• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಎರಡು ದಿನದಲ್ಲಿ ಬರುತ್ತೇನೆ ಎಂದು ಪೋಷಕರಿಗೆ ಹೇಳಿದ್ದ ಆ ಯೋಧ ಮನೆಗೆ ಬಂದ, ಆದರೆ ಜೀವಂತವಾಗಿ ಅಲ್ಲ!

TNN Correspondent Posted On April 5, 2018


  • Share On Facebook
  • Tweet It

ಮುಂಬೈ: ಜಮ್ಮು-ಕಾಶ್ಮೀರ ಎಂದರೇನೇ ಹಾಗೆ. ಪುಸ್ತಕದಲ್ಲಿ ಬರೆದಿರುವುದನ್ನು ನೋಡಿಯೋ, ಕಾಶ್ಮೀರದ ಯಾವುದೋ ಒಂದು ಸುಂದರ ಚಿತ್ರವನ್ನು ನೋಡಿಯೋ ನಾವು ಅದು ಭೂ ಲೋಕದ ಸ್ವರ್ಗ ಎಂದು ಕರೆಯುತ್ತೇವೆ. ಆದರೆ ಅಲ್ಲಿ ಗಡಿ ಕಾಯುವ ಯೋಧರಿಗೆ ಮಾತ್ರ ಕಾಶ್ಮೀರ ಅಕ್ಷರಶಃ ನರಕ.

ಅದಕ್ಕೆ ನಾವು ಪ್ರತಿದಿನ ಸುದ್ದಿವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಯೋಧರು ಹುತಾತ್ಮರಾದ ಕುರಿತು ಸುದ್ದಿಗಳನ್ನು ಓದುವಾಗ ಸ್ವಲ್ಪ ವಿಚಲಿತರಾದರೂ, ದಿನಾಲೂ ಇದೇ ಸುದ್ದಿ ಎಂದು ನಾವು ಸುಮ್ಮನಾಗುತ್ತೇವೆ. ಆದರೆ ಪ್ರಾಣದ ಹಂಗು ತೊರೆದು ಹೋರಾಡುವವರು ಮಾತ್ರ ಕಾಶ್ಮೀರ ಗಡಿಯ ಸೈನಿಕರು.

ಇದೇ ಕಾಶ್ಮಿರದಿಂದ ಮೊನ್ನೆ ಆ ಚಿಗುರು ಮೀಸೆಯ, 20 ವರ್ಷದ ಯೋಧ ಮನೆಗೆ ಕರೆ ಮಾಡಿದ್ದ. ಇನ್ನೆರಡು ದಿನದಲ್ಲಿ ಮನೆಗೆ ಬರುತ್ತೇನೆ ಎಂದು ದೂರದ ಮಹಾರಾಷ್ಟ್ರದಲ್ಲಿರುವ ತಂದೆ-ತಾಯಿಗೆ ಹೇಳಿದ್ದ. ಹಾಗಂತ ಆ ಯೋಧನೇನೂ ಮನೆಗೆ ಬರದೇ ಇರಲಿಲ್ಲ. ಬಂದ, ಆದರೆ ಜೀವಂತವಾಗಿ ಅಲ್ಲ ಎಂಬುದೇ ದುಃಖಕರವಾದ ವಿಷಯ.

ಶುಭಂ ಸೂರ್ಯಕಾಂತ್ ಮುಸ್ತಾಪುರೆ ಎಂಬ ಆ ಯೋಧ ಮೊನ್ನೆಮಂಗಳವಾರ ಪೂಂಚ್ ನಲ್ಲಿ ಕಿಸ್ತಾನಿ ಸೈನಿಕರ ಗುಂಡಿಗೆ ಮೊನ್ನೆ ಬಲಿಯಾಗಿದ್ದು, ಬುಧವಾರ ಕಣ್ಣೀರಿನೊಂದಿಗೆ ಸ್ವಾಗತಿಸುವಾಗ ಎಲ್ಲರ ಕಣ್ಣಂಚಲ್ಲೂ ನೀರು ಬರುವಂತಿತ್ತು ದೃಶ್ಯ.

ಮಗನ ಸಾವಿನಿಂದ ದುಃಖಿತರಾದ ಪೋಷಕರು, ಎರಡೇ ದಿನದಲ್ಲಿ ಬರುತ್ತೇನೆ ಎಂದು ಫೋನಿನಲ್ಲಿ ಹೇಳಿದ್ದ. ಎರಡು ದಿನಗಳಲ್ಲಿ ಮನೆಗೆ ಬಂದ ನಿಜ, ಆದರೆ ಆತನ ದೇಹದ ಸುತ್ತ ಭಾರತದ ಧ್ವಜ ಸುತ್ತಲಾಗಿದೆ, ಅವನ ಉಸಿರಾಟ ನಿಂತು ಹೋಗಿದೆ ಎಂದು ಕಣ್ಣೀರಾಗುತ್ತಾರೆ. ಆಗೆಲ್ಲ ಮನಸ್ಸು ಕಾಶ್ಮೀರ ಗಡಿಯಲ್ಲಿ ಉಪಟಳ ಮಾಡುವ ಪಾಕಿಸ್ತಾನಿ ಸೈನಿಕರನ್ನು ಶಪಿಸುತ್ತದೆ.

  • Share On Facebook
  • Tweet It


- Advertisement -


Trending Now
ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
Tulunadu News May 24, 2025
ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
Tulunadu News May 23, 2025
Leave A Reply

  • Recent Posts

    • ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
    • ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!
    • ಮಾವೋವಾದಿ ರಾಷ್ಟ್ರೀಯ ನಾಯಕ, 1.5 ಕೋಟಿ ಘೋಷಿತ ನಕ್ಸಲ್ ಬಸವರಾಜ್ ಫಿನಿಶ್!
    • ಜೂನ್ 5 ಕ್ಕೆ ಅಯೋಧ್ಯೆ ರಾಮ ದರ್ಬಾರ್ ಪ್ರಾಣ ಪ್ರತಿಷ್ಟೆಗೆ ದಿನ ನಿಗದಿ... ಕೆಲಸಕಾರ್ಯಗಳು ಅಂತಿಮ ಹಂತಕ್ಕೆ!
    • ಕನ್ನಡತಿಯ ಮುಸ್ಲಿಂ ಹೆಣ್ಣುಮಕ್ಕಳ ದೈನಂದಿನ ಬದುಕಿನ ಕತೆಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
    • ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಫರ್! ಉಳಿದವರಿಗೆ ಎಚ್ಚರಿಕೆ ಗಂಟೆ..
  • Popular Posts

    • 1
      ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
    • 2
      ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • 3
      ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • 4
      ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • 5
      ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search