• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮುಸ್ಲಿಂ ಆಟೋ ಡ್ರೈವರ್ ಮಗನಾದ ಆತ ಟೀಂ ಇಂಡಿಯಾ ಸೇರಿದ ಹಾಗೂ ರಾಷ್ಟ್ರಗೀತೆ ಮೊಳಗುತ್ತಲೇ ಕಣ್ಣೀರಿತ್ತ

TNN Correspondent Posted On November 5, 2017
0


0
Shares
  • Share On Facebook
  • Tweet It

 ನಾವಿಲ್ಲಿ ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ  ಮೊಳಗಿದರೆ ಎದ್ದು ನಿಲ್ಲಬೇಕೋ, ಬೇಡವೋ ಎಂದು ಚಿಂತಿಸುತ್ತಿದ್ದರೆ, ನಾನು ನಿಲ್ಲಲ್ಲ, ಏಕೆ ನಿಲ್ಲಬೇಕು ಎಂದು ಕೆಲವರು ಬೊಬ್ಬೆ ಹಾಕುತ್ತಿದ್ದರೆ, ರಾಷ್ಟ್ರಗೀತೆ ಹಾಡಿಸೋಕೆ ಅದೇನು ಶಾಲೆಯೇ ಎಂದು ಎಲುಬಿಲ್ಲದ ನಾಲಗೆ ಹರಿಬಿಡುತ್ತಿದ್ದರೆ, ಅಲ್ಲೊಬ್ಬ 23ರ ಯುವಕ ಟೀಂ ಇಂಡಿಯಾ ಕ್ರಿಕೆಟ್ ತಂಡ ಸೇರಿದ್ದ.

ನಿನ್ನೆ ರಾಜ್ ಕೋಟ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಅಂತಾರಾಷ್ಟ್ರೀಯ ಟ್ವೆಂಟಿ ಟ್ವೆಂಟಿ ಪಂದ್ಯದ ಆರಂಭಕ್ಕೂ ಮುನ್ನ ಕೋಚ್ ರವಿಶಾಸ್ತ್ರಿ ಅವನಿಗೆ ಟೀಂ ಇಂಡಿಯಾದ ಕ್ಯಾಪ್ ಕೊಟ್ಟರು.

ನಂತರ, ಜನಗಣಮನ ಮೊಳಗುತ್ತಲೇ ಆತ ಭಾವನೆ ತಡೆದುಕೊಳ್ಳಲಾಗಲಿಲ್ಲ. ಕಣ್ಣಲ್ಲಿ ನೀರು ಜಿನುಗುತ್ತಿದ್ದವು.

ಆತನ ಹೆಸರು ಮೊಹಮ್ಮದ್ ಸಿರಾಜ್.

ಬಡ ಮುಸ್ಲಿಮ್ ಆಟೋ ಡ್ರೈವರನ ಮಗನಾದ ಸಿರಾಜ್ 2015ರಲ್ಲಿ ಪ್ರಥಮ ದರ್ಜೆ ಕ್ರಿಕೆಟಿಗೆ ಪದಾರ್ಪಣೆ ಮಾಡಿ, 2017ರಲ್ಲಿ ಐಪಿಎಲ್ ಗೂ ಕಾಲಿರಿಸಿದರು. ಆಗ ಬಂದ 2.4 ಕೋಟಿ ರೂ. ಕಂಡು ಖುಷಿಯಾದ ಈತ ಮೊದಲು ಅಪ್ಪ ಆಟೋ ಓಡಿಸುವುದನ್ನು ನಿಲ್ಲಿಸಿದ.

ಶನಿವಾರ ಆರಂಭವಾದ ಪಂದ್ಯದಲ್ಲಿ ಸಿರಾಜ್ ರಾಷ್ಟ್ರಗೀತೆ ಮೊಳಗುವಾಗ ಇದಕ್ಕಾಗಿಯೇ ಇಷ್ಟು ದಿನ ಶ್ರಮಿಸಿದೆ ಎಂಬ ಕಾರಣಕ್ಕಾಗಿಯೋ, ಕೊನೆಗೂ ಅಂತಾರಾಷ್ಟ್ರೀಯ ಪಂದ್ಯವೊಂದರ ಆರಂಭಕ್ಕೂ ಮೊದಲು ದೇಶಭಕ್ತಿ ಗೀತೆ ಕೇಳುವಂತಾಯಿತಲ್ಲ ಎಂಬ ಸಾರ್ಥಕ ಭಾವದಿಂದಲೋ, ದೇಶಕ್ಕಾಗಿ ಆಡುವ ಅವಕಾಶ ನನ್ನದಾಯಿತಲ್ಲ ಎಂಬ ಮನೋಭಾವನೆಯಿಂದಲೋ ಆತ ಸಿರಾಜ್ ಕಣ್ಣೀರಿಟ್ಟು ದೇಶದ ಮನಗೆದ್ದಿದ್ದಾನೆ.

ಈಗ ಸಿರಾಜ್ ರಾಷ್ಟ್ರಗೀತೆಗೆ ಕಣ್ಣೀರಟ್ಟ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಸಹ ವ್ಯಕ್ತವಾಗಿವೆ. ಸಿರಾಜ್ ದೇಶಭಕ್ತಿ ಹೀಗೆಯೇ ಇರಲಿ, ಆಶಿಶ್ ನೆಹ್ರಾ ಸ್ಥಾನವನ್ನು ಸಮರ್ಪಕವಾಗಿ ತುಂಬಿ ದೇಶಕ್ಕೆ ಕೀರ್ತಿ ತರಲಿ. ಹಾಗೆಯೇ ಗೆದ್ದಲು ಹಿಡಿದ ಮನಸ್ಸುಗಳಿಗೆ ಸಿರಾಜ್ ದೇಶಭಕ್ತಿ ಮಾದರಿಯಾಗಲಿ.

0
Shares
  • Share On Facebook
  • Tweet It




Trending Now
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
Tulunadu News July 12, 2025
ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
Tulunadu News July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
  • Popular Posts

    • 1
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 2
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 3
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 4
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 5
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!

  • Privacy Policy
  • Contact
© Tulunadu Infomedia.

Press enter/return to begin your search