• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಭಾರತದ ಪ್ರಭಾವಕ್ಕೆ ಬೆದರಿದ ಚೀನಾ, ಗಡಿಯಲ್ಲಿ ಯಾವುದೇ ಪ್ರಚೋದನಾತ್ಮಕ ಚಟುವಟಿಕೆ ಇಲ್ಲ!

TNN Correspondent Posted On March 21, 2018


  • Share On Facebook
  • Tweet It

ದೆಹಲಿ: ಕಳೆದ ವರ್ಷ ಭಾರತದ ಡೋಕ್ಲಾಂ ಗಡಿಯಲ್ಲಿ ಸುಮಾರು 73 ದಿನಗಳವರೆಗೆ ಸೈನ್ಯವನ್ನು ನಿಯೋಜಿಸಿ ಉದ್ಧಟತನ ಮಾಡಿದ್ದ ಚೀನಾ, ಈಗ ಭಾರತದ ಪ್ರಭಾವದಿಂದ ಪಾಠ ಕಲಿತಿದ್ದು, ಗಡಿಯಲ್ಲಿ ಯಾವುದೇ ಪ್ರಚೋದನಾತ್ಮಕ, ಉದ್ಧಟತನದ ಚಟುವಟಿಕೆ ಮಾಡುತ್ತಿಲ್ಲ ಎಂದು ತಿಳಿದುಬಂದಿದೆ.

ಡೋಕ್ಲಾಂ ಗಡಿ ಸಂಘರ್ಷದ ಬಳಿಕ ಎಚ್ಚೆತ್ತುಕೊಂಡಿರುವ ಚೀನಾ, ಇತ್ತೀಚೆಗೆ ಯಾವುದೇ ರಸ್ತೆ ನಿರ್ಮಾಣ ಕಾಮಗಾರಿಯಾಗಲಿ, ಸೈನ್ಯ ನಿಯೋಜನೆಯಾಗಲಿ, ಗಡಿ ರೇಖೆ ಉಲ್ಲಂಘಿಸುವುದಾಗಲಿ ಮಾಡಿಲ್ಲ. ಆದರೂ ಇಡೀ ಗಡಿ ಭಾರತದ ಮೇಲ್ವಿಚಾರಣೆಯಲ್ಲಿದ್ದು, ವಿಡಿಯೋ ಸೇರಿ ಹಲವು ತಾಂತ್ರಿಕತೆ ಬಳಸಿ ಗಸ್ತು ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇಡೀ ಗಡಿ ಪ್ರದೇಶ ಭಾರತದ ಕಣ್ಗಾವಲಿನಲ್ಲಿದ್ದು, ಹಲವು ತಂತ್ರಜ್ಞಾನ ಬಳಸಿದೆ. ಇತ್ತೀಚೆಗೆ ಜಂಫೇರಿ ರಿಡ್ಜ್ ಪ್ರದೇಶದಲ್ಲಿ ಚೀನಾ ನೂತನ ರಸ್ತೆ ಕಾಮಗಾರಿ ನಡೆಸಿದೆ ಎಂಬ ಮಾಹಿತಿ ಸುಳ್ಳಾಗಿದ್ದು, ಭಾರತದ ಹಾದಿ ತಪ್ಪಿಸಲು ಹೀಗೆ ಮಾಡಲಾಗಿದೆ. ಗಡಿಯಲ್ಲಿ ಚೀನಾ ಕಳೆದ ತಿಂಗಳು ಯಾವುದೇ ರಸ್ತೆ ನಿರ್ಮಾಣ ಮಾಡಿಲ್ಲ ಎಂದು ಉನ್ನತ ಮೂಲಗಳು ದೃಢಪಡಿಸಿವೆ.

ಪ್ರಸ್ತುತ ನಮ್ಮ ಗಡಿ ರೇಖೆ ನಿಯಮ ಭದ್ರವಾಗಿದ್ದು, ಚೀನಾ ಉಲ್ಲಂಘಿಸಿಲ್ಲ. ಜಂಫೇರಿ ರಿಡ್ಜ್ ಹಾಗೂ ತೋರ್ಸಾ ನಲ್ಲಾ ಎಂಬಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ಕಳೆದ ವರ್ಷ ತೋರ್ಸಾ ನಲ್ಲಾ ಪ್ರದೇಶದಲ್ಲಿ ಚೀನಾ ಕಾಮಗಾರಿ ನಡೆಸುವುದನ್ನು ತಡೆದಿದ್ದೆವು. ಆದರೆ ಈ ಬಾರಿ ಯಾವುದೇ ಕಾಮಗಾರಿ ನಡೆಯಲು ಭಾರತ ಬಿಟ್ಟಿಲ್ಲ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನ ಆಗಾಗ ಮಾಡುವ ಉಪಟಳದಂತೆ, ಚೀನಾ ಸಹ ಮಾಡಲು ಮುಂದಾಗಿ ಸೇನೆಯನ್ನು ನಿಯೋಜಿಸಿತ್ತಾದರೂ ಭಾರತದ ಪ್ರಭಾವಕ್ಕೆ ಮಣಿದು ಈಗ ತೆಪ್ಪಗೆ ಇರುವುದು ಉತ್ತಮ ಬೆಳವಣಿಗೆಯಾಗಿದೆ.

 

  • Share On Facebook
  • Tweet It


- Advertisement -


Trending Now
ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
Tulunadu News July 4, 2022
ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
Tulunadu News July 2, 2022
Leave A Reply

  • Recent Posts

    • ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
  • Popular Posts

    • 1
      ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • 2
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 3
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 4
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 5
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search