• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅಕ್ರಮ ಬಾಂಗ್ಲಾ ನುಸುಳುಕೋರರ ಪತ್ತೆಗೆ ದೃಢ ನಿರ್ಧಾರ, ಪಶ್ಚಿಮ ಬಂಗಾಳದ ದಿದಿ ಕಲಿಯಬೇಕಿದೆ ಪಾಠ

TNN Correspondent Posted On January 2, 2018


  • Share On Facebook
  • Tweet It

ಗುವಾಹಟಿ: ಅಸ್ಸಾಂನಲ್ಲಿರುವ ಅಕ್ರಮ ಬಾಂಗ್ಲಾದೇಶಿ ನುಸುಳುಕೋರರನ್ನು ಪತ್ತೆ ಹಚ್ಚಲು ಅಸ್ಸಾಂ ಸರ್ಕಾರ ಬಹು ನಿರೀಕ್ಷಿತ ‘ಕಾನೂನು ಬದ್ಧ ನಾಗರಿಕರ ಪಟ್ಟಿಯ ಪ್ರಥಮ ಕರಡನ್ನನು ಬಿಡುಗಡೆ ಮಾಡಿದೆ. ಈ ಮೂಲಕ ಅಕ್ರಮವಾಗಿ ನುಸುಳಿರುವವರನ್ನು ಗಡಿಪಾರು ಮಾಡುವ ಚಿಂತನೆ ಅಸ್ಸಾಂ ಸರ್ಕಾರಕ್ಕೆ ಇದೆ.

‘ನ್ಯಾಷನಲ್‌ ರಿಜಿಸ್ಟರ್‌ ಆಫ್‌ ಸಿಟಿಜನ್ಸ್‌’ (ಎನ್‌ರ್‌ಸಿ) ಕರಡು ಪ್ರತಿಯ ಪ್ರಥಮ ಭಾಗದಲ್ಲಿ ಒಟ್ಟು 3.26 ಕೋಟಿ ಜನರು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 1.9 ಕೋಟಿ ಜನರ ಹೆಸರುಗಳು ಮಾತ್ರ ಇವೆ. ಆದರೆ ‘ಈ ಪಟ್ಟಿಯಲ್ಲಿ ಹೆಸರು ಇರದವರು ಭಯ ಪಡಬೇಕಿಲ್ಲ. ಉಳಿದ ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ. ಅಂತಿಮ ಪಟ್ಟಿ ಸಿದ್ಧವಾಗುವವರೆಗೆ ತಾಳ್ಮೆಯಿಂದಿರಬೇಕು ಎಂದು ರಿಜಿಸ್ಟ್ರಾರ್‌ ಜನರಲ್‌ ಆಫ್‌ ಇಂಡಿಯಾ ಶೈಲೇಶ್‌ ಹೇಳಿದ್ದಾರೆ.

ಮೊದಲನೇ ಕರಡು ಪ್ರತಿಯಲ್ಲಿ ಹೆಸರಿಲ್ಲದವರು ಹಿಂಸೆಗೆ ತೊಡಗಬಹುದು ಎಂಬ ಆತಂಕದಿಂದ ರಾಜ್ಯಾಧ್ಯಂತ ಬಾರಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪಶ್ಚಿಮ ಬಂಗಾಳ ಸಿಎಂ ಮಮತಾಗೆ ಮಾದರಿ..?

ಕೇವಲ ಅಸ್ಸಾಂ ಅಷ್ಟೇ ಅಲ್ಲ ದೇಶದ ಹಲವು ರಾಜ್ಯಗಳು ಅಕ್ರಮ ಬಾಂಗ್ಲಾ ನಿವಾಸಿಗಳಿಂದ ತೊಂದರೆಗೆ ಈಡಾಗಿವೆ. ಅದರಲ್ಲೂ ಪ್ರಮುಖವಾಗಿ ಪಶ್ಚಿಮ ಬಂಗಾಳದಲ್ಲಿ ಅಕ್ರಮ ಬಾಂಗ್ಲಾ ನಿವಾಸಿಗಳ ಕೀಟಲೆ, ಅನಾಚಾರ ಮಿತಿ ಮೀರಿದೆ. ಅವರ ಅಟ್ಟಹಾಸವನ್ನು ತಡೆಯಲು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಅಸ್ಸಾಂ ಕೈಗೊಂಡಿರುವ ನಿರ್ಧಾರದಂತೆ, ಪಶ್ಚಿಮ ಬಂಗಾಳವು ಕ್ರಮ ಕೈಗೊಂಡರೆ ಮೂಲ ನಿವಾಸಿಗಳಿಗೆ ಬಲ ಬರಲಿದೆ.

ಅಕ್ರಮ ನುಸುಳುಕೋರರಿಗೆ ಭೀತಿ

1971ರಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದು ಜೀವನ ನಡೆಸುತ್ತಿರುವವರಿಗೆ ಈ ಪರಿಶೀಲನೆ ಕಾರ್ಯ ಭೀತಿ ಹುಟ್ಟಿಸಿದೆ. ಅಲ್ಲದೇ ಅಕ್ರಮ ವಾಸಿಗಳನ್ನು ಪತ್ತೆ ಹಚ್ಚಿ ಅಸ್ಸಾಂನಿಂದ ಹೊರ ಹಾಕುವ ಕಾರ್ಯವು ಸರ್ಕಾರ ಮಾಡಲಿದೆ ಎನ್ನಲಾಗಿದ್ದು, ಇದರಿಂದ ಅಕ್ರಮ ವಾಸಿಗಳು ಗಡಿಪಾರಾಗಿ, ಮೂಲ ನಿವಾಸಿಗಳಿಗೆ ಸೂಕ್ತ ಸೌಲಭ್ಯಗಳು ದೊರೆಯುವ ವಿಶ್ವಾಸ ಮೂಡಿದೆ.

ಎರಡನೇ ಬಾರಿ ಪರಿಷ್ಕರಣೆ

ಭಾರತದ ಸ್ವಾತಂತ್ರ್ಯದ ಬಳಿಕ 1951ರಲ್ಲಿ ಮೊದಲ ಬಾರಿ ಅಸ್ಸಾಂನ ಎನ್ ಆರ್ ಸಿ ಪರಿಷ್ಕರಣೆಯಾಗಿತ್ತು. ನಂತರ ಇದೇ ಮೊದಲ ಬಾರಿ ಪರಿಷ್ಕರಣೆಯಾಗುತ್ತಿದ್ದು. ಮಾ. 25, 1971ರ ನಂತರ ಅಸ್ಸಾಂಗೆ ಬಾಂಗ್ಲಾದೇಶದಿಂದ ಆಕ್ರಮವಾಗಿ ವಲಸೆ ಬಂದವರನ್ನು ಗುರುತಿಸಿ ಹೊರ ಹಾಕುವ ಗುರಿ ಈ ಪರಿಷ್ಕರಣೆ ಹೊಂದಿದೆ.

ಹೆಸರು ಸೇರಿಸಲು ಅವಕಾಶ

1951ರ ‘ಎನ್‌ಆರ್‌ಸಿ’ನಲ್ಲಿರುವ ಅಥವಾ ಮಾ.25,1971ರ ತನಕದ ಮತದಾರರ ಪಟ್ಟಿಯಲ್ಲಿರುವವರು ಕುಟುಂಬ ಸದಸ್ಯರ ಜತೆ ತಮ್ಮ ಸಂಬಂಧವನ್ನು ದೃಢೀಕರಿಸಲು ಸಾಧ್ಯವಾದರೆ ಅಂತಹವರ ಹೆಸರುಗಳನ್ನು ಪರಿಷ್ಕೃತ ಪಟ್ಟಿಯಲ್ಲಿ ಸೇರಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ರಾಜ್ಯಾದ್ಯಂತ  ಕರಡಿನಲ್ಲಿರುವ ಹೆಸರುಗಳನ್ನು ಪರಿಶೀಲಿಸಲು 4,200 ಎನ್‌ಆರ್‌ಸಿ ಕೇಂದ್ರಗಗಳನ್ನು ಸ್ಥಾಪಿಸಲಾಗಿದೆ.

ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ

ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಪರಿಷ್ಕರಣೆ ನಡೆಯುತ್ತಿದ್ದು, ಪೂರ್ಣ ‘ಎನ್‌ರ್‌ಸಿ’ ಕರಡು ಪ್ರತಿ ಬಿಡುಗಡೆಗೆ ಅಂತಿಮ ಗಡುವು ವಿಧಿಸಿಲ್ಲ. ಆದ್ದರಿಂದ ಪ್ರಕ್ರಿಯೆ ಇನ್ನು ಕೆಲ ತಿಂಗಳಲ್ಲಿ ಮುಗಿಯಲಿದೆ ಎಂದು ಅಂದಾಜಿಸಲಾಗಿದೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search