• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ನಕ್ಸಲರ ಬೆದರಿಕೆಯಿಂದ ಆತಂಕಿತರಾಗಿದ್ದ ಹಳ್ಳಿಗರಲ್ಲಿ ಧೈರ್ಯ ತುಂಬಿದ ಸಂಸದ ನಳಿನ್

Satyaraj Posted On June 21, 2018
0


0
Shares
  • Share On Facebook
  • Tweet It

Sullia: Special Correspondent:
ನಕ್ಸಲ್ ಪೀಡಿತ ಭಾರತದ 35 ಜಿಲ್ಲೆಗಳಿಗೆ ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸುಳ್ಯ ತಾಲೂಕಿನ ನಕ್ಸಲ್ ಪೀಡಿತ ಪ್ರದೇಶ ಮಾಡಪ್ಪಾಡಿ ಹಾಡಿಕಲ್ಲು ಪ್ರದೇಶಕ್ಕೆ ಭೇಟಿ ಕೊಟ್ಟು ಸ್ಥಳೀಯರೊಂದಿಗೆ ಚರ್ಚಿಸಿದರು. ಇತ್ತೀಚೆಗೆ ನಕ್ಸಲರು ಭೇಟಿಕೊಟ್ಟು ಮನೆಯವರನ್ನು ಹೆದರಿಸಿ ಊಟ ಮಾಡಿ ಹೋದ ಮನೆಗಳಿಗೆ ತೆರಳಿ ಮನೆಯವರಿಗೆ ಧೈರ್ಯ ತುಂಬಿದರು. ನಿಮ್ಮ ರಕ್ಷಣೆಗೆ ಕೇಂದ್ರ ಸರಕಾರ ಬದ್ಧವಾಗಿದೆ. ಈಗಾಗಲೇ ನಕ್ಸಲ್ ವಿರೋಧಿ ಯೋಧರ ಪಡೆ ಬಿರುಸಿನ ಕೊಬಿಂಗ್ ನಡೆಸುತ್ತಿದೆ. ತಾವು ಕ್ಷಣಕ್ಷಣಕ್ಕೂ ಪೊಲೀಸ್ ಇಲಾಖೆ ಮತ್ತು ಎಎನ್ ಎಫ್ ನಿಂದ ಮಾಹಿತಿ ಪಡೆಯುತ್ತಿರುವುದಾಗಿ ಮನೆಯವರಿಗೆ ತಿಳಿಸಿದರು. ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಕೇಂದ್ರ ಸರಕಾರ ಬಿಡುಗಡೆಗೊಳಿಸಿರುವ ಅನುದಾನದಲ್ಲಿ ಪ್ರತಿ ಜಿಲ್ಲೆಗೆ 28 ಕೋಟಿಯ ತನಕ ಸಿಗುತ್ತದೆ. ನಕ್ಸಲರು ಯಾವ ಕಾರಣಕ್ಕೆ ಆರಂಭದಲ್ಲಿ ಆಯುಧ ಕೈಗೆ ತೆಗೆದುಕೊಂಡಿದ್ದಾರೋ ಅದು ಕಾಲಕ್ರಮೇಣ ಬದಲಾಗಿದೆ. ಹಿಂದೆ ಶ್ರೀಮಂತ ಭೂಮಾಲೀಕರ ವಿರುದ್ಧ ಹೋರಾಡಲು ಆರಂಭವಾದ ನಕ್ಸಲರ ಹೋರಾಟ ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರುದ್ಧದ ದ್ವೇಷವಾಗಿ ಬದಲಾಗಿದೆ. ಮೋದಿಯವರು ತೆಗೆದುಕೊಂಡ ಅಭಿವೃದ್ಧಿ ಕಾರ್ಯಗಳಿಂದ ಛತ್ತಿಸ್ ಗಡ್ ನಲ್ಲಿ ಆಗಿರುವ ಅಭಿವೃದ್ಧಿಯಿಂದ ನಕ್ಸಲರು ಶಸ್ತ್ರ ಶರಣಾಗತಿ ಮಾಡಿ ಕೇಂದ್ರದ ಸರಕಾರದ ಸಾಧನೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ ನಕ್ಸಲರ ನಡುವಿನ ಕೆಲವು ಗುಂಪುಗಳು ಮೋದಿಯವರನ್ನು ದ್ವೇಷಿಸುವುದೇ ತಮ್ಮ ಗುರಿ ಎಂದು ಅಂದುಕೊಂಡಿರುವುದರಿಂದ ನಕ್ಸಲ್ ಹೋರಾಟ ಯಾವ ದಿಕ್ಕಿಗೆ ಸಾಗುತ್ತಿದೆ ಎಂದು ಗೊತ್ತಾಗುತ್ತಿದೆ ಎಂದರು.
ಸುಳ್ಯದ ಬಲ್ಪದಲ್ಲಿ ತಮ್ಮ ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಈಗಾಗಲೇ 20 ಕೋಟಿ ಅನುದಾನದಲ್ಲಿ ಅಲ್ಲಿ ಅಭಿವೃದ್ಧಿ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ಸೋಲಾರ್ ಲ್ಯಾಂಪ್, ಆರು ಸರಕಾರಿ ಶಾಲೆಗಳಲ್ಲಿ ಈ-ಕ್ಲಾಸ್, ಕಮ್ಯೂನಿಟಿ ಹಾಲ್, ಮಾದರಿ ಗ್ರಾಮ ಪಂಚಾಯತ್ ಕಟ್ಟಡ, ಎರಡು ಅಂಗನವಾಡಿ ಮತ್ತು ಆರು ಶಾಲೆಗಳನ್ನು ಅಭಿವೃದ್ಧಿ, ಮನೆಗಳಲ್ಲಿ ವಿದ್ಯುತ್ ಸಂಪರ್ಕ, ಗುಡಿಸಲು ಮುಕ್ತ, ಸೀಮೆಎಣ್ಣೆ ಮುಕ್ತ ಗ್ರಾಮವನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.
ಸಂಸದರೊಂದಿಗೆ ಶಾಸಕ ಎಸ್ ಅಂಗಾರ, ಕ್ಷೇತ್ರದ ಅಧ್ಯಕ್ಷ ವೆಂಕಟ್ ಒಳಲಂಬೆ ಮತ್ತಿತ್ತರರು ಉಪಸ್ಥಿತರಿದ್ದರು. ನಕ್ಸಲರ ಉಪಟಳದಿಂದ ಆತಂಕಗೊಂಡಿದ್ದ ಹಳ್ಳಿಗರು ಸಂಸದರ ದೀಢೀರ್ ಭೇಟಿಯಿಂದ ಸಮಾಧಾನಗೊಂಡಿದ್ದಾರೆ .
0
Shares
  • Share On Facebook
  • Tweet It


Nalin Kumar Kateel Sullia


Trending Now
ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
Satyaraj June 16, 2026
Najlepsze bonusy i sloty w polskim kasynie online
Satyaraj May 29, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ

  • Privacy Policy
  • Contact
© Tulunadu Infomedia.

Press enter/return to begin your search