• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಭಾರತದ ಪ್ರಮುಖರ ಹತ್ಯೆಗೆ ಸಂಚು ರೂಪಿಸಿದ ಉಗ್ರನ ಹೆಡೆಮುರಿ ಕಟ್ಟಿದ ಮಹಾ ಪೊಲೀಸ್

TNN Correspondent Posted On May 18, 2018


  • Share On Facebook
  • Tweet It

ಮುಂಬೈ: ಭಾರತದ ವಿರುದ್ಧ ಮತ್ತು ದೇಶದಲ್ಲಿ ಕುಕೃತ್ಯಗಳನ್ನು ನಡೆಸಲು ಸದಾ ಪ್ರಯತ್ನಿಸುವ ಪಾಕಿ ಮೂಲದ ಭಯೋತ್ಪಾದಕರ ದೇಶದ ಪೊಲೀಸರ ಕೈಗೆ ಸಿಲುಕಿ ಏಟು ತಿನ್ನುವುದು ಸಾಮಾನ್ಯ. ಇದೀಗ ದೇಶದ ಪ್ರಮುಖ ನಾಯಕರನ್ನು ಗುರಿಯಾಗಿಟ್ಟುಕೊಂಡು ಕುಕೃತ್ಯಗಳನ್ನು ನಡೆಸಲು ಯೋಜಿಸಿದ ಭಯೋತ್ಪಾದಕನ್ನೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

32 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರದ ಭಯೋತ್ಪಾದಕ ನಿಯಂತ್ರಣ ದಳ ಬಂಧಿಸಿದ್ದು, ಭಾರತದ ಪ್ರಮುಖ ಮುಖಂಡರನ್ನು ಹತ್ಯೆ ಮಾಡಲು ಈತ ಸಂಚು ರೂಪಿಸುತ್ತಿದ್ದ ಎನ್ನಲಾಗಿದೆ. ಪಾಕಿಸ್ತಾನದ ಕರಾಚಿಯಲ್ಲಿ  ಭಯೋತ್ಪಾದಕ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದುಕೊಂಡಿದ್ದಾನೆ ಎಂದು ಎಟಿಎಸ್ ತಿಳಿಸಿದೆ.

ಆರೋಪಿ ಭಾರಿ ಆಗಂತುಕ ಬಾಂಬ್ ಗಳನ್ನು, ಸೊಫಿಸ್ಟಿಕೇಟೆಡ್ ಮದ್ದುಗುಂಡುಗಳನ್ನು, ಸುಸೈಡ್ ಬಾಂಬ್ ಗಳನ್ನು, ಗನ್ ಗಳನ್ನು ಬಳಸುವ ತರಬೇತಿಯನ್ನು ಕರಾಚಿ ಮೂಲದ ಭಯೋತ್ಪಾದಕ ಸಂಘಟನೆಯಲ್ಲಿ ತರಬೇತಿ ಪಡೆದಿದ್ದಾನೆ.

ಈತ ಮುಂಬೈನಲ್ಲಿ ಪೊಲೀಸರ ಲಿಸ್ಟ್ ನಲ್ಲಿರುವ ವ್ಯಕ್ತಿಯೊಬ್ಬನ ಜೊತೆ ಸಂಪರ್ಕ ಸಾಧಿಸಿದ್ದು, ಆತನ ಮೂಲಕ ಶಾರ್ಜಾಗೆ ಪ್ರಯಾಣಿಸಿ, ಅಲ್ಲಿ ಆತನ ಪತ್ರವನ್ನು ತೋರಿಸಿ ಭಯೋತ್ಪಾದಕ ಸಂಘಟನೆ ಸೇರಿದ್ದಾನೆ. ದುಬೈನಿಂದ ಕರಾಚಿಗೆ ಹೋಗಿ ಅಲ್ಲಿ ಭಯೋತ್ಪಾದಕ ಸಂಘಟನೆಯಿಂದ ತರಬೇತಿ ಪಡೆದುಕೊಂಡಿದ್ದಾನೆ. ಈತನನ್ನು ಮೇ.11 ರಂದು ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ ಬಂಧಿಸಿ, ವಿಚಾರಣೆ ಆರಂಭಿಸಿದೆ.

ಬಂಧಿತ ವ್ಯಕ್ತಿ ಸಾರ್ವಜನಿಕರು ಸೇರುವ ಸ್ಥಳದಲ್ಲಿ ಮತ್ತು ದೇಶದ ಪ್ರಮುಖ ವ್ಯಕ್ತಿಗಳನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ. ಶಂಕಿತ ಉಗ್ರನನ್ನು ಸಿಟಿ ಸಿವಿಲ್ ಕೋರ್ಟ್ ಗೆ ಹಾಜರುಪಡಿಸಿದ್ದು, ಮೇ.21ರವರೆಗೆ ಪೊಲೀಸರ ವಶಕ್ಕೆ ನೀಡಲಾಗಿದೆ.

  • Share On Facebook
  • Tweet It


- Advertisement -


Trending Now
ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
Tulunadu News May 22, 2025
ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
Tulunadu News May 22, 2025
Leave A Reply

  • Recent Posts

    • ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!
    • ಮಾವೋವಾದಿ ರಾಷ್ಟ್ರೀಯ ನಾಯಕ, 1.5 ಕೋಟಿ ಘೋಷಿತ ನಕ್ಸಲ್ ಬಸವರಾಜ್ ಫಿನಿಶ್!
    • ಜೂನ್ 5 ಕ್ಕೆ ಅಯೋಧ್ಯೆ ರಾಮ ದರ್ಬಾರ್ ಪ್ರಾಣ ಪ್ರತಿಷ್ಟೆಗೆ ದಿನ ನಿಗದಿ... ಕೆಲಸಕಾರ್ಯಗಳು ಅಂತಿಮ ಹಂತಕ್ಕೆ!
    • ಕನ್ನಡತಿಯ ಮುಸ್ಲಿಂ ಹೆಣ್ಣುಮಕ್ಕಳ ದೈನಂದಿನ ಬದುಕಿನ ಕತೆಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
    • ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಫರ್! ಉಳಿದವರಿಗೆ ಎಚ್ಚರಿಕೆ ಗಂಟೆ..
    • ಲಷ್ಕರ್ ಈ ತೈಬಾ ಸಹಸಂಸ್ಥಾಪಕನಿಗೆ ಮನೆಯಲ್ಲಿಯೇ ಭೀಕರ ದಾಳಿ, ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು!
    • ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡುತ್ತೇವೆ ಎಂದು ಹೇಳಿರಲಿಲ್ಲ - ಡಿಸಿಎಂ
    • ಮದರಸಾ ಪಠ್ಯದಲ್ಲಿ ಆಪರೇಶನ್ ಸಿಂಧೂರ್ ಅಳವಡಿಕೆ!
  • Popular Posts

    • 1
      ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • 2
      ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • 3
      ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!
    • 4
      ಮಾವೋವಾದಿ ರಾಷ್ಟ್ರೀಯ ನಾಯಕ, 1.5 ಕೋಟಿ ಘೋಷಿತ ನಕ್ಸಲ್ ಬಸವರಾಜ್ ಫಿನಿಶ್!
    • 5
      ಜೂನ್ 5 ಕ್ಕೆ ಅಯೋಧ್ಯೆ ರಾಮ ದರ್ಬಾರ್ ಪ್ರಾಣ ಪ್ರತಿಷ್ಟೆಗೆ ದಿನ ನಿಗದಿ... ಕೆಲಸಕಾರ್ಯಗಳು ಅಂತಿಮ ಹಂತಕ್ಕೆ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search