• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ತಮ್ಮದೇ ಅಂಗಣದ ಅವೈಜ್ಞಾನಿಕ ಕಾಮಗಾರಿಗೆ ಕಣ್ಣು ಮುಚ್ಚಿದ ಮನಪಾ

Hanumantha Kamath Posted On May 23, 2018


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್ಸ್ ಮತ್ತು ಗುತ್ತಿಗೆದಾರರ ಅಪವಿತ್ರ ಮೈತ್ರಿಯಿಂದ ಕಾಮಗಾರಿಗಳು ಎಷ್ಟು ಅವೈಜ್ಞಾನಿಕವಾಗಿರುತ್ತವೆ ಮತ್ತು ಕಳಪೆಯಾಗಿರುತ್ತವೆ ಎನ್ನುವುದು ನಮಗೆ ಗೊತ್ತು. ಇವತ್ತು ನಾವೇನೂ ತುಂಬಾ ದೂರ ಹೋಗಬೇಕಿಲ್ಲ. ಪಾಲಿಕೆಯ ಆವರಣವನ್ನೇ ತೆಗೆದುಕೊಳ್ಳೋಣ. ಆವರಣದಲ್ಲೇ ಇವರು ಮಾಡಿದ ಕಳಪೆ ಕಾಮಗಾರಿ ಮತ್ತು ಅವೈಜ್ಞಾನಿಕ ಕೆಲಸಗಳು ಎಷ್ಟರಮಟ್ಟಿಗೆ ಇಲ್ಲಿನ ಇಂಜಿನಿಯರ್ಸ್ ತಮ್ಮ ಕೆಲಸದ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎನ್ನುವುದನ್ನು ತೋರಿಸುತ್ತದೆ.

ಪಾಲಿಕೆಯ ಹಿಂದಿನ ದ್ವಾರದ ಹತ್ತಿರ ಬನ್ನಿ. ಆ ಗೇಟಿನ ಒಳಗೆ ಕಾಲಿಟ್ಟ ಕೂಡಲೇ ನಿಮಗೆ ಮ್ಯಾನ್ ಹೋಲ್ ಒಂದು ಸ್ವಾಗತ ಮಾಡುತ್ತದೆ. ನೀವು ಆ ಮ್ಯಾನ್ ಹೋಲ್ ಮುಚ್ಚಳವನ್ನು ನಿರ್ಲಕ್ಷಿಸಿ ಮುಂದೆ ಹೋಗಲು ಸಾಧ್ಯವೇ ಇಲ್ಲ. ಯಾಕೆಂದರೆ ಅದನ್ನು ಗುತ್ತಿಗೆದಾರರು ಹಾಗೆ ಎಲ್ಲರಿಗೂ ಎದ್ದು ಕಾಣುವಂತೆ ಇಟ್ಟಿದ್ದಾರೆ. ನೀವು ಕಾರಿನಲ್ಲಿ ಒಳಗೆ ಬರುವವರಾದರೆ ಒಂದಿಷ್ಟು ಹೆಚ್ಚು ಜಾಗ್ರತೆ ಮಾಡಿ. ಇಲ್ಲದಿದ್ದರೆ ನಿಮ್ಮ ಕಾರಿಗೆ ಪೆಟ್ಟಾದೀತು. ಇನ್ನು ದ್ವಿಚಕ್ರ ವಾಹನದಲ್ಲಿ ಒಳ ಪ್ರವೇಶಿಸುವವರಿಗೆ ಇದೊಂದು ಸರ್ಕಲ್ ತರಹ ಆಗುತ್ತದೆ. ಅಷ್ಟಕ್ಕೂ ರಸ್ತೆಯಿಂದ ಮೇಲೆ ಎಲ್ಲರಿಗೂ ಕಾಣುವಂತೆ ಈ ಮ್ಯಾನ್ ಹೋಲ್ ಯಾಕೆ ಇಟ್ಟಿದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಬಹುಶ: ಪಾಲಿಕೆಯ ಇಂಜಿನಿಯರ್ ಗಳಿಗೆ ಕೆಳಗೆ ಬಂದು ಪರೀಕ್ಷಿಸುವ ಕೆಲಸ ಕೊಡುವುದು ಯಾಕೆ, ಅವರಿಗೆ ಮೊದಲ ಮಹಡಿಯ ಕಿಟಕಿಯಿಂದಲೇ ಕೆಲಸ ಕಾಣಲಿ ಎನ್ನುವುದು ಗುತ್ತಿಗೆದಾರರ ಐಡಿಯಾ ಇರಬಹುದಾ ಎನ್ನುವುದು ಪ್ರಶ್ನೆ.

ವಿಷಯ ಏನೆಂದರೆ ಪಾಲಿಕೆಯವರು ಒಂದು ಕಾಮಗಾರಿ ಮಾಡಿಸಲು ಅಂದಾಜು ಪಟ್ಟಿ ತಯಾರಿಸಬೇಕು. ನಂತರ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಬೇಕು. ಕಾಮಗಾರಿ ನಡೆಯುವಾಗ ಪಾಲಿಕೆಯ ಇಂಜಿನಿಯರ್ಸ್ ಅಲ್ಲಿ ಭೇಟಿ ನೀಡಿ ಪರೀಕ್ಷಿಸಬೇಕು. ಆದರೆ ನಮ್ಮ ಪಾಲಿಕೆಯ ಇಂಜಿನಿಯರ್ಸ್ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡುವುದೇ ಇಲ್ಲ. ಗುತ್ತಿಗೆದಾರ ಮಾಡಿದ್ದೇ ಕಾಮಗಾರಿ. ಕಳಪೆ ಆದಷ್ಟು ಇಂಜಿನಿಯರ್ಸ್ ಮತ್ತು ಅಧಿಕಾರಿಗಳಿಗೆ ಲಾಭ. ಅವರು ಕೆಲವು ಸಮಯದ ಬಳಿಕ ಮತ್ತೆ ಬೇಕಾದರೆ ಹಣ ಸ್ಯಾಂಕ್ಷನ್ ಮಾಡಿಸಿ ಕೆಲಸ ಮಾಡಿಸುತ್ತಾರೆ. ಮತ್ತೆ ಕಮೀಷನ್ ಹೊಡೆಯಲು ಅವಕಾಶ. ಇದರಿಂದ ಯಾವ ಅಧಿಕಾರಿಗೂ ಜನರ ತೆರಿಗೆಯ ಹಣದ ಮೇಲೆ ಪ್ರೀತಿ ಇಲ್ಲ ಎಂದು ಸಾಬೀತಾಗಿದೆ. ಇಲ್ಲದಿದ್ದರೆ ರಸ್ತೆಗಿಂತ ಎತ್ತರದಲ್ಲಿ ಯಾರು ತಾನೇ ಮ್ಯಾನ್ ಹೋಲ್ ನಿರ್ಮಿಸುತ್ತಾರೆ. ಇದರ್ಥ ಏನೆಂದರೆ ಕಾಮಗಾರಿ ಯಾರಿಗೆ ಕೊಡಲಾಗಿದೆಯೋ ಆ ಗುತ್ತಿಗೆದಾರರಿಗೆ ಕೆಲಸದ ಪರಿಜ್ಞಾನ ಇಲ್ಲ. ಮ್ಯಾನ್ ಹೋಲ್ ಒಂದು ಪ್ರದೇಶದಲ್ಲಿ ಅಳವಡಿಸುವಾಗ ಅದು ರಸ್ತೆಯ ಮಟ್ಟಕ್ಕಿಂತ ಮೇಲೆ ಇರಬಾರದು ಎನ್ನುವ ಕನಿಷ್ಟ ಜ್ಞಾನ ಕೂಡ ಇಲ್ಲ. ಗುತ್ತಿಗೆದಾರರು ಯಾರ್ಯಾರಿಗೋ ಕಮೀಷನ್ ಕೊಟ್ಟು ಕೆಲಸ ಗಿಟ್ಟಿಸಿಕೊಂಡಿರುತ್ತಾರೆ. ಅವರಿಗೆ ಮ್ಯಾನ್ ಹೋಲ್ ರಸ್ತೆಯ ಮೇಲೆ ಎತ್ತರದಲ್ಲಿ ಇರಬಾರದು ಎನ್ನುವಷ್ಟು ಬುದ್ಧಿ ಇಲ್ಲ ಎಂದೇ ಇಟ್ಟುಕೊಳ್ಳೋಣ. ಅಂತವರ ಕೈಗೆ ಕಾಮಗಾರಿ ಕೊಡುತ್ತಾರಲ್ಲ, ನಮ್ಮ ಪಾಲಿಕೆಯ ಅಧಿಕಾರಿಗಳು, ಅವರಿಗೆ ಏನು ಹೇಳುವುದು? ಇನ್ನು ಪಾಲಿಕೆಯ ಆವರಣದಲ್ಲಿ ಇಂತಹ ಕಾಮಗಾರಿ ಆದರೂ ಅದನ್ನು ನೋಡದ ಇಂಜಿನಿಯರ್ ಗಳಿಗೆ ಏನು ಹೇಳುವುದು.

ಇಂಜಿನಿಯರ್ ಗಳಿಗೆ ಆಶ್ಚರ್ಯವಾಯಿತಾ, ಅಸಹ್ಯವಾಯಿತಾ.

ನನಗೆ ಇವರ ಇಷ್ಟು ನಿರ್ಲಕ್ಷ್ಯ ನೋಡಿ ತಡೆಯಲಾಗಲಿಲ್ಲ. ಸೀದಾ ಪಾಲಿಕೆಯ ಇಂಜಿನಿಯರ್ ಗಳಿಗೆ ಈ ವಿಷಯ ತಲುಪಿಸಿದೆ. ಅವರನ್ನು ಕರೆದು ಈ ಅವೈಜ್ಞಾನಿಕ ಕಾಮಗಾರಿಯನ್ನು ತೋರಿಸಿದೆ. ಅವರಿಗೆನೆ ಆಶ್ಚರ್ಯವಾಯಿತು. ಆದಷ್ಟು ಬೇಗ ಇದನ್ನು ಸರಿಪಡಿಸುವ ಭರವಸೆ ಕೊಟ್ಟರು. ಅದರ ನಂತರ ಮತ್ತೆ ಕಾಮಗಾರಿ ನಡೆಸಿ ಮ್ಯಾನ್ ಹೋಲ್ ರಸ್ತೆಗೆ ಸರಿಯಾಗಿ ಇರುವಂತೆ ನೋಡಿಕೊಂಡಿದ್ದಾರೆ. ನನ್ನ ಪ್ರಶ್ನೆ ಇಷ್ಟೇ. ನಾನು ಪಾಲಿಕೆಯ ಆವರಣದಲ್ಲಿ ಇದನ್ನು ನೋಡಿ, ಅಲ್ಲಿನ ಇಂಜಿನಿಯರ್ಸ್ ಗಮನಕ್ಕೆ ತಂದ ಕಾರಣ ಇದನ್ನು ಸರಿಪಡಿಸಲಾಯಿತು. ಇಂತಹುದೇ ನಮ್ಮ ಪಾಲಿಕೆ ವ್ಯಾಪ್ತಿಯ ಅರವತ್ತು ವಾರ್ಡುಗಳಲ್ಲಿ ಎಷ್ಟಿದೆ ಎಂದು ಹುಡುಕುತ್ತಾ ಹೋಗುವುದು ಯಾರು? ಗುತ್ತಿಗೆದಾರರು ಹೀಗೆ ಅವೈಜ್ಞಾನಿಕವಾಗಿ ಕೆಲಸ ಮಾಡುತ್ತಿದ್ದರೆ ಅವರನ್ನು ತಿದ್ದುವವರು ಯಾರು? ಕಮೀಷನ್ ತೆಗೆದುಕೊಂಡರೆ ಪಾಲಿಕೆಯ ಅಧಿಕಾರಿಗಳ, ಇಂಜಿನಿಯರ್ಸ್ ಕೆಲಸ ಮುಗಿಯಿತಾ? ಜನ ಇವರ ಕಳಪೆ ಮತ್ತು ಮನಸ್ಸಿಗೆ ಬಂದ ರೀತಿಯ ಕೆಲಸದಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಇಂಜಿನಿಯರ್ಸ್ ಪಾಲಿಕೆಯಲ್ಲಿ ಚೇರ್ ಬಿಸಿ ಮಾಡಲು ಇರುವುದಾ? ಇವತ್ತು ನಾನು ಹೇಳಿದ್ದು ಅವೈಜ್ಞಾನಿಕ ಕೆಲಸವೊಂದರ ಸ್ಯಾಂಪಲ್. ನಾಳೆ ಇದೇ ಮ್ಯಾನ್ ಹೋಲ್ ಇರುವ ಪ್ರದೇಶಕ್ಕೆ ಪಾಲಿಕೆ ಇಂಟರ್ ಲಾಕ್ ಹಾಕಿದೆಯಲ್ಲ, ಅದರ ಕಳಪೆ ಕಾಮಗಾರಿಯನ್ನು ವಿವರಿಸುತ್ತೇನೆ. ಅದರ ಫೋಟೋ ಕೂಡ ಇದೆ. ತಮ್ಮದೇ ಪಾಲಿಕೆಯ ಅಂಗಣದಲ್ಲಿ ಕಳಪೆ ಕಾಮಗಾರಿ ಮಾಡಿಸುವ ಅಧಿಕಾರಿಗಳು ಉಳಿದ ಕಡೆ ಬಿಡುತ್ತಾರಾ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search