• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಿಂದೂ ಯುವಕನ ಅಪಹರಣ, ಹಣಕ್ಕಾಗಿ ಬೇಡಿಕೆ, ನೀಡದಕ್ಕೆ ಸಾಯಿಸಿಯೇ ಬಿಟ್ಟ ಮುಸ್ಲಿಂ ಯುವಕರು!

TNN Correspondent Posted On February 9, 2018


  • Share On Facebook
  • Tweet It

ಕೋಲ್ಕತ್ತಾ: ಒಂದೆಡೆ ಲವ್ ಜಿಹಾದ್, ಇನ್ನೊಂದೆಡೆ ಬಲವಂತದ ಮತಾಂತರಕ್ಕೆ ಸಿಲುಕಿ ಹಿಂದೂಗಳು ಪರಿತಪಿಸುತ್ತಿದ್ದಾರೆ. ಇದರ ನಡುವೆಯೇ ಹಿಂದೂ ಯುವಕನನ್ನು ಅಪಹರಣ ಮಾಡಿದ್ದ ಮೂವರು ಮುಸ್ಲಿಂ ಯುವಕರು ಕುಟುಂಬಸ್ಥರು ಹಣ ನೀಡಲಿಲ್ಲ ಎಂದು ಯುವಕನನ್ನೇ ಕೊಂದಿದ್ದಾರೆ.

ಹೌದು, ಪಶ್ಚಿಮ ಬಂಗಾಳದ ಉತ್ತರ ಪರಗಣಾಸ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಜನವರಿ 20ರಿಂದ ನಾಪತ್ತೆಯಾಗಿದ್ದ 12ನೇ ತರಗತಿ ವಿದ್ಯಾರ್ಥಿಯ ಶವ ನೈಹಾತಿಯ ಜುಬಿಲಿ ಬ್ರಿಡ್ಜ್ ನದಿಯಲ್ಲಿ ಪತ್ತೆಯಾಗಿದೆ.

ಕುಟುಂಬಸ್ಥರ ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಮೂವರು ಮುಸ್ಲಿಮರನ್ನು ಬಂಧಿಸಿದ್ದು, ಅವರನ್ನು ಸರ್ಫರಾಜ್, ವಾಕಿಲ್ ಹಾಗೂ ಜಾಹೀದ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕೊಲೆ ಮಾಡಿರುವುದಾಗಿ ಒಪ್ಪಿದ್ದಾರೆ.

ನನ್ನ ಸಹೋದರ ಟ್ಯೂಷನ್ಗೆ ಹೋಗಲು ತಯಾರಾಗುತ್ತಿದ್ದ. ಆಗ ಈ ಮೂವರು ಬಂದು ಆತನನ್ನು ಹೊರಗಡೆ ಕರೆದುಕೊಂಡು ಹೋದರು. ಆಗ ಸಂಜೆ ಸುಮಾರು 5 ಗಂಟೆಯಾಗಿತ್ತು. ಆದರೆ 8 ಗಂಟೆಯಾದರೂ ನನ್ನ ಅಣ್ಣ ಮನೆಗೆ ಬರಲಿಲ್ಲ. 8.45 ನಿಮಿಷಕ್ಕೆ ಮನೆಯ ಫೋನಿಗೆ ಕರೆ ಬಂತು. ನಿಮ್ಮ ಅಣ್ಣ ಅಭಿಷೇಕ್ ಚೌಬೇಯನ್ನು ಅಪಹರಿಸಿದ್ದು, ಆತ ಜೀವಂತವಾಗಿ ಬೇಕಿದ್ದರೆ 10 ಲಕ್ಷ ರೂ. ನೀಡಲು ಬೇಡಿಕೆ ಇಟ್ಟಿದ್ದರು ಎಂದು ಅಭಿಷೇಕ್ ಸಹೋದರಿ ಮಾಹಿತಿ ನೀಡಿದ್ದಾರೆ.

ಇದರಿಂದ ಭಯಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಆರೋಪಿಗಳು ಮತ್ತೆ ಕರೆ ಮಾಡಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಒಂದು ಸಲ ಅಭಿಷೇಕ್ ಜತೆ ಮಾತನಾಡಲು ಇಚ್ಛಿಸಿದ್ದಕ್ಕೆ ಹಣದ ಮೊತ್ತ 15 ಲಕ್ಷ ರೂಪಾಯಿಗೆ ಏರಿಕೆ ಮಾಡಿದ್ದಾರೆ. ಅದಕ್ಕೂ ಕುಟುಂಬಸ್ಥರು ಒಪ್ಪಿದ್ದರು ಎಂದು ತಿಳಿದುಬಂದಿದೆ.

ಏತನ್ಮಧ್ಯೆಯೇ ಕುಟುಂಬಸ್ಥರನ್ನು ಆ ಜಾಗಕ್ಕೆ ಬನ್ನಿ, ಇಲ್ಲಿಗೆ ದುಡ್ಡು ತೆಗೆದುಕೊಂಡು ಬನ್ನಿ ಎಂದು ವಿನಾಕಾರಣ ಅಲೆದಾಡಿಸಿದ್ದು, ಅಲ್ಲಿಗೆ ಹೋದರೆ ಯಾರೂ ಇರುತ್ತಿರಲಿಲ್ಲ. ಕೊನೆಗೆ ಮೊಬೈಲ್ ನೆಟ್ ವರ್ಕ್ ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಕೊಲೆ ಮಾಡಿರುವುದಾಗಿಯೂ, ನದಿಗೆ ಬಿಸಾಕಿರುವುದಾಗಿಯೂ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

  • Share On Facebook
  • Tweet It


- Advertisement -


Trending Now
ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
Tulunadu News March 25, 2023
ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
Tulunadu News March 24, 2023
Leave A Reply

  • Recent Posts

    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
    • ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
  • Popular Posts

    • 1
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • 2
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 3
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 4
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • 5
      ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search