• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಗೋರ್ಖಾ ಸೈನಿಕರ ಸೇವೆಗೆ ವರ್ಷ ಇನ್ನೂರು, ನಮ್ಮ ಸಲಾಂ ಇರಲಿ ಅವರಿಗೆ ನೂರಾರು…

-ವಿಶಾಲ್ ಗೌಡ, ಕುಶಾಲನಗರ Posted On November 9, 2017


  • Share On Facebook
  • Tweet It

“ಯಾವುದೇ ಒಬ್ಬ ವ್ಯಕ್ತಿ ನಾನು ಸಾವಿಗೆ ಅಂಜುವುದಿಲ್ಲ ಎಂದ ಅಂದಾದರೆ, ಆತ ಗೋರ್ಖಾನೇ ಇರಬೇಕು, ಗೋರ್ಖಾನೇ ಆಗಿರುತ್ತಾನೆ”

ದೇಶದ ಮೊದಲ ಫೀಲ್ಡ್ ಮಾರ್ಷಲ್ ಬಹದ್ದೂರ್ ಮಾಣೆಕ್ ಷಾ ಗೋರ್ಖಾಗಳ ಶೌರ್ಯದ ಬಗ್ಗೆ, ರಕ್ಷಣೆ ಬಗ್ಗೆ, ಕೆಚ್ಚೆದೆಯ ಬಗ್ಗೆ, ಸಾವಿಗೂ ಅಂಜದ ಅವರ ದಾರ್ಷ್ಯದ ಬಗ್ಗೆ ಒಂದೇ ಸಾಲಿನಲ್ಲಿ ಹೇಳಿದ್ದರು. ವಾಸ್ತವದಲ್ಲಿ ಮಾಣೆಕ್ ಷಾ ಮೊದಲು ಗೋರ್ಖಾ ರೈಫಲ್ಸ್ ಅಧಿಕಾರಿ ಆಗಿದ್ದರು. ಗೋರ್ಖಾಗಳ ಶೌರ್ಯ ಅವರಿಗೆ ಗೊತ್ತು.

ಅಲ್ಲಿ ಚಳಿ ಇರಲಿ, ಮಳೆ ಬೀಳಲಿ, ಬಿಸಿಲು ಕೊರೆಯಲಿ. ಅದು ಕಾಶ್ಮೀರ ಗಡಿಯೇ ಆಗಿರಲಿ, ಪಾಕಿಸ್ತಾನಿಯರೇ ನುಗ್ಗಿ ಬರಲಿ, ಚೀನಾದವರೇ ಗುಟುರು ಹಾಕಲಿ. ಭಾರತೀಯ ಸೈನ್ಯದ ಜತೆಗೆ ಗೋರ್ಖಾ ಸೈನಿಕರು ಇದ್ದಾರೆ ಎಂದರೆ ಮುಗೀತು. ಇಲ್ಲಿ, ನಾವು-ನೀವು ಬೆಚ್ಚಗೆ ಮಲಗಬಹುದು ಎಂಬ ನಿಶ್ಚಿಂತೆ ಮನೋಭಾವ ಮೂಡುವಂತೆ ಮಾಡುತ್ತಾರೆ ಅವರು. “ಜೈ ಮಹಾ ಕಾಳಿ, ಆಯೋ ಗೋರ್ಖಾಲಿ” ಎಂದು ತಮ್ಮ ಘೋಷ ಕೂಗಿದರೆಂದರೆ ಮುಗೀತು. ಶತ್ರುವಿನ ಎದೆಯಲ್ಲಿ ನಡುಕ ಹುಟ್ಟಿಸದೆ ಬಿಡುವುದಿಲ್ಲ.

ಹಾಗಂತ ಇದು ಅತಿಶಯೋಕ್ತಿ ಅಲ್ಲ…

5ನೇ ಬೆಟಾಲಿಯನ್ನಿನ ಕ್ಯಾಪ್ಟನ್ ಎಂ.ಬಿ.ರಾಯ್

ಸಾಲ್ ಬಹದ್ದೂರ್

ಎರಡನೆ ಲೆಫ್ಟಿನೆಂಟ್ ಪುನೀತ್ ನಾಥ್ ದತ್

ಇವರೆಲ್ಲರೂ ಸೈನ್ಯದ ಅಶೋಕ ಚಕ್ರ ಪ್ರಶಸ್ತಿ ಪಡೆದರೆ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಒಂದು ಹೆಜ್ಜೆ ಮುಂದೆ ಹೋಗಿ ಪರಮ ವೀರ ಚಕ್ರ ಪ್ರಶಸ್ತಿಗೆ ಪಡೆದ. ಇದುವರೆಗೆ ಗೋರ್ಖಾ ಸೈನಿಕರಿಗೆ 3 ಪರಮ ವೀರ ಚಕ್ರ, 33 ಮಹಾವೀರ ಚಕ್ರ, 84 ವೀರ ಚಕ್ರ ಪ್ರಶಸ್ತಿ ನೀಡಲಾಗಿದೆ ಎಂದರೆ ಅವರ ಶೌರ್ಯ ಹೇಗೆ ಎಂಬುದು ಗೊತ್ತಾಗುತ್ತದೆ.

ಇವರೆಲ್ಲರೂ ಗೋರ್ಖಾಗಳೇ, ಗೋರ್ಖಾ ರೆಜಿಮೆಂಟಿನಲ್ಲಿ ಇದ್ದವರೇ ಎಂಬುದನ್ನು ಅರಿತರೆ, ಪ್ರಸ್ತುತ ಕಾಶ್ಮೀರದ ಗಡಿಯಲ್ಲಿ ಉಗ್ರರ ವಿರುದ್ಧದ ಸಂಹಾರದಲ್ಲಿ ಇವರು ತೊಡಗಿರುವ ಶೈಲಿ, ತಂತ್ರ, ದಾಳಿ ನೋಡಿದರೆ ಅವರ ಶೌರ್ಯದ ಬಗ್ಗೆ ಅರ್ಥವಾಗುತ್ತದೆ.

ಅಷ್ಟಕ್ಕೂ ಈ ಗೋರ್ಖಾಗಳನ್ನೇಕೆ ಈಗ ನೆನಪಿಸಿಕೊಳ್ಳಬೇಕು?

ಅದಕ್ಕೂ ಕಾರಣಗಳಿವೆ. ಗೋರ್ಖಾ ರೈಫಲ್ಸ್ ಎಂಬ ಪಡೆ ತಯಾರಾಗಿ, ಗೋರ್ಖಾಗಳು ದೇಶ ಕಾಯುವಿಕೆಯಲ್ಲಿ ತೊಡಗಿ ಪ್ರಸಕ್ತ ವರ್ಷಕ್ಕೆ ಬರೋಬ್ಬರಿ ಇನ್ನೂರು ವರ್ಷಗಳಾದವು. ಪ್ರಸ್ತುತ 9ನೇ ರೆಜಿಮೆಂಟ್ ದೇಶದ ಭದ್ರತೆಯಲ್ಲಿ ತೊಡಗಿದೆ. ಹಾಗಾಗಿಯೇ ಸೇನಾ ದಳದ ಮುಖ್ಯಸ್ಥ ಬಿಪಿನ್ ರಾವತ್ ನೇತೃತ್ವದಲ್ಲಿ ವಾರಣಾಸಿಯ ಗೋರ್ಖಾ ತರಬೇತಿ ಕೇಂದ್ರದಲ್ಲಿ ಗುರುವಾರ ಮತ್ತು ಶುಕ್ರವಾರ ಕಾರ್ಯಕ್ರಮ ಆಯೋಜಿಸಲಾಗಿದೆ.

ಮೂಲತಃ ನೇಪಾಳಿಗರಾದ ಇವರಿಗೆ 1817ರಲ್ಲಿ ಬ್ರಿಟಿಷರು ದೇಶ ಕಾಯಲು ನೇಮಿಸಿ, ನಸೆರಿ ಬೆಟಾಲಿಯನ್ಸ್ ಎಂದು ಹೆಸರಿಟ್ಟು, ಮೊದಲನೇ ಬೆಟಾಲಿಯನ್ ನೇಮಿಸಿದ್ದರು. ಅಲ್ಲಿಂದ 1947ರ ಬಳಿಕ ಇದು ಗೋರ್ಖಾ ರೆಜಿಮೆಂಟ್ ಆಯಿತು. ಪ್ರಸ್ತುತ 11ನೇ ಗೋರ್ಖಾ ರೆಜಿಮೆಂಟ್ ದೇಶ ಸೇವೆಯಲ್ಲಿ ತೊಡಗಿದೆ.

ಈ ಗೋರ್ಖಾ ಪಡೆ ಸೈನಿಕರು ಇದುವರೆಗೆ ಚೀನಾ, ಪಾಕಿಸ್ತಾನದ ನಡುವೆ ನಡೆದ ಎಲ್ಲ ಯುದ್ಧಗಳಲ್ಲಿ ಹೋರಾಡಿದ್ದಾರೆ, ಚಳಿ, ಮಳೆ ಎನ್ನದೇ ಗಡಿಯಲ್ಲಿ ನಮಗಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ನಿದ್ದೆಯ ಪಾಲನ್ನೂ ನಮಗೆ ನೀಡಿ ದೇಶ ಸೇವೆಗೆ ಬದ್ಧರಾಗಿದ್ದಾರೆ. ಅದಕ್ಕಾಗಿಯೇ ಭಾರತದ ಸೇನೆಯಲ್ಲಿ 12 ಲಕ್ಷ ಗೋರ್ಖಾಗಳಿದ್ದಾರೆ. 20 ಸಾವಿರ ಗೋರ್ಖಾಗಳು ದೇಶದ ಅಸ್ಸಾಂ ರೈಫಲ್ಸ್ ನಂತ ಅರೆ ಮಿಲಿಟರಿ ಪಡೆಯಲಿದ್ದಾರೆ. ಈ ಗೋರ್ಖಾ ಸೈನಿಕರಿಗೆ ಸರ್ಕಾರ ವಾರ್ಷಿಕ 1,200 ಕೋಟಿ ರುಪಾಯಿ ಸಂಬಳವಾಗಿ ನೀಡುತ್ತದೆ.

ಇನ್ನೂ ಒಂದು ಅಚ್ಚರಿ ಎಂದರೆ, ಪ್ರಸ್ತುತ ಸೇನೆಯ ಮುಖ್ಯಸ್ಥರಾಗಿರುವ ಜನರಲ್ ಬಿಪಿನ್ ರಾವತ್ ಸಹ ಗೋರ್ಖಾ ರೈಫಲ್ಸ್ ನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಹಿಂದಿನ ಅವಧಿಯ ದಲ್ಬೀರ್ ಸಿಂಗ್ ಸಹ ಗೋರ್ಖಾ ರೈಫಲ್ಸ್ ನಲ್ಲಿ ಕೆಲಸ ಮಾಡಿದವರೇ!

ಅಷ್ಟಕ್ಕೂ ಗೋರ್ಖಾಗಳ ಧ್ಯೇಯವೇ, “ಹೇಡಿಯಾಗಿ ಬದುಕುವುದಕ್ಕಿಂತ ಹೋರಾಡಿ ಸಾಯುವುದೇ ಮೇಲು”

ಇಂಥ ಶೂರ, ದೇಶಕ್ಕಾಗಿ ಪ್ರಾಣವನ್ನೇ ಒತ್ತೆ ಇಟ್ಟು ಹೋರಾಡುವ ಗೋರ್ಖಾ ಸೇವೆಗೆ 200 ವರ್ಷಗಳಾಗಿರುವ ಈ ಶುಭ ಗಳಿಗೆಯಲ್ಲಿ ನಾವು ಸಲಾಮ್ ಹೇಳದಿದ್ದರೆ ಹೇಗೆ ಹೇಳಿ? ಸಲಾಂ ಗೋರ್ಖಾ.

 

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
-ವಿಶಾಲ್ ಗೌಡ, ಕುಶಾಲನಗರ May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
-ವಿಶಾಲ್ ಗೌಡ, ಕುಶಾಲನಗರ May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search