• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕುಲಪತಿ ಭೈರಪ್ಪನವರಿಗೆ “ಪ್ರಿಯ”ರಾದವರಿಗೆ 50 ಸಾವಿರ ಸಂಬಳ ಸಿಗುತ್ತದೆ!

Vikram Posted On December 29, 2017
0


0
Shares
  • Share On Facebook
  • Tweet It

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಅಕ್ರಮ ,ಅವ್ಯವಹಾರ, ಭ್ರಷ್ಟಾಚಾರಗಳೆಲ್ಲ ಮಾಧ್ಯಮಗಳಲ್ಲಿ ಬರಬಹುದು ಎನ್ನುವ ದೂರದೃಷ್ಟಿ ಕುಲಪತಿ ಭೈರಪ್ಪನವರಿಗೆ ಇತ್ತು. ಒಂದು ವೇಳೆ ಹಾಗೆ ಆದರೆ ತನ್ನ ನೈಜಮುಖ ಬಯಲಿಗೆ ಬರುತ್ತದೆ ಎಂದು ಮೊದಲೇ ಊಹಿಸಿದ್ದ ಭೈರಪ್ಪನವರು ವಿವಿಯಲ್ಲಿ ಪಿಆರ್ ಒ ಎನ್ನುವ ಹುದ್ದೆ ಸೃಷ್ಟಿಸಿ ಅದಕ್ಕೆ ತಮಗೆ “ಪ್ರಿಯ”ವಾಗಿರುವ ಯುವತಿಯನ್ನು ಕೆಲಸಕ್ಕೆ ತೆಗೆದುಕೊಂಡರು. ಆ ಹುದ್ದೆಯಲ್ಲಿರುವವರ ಮುಖ್ಯ ಕೆಲಸ ಎಂದರೆ ಎಲ್ಲಿಂದಲಾದರೂ ಬೈರಪ್ಪನವರ ವಿರುದ್ಧ ವಿರೋಧ ಕಂಡು ಬಂದರೆ ಅಂತವರನ್ನು ಸಂತೃಪ್ತಿಪಡಿಸಿ ಅದಕ್ಕೆ ತೇಪೆ ಹಚ್ಚುವುದು. ಯಾರನ್ಯಾರನ್ನೋ ಆ ಹುದ್ದೆಯಲ್ಲಿ ಕೂರಿಸಿದರೆ ಅವರು ಕೆಲಸ ಸರಿ ಮಾಡದಿದ್ದರೆ ಎಂದುಕೊಂಡ ಭೈರಪ್ಪನವರು ಅದಕ್ಕಾಗಿ ಮಾಧ್ಯಮಗಳಲ್ಲಿ ಪಳಗಿದವರನ್ನೇ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ.

ಭೈರಪ್ಪನವರ ಅಕ್ರಮಗಳು ಬಯಲಿಗೆ ಬರದಂತೆ ತಡೆಯುವ ಮಹಾನ್ ಜವಾಬ್ದಾರಿ ಹೊಂದಿರುವ ಆ ಪಿಆರ್ ಒ ತಿಂಗಳಿಗೆ ಪಡೆದುಕೊಳ್ಳುವ ಸಂಬಳ ಎಷ್ಟೆಂದು ಗೊತ್ತಾದರೆ ನಿಮಗೆ ಶಾಕ್ ಆಗಬಹುದು. ಬರೋಬ್ಬರಿ 50 ಸಾವಿರ. ಅಷ್ಟು ಸಂಬಳ ನೀಡುವ ಅವಶ್ಯಕತೆ ಏನು ಎನ್ನುವುದು ನಿಮಗೆ ಅನಿಸಬಹುದು. ಏಕೆಂದರೆ ಅನೇಕ ಉಪನ್ಯಾಸಕರಿಗೆ ಅಷ್ಟು ಸಂಬಳ ಇಲ್ಲ. ಉಪನ್ಯಾಸಕರಾಗಿ ಹೊಸದಾಗಿ ನೇಮಕರಾಗುವವರಿಗೆ ಅಥವಾ ಅತಿಥಿ ಉಪನ್ಯಾಸಕರಿಗೆ ಅದಕ್ಕಿಂತ ಎಷ್ಟೋ ಕಡಿಮೆ ಸಂಬಳ ಇರುವಾಗ ಪಿಆರ್ ಒಗೆ ಐವತ್ತು ಸಾವಿರ ಎಂದರೆ ಅರ್ಥ ಇದೆಯಾ? ಹಾಗಾದರೆ ತಮಗೆ ಪ್ರಿಯವಾಗುವ ಯಾರಿಗೆ ಬೇಕಾದರೂ ಭೈರಪ್ಪನವರು ತಮಗೆ ಇಷ್ಟ ಬಂದಂತೆ ಸಂಬಳ ಕೊಡುತ್ತಾರೆ ಎಂದರೆ ಅವರು ಭೈರಪ್ಪನವರಿಗಾಗಿ ತನು, ಮನದಿಂದ ಅದೇಂತಹ ಸೇವೆ ಸಲ್ಲಿಸುತ್ತಿರಬೇಡಾ.

ಇನ್ನು ಗಾರ್ಡನ್ ನೋಡಿಕೊಳ್ಳುತ್ತಿರುವವರಿಗೆ ನಲ್ವತ್ತು ಸಾವಿರ ಸಂಬಳ. ಯಾವುದೇ ಹುದ್ದೆಗೆ ತಲೆಬುಡ ಇಲ್ಲ. ಒಟ್ಟು ಸಂಬಳ, ಬಾಯಿಗೆ ಬಂದ ಸಂಬಳ. ಇದಕ್ಕೆ ವಿವಿ ಸಿಂಡಿಕೇಟ್ ಸದಸ್ಯರ ಅನುಮತಿ. ಹಾಗಾದರೆ ಇದನ್ನು ಕೇಳುವವರು ಯಾರು? ನಮ್ಮ ತೆರಿಗೆಯ ಹಣ ಈ ರೀತಿ ಪೋಲು ಮಾಡುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯದ ಬಗ್ಗೆ ಕರ್ನಾಟಕದ ರಾಜ್ಯಪಾಲರು ಏನು ಕ್ರಮ ತೆಗೆದುಕೊಳ್ಳದೇ ಇರುವುದು ಆಶ್ಚರ್ಯ ತಂದಿದೆ. ಒಂದೊ ಅವರಿಗೆ ಇಲ್ಲಿನ ಯಾವ ವಿಷಯ ಕೂಡ ಹೋಗದಂತೆ ತಡೆಯುವ ಕೆಲಸವನ್ನು ಇಲ್ಲಿ ಎಲ್ಲರೂ ಸೇರಿ ಮಾಡುತ್ತಿದ್ದಾರೆ ಅಥವಾ ರಾಜ್ಯಪಾಲರು ಕೂಡ ಇದರಲ್ಲಿ ಶಾಮೀಲಾಗಿದ್ದಾರಾ? ತಕ್ಷಣ ಜನಸಾಮಾನ್ಯರ ಪೋಲಾಗುತ್ತಿರುವ ತೆರಿಗೆಯ ಹಣದ ಬಗ್ಗೆ ರಾಜ್ಯಪಾಲರು ಗಮನ ಹರಿಸದಿದ್ದರೆ ಅವರಿಗೆ ಲಿಖಿತ ಮನವಿ ಕೊಟ್ಟು ಈ ಬಗ್ಗೆ ಒತ್ತಾಯಿಸುವ ಕೆಲಸ ಸಜ್ಜನರು ಮಾಡಬೇಕಿದೆ.

0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Vikram December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Vikram December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • 2
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 3
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 4
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • 5
      ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ

  • Privacy Policy
  • Contact
© Tulunadu Infomedia.

Press enter/return to begin your search