• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಎಂ.ಬಿ.ಪಾಟೀಲರೇ, ನೀವು ಸಮಾಜದ ಉದ್ಧಾರಕ್ಕಾಗಿ ರಾಜಕಾರಣ ಮಾಡುತ್ತಿದ್ದೀರೋ ಅಥವಾ ಒಡೆಯಲೋ?

ವಿಶಾಲ್ ಗೌಡ ಕುಶಾಲನಗರ Posted On March 22, 2018
0


0
Shares
  • Share On Facebook
  • Tweet It

ಈ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರ ತಲೆಯಲ್ಲಿ ಬುದ್ಧಿ ತುಂಬಿದೆಯೋ ಅಥವಾ ಲದ್ದಿ ತುಂಬಿದೆಯೋ? ಇವರೇನು ಜನ ಸೇವೆಗಾಗಿ ರಾಜಕಾರಣದಲ್ಲಿದ್ದಾರೋ, ಅಥವಾ ಮತಗಳಿಗಾಗಿ ಸಮಾಜವನ್ನು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಲಸು ರಾಜಕಾರಣ ಮಾಡುತ್ತಿದ್ದಾರೋ? ಬಸವಣ್ಣ ಬಸವಣ್ಣ ಅಂತ ಇವರು ವಿಷಣ್ಣನಾಗಿ ಕುಳಿತಿರುವುದೇಕೆ? ನಾಚಿಕೆ ಎಂಬುದೇ ಆಗುವುದಿಲ್ಲವೇ ಎಂ.ಬಿ.ಪಾಟೀಲರೇ ನಿಮಗೆ?

ಹೌದು, ಸಚಿವರೂ ಎಂಬುದನ್ನೂ ನೋಡದೆ, ಬೌದ್ಧಿಕವಾಗಿ ಶೂನ್ಯಸ್ಥಾನಕ್ಕೆ ಇಳಿದಿರುವ ಎಂ.ಬಿ.ಪಾಟೀಲರಿಗೆ ಹೀಗೆ ಕೇಳಲೇಬೇಕಾಗಿದೆ. ಅದೂ ಧರ್ಮದ ವಿಚಾರದಲ್ಲಿ ಹೀನಾತಿಹೀನವಾಗಿ ವರ್ತಿಸುವ ಇವರಿಗೆ ಹೀಗೆ ಕೇಳುವುದರಲ್ಲಿ ಯಾವ ತಪ್ಪೂ ಇಲ್ಲ.

ನೀವೇ ಯೋಚನೆ ಮಾಡಿ ನೋಡಿ, ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಮೊದಲಿನಿಂದ ಇದ್ದರೂ, ಅದಕ್ಕೆ ರಾಜಕೀಯ ಬಣ್ಣ ಸಿಕ್ಕಿರಲಿಲ್ಲ. ಆದರೆ, ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿರುವ ಎಂ.ಬಿ.ಪಾಟೀಲ್, ಈ ಬಾರಿಯ ಚುನಾವಣೆಯಲ್ಲಿ ಸೋಲುವ ಭಯದಿಂದ, ಲಿಂಗಾಯತ ಪ್ರತ್ಯೇಕ ಧರ್ಮದ ಪರ ನಿಂತರು.

ಕೋಟಿ, ಕೋಟಿ ದುಡ್ಡು ಖರ್ಚು ಮಾಡಿ ಲಿಂಗಾಯತರ ಸಮಾವೇಶ ಮಾಡಿದರು. ರಾಜಕಾರಣಿಗಳು ಎಳೆದು ತಂದು, ಸಮಾಜ ಒಡೆಯಲು ಮುಂದಾದರು. ಕೆಲವು ಕುತ್ಸಿತ ಮನಸ್ಸಿನ ಸ್ವಾಮೀಜಿಗಳನ್ನು ವೇದಿಕೆಗೆ ತಂದು, ಅದೆಲ್ಲಿಂದಲೋ ದಾಖಲೆ ಅಂತ ಸಂಗ್ರಹಿಸಿ, ಈಗ ತಮ್ಮದೇ ಮುಖ್ಯಮಂತ್ರಿ ಮೂಲಕ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡಿಸಿದ್ದಾರೆ. ಹೇಳಿ ಒಬ್ಬ ರಾಜಕಾರಣಿಯಾದವನು ಸಮಾಜವನ್ನು ಒಗ್ಗೂಡಿಸಿ, ಮುನ್ನಡೆಯಬೇಕೋ, ಅಥವಾ ಸಮಾಜ ಒಡೆಯಬೇಕೋ? ಇವರ್ಯಾವ ಸೀಮೆ ನಾಯಕ ಸ್ವಾಮಿ?

ಇಂತಹ ಕುತ್ಸಿತ ಮನಸ್ಸಿನ ಎಂ.ಬಿ.ಪಾಟೀಲ್ ಈಗ, ಮತ್ತೊಂದು ವರಸೆ ತೆಗೆದಿದ್ದಾರೆ. ಬ್ರಾಹ್ಮಣರು ಸಹ ತಾವು ಹಿಂದೂ ಧರ್ಮದಿಂದ ಹೇಗೆ ಭಿನ್ನ ಎಂದು ತೋರಿಸಿದರೆ, ಅವರಿಗೂ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂದು ಬೊಗಳೆ ಬಿಟ್ಟಿದ್ದಾರೆ. ನಾಚಿಕೆಯಾಗುವುದಿಲ್ಲವೇ ಸಚಿವರೇ ನಿಮಗೆ? ಹೊಟ್ಟೆಗೆ ಅನ್ನ ತಿನ್ನುವ ಹಾಗೆ, ಮಿದುಳಿಗೆ ವಿಚಾರಗಳೆಂಬ ಅನ್ನ ತುಂಬಿಸಿಲ್ಲವೆ? ನಿಮ್ಮನ್ನು ನೋಡಿದರೆ ಹಾಗೆ ಕಾಣಿಸುವುದಿಲ್ಲ.

ಎಂ.ಬಿ.ಪಾಟೀಲರೇ ಹೇಳುವ ಹಾಗೆ, ಬ್ರಾಹ್ಮಣರು ಯಾವುದೋ ದಾಖಲೆ ಸಂಗ್ರಹಿಸಿ ಅವರಿಗೂ ಪ್ರತ್ಯೇಕ ಧರ್ಮ ನೀಡಿ. ಮುಂದೊಂದು ದಿನ ಸಮುದಾಯದ ಆಧಾರದಲ್ಲಿ ಜಾಸ್ತಿ ಜನಸಂಖ್ಯೆಯಿರುವ ಒಕ್ಕಲಿಗರು, ಕುರುಬರು, ಗಾಣಿಗರು, ಕಬ್ಬಲಿಗರು, ರೆಡ್ಡಿಗಳೆಲ್ಲ ತಮಗೂ ಒಂದು ಧರ್ಮ ಬೇಕು ಎಂದರೆ, ಎಲ್ಲರಿಗೂ ಒಂದೊಂದು ಧರ್ಮ ನೀಡುತ್ತೀರಾ?

ಹೀಗೆ ಗಲ್ಲಿಗೊಂದು, ಬೀದಿಗೊಂದು ಧರ್ಮ ಮಾಡಿದರೆ ಸಮಾಜಕ್ಕೆ ಆಗುವ ಅನಾಹುತದ ಬಗ್ಗೆ ಲೆಕ್ಕವಿದೆಯೇ ನಿಮಗೆ? ನಿಮಗೆ ತಾಕತ್ತಿದ್ದರೆ, ಜನರ ದುಡ್ಡಲ್ಲೇ ಮೆರೆಯುತ್ತಿದ್ದೇನೆ ಎಂಬ ಯೋಚನೆಯಿದ್ದರೆ, ಅಭಿವೃದ್ಧಿ ಮಾಡಿ ಚುನಾವಣೆ ಗೆಲ್ಲಿ ಸ್ವಾಮಿ, ಹೀಗೆ ಸಮಾಜ ಒಡೆದು ರಾಜಕಾರಣ ಮಾಡುವ ಹೊಲಸು ಪ್ರವೃತ್ತಿ ಏಕೆ ನಿಮಗೆ?

ಈಗ ಇರುವ ಮೂರು ಮತ್ತೊಂದು ಧರ್ಮಗಳೇ ಹಿಂದೂ ಧರ್ಮಕ್ಕೆ ಕಂಟಕವಾಗಿವೆ. ನೀವೂ ಕಂಟಕವಾಗಲು ಹೊರಟಿದ್ದೀರಿ. ಒಬ್ಬ ರಾಜಕಾರಣಿ ಹೇಗಿರಬೇಕು ಎಂಬುದಕ್ಕೆ ವಿರುದ್ಧ ಪದವಾಗಿ ಕಾಣುತ್ತಿದ್ದೀರಿ ನೀವು. ಆತ್ಮಸಾಕ್ಷಿಯನ್ನು ಮಾರಿಕೊಂಡಿರುವ ನೀವು ಬಾಯಿಯೊಳಗೆ ನಾಲಗೆ ಇಟ್ಟುಕೊಂಡು ಸುಮ್ಮನಿರಿ, ಬಾಯಿ ಮೂಲಕವೇ ಹೊಲಸು ಕಾರಿ, ಚೆನ್ನಾಗಿರುವ ಸಮಾಜ ಒಡೆಯಬೇಡಿ. ದೀಪ ಆರುವ ಮುನ್ನ ಜಾಸ್ತಿ ಉರಿಯುತ್ತದಂತೆ, ಹಾಗಾಯಿತು ನಿಮ್ಮ ಕತೆ. ಥೂ.

 

 

 

0
Shares
  • Share On Facebook
  • Tweet It




Trending Now
ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
ವಿಶಾಲ್ ಗೌಡ ಕುಶಾಲನಗರ January 12, 2026
ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
ವಿಶಾಲ್ ಗೌಡ ಕುಶಾಲನಗರ January 10, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
  • Popular Posts

    • 1
      ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • 2
      ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!

  • Privacy Policy
  • Contact
© Tulunadu Infomedia.

Press enter/return to begin your search