• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅಮೇಥಿಯನ್ನು ಪ್ಯಾರಿಸ್ ಮಾಡುವ ರಾಹುಲ್ ಗಾಂಧಿ ಹಾಗೂ ಆತನ ಪಕ್ಷಕ್ಕೊಂದಿಷ್ಟು ಪ್ರಶ್ನೆಗಳು!

ವಿಶಾಲ್ ಗೌಡ ಕುಶಾಲನಗರ Posted On April 19, 2018


  • Share On Facebook
  • Tweet It

ಈ ರಾಹುಲ್ ಗಾಂಧಿಯವರು ವಾಸ್ತವವನ್ನು ಅರಿಯದೇಯೇ ಮಾತನಾಡುವುದು, ಚುನಾವಣೆ ಬಂದಾಗ ಮಾತ್ರ ಅಭಿವೃದ್ಧಿ ಕುರಿತು ಪ್ರಸ್ತಾಪಿಸುವುದು, ಇಲ್ಲದಿದ್ದರೆ ಬರೀ ಉಪದ್ವ್ಯಾಪದಲ್ಲೇ ಕಾಲ ಕಳೆಯುವುದು, ಚುನಾವಣೆಯಲ್ಲಿ ಸೋತ ಬಳಿಕ ವಿದೇಶಕ್ಕೆ ಹೋಗಿ ಮಜಾ ಮಾಡಿ ಬರುವುದು, ಅಸಂಬದ್ಧ ಹೇಳಿಕೆ ನೀಡುವುದು ಕರಗತವಾಗಿದೆಯೇ ಎಂಬ ಅನುಮಾನ ಕಾಡುವಷ್ಟರ ಮಟ್ಟಿಗೆ ಅವರು ಹೇಳಿಕೆ ನೀಡುತ್ತಾರೆ ಹಾಗೂ ಅದನ್ನು ಆಗಾಗ ಸಾಬೀತುಪಡಿಸುತ್ತಾರೆ.

ಇಂತಹ ಹಿನ್ನೆಲೆಯುಳ್ಳ ರಾಹುಲ್ ಗಾಂಧಿ ಈಗ ಹೊಸದೊಂದು ಹೇಳಿಕೆ ನೀಡಿದ್ದು, ಜನರಲ್ಲಿ ನಗಬೇಕೋ, ಅಳಬೇಕೋ ಎಂಬ ಜಿಗುಪ್ಸೆ ಮೂಡಿಸಿದ್ದಾರೆ. ಹೌದು, ಇತ್ತೀಚೆಗಷ್ಟೇ ತಮ್ಮ ಸಂಸತ್ ಕ್ಷೇತ್ರ ಅಮೇಥಿಗೆ ತೆರಳಿದ್ದ ರಾಹುಲ್ ಗಾಂಧಿ ಮುಂದಿನ 15 ವರ್ಷ ಅಮೇಥಿ ಕೊಡಿ, ಇದನ್ನು ಪ್ಯಾರಿಸ್ ಹಾಗೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಹಾಗಾದರೆ, ಮದುವೆಯಾಗಿ ನಾಲ್ಕಾರು ವರ್ಷಗಳ ಬಳಿಕ ತವರು ಮನೆಯ ಆಸೆ ಬಿಟ್ಟ ಮಹಿಳೆಯೊಬ್ಬಳು ಆಗಾಗ ತವರು ಮನೆಗೆ ಭೇಟಿ ನೀಡುವಂತೆ ಅಮೇಥಿಗೆ ಭೇಟಿ ನೀಡುವ ರಾಹುಲ್ ಗಾಂಧಿ ಹೇಳಿಕೆಯಲ್ಲಿ ಯಾವ ಉತ್ಪ್ರೇಕ್ಷೆಯಿದೆ? ಅವರು ನೀಡಿರುವ ಹೇಳಿಕೆ ಹೇಗೆ ತಪ್ಪಿನಿಂದ ಕೂಡಿದೆ? ಅಷ್ಟಕ್ಕೂ 15 ವರ್ಷ ಅಮೇಥಿಯನ್ನು ರಾಹುಲ್ ಗಾಂಧಿಗೆ ನೀಡಿದರೆ ಅದನ್ನು ಖಂಡಿತವಾಗಿಯೂ ಪ್ಯಾರಿಸ್ ಹಾಗೆ ಮಾಡುತ್ತಾರೆಯೇ?

ಈ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಎಂತಹ ಬಾಲಿಶತನದಿಂದ ಕೂಡಿದೆ ನೋಡಿ. ಕಳೆದ 14 ವರ್ಷದಿಂದ, ಅಂದರೆ 2004ರಿಂದಲೂ ರಾಹುಲ್ ಗಾಂಧಿ ಅಮೇಥಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿ ಬರುತ್ತಿದ್ದಾರೆ. ಅಂದರೆ ಅಮೇಥಿ ರಾಹುಲ್ ಸುಪರ್ದಿಗೆ ಬಂದು ಬರೋಬ್ಬರಿ 14 ವರ್ಷಗಳಾಗಿವೆ. ಹಾಗಾದರೆ 14 ವರ್ಷ ಅಮೇಥಿಯನ್ನು ರಾಹುಲ್ ಗಾಂಧಿ ಆಳಿದ್ದಾರೆ ಎಂದರೆ ಅಮೇಥಿ ಇಷ್ಟೊತ್ತಿಗಾಗಲೇ ಪ್ಯಾರಿಸ್ ಹಾಗೆ ಇರಬೇಕಿತ್ತಲ್ಲವೇ?

ಹೇಳಿ ರಾಹುಲ್ ಗಾಂಧಿಯವರೇ, 14 ವರ್ಷ ಅಮೇಥಿಯ ಸಂಸದರಾಗಿರುವ ನೀವು ಅಮೇಥಿಗೆ ನೀಡಿರುವ ಕೊಡುಗೆ ಏನು? ಇಷ್ಟು ವರ್ಷ ಅಮೇಥಿಯಲ್ಲಿ ಆಳ್ವಿಕೆ ನಡೆಸಿದರೂ ಅಮೇಥಿ ಏಕೆ ಪ್ಯಾರಿಸ್ ರೇಂಜಿಗೆ ಬೆಳೆದಿಲ್ಲ? ಪ್ಯಾರಿಸ್ ಬಿಡಿ, ಕನಿಷ್ಠ ಭಾರತದಲ್ಲೇ ಅಭಿವೃದ್ಧಿ ವಿಷಯವಾಗಿ ಅಮೇಥಿ ಏಕೆ ಚರ್ಚಿತವಾಗಿವಲ್ಲ? ಮುಂದಿನ ವರ್ಷ ಚುನಾವಣೆ ಇರುವುದರಿಂದ ಜನರಲ್ಲಿ ಇಂತಹ ಹುಸಿ ಕಲ್ಪನೆ ಬಿತ್ತುವ ಯಾವ ಹಕ್ಕು ನಿಮಗಿದೆ? 14 ವರ್ಷ ಕಡೆದು ಕಟ್ಟೆ ಹಾಕದ ನಿಮಗೆ ಮತ್ತೆ 15 ವರ್ಷ ಬೇಕೆ? ನಾಚಿಕೆಯಾಗುವುದಿಲ್ಲವೇ ನಿಮಗೆ?

ಇನ್ನು ಉತ್ತರ ಪ್ರದೇಶದ ರಾಯ್ ಬರೇಲಿ, ಅಮೇಥಿ ವಿಷಯಕ್ಕೆ ಬರುವುದಾದರೆ ಸ್ವಾತಂತ್ರ್ಯದ ನಂತರ ಈ ಕ್ಷೇತ್ರಗಳು ಕಾಂಗ್ರೆಸ್ ವಂಶಾಡಳಿತದ ಅಧಿಪತಿಗಳ ಸ್ವತ್ತೇ ಎಂಬಂತಾಗಿದೆ. ಅಂದರೆ ಕಾಂಗ್ರೆಸ್ ಸುಮಾರು 60 ವರ್ಷಗಳಿಂದ ಈ ಕ್ಷೇತ್ರಗಳನ್ನು ಆಳ್ವಿಕೆ ಮಾಡುತ್ತಿದೆ. ಆದರೂ ಈ ಕ್ಷೇತ್ರಗಳು ಪ್ಯಾರಿಸ್ ಬಿಡಿ, ಭಾರತದಲ್ಲೇ ಗುರುತಿಸುವ ಹಾಗೆ ಅಭಿವೃದ್ಧಿ ಹೊಂದಿಲ್ಲ ಅಂದರೆ, ಕಾಂಗ್ರೆಸ್ ಎಷ್ಟರಮಟ್ಟಿಗೆ ಈ ಕ್ಷೇತ್ರಗಳನ್ನು ದುರುಪಯೋಗಪಡಿಸಿಕೊಂಡಿರಬಹುದು ಯೋಚಿಸಿ. ರಾಹುಲ್ ಗಾಂಧಿಯ ಕುತಂತ್ರದ ಬಗ್ಗೆಯೂ ಜಾಗೃತರಾಗಿರಿ.

  • Share On Facebook
  • Tweet It


- Advertisement -


Trending Now
ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
ವಿಶಾಲ್ ಗೌಡ ಕುಶಾಲನಗರ May 23, 2025
ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
ವಿಶಾಲ್ ಗೌಡ ಕುಶಾಲನಗರ May 23, 2025
Leave A Reply

  • Recent Posts

    • ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!
    • ಮಾವೋವಾದಿ ರಾಷ್ಟ್ರೀಯ ನಾಯಕ, 1.5 ಕೋಟಿ ಘೋಷಿತ ನಕ್ಸಲ್ ಬಸವರಾಜ್ ಫಿನಿಶ್!
    • ಜೂನ್ 5 ಕ್ಕೆ ಅಯೋಧ್ಯೆ ರಾಮ ದರ್ಬಾರ್ ಪ್ರಾಣ ಪ್ರತಿಷ್ಟೆಗೆ ದಿನ ನಿಗದಿ... ಕೆಲಸಕಾರ್ಯಗಳು ಅಂತಿಮ ಹಂತಕ್ಕೆ!
    • ಕನ್ನಡತಿಯ ಮುಸ್ಲಿಂ ಹೆಣ್ಣುಮಕ್ಕಳ ದೈನಂದಿನ ಬದುಕಿನ ಕತೆಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
    • ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಫರ್! ಉಳಿದವರಿಗೆ ಎಚ್ಚರಿಕೆ ಗಂಟೆ..
    • ಲಷ್ಕರ್ ಈ ತೈಬಾ ಸಹಸಂಸ್ಥಾಪಕನಿಗೆ ಮನೆಯಲ್ಲಿಯೇ ಭೀಕರ ದಾಳಿ, ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು!
  • Popular Posts

    • 1
      ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • 2
      ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • 3
      ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • 4
      ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • 5
      ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search