• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಗೋ ರಕ್ಷರ ನಿರಂತರ ಶ್ರಮ, ಗೋವಾಕ್ಕೆ ಗೋ ಮಾಂಸದ ಕೊರತೆ

TNN Correspondent Posted On January 7, 2018
0


0
Shares
  • Share On Facebook
  • Tweet It

ಪಣಜಿ: ಕರ್ನಾಟಕದಲ್ಲಿ ಗೋ ರಕ್ಷಕರು, ಗೋ ಅಭಿಯಾನ ನಡೆಸಿ, ಅಕ್ರಮ ಗೋ ಸಾಗಣೆ ತಡೆಯುತ್ತಿರುವುದರಿಂದ  ಗೋವಾದಲ್ಲಿ ಗೋ ಮಾಂಸ ಮಾರಾಟಗಾರರಿಗೆ ಮಾಂಸದ ಕೊರತೆ ಉಂಟಾಗಿದೆ ಎಂದು ಗೋ ಮಾಂಸ ಮಾರಾಟಗಾರರ ಸಂಘ ತಿಳಿಸಿದೆ. ಇದು ಗೋ ರಕ್ಷಣೆ, ಗೋ ರಕ್ಷಣೆ ಅಭಿಯಾನ ನಡೆಸುತ್ತಿರುವ ಎಲ್ಲರಿಗೂ ಸಲ್ಲಲೇಬೇಕಾದ ಗೌರವ.

ಕರ್ನಾಟಕದ ಬೆಳಗಾವಿಯಿಂದ ನಿತ್ಯ ಗೋವುಗಳನ್ನು ಸಾಗಿಸಲಾಗುತ್ತಿತ್ತು. ಆದರೆ ಇದೀಗ ಗೋ ರಕ್ಷಕರ ಭೀತಿಯಿಂದ ಸಾಗಣೆಗೆ ತಡೆಯುಂಟಾಗುತ್ತಿದೆ. ಇದರಿಂದ ಗೋ ಮಾಂಸಕ್ಕೆ ಕೊರತೆ ಉಂಟಾಗಿದೆ ಎಂದು ಗೋ ಮಾಂಸ ಮಾರಾಟಗಾರರ ಸಂಘ ಆರೋಪಿಸಿದೆ. ಸರ್ಕಾರ ಗೋ ರಕ್ಷಕರ ಕುರಿತು ಕೂಡಲೇ ಮಧ್ಯ ಪ್ರವೇಶಿಸಬೇಕು. ಇಲ್ಲವಾದಲ್ಲಿ ಗೋ ಮಾಂಸಕ್ಕೆ ತೀವ್ರ ಸಮಸ್ಯೆಯಾಗಲಿದೆ ಎಂದು ಗೋ ಮಾಂಸ ಮಾರಾಟಗಾರರ ಸಂಘ ತಿಳಿಸಿದೆ.

ಕರ್ನಾಟಕದಿಂದ ಗೋವಾಕ್ಕೆ ಗೋ ಸಾಗಣೆ ವೇಳೆ ಗೋ ರಕ್ಷಕರು ತಡೆಯೊಡ್ಡುತ್ತಿದ್ದಾರೆ. ಈ ಪ್ರಕ್ರಿಯೆ ಕ್ರಿಸ್ ಮಸ್ ನಿಂದ ಹೆಚ್ಚಾಗಿದ್ದು, ಮಾರಾಟಗಾರರು ಅಕ್ರಮವಾಗಿ ಗೋವು ಸಾಗಣೆ ಮಾಡುತ್ತಾರೆ ಎಂದು ತಡೆಯೊಡ್ಡುತ್ತಿರುವುದರಿಂದ ಕರ್ನಾಟಕದಿಂದ ಸಾಗಣೆ ಮಾಡುವುದನ್ನೇ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಗೋವಾ ಖುರೇಷಿ ಮಾಂಸ ಮಾರಾಟಗಾರರ ಸಂಘದ ಅಧ್ಯಕ್ಷ ಮನ್ನಾ ಬಪ್ಪಾರಿ ಹೇಳಿದ್ದಾರೆ.

ಬೆಳಗಾವಿಯಿಂದ ನಿತ್ಯ 25 ಟನ್ ಗೋ ಮಾಂಸ ಸಾಗಣೆ..!

ಗೋವಾಕ್ಕೆ ಕರ್ನಾಟಕದ ಬೆಳಗಾವಿಯಿಂದ ನಿತ್ಯ 25 ಟನ್ ಗೋ ಮಾಂಸ ಸಾಗಣೆಯಾಗುತ್ತದೆ. ಗೋವಾದಲ್ಲಿ ಗೋವುಗಳ ಉತ್ಪಾದನೆ ಇಲ್ಲ. ಇದರಿಂದ ಗೋವಾದಲ್ಲಿ ಮಾಂಸದ ಕೊರತೆ ಉಂಟಾಗಿದೆ ಎ ಖುರೇಷಿ ಮಾಂಸ ಮಾರಾಟಗಾರರ ಸಂಘದ ಅಧ್ಯಕ್ಷ ಮನ್ನಾ ಬಪ್ಪಾರಿ.

ಕರ್ನಾಟಕದಲ್ಲಿರುವ ಗೋ ರಕ್ಷಣಾ ತಂಡಗಳು, ಗೋ ರಕ್ಷಕ ಅಭಿಯಾನಗಳು ಗೋವಾಕ್ಕೆ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂದು ದೂರುತ್ತಿವೆ. ನಾವು ಕರ್ನಾಟಕದಿಂದ ಅಕ್ರಮವಾಗಿ ಗೋವುಗಳನ್ನು ತರುವುದಿಲ್ಲ. ಕಾನೂನಾತ್ಮಕವಾಗಿ ಕರ್ನಾಟಕದಲ್ಲಿ ನಡೆಯುತ್ತಿರುವ ಕಸಾಯಿಖಾನೆಗಳಿಂದ ತರುತ್ತೇವೆ. ಆದರೆ ಗಡಿಯಲ್ಲಿ ನಮ್ಮ ವಾಹನಗಳನ್ನು ತಡೆದು, ಅಕ್ರಮವಾಗಿ ಗೋ ಮಾಂಸ ಸಾಗಿಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ ಎನ್ನುತ್ತಾರೆ ಬಪ್ಪಾರಿ.

ನಾವು ಕಾನೂನಾತ್ಮಕವಾಗಿ ನಡೆಸುತ್ತಿರುವ ಕಸಾಯಿ ಖಾನೆಗಳಿಂದಲೇ ಮಾಂಸವನ್ನು ಸಾಗಿಸುತ್ತೇವೆ. ಯಾವುದಾರರೂ ಸಂಘಟನೆಗಳಿಗೆ ವಿರೋಧವಿದ್ದರೇ, ಮಾರಾಟ ಮಾಡುವ ಕಸಾಯಿ ಖಾನೆಗಳ ಎದುರು ಹೋಗಿ ಪ್ರತಿಭಟನೆ ನಡೆಸಲಿ, ತಡೆಯಲಿ. ಅದನ್ನು ಬಿಟ್ಟು ಸಾಗಣೆ ಮಾಡುವ ವಾಹನಗಳನ್ನು ತಡೆದರೇ ಲಕ್ಷಾಂತರ ರೂಪಾಯಿ ಹಾನಿಯಾಗುತ್ತದೆ ಎಂದು ಗೋವಾ ಗೋ ಮಾಂಸ ಮಾರಾಟಗಾರರು ಹೇಳಿದ್ದಾರೆ.

ಅನುಮತಿಯಿಲ್ಲದೇ ಗೋ ಮಾಂಸ ಸಾಗಣೆ

ಗೋವಾ ಮತ್ತು ಕರ್ನಾಟಕ ಗಡಿಯಲ್ಲಿ ಉಭಯ ರಾಜ್ಯಗಳ ಅಧಿಕಾರಿಗಳ ಅನುಮತಿಯಿಲ್ಲದೇ ಗೋ ಮಾಂಸ ಸಾಗಣೆ ಮಾಡಲಾಗುತ್ತಿದೆ. ಆದ್ದರಿಂದ ಗೋ ರಕ್ಷಕ ಪಡೆಗಳು ಗೋವುಗಳ ಸಂರಕ್ಷಣೆ ಮುಂದಾಗಿವೆ. ಗಡಿಯಲ್ಲಿ ಅಕ್ರಮವಾಗಿ ನಡೆಸುತ್ತಿರುವ ಕಸಾಯಿಖಾನೆಗಳು ಮತ್ತು ಸಾಗಣೆ ಸಮಯದಲ್ಲಿ ಪೊಲೀಸರ ಜತೆ ಪರೀಕ್ಷಿಸಲು ಮುಂದಾಗಿದ್ದೇವೆ ಎನ್ನುತ್ತಾರೆ ಗೋ ರಕ್ಷಕ ಅಭಿಯಾನದ ಮುಖಂಡ ಹನುಮಂತ ಪರಬ್.

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Tulunadu News July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Tulunadu News July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search