• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಕ್ಷಮೆ ಕೇಳುವ ಮುನ್ನ ಭಯೋತ್ಪಾದನೆ ವಿಶ್ವರೂಪ ಗೊತ್ತಿರಲಿಲ್ಲವೇ ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾ?

ನವೀನ್ ಶೆಟ್ಟಿ ಮಂಗಳೂರು Posted On June 11, 2018
0


0
Shares
  • Share On Facebook
  • Tweet It

ಈ ಸಿನಿಮಾ ನಟ-ನಟಿಯರಿಗೆಲ್ಲ ಏನಾಗಿದೆ? ಒಂದು ಕಡೆ ನೋಡಿದರೆ ಕರ್ನಾಟಕದಲ್ಲಿ ಜನಿಸಿ, ಇಲ್ಲಿಯ ಸಿನಿಮಾದಲ್ಲಿ ನಟಿಸಿ, ಇಲ್ಲಿಯ ಅನ್ನ ತಿಂದು, ಗಾಳಿ ಸೇವಿಸಿ ತಮಿಳುನಾಡಿನಲ್ಲಿ ಹೆಸರು ಮಾಡಿದರು ಎಂಬ ಮಾತ್ರಕ್ಕೆ ಕಾವೇರಿ ವಿಷಯದಲ್ಲಿ ತಮಿಳುನಾಡು ಪರ ಮಾತನಾಡುವ ಮೂಲಕ ಕನ್ನಡ ನಾಡಿನ ಋಣವನ್ನು ಸಾರಾಸಗಟವಾಗಿ ತಿರಸ್ಕರಿಸಿದ್ದಾರೆ.

ಇನ್ನು ಭಾರತದಲ್ಲೇ ಇದ್ದು, ಜಗತ್ತಿನ ವಿದ್ಯಮಾನಗಲೆಲ್ಲವನ್ನೂ ತಿಳಿದುಕೊಂಡು, ಇಲ್ಲಿಯ ಜನರ ಪ್ರೀತಿ-ಬೆಂಬಲ ಗಳಿಸಿದ ಬಾಲಿವುಡ್ ನಟಿ, ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ನ ಕ್ವಾಂಟಿಕೋ ಧಾರಾವಾಹಿಯಲ್ಲಿ ವ್ಯಕ್ತಿಯೊಬ್ಬ ಭಯೋತ್ಪಾದಕ ಎಂದು ಆತನ ಕೊರಳಲ್ಲಿದ್ದ ರುದ್ರಾಕ್ಷಿಯಿಂದ ಪತ್ತೆ ಹಚ್ಚುವ ಕುರಿತ ದೃಶ್ಯದಲ್ಲಿ ನಟಿಸಿದ್ದಾರೆ. ಆ ಮೂಲಕ ಯಾವುದೇ ಕಾರಣವಿಲ್ಲದೆ ರುದ್ರಾಕ್ಷಿ ಹಾಕಿಕೊಂಡವರೆಲ್ಲ ಭಯೋತ್ಪಾಕದರು ಹಾಗೂ ಅವರೆಲ್ಲರೂ ಹಿಂದೂಗಳು ಎಂಬರ್ಥ ಇರುವ ಸನ್ನಿವೇಶದಲ್ಲಿ ನಟಿಸಿದ್ದಾರೆ.

ಹಾಗಾದರೆ ರುದ್ರಾಕ್ಷಿ ಹಾಕಿಕೊಂಡವರೆಲ್ಲ ಭಯೋತ್ಪಾದಕರೇ? ಇಷ್ಟೆಲ್ಲ ತಿಳಿದುಕೊಂಡಿರುವ, ಓದಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಅವರಿಗೆ ಭಯೋತ್ಪಾಕದರ ಸಂಕೇತ ಯಾವುದು ಎಂಬ ಕುರಿತು ಅರಿವಿಲ್ಲವೇ? ಈ ಪ್ರಿಯಾಂಕಾ ಚೋಪ್ರಾ ಅಷ್ಟೊಂದು ಮುಗ್ಧರೇ? ಏಕೆ ಇವರು ಭಾರತದ ಮರ್ಯಾದೆ ತೆಗೆಯಲು ಯತ್ನಿಸುತ್ತಿದ್ದಾರೆ? ಏಕೆ ಇವರಿಗೆ ಹುಟ್ಟಿದ ನೆಲ, ಜಲದ ಬಗ್ಗೆ ಇವರಿಗೆ ಗೌರವವಿಲ್ಲ?

ನೀವೇ ಯೋಚಿಸಿ ನೋಡಿ, ಇಡೀ ವಿಶ್ವದಲ್ಲೇ ಭಯೋತ್ಪಾದನೆ ಎಂದರೆ ಒಂದೇ ಧರ್ಮೀಯರೇ ಮುನ್ನೆಲೆಗೆ ಬರುತ್ತಾರೆ. ಖಂಡಿತ ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲ ಮುಸ್ಲಿಮರೇ ಎಂಬುದು ಕಟುವಾಸ್ತವವೇ ಆಗಿದೆ. ಅದಕ್ಕೆ ತವರೂರು ಪಾಕಿಸ್ತಾನ ಎಂದು ಎಲ್ಲರಿಗೂ ಗೊತ್ತಿದೆ.

ಪರಿಸ್ಥಿತಿ ಹೀಗಿರುವಾಗ, ಪ್ರಿಯಾಂಕಾ ಚೋಪ್ರಾ ಅವರು ಯಾವ ಆಧಾರದ ಮೇಲೆ ವ್ಯಕ್ತಿಯ ಕೊರಳಲ್ಲಿದ್ದ ರುದ್ರಾಕ್ಷಿಯನ್ನು ಗುರುತಿಸಿ, ಆತ ಭಯೋತ್ಪಾದಕ ಎಂದು ಗುರುತಿಸಿದರು? ಅಂತಹ ಸನ್ನಿವೇಶದ ಚಿತ್ರೀಕರಣಕ್ಕೆ ಯಾಕೆ ಒಪ್ಪಿಕೊಂಡರು? ಈಗ ಎಲ್ಲ ಮುಗಿದ ಮೇಲೆ ಜನರ ಕ್ಷಮೆ ಕೇಳಿದರೆ ಏನು ಪ್ರಯೋಜನ? ಭಯೋತ್ಪಾದನೆಯಲ್ಲಿ ಯಾರು ತೊಡಗಿದ್ದಾರೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಪ್ರಿಯಾಂಕಾ ಚೋಪ್ರಾ ಈಗ ಕ್ಷಮೆ ಕೇಳಿದರೆ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಅವರು ಮೊದಲೇ ಬುದ್ಧಿಗೆ ಸ್ವಲ್ಪ ಕೆಲಸ ಕೊಡಬೇಕಿತ್ತು.

ಅಷ್ಟೇ ಅಲ್ಲ, ಈ ಹಿಂದೆ ಟಿವಿ ಆ್ಯಂಕರ್ ಎದುರು ಹಲ್ಲು ಗೀಂಜುತ್ತ ಮಾತನಾಡಿದ್ದ ಪ್ರಿಯಾಂಕಾ ಚೋಪ್ರಾ, ಭಾರತೀಯ ಸಿನಿಮಾ ಎಂದರೆ ಸೊಂಟ ಹಾಗೂ ಎದೆ ತೋರಿಸುವ ಅನ್ವರ್ಥಕ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಭಾರತೀಯ ಸಿನಿಮಾದಲ್ಲಿ ಸೊಂಟ, ಎದೆ ಹೊರತಾಗಿ ಎಂತಹ ಸಾಂಸ್ಕೃತಿಕ, ದೇಶ ಪ್ರೇಮದ ಸಿನಿಮಾಗಳು ಬಂದಿವೆ ಎಂಬುದನ್ನೂ ಗಮನಿಸಿದ ಪ್ರಿಯಾಂಕಾ ಚೋಪ್ರಾ, ದೇಶದ ಸಿನಿಮಾ ರಂಗವನ್ನು ಹರಾಜು ಹಾಕಿದ್ದರು.

ಇಂತಹ ಹಿನ್ನೆಲೆಯಿರುವ ಪ್ರಿಯಾಂಕಾ ಚೋಪ್ರಾ ಈಗ ಭಾರತೀಯರ ಕ್ಷಮೆ ಕೇಳಿರುವುದು ಬಾಲಿಷವೆನಿಸಿದೆ. ಎಲ್ಲ ಮಾಡಿದ ಮೇಲೆ ಕ್ಷಮೆ ಕೇಳುವುದಕ್ಕಿಂತ, ಮೊದಲೇ ವಿವೇಚನೆಗೆ ತುಸು ಮಸಾಜು ಮಾಡಿದ್ದರೆ ಪ್ರಿಯಾಂಕಾ ಚೋಪ್ರಾ ತಾವೂ ಮುಜಗರ ಅನುಭವಿಸುತ್ತಿರಲಿಲ್ಲ, ಭಾರತೀಯರಿಗೂ ಮುಜುಗರವಾಗುತ್ತಿರಲಿಲ್ಲ. ಇನ್ನಾದರೂ ಬುದ್ಧಿ ಕಲಿಯಿರಿ ಪ್ರಿಯಾಂಕಾ ಚೋಪ್ರಾ.

0
Shares
  • Share On Facebook
  • Tweet It




Trending Now
ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
ನವೀನ್ ಶೆಟ್ಟಿ ಮಂಗಳೂರು October 28, 2025
ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
ನವೀನ್ ಶೆಟ್ಟಿ ಮಂಗಳೂರು October 28, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
  • Popular Posts

    • 1
      ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • 2
      ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • 3
      ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • 4
      ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • 5
      ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!

  • Privacy Policy
  • Contact
© Tulunadu Infomedia.

Press enter/return to begin your search