• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

46ನೇ ವಯಸ್ಸಲ್ಲಿ, ಮಗನೊಂದಿಗೆ 10ನೇ ಪರೀಕ್ಷೆ ಬರೆದ ಈ ಮಹಾತಾಯಿ ಸರ್ವರಿಗೂ ಸ್ಫೂರ್ತಿ

TNN Correspondent Posted On March 29, 2018


  • Share On Facebook
  • Tweet It

ಲುದಿಯಾನಾ: ಜ್ಞಾನ ಹೊಂದಲು ವಯಸ್ಸಿನ ಮಿತಿಯಿಲ್ಲ, ಯಾರು ಬೇಕಾದರೂ, ಯಾವುದೇ ವಯಸ್ಸಿನಲ್ಲಿ ಶಿಕ್ಷಣ ಪಡೆಯಬಹುದು ಎಂಬ ಸಂದೇಶವನ್ನು ಪಂಜಾಬ್ ಲುದಿಯಾನಾದ ಮಹಾತಾಯಿಯೊಬ್ಬರು ಸಾಬೀತು ಮಾಡಿದ್ದಾರೆ. ಮಗನೊಂದಿಗೆ 10ನೇ ತರಗತಿ ಪರೀಕ್ಷೆ ಬರೆಯುವ ಮೂಲಕ ವಯಸ್ಕರೂ ಶಿಕ್ಷಣ ಪಡೆಯಬಹುದು ಎಂಬ ಸಂದೇಶವನ್ನು ಸಾರಿದ್ದಾರೆ.

1989ರಲ್ಲಿ ಒಂಬತನೇ ತರಗತಿ ಪಾಸ್ ಆಗಿದ್ದ ರಜ್ನಿ ಬಲಾ ಅನಿವಾರ್ಯ ಕಾರಣಗಳಿಂದ ಮುಂದಿನ ತರಗತಿಗೆ ಹೋಗಲು ಆಗಿರಲಿಲ್ಲ. ಆದರೆ ಇದೀಗ 10ನೇ ತರಗತಿಗೆ ಪ್ರವೇಶ ಪಡೆದಿದ್ದು, ಮಗನೊಂದಿಗೆ ಬೋರ್ಡ್ ಪರೀಕ್ಷೆ ಬರೆಯುವ ಮೂಲಕ ಮಹತ್ವದ ಸಂದೇಶವನ್ನು ನೀಡಿದ್ದಾರೆ. ಮೂರು ಮಕ್ಕಳನ್ನು ಹೊಂದಿರುವ ರಜ್ನಿ ಬಲಾ ಪತಿಯ ಆಶಯದಂತೆ ಶಾಲೆಗೆ ಪ್ರವೇಶ ಪಡೆದಿದ್ದಾರೆ.

ಮೂರು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದು, ಆಸ್ಪತ್ರೆಯೊಂದರಲ್ಲಿ ವಾರ್ಡ್ ಅಟೆಂಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಪತಿ ಒತ್ತಾಯದಂತೆ ಶಾಲೆಗೆ ಪ್ರವೇಶ ಪಡೆದಿದ್ದು, ನಿತ್ಯ ಮಗನೊಂದಿಗೆ ತರಗತಿ ಹಾಜರಾಗಿದ್ದೇನೆ. ಅಲ್ಲದೇ ಇದೀಗ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದೇನೆ. ನಿಜವಾಗಲು ಪರೀಕ್ಷೆ ಪಾಸ್ ಆಗುವುದು ಸವಾಲಿನ ಕೆಲಸ ಎಂಬ ಅರಿವಾಗಿದೆ ಎನ್ನುತ್ತಾರೆ ರಜ್ನಿ ಬಲಾ.

ಪತಿಯ ಪ್ರೋತ್ಸಾಹ, ಮಕ್ಕಳ ಸಹಕಾರ, ಮನೆಯ ಹಿರಿಯರ ಬೆಂಬಲದಿಂದ ಈ ನಿರ್ಧಾರ ಕೈಗೊಂಡೆ. ನನ್ನ ಪತಿ ನಿತ್ಯ ಓದಲು ಪ್ರೋತ್ಸಾಹಿಸುತ್ತಾರೆ. ಅಲ್ಲದೇ ಮಗಳು, ಮಗ ನನ್ನ ಓದಿಗೆ ಸಹಕಾರ ನೀಡಿದ್ದಾರೆ. ಇದೇ ರೀತಿ ಪ್ರೋತ್ಸಾಹ ದೊರೆಯುವುದರಿಂದ ನಾನು ಪದವಿ ಮುಗಿಸುವವರೆಗೆ ವಿಶ್ರಮಿಸುವುದಿಲ್ಲ ಎಂದು ರಜ್ನಿ ಬಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನನ್ನ ಪತ್ನಿ ಬೆಳಗ್ಗೆ ಬೇಗ ಎದ್ದು ಮಗನೊಂದಿಗೆ ಟ್ಯೂಷನ್ ಗೆ ಹೋಗುವುದು, ಶಾಲೆಗೆ ಹೋಗುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಅವಳು ಶಾಲೆ ಪೂರ್ಣಗೊಳಿಸುವುದು ನಮ್ಮೆಲ್ಲರ ಆಶಯವಾಗಿತ್ತು. ಅದು ಪೂರ್ಣವಾಗುತ್ತಿದೆ. ನಮಗೆಲ್ಲರಿಗೂ ತೀವ್ರ ಸಂತೋಷವಾಗುತ್ತಿದೆ ಎಂದು ರಜ್ನಿ ಅವರ ಪತಿ ರಾಜಕುಮಾರ ಸಾಥಿ ಬೆಂಬಲಿಸಿದ್ದಾರೆ.

  • Share On Facebook
  • Tweet It


- Advertisement -


Trending Now
#ಮೆಲೋಡಿ ಹ್ಯಾಶ್ ಟ್ಯಾಗ್ ಸಿಕ್ಕಾಪಟ್ಟೆ ವೈರಲ್!
Tulunadu News December 2, 2023
ಜನವರಿ 21 ರ ಮೊದಲೇ ಅಯೋಧ್ಯೆಗೆ ಬಂದರೆ ಉತ್ತಮ ಎಂದು ಟ್ರಸ್ಟ್ ಮನವಿ!
Tulunadu News December 2, 2023
Leave A Reply

  • Recent Posts

    • #ಮೆಲೋಡಿ ಹ್ಯಾಶ್ ಟ್ಯಾಗ್ ಸಿಕ್ಕಾಪಟ್ಟೆ ವೈರಲ್!
    • ಜನವರಿ 21 ರ ಮೊದಲೇ ಅಯೋಧ್ಯೆಗೆ ಬಂದರೆ ಉತ್ತಮ ಎಂದು ಟ್ರಸ್ಟ್ ಮನವಿ!
    • ತೆಲಂಗಾಣ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದರೆ, ಕನುಗೋಳು ಹಿಡಿಯುವವರಿಲ್ಲ!
    • ಯುವಕರನ್ನು ಕಿಡ್ನಾಪ್ ಮಾಡಿ ಮದುವೆ ಮಾಡಿಸುವ ಗ್ಯಾಂಗ್ ಪಕ್ಡ್ವಾ!
    • ಡಚ್ ಯುವತಿಯ ಪ್ರೇಮಕ್ಕೆ ಬಿದ್ದ ಯುಪಿ ಯುವಕ, ಕಂಕಣಭಾಗ್ಯ!
    • ಪಾಕ್ ಕ್ರಿಕೆಟಿಗರ ಸ್ವಾಗತಕ್ಕೆ ಸಿಡ್ನಿ ವಿಮಾನ ನಿಲ್ದಾಣದಲ್ಲಿ ಯಾರೂ ಬಂದಿಲ್ಲ!
    • ಪಂಚಾಯತ್ ಮೂಲಕ ಅಂಗಡಿ ಪಡೆದಿದ್ದ ಆತ!
    • ಚೋಪ್ರಾ ಆಗಲ್ಲ ಎಂದದ್ದಕ್ಕೆ ರಶ್ಮಿಕಾ ಆದ್ಲು ರಣಬೀರ್ ಜೋಡಿ!
    • ಇನ್ನೊಬ್ಬ ಉಗ್ರ ಸಿದ್ದೀಕ್ ಅನಾಮಧೇಯ ಶೂಟರ್ ಗಳಿಂದ ಹತ್ಯೆ!
    • ಮಿಸ್ ಪಾಂಡಿಚೇರಿ ಈಗ ಮಿಸ್ ಆಫ್ರಿಕಾ ಗೋಲ್ಡನ್ ಸ್ಪರ್ಧೆಗೆ ರೆಡಿ!
  • Popular Posts

    • 1
      #ಮೆಲೋಡಿ ಹ್ಯಾಶ್ ಟ್ಯಾಗ್ ಸಿಕ್ಕಾಪಟ್ಟೆ ವೈರಲ್!
    • 2
      ಜನವರಿ 21 ರ ಮೊದಲೇ ಅಯೋಧ್ಯೆಗೆ ಬಂದರೆ ಉತ್ತಮ ಎಂದು ಟ್ರಸ್ಟ್ ಮನವಿ!
    • 3
      ತೆಲಂಗಾಣ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದರೆ, ಕನುಗೋಳು ಹಿಡಿಯುವವರಿಲ್ಲ!
    • 4
      ಯುವಕರನ್ನು ಕಿಡ್ನಾಪ್ ಮಾಡಿ ಮದುವೆ ಮಾಡಿಸುವ ಗ್ಯಾಂಗ್ ಪಕ್ಡ್ವಾ!
    • 5
      ಡಚ್ ಯುವತಿಯ ಪ್ರೇಮಕ್ಕೆ ಬಿದ್ದ ಯುಪಿ ಯುವಕ, ಕಂಕಣಭಾಗ್ಯ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search