಿ ನ್ಯಾಯಾಧೀಕರಣ ನೋಟಿಸ್ ನೀಡಿದೆ…

ಹೌದು, ಮೊಹಮ್ಮದ್ ಹಜ್ಮಲ್ ಹಾಕ್ ಎಂಬ ಯುವಕ 1982ರಲ್ಲಿ ಸೈನ್ಯ ಸೇರಿದ್ದ. ದೇಶಕ್ಕಾಗಿ ಹಲವು ಮಾದರಿಯಲ್ಲಿ ಸೇವೆ ಸಲ್ಲಿಸಿರುವ ಯೋಧ 2008ರಲ್ಲಿ ನಿವೃತ್ತಿ ಹೊಂದಿದ್ದರು. ಅದಕ್ಕೂ ಮೊದಲು, 2003ರಲ್ಲಿ ಸೇನೆಯ ಶ್ರೇಯಾಂಕವಾದ ನಾಯಿಬ್ ಸುಬೇದಾರ್ ಆಗಿ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೇ ನೇಮಕ ಮಾಡಿದ್ದರು.

ಆದರೆ, ಈಗ ಅಸ್ಸಾಂ ಜಿಲ್ಲಾ ನ್ಯಾಯಾಲಯದ ಅಧೀನದ ವಿದೇಶಿ ನ್ಯಾಯಾಧೀಕರಣ ಮೊಹಮ್ಮದ್ ಅಜ್ಮಲ್ ಅವರಿಗೆ ದೇಶದ ನಾಗರಿಕತ್ವ ಸಾಬೀತುಪಡಿಸಲು ನೋಟಿಸ್ ನೀಡಿದೆ. ಅಲ್ಲದೆ ಅಸ್ಸಾಂ ಪೊಲೀಸರು ಇವರ ತಂದೆ-ತಾಯಿ 1971 ರಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿದ್ದಾರೆ. ಹಾಗಾಗಿ 1968ರಲ್ಲಿ ಜನಿಸಿದ ಮೊಹಮ್ಮದ್ ಸಹ ಅಕ್ರಮ ವಲಸಿಗರೇ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, 2008ರಿಂದಲೇ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಅಲ್ಲ ಸ್ವಾಮಿ, ಮೊಹಮ್ಮದ್ ಹಜ್ಮಲ್ ಹಾಕ್ ದೇಶದ ನಾಗರಿಕನೇ ಅಲ್ಲ ಎಂದ ಮೇಲೆ ಅವರು ಸೈನ್ಯವನ್ನು ಹೇಗೆ ಸೇರಿದರು? ದೇಶದವರೇ ಅಲ್ಲ ಎಂದ ಮೇಲೆ ದೇಶಕ್ಕಾಗಿ ಹೇಗೆ 30 ವರ್ಷ ಸೇವೆ ಸಲ್ಲಿಸಿದರು? ದಾಖಲೆಯೇ ಇಲ್ಲದೆ ಸೈನ್ಯ ಸೇರಿಸಿಕೊಳ್ಳುವುದಾದರೆ ನಾಳೆ ಪಾಕಿಸ್ತಾನಿಯರೂ ಭಾರತೀಯ ಸೇನೆ ಸೇರಬಹುದೇ? ಇದು ನಾನ್ ಸೆನ್ಸ್ ಅಲ್ಲವೇ? ಅಷ್ಟಕ್ಕೂ ರಾಷ್ಟ್ರಪತಿಯವರೇ ಅವರಿಗೆ ಮೇಲ್ದರ್ಜೆಯ ಹುದ್ದೆ ನೀಡುತ್ತಿದ್ದರು? ದೇಶಕ್ಕಾಗಿ 30 ವರ್ಷ ದುಡಿದ ಯೋಧರಿಗೆ ನಾವು ಕೊಡುವ ಗೌರವ ಇದೇನಾ ಹೇಳಿ?

ಈ ಹಿಂದೆ ಯುಪಿಎ ಸರಕಾರವಿದ್ದಾಗ ಚೆಸ್ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರಿಗೇ ನಿನ್ನ ದೇಶ ಯಾವುದು ಎಂದು ಕೇಳಲಾಗಿತ್ತು. ಈಗ ಯೋಧರ ಸರದಿ ಬಂದಿದೆ. ಒಟ್ಟಿನಲ್ಲಿ ಈ ಪ್ರಕರಣಗಳು ದೇಶಕ್ಕಾಗಿ ದುಡಿದವರನ್ನೇ ಪ್ರಶ್ನಿಸಿ, ದೇಶಕ್ಕೆ ಅಪಾಯವಾಗಿರುವವರನ್ನು ರಕ್ಷಿಸಿ ಎಂದು ಹೇಳುವ ಕುತ್ಸಿತ ಮನಸ್ಸುಗಳಿಗೆ ನಿದರ್ಶನ ಹಾಗೂ ದೇಶದ ದುರಂತವೇ ಸರಿ.

 

-ಅವಿನಾಶ್ ಗೌಡ, ಮೈಸೂರು

 

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • 2
      ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • 3
      ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • 4
      ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • 5
      ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!

  • Privacy Policy
  • Contact
© Tulunadu Infomedia.

Press enter/return to begin your search