• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

48 ವರ್ಷಗಳಿಂದ ದಟ್ಟಾರಣ್ಯ ವಾಸಿಯಾಗಿದ್ದ ಕೆಂಚಪ್ಪ ಗೌಡ ನಿಧನ!

Tulunadu News Posted On October 30, 2017


  • Share On Facebook
  • Tweet It

ನಾಡಿಗೆ ಬರಲೊಪ್ಪದೇ ಕಾಡಿನ ವಾಸಿಯಾಗಿದ್ದ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ನಿವಾಸಿ ಕೆಂಚಪ್ಪ ಗೌಡ ಆಕ್ಟೋಬರ್ 27 ರಂದು ನಿಧನರಾದರು.

ಮರ್ಕಂಜ ಗ್ರಾಮದ ಕುದನೆಕೋಡಿ ದೊಡ್ಡಣ್ಣ ಗೌಡ ಮತ್ತು ದುಗ್ಗಮ್ಮ ದಂಪತಿಯ ಪುತ್ರ ಕೆಂಚಪ್ಪ, ಕೃಷಿ ಕಾಯಕದಲ್ಲಿ ತೊಡಗಿದ್ದರು. ಕೆಂಚಪ್ಪ ಅವರು ಏಕಾಏಕಿ ತನ್ನ 23 ನೇ ವಯಸ್ಸಿನಲ್ಲಿ ತಮ್ಮ ಮನೆಯಿಂದ ಹೊರಟು ದಟ್ಟವಾದ ರಕ್ಷಿತಾರಣ್ಯದತ್ತ ತೆರಳಿ 48 ವರ್ಷಗಳ ಕಾಲ ಅರಣ್ಯ ವಾಸಿಯಾಗಿದ್ದರು.   ಕಾಡಿನಲ್ಲಿಯೇ ಗರಿಯ ಸೂರು ಮಾಡಿಕೊಂಡು, ಜೊಪಡಿ ಸುತ್ತಲೂ ಕಲ್ಲಿನ ಛಾವಣಿ ಮಾಡಿಕೊಂಡು , ಬಿದಿರಿನಿಂದ ಕೂಡಿದ ಮಂಚ, ಅಡಿಕೆಯ ಹಾಳೆ ಅವರ ಹಾಸಿಗೆಯಾಗಿತ್ತು.  ವೀಪರಿತ ಮಳೆ ಬಂದರೆ ಮರದ ಪೊಟರೆಯೇ ಅವರ ಆಶ್ರಯ ತಾಣವಾಗಿತ್ತು. ದಟ್ಡ ಕಾಡಿನಲ್ಲಿದ್ದರು ದಿನಕ್ಕೊಂದು ಬಾರಿ ಅರಣ್ಯದಿಂದ ಸೊಪ್ಪು ಕಟ್ಟಿಗೆಗಳನ್ನು ಸಹೋದರನ ಮನೆಗೆ ಒಪ್ಪಿಸಿ ಊಟ ಮಾಡಿ ತೆರಳುತ್ತಿದ್ದರು. ಉಳಿದ ಸಮಯದಲ್ಲಿ ಗೆಡ್ಡೆ ಗೆಣಸುಗಳೇ ಆಹಾರವಾಗಿದ್ದವು. ವಯಸ್ಸಿಗೆ ಸಂಬಂಧಿಸಿದ ಅನಾರೋಗ್ಯದ ಕಾರಣದಿಂದಾಗಿ ಅವರು ಒಂದು ವರ್ಷ ಹಿಂದೆ ತನ್ನ ಸಹೋದರನ ಮನೆಗೆ ಆಗಮಿಸಿದ್ದರು.

ಕಾಡು ಪ್ರಾಣಿಗಳು ಅವರ ಮೇಲೆ ದಾಳಿಮಾಡಲು ಬಂದಾಗ, ಕೆಂಚೆಪ್ಪ ಮರದ ಮೇಲೆ ಹತ್ತಿ, ಜೋರಾಗಿ ಶಬ್ದ ಮಾಡುವ ಮೂಲಕ ಅವುಗಳನ್ನು ಹೆದರಿಸಿ ಓಡಿಸುತಿದ್ದರು. 48 ವರ್ಷಗಳಲ್ಲಿ ಅವರು ಕಾಡಿನಲ್ಲಿ ವಾಸಿಸುತ್ತಿದ್ದರು, ಕೇವಲ ಎರಡು ಬಾರಿ ಆನೆಯಿಂದ ದಾಳಿಯಗಿತ್ತು, ಒಳಗೊಂಡಂತೆ ಕಾಡು ಪ್ರಾಣಿಗಳ ಆಕ್ರಮಣಗಳಿಂದ ತನ್ನನ್ನು ರಕ್ಷಿಸಿಕೊಂಡಿದ್ದರು.

ಬಂಧುಗಳು ಮತ್ತು ಜಿಲ್ಲಾದಿಕಾರಿಗಳು ಅವರನ್ನು ಕಾಡಿನಿಂದ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ್ದರೂ , ವಿಫಲವಾಗಿದ್ದು ಕಾಡೇ ಅವರ ಸರ್ವಸ್ವವಾಗಿತ್ತು.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search