• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹುತಾತ್ಮ ಯೋಧನ ತಾಯಿಗೆ ಪಿಂಚಣಿ ನೀಡಲಿಲ್ಲ ಕಾಂಗ್ರೆಸ್ ಸರ್ಕಾರ, ಆದರೆ ಹಾಗೆ ಮಾಡಲಿಲ್ಲ ಮೋದಿ ಸರ್ಕಾರ!

TNN Correspondent Posted On April 9, 2018


  • Share On Facebook
  • Tweet It

ದೆಹಲಿ: ಅದು 2009. ಈಶಾನ್ಯ ಭಾಗದ ಚೀನಾ ಗಡಿಗೆ ಹಿಮಾಚಲ ಪ್ರದೇಶದ ರಿಂಕು ರಾಮ್ ಎಂಬ ಯೋಧ ನಿಯೋಜನೆಗೊಂಡಿದ್ದ. ಆದರೆ ವೈರಿಗಳ ದಾಳಿಗೆ ಆತ ಹುತಾತ್ಮನಾದ. ಎಂತಹ ದುರದೃಷ್ಟ ನೋಡಿ, ಆತನ ದೇಹವೂ ಪತ್ತೆಯಾಗಲಿಲ್ಲ. ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಯೋಧನ ಪತ್ತೆಹಚ್ಚಲು ಸಹ ಮುಂದಾಗಲಿಲ್ಲ.

ಯೋಧ ನಾಪತ್ತೆಯಾದ ಬಳಿಕ ಅವರ ತಾಯಿಗೆ ಪಿಂಚಣಿ ಸೌಲಭ್ಯ ಸೇರಿ ಹಲವು ಸೌಕರ್ಯ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಬಳಿಕ ಮರೆತು ಹೋಯಿತು. ಅತ್ತ ಮಗನನ್ನೂ ಕಳೆದುಕೊಂಡು, ಇತ್ತ ಆತನ ಪಿಂಚಣಿಯೂ ಬರದೆ ಕಷ್ಟದಲ್ಲೇ ಜೀವನ ಕಳೆಯತೊಡಗಿದ ಆ ತಾಯಿ ಪಿಂಚಣಿಗಾಗಿ ಸರ್ಕಾರಿ ಕಚೇರಿ ಅಲೆದರೂ ಪ್ರಯೋಜನವಾಗಲಿಲ್ಲ.

ಕೊನೆಗೂ ಇದರಿಂದ ಬೇಸತ್ತ ಆ ಯೋಧನ ತಾಯಿ ಸಶಸ್ತ್ರ ಪಡೆಗಳ ನ್ಯಾಯಾಧೀಕರಣದ ಮೆಟ್ಟಿಲೇರಬೇಕಾಯಿತು. ಕಾಂಗ್ರೆಸ್ಸಿನ ನಿರ್ಲಕ್ಷ್ಯ ಆ ತಾಯಿಯನ್ನು ಬಸವಳಿಯುವಂತೆ ಮಾಡಿತು. ಆದರೆ ಈ ವಿಷಯ ಯಾವಾಗ ಕೇಂದ್ರ ಸರ್ಕಾರಕ್ಕೆ ಗೊತ್ತಾಯಿತೋ, ಶೀಘ್ರ ಆ ತಾಯಿಗೆ ಸೌಲಭ್ಯ ನೀಡಲು ಮುಂದಾಯಿತು.

ಹೌದು, 2009ರಿಂದ ಅನ್ವಯವಾಗುವಂತೆ ಹುತಾತ್ಮ ಯೋಧನ ತಾಯಿಗೆ ಪಿಂಚಣಿ ಹಾಗೂ ಬರೋಬ್ಬರಿ 10 ಲಕ್ಷ ರೂ. ಗೌರವ ಧನ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಕುರಿತು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಯಾವುದೇ ಒಂದು ಸರ್ಕಾರ ದೇಶದ ಜನರಿಗೆ ಸಕಲ ಸೌಲಭ್ಯ ಒದಗಿಸುವ ಜತೆಗೆ ಗಡಿ ಕಾಯುವ ಸೈನಿಕರಿಗೆ ಸಕಲ ಸೌಲಭ್ಯ ನೀಡಿದಾಗ ಮಾತ್ರ ಆ ದೇಶ ಸುಭದ್ರವಾಗಿರಲು ಸಾಧ್ಯ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರ ಇತ್ತೀಚೆಗೆ ಸೈನಿಕರ ವೇತನ ಹೆಚ್ಚಿಸಿದೆ. ನವವಿವಾಹಿತ ಯೋಧರಿಗೆ ಅತಿಥಿ ಗೃಹ ನಿರ್ಮಿಸಲು ಅನುಮತಿ ನೀಡಿದೆ. ಅಷ್ಟೇ ಏಕೆ, ಈಗ ಯೋಧನ ಕಳೆದುಕೊಂಡ ತಾಯಿಯ ಕಣ್ಣೀರನ್ನೂ ಒರೆಸಿದೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search