• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಎರಡು ದಿನದಲ್ಲಿ ಬರುತ್ತೇನೆ ಎಂದು ಪೋಷಕರಿಗೆ ಹೇಳಿದ್ದ ಆ ಯೋಧ ಮನೆಗೆ ಬಂದ, ಆದರೆ ಜೀವಂತವಾಗಿ ಅಲ್ಲ!

TNN Correspondent Posted On April 5, 2018
0


0
Shares
  • Share On Facebook
  • Tweet It

ಮುಂಬೈ: ಜಮ್ಮು-ಕಾಶ್ಮೀರ ಎಂದರೇನೇ ಹಾಗೆ. ಪುಸ್ತಕದಲ್ಲಿ ಬರೆದಿರುವುದನ್ನು ನೋಡಿಯೋ, ಕಾಶ್ಮೀರದ ಯಾವುದೋ ಒಂದು ಸುಂದರ ಚಿತ್ರವನ್ನು ನೋಡಿಯೋ ನಾವು ಅದು ಭೂ ಲೋಕದ ಸ್ವರ್ಗ ಎಂದು ಕರೆಯುತ್ತೇವೆ. ಆದರೆ ಅಲ್ಲಿ ಗಡಿ ಕಾಯುವ ಯೋಧರಿಗೆ ಮಾತ್ರ ಕಾಶ್ಮೀರ ಅಕ್ಷರಶಃ ನರಕ.

ಅದಕ್ಕೆ ನಾವು ಪ್ರತಿದಿನ ಸುದ್ದಿವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಯೋಧರು ಹುತಾತ್ಮರಾದ ಕುರಿತು ಸುದ್ದಿಗಳನ್ನು ಓದುವಾಗ ಸ್ವಲ್ಪ ವಿಚಲಿತರಾದರೂ, ದಿನಾಲೂ ಇದೇ ಸುದ್ದಿ ಎಂದು ನಾವು ಸುಮ್ಮನಾಗುತ್ತೇವೆ. ಆದರೆ ಪ್ರಾಣದ ಹಂಗು ತೊರೆದು ಹೋರಾಡುವವರು ಮಾತ್ರ ಕಾಶ್ಮೀರ ಗಡಿಯ ಸೈನಿಕರು.

ಇದೇ ಕಾಶ್ಮಿರದಿಂದ ಮೊನ್ನೆ ಆ ಚಿಗುರು ಮೀಸೆಯ, 20 ವರ್ಷದ ಯೋಧ ಮನೆಗೆ ಕರೆ ಮಾಡಿದ್ದ. ಇನ್ನೆರಡು ದಿನದಲ್ಲಿ ಮನೆಗೆ ಬರುತ್ತೇನೆ ಎಂದು ದೂರದ ಮಹಾರಾಷ್ಟ್ರದಲ್ಲಿರುವ ತಂದೆ-ತಾಯಿಗೆ ಹೇಳಿದ್ದ. ಹಾಗಂತ ಆ ಯೋಧನೇನೂ ಮನೆಗೆ ಬರದೇ ಇರಲಿಲ್ಲ. ಬಂದ, ಆದರೆ ಜೀವಂತವಾಗಿ ಅಲ್ಲ ಎಂಬುದೇ ದುಃಖಕರವಾದ ವಿಷಯ.

ಶುಭಂ ಸೂರ್ಯಕಾಂತ್ ಮುಸ್ತಾಪುರೆ ಎಂಬ ಆ ಯೋಧ ಮೊನ್ನೆಮಂಗಳವಾರ ಪೂಂಚ್ ನಲ್ಲಿ ಕಿಸ್ತಾನಿ ಸೈನಿಕರ ಗುಂಡಿಗೆ ಮೊನ್ನೆ ಬಲಿಯಾಗಿದ್ದು, ಬುಧವಾರ ಕಣ್ಣೀರಿನೊಂದಿಗೆ ಸ್ವಾಗತಿಸುವಾಗ ಎಲ್ಲರ ಕಣ್ಣಂಚಲ್ಲೂ ನೀರು ಬರುವಂತಿತ್ತು ದೃಶ್ಯ.

ಮಗನ ಸಾವಿನಿಂದ ದುಃಖಿತರಾದ ಪೋಷಕರು, ಎರಡೇ ದಿನದಲ್ಲಿ ಬರುತ್ತೇನೆ ಎಂದು ಫೋನಿನಲ್ಲಿ ಹೇಳಿದ್ದ. ಎರಡು ದಿನಗಳಲ್ಲಿ ಮನೆಗೆ ಬಂದ ನಿಜ, ಆದರೆ ಆತನ ದೇಹದ ಸುತ್ತ ಭಾರತದ ಧ್ವಜ ಸುತ್ತಲಾಗಿದೆ, ಅವನ ಉಸಿರಾಟ ನಿಂತು ಹೋಗಿದೆ ಎಂದು ಕಣ್ಣೀರಾಗುತ್ತಾರೆ. ಆಗೆಲ್ಲ ಮನಸ್ಸು ಕಾಶ್ಮೀರ ಗಡಿಯಲ್ಲಿ ಉಪಟಳ ಮಾಡುವ ಪಾಕಿಸ್ತಾನಿ ಸೈನಿಕರನ್ನು ಶಪಿಸುತ್ತದೆ.

0
Shares
  • Share On Facebook
  • Tweet It




Trending Now
ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
Tulunadu News April 27, 2026
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search