• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ತಮ್ಮದೇ ಅಂಗಣದ ಅವೈಜ್ಞಾನಿಕ ಕಾಮಗಾರಿಗೆ ಕಣ್ಣು ಮುಚ್ಚಿದ ಮನಪಾ

Hanumantha Kamath Posted On May 23, 2018
0


0
Shares
  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್ಸ್ ಮತ್ತು ಗುತ್ತಿಗೆದಾರರ ಅಪವಿತ್ರ ಮೈತ್ರಿಯಿಂದ ಕಾಮಗಾರಿಗಳು ಎಷ್ಟು ಅವೈಜ್ಞಾನಿಕವಾಗಿರುತ್ತವೆ ಮತ್ತು ಕಳಪೆಯಾಗಿರುತ್ತವೆ ಎನ್ನುವುದು ನಮಗೆ ಗೊತ್ತು. ಇವತ್ತು ನಾವೇನೂ ತುಂಬಾ ದೂರ ಹೋಗಬೇಕಿಲ್ಲ. ಪಾಲಿಕೆಯ ಆವರಣವನ್ನೇ ತೆಗೆದುಕೊಳ್ಳೋಣ. ಆವರಣದಲ್ಲೇ ಇವರು ಮಾಡಿದ ಕಳಪೆ ಕಾಮಗಾರಿ ಮತ್ತು ಅವೈಜ್ಞಾನಿಕ ಕೆಲಸಗಳು ಎಷ್ಟರಮಟ್ಟಿಗೆ ಇಲ್ಲಿನ ಇಂಜಿನಿಯರ್ಸ್ ತಮ್ಮ ಕೆಲಸದ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎನ್ನುವುದನ್ನು ತೋರಿಸುತ್ತದೆ.

ಪಾಲಿಕೆಯ ಹಿಂದಿನ ದ್ವಾರದ ಹತ್ತಿರ ಬನ್ನಿ. ಆ ಗೇಟಿನ ಒಳಗೆ ಕಾಲಿಟ್ಟ ಕೂಡಲೇ ನಿಮಗೆ ಮ್ಯಾನ್ ಹೋಲ್ ಒಂದು ಸ್ವಾಗತ ಮಾಡುತ್ತದೆ. ನೀವು ಆ ಮ್ಯಾನ್ ಹೋಲ್ ಮುಚ್ಚಳವನ್ನು ನಿರ್ಲಕ್ಷಿಸಿ ಮುಂದೆ ಹೋಗಲು ಸಾಧ್ಯವೇ ಇಲ್ಲ. ಯಾಕೆಂದರೆ ಅದನ್ನು ಗುತ್ತಿಗೆದಾರರು ಹಾಗೆ ಎಲ್ಲರಿಗೂ ಎದ್ದು ಕಾಣುವಂತೆ ಇಟ್ಟಿದ್ದಾರೆ. ನೀವು ಕಾರಿನಲ್ಲಿ ಒಳಗೆ ಬರುವವರಾದರೆ ಒಂದಿಷ್ಟು ಹೆಚ್ಚು ಜಾಗ್ರತೆ ಮಾಡಿ. ಇಲ್ಲದಿದ್ದರೆ ನಿಮ್ಮ ಕಾರಿಗೆ ಪೆಟ್ಟಾದೀತು. ಇನ್ನು ದ್ವಿಚಕ್ರ ವಾಹನದಲ್ಲಿ ಒಳ ಪ್ರವೇಶಿಸುವವರಿಗೆ ಇದೊಂದು ಸರ್ಕಲ್ ತರಹ ಆಗುತ್ತದೆ. ಅಷ್ಟಕ್ಕೂ ರಸ್ತೆಯಿಂದ ಮೇಲೆ ಎಲ್ಲರಿಗೂ ಕಾಣುವಂತೆ ಈ ಮ್ಯಾನ್ ಹೋಲ್ ಯಾಕೆ ಇಟ್ಟಿದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಬಹುಶ: ಪಾಲಿಕೆಯ ಇಂಜಿನಿಯರ್ ಗಳಿಗೆ ಕೆಳಗೆ ಬಂದು ಪರೀಕ್ಷಿಸುವ ಕೆಲಸ ಕೊಡುವುದು ಯಾಕೆ, ಅವರಿಗೆ ಮೊದಲ ಮಹಡಿಯ ಕಿಟಕಿಯಿಂದಲೇ ಕೆಲಸ ಕಾಣಲಿ ಎನ್ನುವುದು ಗುತ್ತಿಗೆದಾರರ ಐಡಿಯಾ ಇರಬಹುದಾ ಎನ್ನುವುದು ಪ್ರಶ್ನೆ.

ವಿಷಯ ಏನೆಂದರೆ ಪಾಲಿಕೆಯವರು ಒಂದು ಕಾಮಗಾರಿ ಮಾಡಿಸಲು ಅಂದಾಜು ಪಟ್ಟಿ ತಯಾರಿಸಬೇಕು. ನಂತರ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಬೇಕು. ಕಾಮಗಾರಿ ನಡೆಯುವಾಗ ಪಾಲಿಕೆಯ ಇಂಜಿನಿಯರ್ಸ್ ಅಲ್ಲಿ ಭೇಟಿ ನೀಡಿ ಪರೀಕ್ಷಿಸಬೇಕು. ಆದರೆ ನಮ್ಮ ಪಾಲಿಕೆಯ ಇಂಜಿನಿಯರ್ಸ್ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡುವುದೇ ಇಲ್ಲ. ಗುತ್ತಿಗೆದಾರ ಮಾಡಿದ್ದೇ ಕಾಮಗಾರಿ. ಕಳಪೆ ಆದಷ್ಟು ಇಂಜಿನಿಯರ್ಸ್ ಮತ್ತು ಅಧಿಕಾರಿಗಳಿಗೆ ಲಾಭ. ಅವರು ಕೆಲವು ಸಮಯದ ಬಳಿಕ ಮತ್ತೆ ಬೇಕಾದರೆ ಹಣ ಸ್ಯಾಂಕ್ಷನ್ ಮಾಡಿಸಿ ಕೆಲಸ ಮಾಡಿಸುತ್ತಾರೆ. ಮತ್ತೆ ಕಮೀಷನ್ ಹೊಡೆಯಲು ಅವಕಾಶ. ಇದರಿಂದ ಯಾವ ಅಧಿಕಾರಿಗೂ ಜನರ ತೆರಿಗೆಯ ಹಣದ ಮೇಲೆ ಪ್ರೀತಿ ಇಲ್ಲ ಎಂದು ಸಾಬೀತಾಗಿದೆ. ಇಲ್ಲದಿದ್ದರೆ ರಸ್ತೆಗಿಂತ ಎತ್ತರದಲ್ಲಿ ಯಾರು ತಾನೇ ಮ್ಯಾನ್ ಹೋಲ್ ನಿರ್ಮಿಸುತ್ತಾರೆ. ಇದರ್ಥ ಏನೆಂದರೆ ಕಾಮಗಾರಿ ಯಾರಿಗೆ ಕೊಡಲಾಗಿದೆಯೋ ಆ ಗುತ್ತಿಗೆದಾರರಿಗೆ ಕೆಲಸದ ಪರಿಜ್ಞಾನ ಇಲ್ಲ. ಮ್ಯಾನ್ ಹೋಲ್ ಒಂದು ಪ್ರದೇಶದಲ್ಲಿ ಅಳವಡಿಸುವಾಗ ಅದು ರಸ್ತೆಯ ಮಟ್ಟಕ್ಕಿಂತ ಮೇಲೆ ಇರಬಾರದು ಎನ್ನುವ ಕನಿಷ್ಟ ಜ್ಞಾನ ಕೂಡ ಇಲ್ಲ. ಗುತ್ತಿಗೆದಾರರು ಯಾರ್ಯಾರಿಗೋ ಕಮೀಷನ್ ಕೊಟ್ಟು ಕೆಲಸ ಗಿಟ್ಟಿಸಿಕೊಂಡಿರುತ್ತಾರೆ. ಅವರಿಗೆ ಮ್ಯಾನ್ ಹೋಲ್ ರಸ್ತೆಯ ಮೇಲೆ ಎತ್ತರದಲ್ಲಿ ಇರಬಾರದು ಎನ್ನುವಷ್ಟು ಬುದ್ಧಿ ಇಲ್ಲ ಎಂದೇ ಇಟ್ಟುಕೊಳ್ಳೋಣ. ಅಂತವರ ಕೈಗೆ ಕಾಮಗಾರಿ ಕೊಡುತ್ತಾರಲ್ಲ, ನಮ್ಮ ಪಾಲಿಕೆಯ ಅಧಿಕಾರಿಗಳು, ಅವರಿಗೆ ಏನು ಹೇಳುವುದು? ಇನ್ನು ಪಾಲಿಕೆಯ ಆವರಣದಲ್ಲಿ ಇಂತಹ ಕಾಮಗಾರಿ ಆದರೂ ಅದನ್ನು ನೋಡದ ಇಂಜಿನಿಯರ್ ಗಳಿಗೆ ಏನು ಹೇಳುವುದು.

ಇಂಜಿನಿಯರ್ ಗಳಿಗೆ ಆಶ್ಚರ್ಯವಾಯಿತಾ, ಅಸಹ್ಯವಾಯಿತಾ.

ನನಗೆ ಇವರ ಇಷ್ಟು ನಿರ್ಲಕ್ಷ್ಯ ನೋಡಿ ತಡೆಯಲಾಗಲಿಲ್ಲ. ಸೀದಾ ಪಾಲಿಕೆಯ ಇಂಜಿನಿಯರ್ ಗಳಿಗೆ ಈ ವಿಷಯ ತಲುಪಿಸಿದೆ. ಅವರನ್ನು ಕರೆದು ಈ ಅವೈಜ್ಞಾನಿಕ ಕಾಮಗಾರಿಯನ್ನು ತೋರಿಸಿದೆ. ಅವರಿಗೆನೆ ಆಶ್ಚರ್ಯವಾಯಿತು. ಆದಷ್ಟು ಬೇಗ ಇದನ್ನು ಸರಿಪಡಿಸುವ ಭರವಸೆ ಕೊಟ್ಟರು. ಅದರ ನಂತರ ಮತ್ತೆ ಕಾಮಗಾರಿ ನಡೆಸಿ ಮ್ಯಾನ್ ಹೋಲ್ ರಸ್ತೆಗೆ ಸರಿಯಾಗಿ ಇರುವಂತೆ ನೋಡಿಕೊಂಡಿದ್ದಾರೆ. ನನ್ನ ಪ್ರಶ್ನೆ ಇಷ್ಟೇ. ನಾನು ಪಾಲಿಕೆಯ ಆವರಣದಲ್ಲಿ ಇದನ್ನು ನೋಡಿ, ಅಲ್ಲಿನ ಇಂಜಿನಿಯರ್ಸ್ ಗಮನಕ್ಕೆ ತಂದ ಕಾರಣ ಇದನ್ನು ಸರಿಪಡಿಸಲಾಯಿತು. ಇಂತಹುದೇ ನಮ್ಮ ಪಾಲಿಕೆ ವ್ಯಾಪ್ತಿಯ ಅರವತ್ತು ವಾರ್ಡುಗಳಲ್ಲಿ ಎಷ್ಟಿದೆ ಎಂದು ಹುಡುಕುತ್ತಾ ಹೋಗುವುದು ಯಾರು? ಗುತ್ತಿಗೆದಾರರು ಹೀಗೆ ಅವೈಜ್ಞಾನಿಕವಾಗಿ ಕೆಲಸ ಮಾಡುತ್ತಿದ್ದರೆ ಅವರನ್ನು ತಿದ್ದುವವರು ಯಾರು? ಕಮೀಷನ್ ತೆಗೆದುಕೊಂಡರೆ ಪಾಲಿಕೆಯ ಅಧಿಕಾರಿಗಳ, ಇಂಜಿನಿಯರ್ಸ್ ಕೆಲಸ ಮುಗಿಯಿತಾ? ಜನ ಇವರ ಕಳಪೆ ಮತ್ತು ಮನಸ್ಸಿಗೆ ಬಂದ ರೀತಿಯ ಕೆಲಸದಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಇಂಜಿನಿಯರ್ಸ್ ಪಾಲಿಕೆಯಲ್ಲಿ ಚೇರ್ ಬಿಸಿ ಮಾಡಲು ಇರುವುದಾ? ಇವತ್ತು ನಾನು ಹೇಳಿದ್ದು ಅವೈಜ್ಞಾನಿಕ ಕೆಲಸವೊಂದರ ಸ್ಯಾಂಪಲ್. ನಾಳೆ ಇದೇ ಮ್ಯಾನ್ ಹೋಲ್ ಇರುವ ಪ್ರದೇಶಕ್ಕೆ ಪಾಲಿಕೆ ಇಂಟರ್ ಲಾಕ್ ಹಾಕಿದೆಯಲ್ಲ, ಅದರ ಕಳಪೆ ಕಾಮಗಾರಿಯನ್ನು ವಿವರಿಸುತ್ತೇನೆ. ಅದರ ಫೋಟೋ ಕೂಡ ಇದೆ. ತಮ್ಮದೇ ಪಾಲಿಕೆಯ ಅಂಗಣದಲ್ಲಿ ಕಳಪೆ ಕಾಮಗಾರಿ ಮಾಡಿಸುವ ಅಧಿಕಾರಿಗಳು ಉಳಿದ ಕಡೆ ಬಿಡುತ್ತಾರಾ!

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Hanumantha Kamath October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Hanumantha Kamath October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search