• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಿಂದೂ ಯುವಕನ ಅಪಹರಣ, ಹಣಕ್ಕಾಗಿ ಬೇಡಿಕೆ, ನೀಡದಕ್ಕೆ ಸಾಯಿಸಿಯೇ ಬಿಟ್ಟ ಮುಸ್ಲಿಂ ಯುವಕರು!

TNN Correspondent Posted On February 9, 2018


  • Share On Facebook
  • Tweet It

ಕೋಲ್ಕತ್ತಾ: ಒಂದೆಡೆ ಲವ್ ಜಿಹಾದ್, ಇನ್ನೊಂದೆಡೆ ಬಲವಂತದ ಮತಾಂತರಕ್ಕೆ ಸಿಲುಕಿ ಹಿಂದೂಗಳು ಪರಿತಪಿಸುತ್ತಿದ್ದಾರೆ. ಇದರ ನಡುವೆಯೇ ಹಿಂದೂ ಯುವಕನನ್ನು ಅಪಹರಣ ಮಾಡಿದ್ದ ಮೂವರು ಮುಸ್ಲಿಂ ಯುವಕರು ಕುಟುಂಬಸ್ಥರು ಹಣ ನೀಡಲಿಲ್ಲ ಎಂದು ಯುವಕನನ್ನೇ ಕೊಂದಿದ್ದಾರೆ.

ಹೌದು, ಪಶ್ಚಿಮ ಬಂಗಾಳದ ಉತ್ತರ ಪರಗಣಾಸ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಜನವರಿ 20ರಿಂದ ನಾಪತ್ತೆಯಾಗಿದ್ದ 12ನೇ ತರಗತಿ ವಿದ್ಯಾರ್ಥಿಯ ಶವ ನೈಹಾತಿಯ ಜುಬಿಲಿ ಬ್ರಿಡ್ಜ್ ನದಿಯಲ್ಲಿ ಪತ್ತೆಯಾಗಿದೆ.

ಕುಟುಂಬಸ್ಥರ ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಮೂವರು ಮುಸ್ಲಿಮರನ್ನು ಬಂಧಿಸಿದ್ದು, ಅವರನ್ನು ಸರ್ಫರಾಜ್, ವಾಕಿಲ್ ಹಾಗೂ ಜಾಹೀದ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕೊಲೆ ಮಾಡಿರುವುದಾಗಿ ಒಪ್ಪಿದ್ದಾರೆ.

ನನ್ನ ಸಹೋದರ ಟ್ಯೂಷನ್ಗೆ ಹೋಗಲು ತಯಾರಾಗುತ್ತಿದ್ದ. ಆಗ ಈ ಮೂವರು ಬಂದು ಆತನನ್ನು ಹೊರಗಡೆ ಕರೆದುಕೊಂಡು ಹೋದರು. ಆಗ ಸಂಜೆ ಸುಮಾರು 5 ಗಂಟೆಯಾಗಿತ್ತು. ಆದರೆ 8 ಗಂಟೆಯಾದರೂ ನನ್ನ ಅಣ್ಣ ಮನೆಗೆ ಬರಲಿಲ್ಲ. 8.45 ನಿಮಿಷಕ್ಕೆ ಮನೆಯ ಫೋನಿಗೆ ಕರೆ ಬಂತು. ನಿಮ್ಮ ಅಣ್ಣ ಅಭಿಷೇಕ್ ಚೌಬೇಯನ್ನು ಅಪಹರಿಸಿದ್ದು, ಆತ ಜೀವಂತವಾಗಿ ಬೇಕಿದ್ದರೆ 10 ಲಕ್ಷ ರೂ. ನೀಡಲು ಬೇಡಿಕೆ ಇಟ್ಟಿದ್ದರು ಎಂದು ಅಭಿಷೇಕ್ ಸಹೋದರಿ ಮಾಹಿತಿ ನೀಡಿದ್ದಾರೆ.

ಇದರಿಂದ ಭಯಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಆರೋಪಿಗಳು ಮತ್ತೆ ಕರೆ ಮಾಡಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಒಂದು ಸಲ ಅಭಿಷೇಕ್ ಜತೆ ಮಾತನಾಡಲು ಇಚ್ಛಿಸಿದ್ದಕ್ಕೆ ಹಣದ ಮೊತ್ತ 15 ಲಕ್ಷ ರೂಪಾಯಿಗೆ ಏರಿಕೆ ಮಾಡಿದ್ದಾರೆ. ಅದಕ್ಕೂ ಕುಟುಂಬಸ್ಥರು ಒಪ್ಪಿದ್ದರು ಎಂದು ತಿಳಿದುಬಂದಿದೆ.

ಏತನ್ಮಧ್ಯೆಯೇ ಕುಟುಂಬಸ್ಥರನ್ನು ಆ ಜಾಗಕ್ಕೆ ಬನ್ನಿ, ಇಲ್ಲಿಗೆ ದುಡ್ಡು ತೆಗೆದುಕೊಂಡು ಬನ್ನಿ ಎಂದು ವಿನಾಕಾರಣ ಅಲೆದಾಡಿಸಿದ್ದು, ಅಲ್ಲಿಗೆ ಹೋದರೆ ಯಾರೂ ಇರುತ್ತಿರಲಿಲ್ಲ. ಕೊನೆಗೆ ಮೊಬೈಲ್ ನೆಟ್ ವರ್ಕ್ ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಕೊಲೆ ಮಾಡಿರುವುದಾಗಿಯೂ, ನದಿಗೆ ಬಿಸಾಕಿರುವುದಾಗಿಯೂ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search