• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಹಿಂದೂತ್ವವೇ ಮರೆತ ಸಿದ್ದರಾಮಯ್ಯಗೆ ಯೋಗಿ ಬಗ್ಗೆ ಮಾತಾಡುವ ನೈತಿಕತೆ ಇದೆಯೇ..?

ವಿಕ್ರಮ್ ಗೌಡ, ಶಿವಮೊಗ್ಗ Posted On January 9, 2018
0


0
Shares
  • Share On Facebook
  • Tweet It

ಮೀನು ತಿಂದು ಧರ್ಮಸ್ಥಳ ಮಂಜುನಾಥ ದೇವಸ್ಥಾನ ಪ್ರವೇಶಿಸಿದ..

ಉಡುಪಿಗೆ ಹೋದರೂ ಶ್ರೀಕೃಷ್ಣನ ದೇವಸ್ಥಾನಕ್ಕೆ ಹೋಗದ

ಹಿಂದೂ ದೇವಾಲಯಗಳ ಹಣವನ್ನು ಅಲ್ಪಸಂಖ್ಯಾತರಿಗೆ ಹಂಚಿದ

ಜಿಹಾದಿಗಳ ಅಟ್ಟಹಾಸಕ್ಕೆ 21 ಹಿಂದೂಗಳ ಬಲಿಗೆ ಪರೋಕ್ಷವಾಗಿ ಕಾರಣವಾದ

ಹಿಂದೂಗಳ ಸ್ಫೂರ್ತಿ ದೈವ ಹನುಮಂತನ ಜಯಂತಿಗೆ ಅಡ್ಡಿಪಡಿಸಿದ

ಚುನಾವಣೆಗೆ ದೇವಾಲಯಗಳ ಮೊರೆ ಹೋಗುವ ರಾಹುಲ್ ನ ಸೂಚನೆ ಪಾಲಿಸುವ

 ಹಿಂದೂಗಳ ಆರಾಧ್ಯ ದೈವ ಗೋ ಮಾಂಸ ತಿನ್ನುತ್ತೇನೆ ಎನ್ನುವ

ಸಿಎಂ ಸಿದ್ದರಾಮಯ್ಯಗೆ ಚುನಾವಣೆ ಹೊತ್ತಿನಲ್ಲಿ ಹಿಂದೂಗಳು, ಹಿಂದುತ್ವ ನೆನಪಾಗುತ್ತಿದೆ. ದೇಶದಲ್ಲಿ ಹಿಂದೂತ್ವದ ಜತೆ ಜತೆಗೆ ಅಭಿವೃದ್ಧಿಯ ಅಜೆಂಡಾದೊಂದಿಗೆ ಅಧಿಕಾರದ ಗದ್ದುಗೆ ಏರಿದವರೂ ಯೋಗಿ ಆದಿತ್ಯನಾಥ್. ಐದು ಬಾರಿ ಘೋರಖಪುರದ ಸಂಸದ ಸ್ಥಾನಕ್ಕೆ ಆಯ್ಕೆಯಾಗುವ ಮೂಲಕ ಘೋರಖಪುರದಲ್ಲಿ ಹೊಸ ಅಲೆ ಸೃಷ್ಟಿಸಿದವರು. ಘೋರಖಪುರದಲ್ಲಿ ಸೌಹಾರ್ದದ ಜೀವನ ನಡೆಸುವಂತ ವಾತಾವರಣ ಸೃಷ್ಟಿಸಿದವರು. ಅಂತಹ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಯೋಗಿ ಆದಿತ್ಯನಾಥ್ ಬಗ್ಗೆ ಮಾತಾಡುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಸಾಮಾನ್ಯ ಜ್ಞಾನವನ್ನಾದರೂ ಪಡೆಯಬೇಕು.

ಯೋಗಿ ಆದಿತ್ಯನಾಥ್ ಬೂಟಾಟಿಕೆ ಸನ್ಯಾಸಿ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಘೋರಖನಾಥ ಪೀಠದ ಶಕ್ತಿ, ಹಿಂದಿನ ಇತಿಹಾಸ ಅರಿಯದೇ ಎಲುಬಿಲ್ಲದ ನಾಲಿಗೆ ಹರಿಬಿಡುವುದು ತೀರ ಬಾಲಿಷತನ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬೋಗಿ ಸಿದ್ದರಾಮಯ್ಯಗೇ ಯೋಗಿ ಬಗ್ಗೆ ಬರುವ ಮಾತುಗಳು ನೋಡಿ..

ಯೋಗಿ ಆದಿತ್ಯನಾಥ್ ಗೆ  ಮನುಷ್ಯತ್ವ ಇಲ್ಲ

ಯೋಗಿಗೆ ಹಿಂದೂತ್ವದ ಬಗ್ಗೆ ಮಾತಾಡುವ ಹಕ್ಕಿಲ್ಲ

ಯೋಗಿ ಆದಿತ್ಯನಾಥ್ ಒಬ್ಬ ಡೋಂಗಿ ವ್ಯಕ್ತಿ

ಯೋಗಿ ಹಸುಗಳನ್ನು ಸಾಕಿದ್ದಾನಾ..?

ಇವು ಉಡುಪಿಯಲ್ಲಿ ನಡೆದ ಸಮಾವೇಶದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಗಿ ಕುರಿತು ಆಡಿದ ಮಾತುಗಳು ಇವು. ಕೋಟ್ಯಂತರ ಜನರು ಗೌರವಿಸುವ, ಕೋಟ್ಯಂತರ ಜನರು ಕೈ ಮುಗಿಯುವ ಪೀಠದ ಪೀಠಾಧಿಪತಿ ಯೋಗಿ ಅವರ ಬಗ್ಗೆ ಹೇಳುವ ಸಿದ್ದರಾಮಯ್ಯನವರ ಒಳಗೆ ಇರುವ ಹಿಂದೂ ಎಂತ ಸಂಸ್ಕೃತಿ ಹೀನ ಎನ್ನುವುದು ಸಾಬೀತಾಗುತ್ತದೆ.

ಮನುಷ್ಯತ್ವ ಇಲ್ಲ ಎನ್ನುವ ಸಿದ್ದರಾಮಯ್ಯನವರೇ ಮೊದಲು ನಿಮ್ಮ ಸಮಾವೇಶದಲ್ಲಿ ನಿಮ್ಮ ಮುಖ ನೋಡಲು ಬಂದ ಅಂಗವಿಕಲನನ್ನು ದರದರನೇ ಎಳೆದು ಹೊರಹಾಕಿದ ನಿಮ್ಮ ಅಂಗರಕ್ಷಕರಿಗೆ, ಕಾರ್ಯಕರ್ತರಿಗೆ ತಿಳಿ ಹೇಳಿ.. ನಿಮ್ಮ ಮನುಷ್ಯತ್ವ ಎಂತದ್ದು ಎನ್ನುವುದು ಅರಿವಾಗುತ್ತದೆ.

ಯೋಗಿ ಅವರಂತ ಮಹಾನ್ ಪುರುಷರನ್ನು ಹೀಯಾಳಿಸುವ ಮುನ್ನ ನಿಮ್ಮ ಹೆಸರಿನಲ್ಲಿರುವ, ನಿವೇ ಘೋಷಿಸಿಕೊಂಡಿರುವ ರಾಮ ನನ್ನು ಒಮ್ಮೆ ಕೇಳಿ ಯೋಗಿ ಯಾರು ಎಂದು. ಅವರನ್ನು ಟೀಕಿಸುವ ಭರದಲ್ಲಿ ದೇಶಕ್ಕೆ ಕಂಟಕವಾದ ಧರ್ಮಾಂಧರನ್ನು ನೀವು ಬೆಂಬಲಿಸುತ್ತೀದ್ದೀರಿ ಎಂಬ ಅರಿವಿರಲಿ. ಅವರಿಂದಲೇ ನಿಮಗೆ ತಕ್ಕ ಉತ್ತರ ಬಂದರೂ ನಿಮಗೆ ಸಮಾಧಾನವಿಲ್ಲವೇ. ಇನ್ನಾರೂ ನಿಮಗೆ ಛೀಮಾರಿ ಹಾಕಿಸಬೇಕು.

ದೇಶದ ಬಹು ದೊಡ್ಡ ರಾಜ್ಯ ಉತ್ತರ ಪ್ರದೇಶದ ಅಧಿಕಾರದ ಚುಕ್ಕಾಣಿ ಹಿಡಿದಿರುವ  ಯೋಗಿ ಆದಿತ್ಯನಾಥ್ ಬಗ್ಗೆ ಅರಿಯಲು ಒಮ್ಮೆ ಅವರ ಘೋರಖನಾಥ್ ಪೀಠವನ್ನು ನೋಡಿ ಬನ್ನಿ. ಅಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ನಿತ್ಯ ಸಾಲಿನಲ್ಲಿ ನಿಂತು ಘೋರಖ್ ನಾಥನ ದರ್ಶನ ಪಡೆಯುತ್ತಾರೆ. ಯೋಗಿಗಳ ಪೀಠದಲ್ಲಿ ಮುಸ್ಲಿಮರು ನಿತ್ಯ ಕೆಲಸ ಮಾಡುತ್ತಾರೆ.

ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಲಿಷ್ಠ ಆಡಳಿತ ನೀಡುತ್ತಿದ್ದು, ಬಿಜೆಪಿ ಸರಣಿ ಗೆಲುವು ಸಾಧಿಸುತ್ತಿದೆ. ಪ್ರಸ್ತುತ ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತದ ಗದ್ದುಗೆ ಏರಿದೆ. ಕಾಂಗ್ರೆಸ್ ಮುಕ್ತ ಭಾರತಕ್ಕೆ ಕೆಲವೇ ರಾಜ್ಯಗಳು ಬಾಕಿ ಉಳಿದಿವೆ.

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
ವಿಕ್ರಮ್ ಗೌಡ, ಶಿವಮೊಗ್ಗ September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
ವಿಕ್ರಮ್ ಗೌಡ, ಶಿವಮೊಗ್ಗ September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search