• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರವಿ ಬೆಳಗೆರೆ ಅವರಿಗೆ ಸಿಗರೇಟ್ ಪೂರೈಸಿದ್ದು ಪೊಲೀಸರ ವೈಫಲ್ಯವೋ, ಗೃಹ ಸಚಿವರ ದೌರ್ಬಲ್ಯವೋ?

ವಿಶಾಲ್ ಗೌಡ ಕುಶಾಲನಗರ Posted On December 12, 2017


  • Share On Facebook
  • Tweet It

ನೀವೊಬ್ಬ ಸಿಗರೇಟ್ ಪ್ರೇಮಿಯಾಗಿದ್ದರೆ, ರಸ್ತೆ ಬದಿಯ ಗೂಡಂಗಡಿ ಬಳಿ ನಿಂತು ಧಂ ಎಳೆಯುವವರಾಗಿದ್ದರೆ ಗೊತ್ತಿರುತ್ತದೆ. ಪೊಲೀಸರು ಹೇಗೆ ಬಂದು ದಂಡ ವಿಧಿಸುತ್ತಾರೆ ಎಂಬುದು ಅನುಭವಕ್ಕೂ ಬಂದಿರುತ್ತದೆ. ಅಲ್ಲದೆ, ಇತ್ತೀಚೆಗೆ ಬಿಡಿ ಬಿಡಿಯಾಗಿ ಸಿಗರೇಟು ಮಾರುವ ಹಾಗಿಲ್ಲ. ಮಾರಿದರೆ ಪ್ಯಾಕ್ ಮಾರಾಟ ಮಾಡಬೇಕು ಎಂದು ನಿಯಮ ಜಾರಿಗೆ ತರಲಾಗಿದೆ. ರಸ್ತೆ ಬದಿ ನಿಂತು ಸಿಗರೇಟು ಸೇದುವುದು ಹಾಗೂ ಬಿಡಿಯಾಗಿ ಮಾರುವುದು ನಿಷೇಧಗೊಳಿಸುವುದು ಸರಿಯಾಗಿಯೇ ಇದೆ.

ಆದರೆ ಸಹೋದ್ಯೋಗಿ ಪತ್ರಕರ್ತರನ ಕೊಲೆಗೆ ಸುಪಾರಿ ಕೊಟ್ಟು ನ್ಯಾಯಾಂಗ ಬಂಧನದಲ್ಲಿರುವ ರವಿ ಬೆಳಗೆರೆ ಅವರ ವಿಷಯದಲ್ಲಿ ಆಗಿದ್ದೇನು?

ಮೂರ್ನಾಲ್ಕು ದಿನಗಳಿಂದ ಟಿವಿ ನೋಡಿರಬೇಕು. ರವಿ ಬೆಳಗೆರೆ ಅವರ ಬಂಧನವಾಗುತ್ತಲೇ, ಸಿಸಿಬಿ ಪೊಲೀಸರ ಜೀಪಿನಲ್ಲಿಯೇ ಬೆಳಗೆರೆ ಅವರು ಸಿಗರೇಟ್ ಸೇದಿದ ಚಿತ್ರಗಳು ಮಾಧ್ಯಮದಲ್ಲಿ ಪ್ರಸಾರವಾದವು. ಬಳಿಕ ವಿಚಾರಣೆಗೆಂದು ಜೀಪಿನಲ್ಲಿ ಕರೆದುಕೊಂಡು ಹೋಗುವಾಗಲೂ ಪೊಲೀಸರ ಎದುರೇ ಹೊಗೆ ಬಿಟ್ಟರು. ಒಮ್ಮೆಯಂತೂ, ಸಿಗರೇಟು ನೀಡದಿದ್ದರೆ ಜೀಪಿನ ಬಾಗಿಲು ಹಾಕಲು ಬಿಡುವುದಿಲ್ಲ ಎಂದು ಹುಚ್ಚಾಟ ಮೆರೆದರು. ಕೊನೆಗೆ ಪೊಲೀಸರು ಸಿಗರೇಟ್ ಕೊಟ್ಟು ಸಮಾಧಾನಪಡಿಸಿದರು ಪೊಲೀಸರು!

ಹೇಳಿ, ಒಬ್ಬ ಸಾಮಾನ್ಯ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಿದರೆ ದಂಡ ಹಾಕುವ, ಮೂರು ಕಾಸಿನ ಲಾಭಕ್ಕಾಗಿ ಬಿಡಿಯಾಗಿ ಸಿಗರೇಟ್ ಮಾರುವ ಗೂಡಂಗಡಿ ಮಾಲೀಕರಿಗೆ ದಂಡ ವಿಧಿಸುವ ಪೊಲೀಸರೇ ಆರೋಪಿಯೊಬ್ಬರಿಗೆ ಸಿಗರೇಟ್ ನೀಡುವುದು ಎಷ್ಟು ಸರಿ? ಇದಾವ ಸೀಮೆಯ ಕಾನೂನು ಪಾಲನೆ? ಇದಾವ ರೀತಿಯ ನ್ಯಾಯ? ಅಷ್ಟಕ್ಕೂ ಇದು ಪೊಲೀಸರ ವೈಫಲ್ಯವೇ? ಅಷ್ಟೇ ಅಲ್ಲ, ರವಿ ಬೆಳಗೆರೆ ಅವರು ಕಸ್ಟಡಿಯಲ್ಲಿರುವಾಗಲೇ ಸುನೀಲ್ ಹೆಗ್ಗರವಳ್ಳಿ ಅವರಿಗೆ ಕರೆ ಮಾತನಾಡುತ್ತಾರೆ ಎಂದರೆ ಎಷ್ಟರಮಟ್ಟಿಗೆ ಬೆಳಗೆರೆ ಅವರಿಗೆ ಪೊಲೀಸರು ಸಹಕರಿಸಿರಬಹುದು?

ಇನ್ನು ಸುನೀಲ್ ಹೆಗ್ಗರವಳ್ಳಿಗೆ ಕರೆ ಮಾಡಿದ್ದು ಹಾಗೂ ಸಿಗರೇಟ್ ನೀಡಿರುವ ಕುರಿತು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಕೇಳಿದರೆ, ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹಾರಿಕೆಯ ಉತ್ತರ ನೀಡುತ್ತಾರೆ.

ಮಾನ್ಯ ಗೃಹ ಸಚಿವರೇ ಹಾಗೂ ಪೊಲೀಸರೇ, ನಿಮಗೆ ಕೋಟ್ಪಾ ಕಾಯಿದೆಯ ಬಗ್ಗೆ ಗೊತ್ತೇ ಇಲ್ಲವೇ? ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳ ಸೇವನೆ ತಡೆ ಕಾಯಿದೆ (ಕೋಟ್ಪಾ-2003) ಪ್ರಕಾರ ಯಾವುದೇ ವ್ಯಕ್ತಿ ಸಾರ್ವಜನಿಕವಾಗಿ ಧೂಮಪಾನ ಸೇರಿ ತಂಬಾಕು ಉತ್ಪನ್ನ ಸೇವಿಸುವಂತಿಲ್ಲ. ಹಾಗೊಂದು ವೇಳೆ ಸೇವಿಸಿದರೆ ದಂಡ ವಿಧಿಸಲಾಗುತ್ತದೆ. ಅದನ್ನು ಪೂರೈಸಿದವರಿಗೂ ದಂಡ ಹಾಕಬೇಕು ಎಂಬುದು ನಿಯಮ.

ಹೀಗಿರುವಾಗ, ಕೊಲೆಗೆ ಸುಪಾರಿ ನೀಡಿದ ಆರೋಪಿಯೊಬ್ಬ ಪೊಲೀಸರ ಸಮ್ಮುಖದಲ್ಲೇ, ಪೊಲೀಸರ ಜೀಪಿನಲ್ಲಿಯೇ ಸಿಗರೇಟು ಸೇದುತ್ತಾರೆ. ಪೊಲೀಸರಿಗೇ ಧಮ್ಕಿ ಹಾಕುತ್ತಾರೆ ಎಂದರೆ ಪೊಲೀಸರು ಹಾಗೂ ರಾಜ್ಯ ಸರ್ಕಾರ ಎಂಥ ಕಾನೂನು ಪಾಲನೆ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ.

ಟಿವಿಯಲ್ಲಿ ಪ್ರಸಾರವಾದ ವರದಿಯಂತೆ ಸಿಗರೇಟು ಸೇದುವುದು ನನ್ನ ಹಕ್ಕು ಎಂದು ರವಿ ಬೆಳಗೆರೆ ವಾದಿಸಿದ್ದಾರೆ. ಯಾವುದೇ ಒಬ್ಬ ಆರೋಪಿಗೆ ಅನ್ನ, ನೀರು ಒದಗಿಸುವುದು ಪೊಲೀಸರ ಕರ್ತವ್ಯ. ಆದರೆ ಆರೋಪಿ ಬಯಸಿದ ಎಂದು ಸಿಗರೇಟು ನೀಡುವುದು ಯಾವ ಕಾನೂನಿನಲ್ಲಿದೆ ಎಂದು ತಿಳಿಸುವಿರಾ? ನಾಳೆ ರವಿ ಬೆಳಗೆರೆಯವರು ಸೆಕ್ಸ್ ನನ್ನ ಹಕ್ಕು ಎಂದರೆ, ಅದಕ್ಕೂ ವ್ಯವಸ್ಥೆ ಮಾಡುವಿರಾ? ಸಾರ್ವಜನಿಕರಿಗೊಂದು ನ್ಯಾಯ, ಪ್ರಭಾವಿಗಳಿಗೊಂದು ನ್ಯಾಯವೇ ಗೃಹಮಂತ್ರಿಯವರೇ? ಪೊಲೀಸರೂ ಇದಕ್ಕೆ ಉತ್ತರಿಸಲಿ.

 

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
ವಿಶಾಲ್ ಗೌಡ ಕುಶಾಲನಗರ May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
ವಿಶಾಲ್ ಗೌಡ ಕುಶಾಲನಗರ May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search