• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಅಸ್ಸಾಂನ ಮೋತಿ ಭಾಯಿಯ ಈ ಗುಣವನ್ನೇ ಎಲ್ಲ ಮುಸ್ಲಿಮರು ಅಳವಡಿಸಿಕೊಂಡರೆ ಎಷ್ಟು ಚೆಂದ ಅಲ್ಲವೇ?

TNN Correspondent Posted On June 24, 2018
0


0
Shares
  • Share On Facebook
  • Tweet It

ದೇಶದ ಎಷ್ಟೋ ಭಾಗಗಳಲ್ಲಿ, ಹಳ್ಳಿಗಳಲ್ಲಿ ಮುಸ್ಲಿಮರು ಹಿಂದೂಗಳು ಸೇರಿ ಎಲ್ಲ ಧರ್ಮದವರೊಂದಿಗೆ ಸೌಹಾರ್ದತೆಯೊಂದಿಗೆ

ಬಾಳುತ್ತಾರೆ. ಆದರೆ ಕೆಲವು ಮುಸ್ಲಿಂ ಮೂಲಭೂತವಾದಿಗಳಿಂದ, ಮದರಸಾಗಳ ದ್ವೇಷ ಬಿತ್ತುವ ಮಾತುಗಳಿಂದ ಇತ್ತೀಚೆಗೆ

ತುಂಬ ಮುಸ್ಲಿಮರು ಲವ್ ಜಿಹಾದ್, ಮತಾಂತರ ಸೇರಿ ಸಮಾಜದ ಶಾಂತಿಗೆ ಧಕ್ಕೆಯಾಗುವ ಹಲವು ವಿಚಾರಗಳಲ್ಲಿ

ತೊಡಗಿದ್ದಾರೆ.

ಆದರೆ ಅಸ್ಸಾಂನ ಕಮ್ರುಪ್ ಗ್ರಾಮಾಂತರ ಜಿಲ್ಲೆಯ ರೊಂಗ್ ಮೊಹೊಲ್ ಗ್ರಾಮದಲ್ಲಿ ಮೋತಿ ಭಾಯಿ ಎಂಬ ಮುಸ್ಲಿಮರನ್ನು

ನೋಡಿದರೆ ಹೆಮ್ಮೆಯೆನಿಸುತ್ತದೆ. ಇದ್ದರೆ ಇಂತಹ ಮುಸ್ಲಿಮರಿರಬೇಕು, ಅಳವಡಿಸಿಕೊಂಡರೆ ಇಂತಹ ಆದರ್ಶ

ಅಳವಡಿಸಿಕೊಳ್ಳಬೇಕು ಎನಿಸುತ್ತದೆ ಹಾಗೂ ಎಲ್ಲ ಮುಸ್ಲಿಮರೂ ಹೀಗೆಯೇ ಇದ್ದರೆ ಎಷ್ಟು ಚೆಂದ ಅಲ್ಲವೇ ಎನಿಸುತ್ತದೆ.

ಹೌದು, ಕಳೆದ 48 ವರ್ಷಗಳಿಂದ ಮೋತಿ ಭಾಯಿ ರೋಂಗ್ ಮೊಹೊಲ್ ಗ್ರಾಮದಲ್ಲಿ ಹಿಂದೂ ಮುಸ್ಲಿಮರ ನಡುವೆ

ಸೌಹಾರ್ದತೆಯ ಸೇತುವೆ ನಿರ್ಮಾಣ ಮಾಡುತ್ತಿದ್ದು, ಪ್ರಸ್ತುತ ಅದನ್ನು ಗಟ್ಟಿಯಾಗಿ ನಿರ್ಮಿಸಿದ್ದಾರೆ. ಆ ಮೂಲಕ ಇಡೀ

ಗ್ರಾಮದ ಹಿಂದೂ ಹಾಗೂ ಮುಸ್ಲಿಮರಿಗೆ ಇವರು ಮೋತಿ ಭಾಯಿಯಾಗಿಯೇ ಪ್ರಸಿದ್ಧರಾಗಿದ್ದಾರೆ.

ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದೇಳುವ ಮೋತಿ ಭಾಯಿ, ಮೊದಲು ಮೋತಿಯುರ್ ರಹಮಾನ್ ಮಸೀದಿಗೆ ತೆರಳಿ

ನಮಾಜು ಮಾಡುತ್ತಾರೆ. ಅಲ್ಲಿ ನಮಾಜು ಮಾಡಿದ ಬಳಿಕ, ಸೀದಾ ಶಿವ ದೇವಾಲಯಕ್ಕೆ ಬರುತ್ತಾರೆ. ಇಲ್ಲಿ ಭಕ್ತರು ಶಿವನಿಗೆ

ಪ್ರಾರ್ಥನೆ, ಪೂಜೆ ಸಲ್ಲಿಸಿದ ಬಳಿಕ ಮೋತಿ ಭಾಯಿಯೂ ಕೈ ಮುಗಿಯುತ್ತಾರೆ. ಬಳಿಕ ಇದೇ ಮೋತಿ ಭಾಯಿಯೇ ಗುಡಿಯ ಕಸ

ಗುಡಿಸಿ, ನೀರು ಚಿಮುಕಿಸಿ ಸ್ವಚ್ಛಗೊಳಿಸುತ್ತಾರೆ.

ಆದರೆ ಮುಸ್ಲಿಮನಾದರೂ ಹಿಂದೂ ದೇವಾಲಯಕ್ಕೆ ಸಲ್ಲಿಸುವ ಮೋತಿ ಭಾಯಿಯ ಈ ಕಾರ್ಯಕ್ಕೆ ಯಾವ ಮುಸ್ಲಿಮರೂ

ಅಡ್ಡಿಯಾಗಿಲ್ಲ. ಯಾವ ಹಿಂದೂಗಳು ತಕರಾರು ತೆಗೆದಿಲ್ಲ. ಬದಲಾಗಿ ಮುಸ್ಲಿಮರ ಹಬ್ಬದಲ್ಲಿ ಇಡೀ ಹಿಂದೂಗಳು

ಪಾಲ್ಗೊಳ್ಳುತ್ತಾರೆ. ಶಿವರಾತ್ರಿಯಂದು ಇಡೀ ಮುಸ್ಲಿಮರು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಹೀಗೆಯೇ ಮುಸ್ಲಿಮರು

ಸೌಹಾರ್ದತೆ ಮೆರೆದರೆ ಎಷ್ಟು ಚೆಂದ ಅಲ್ಲವೇ?

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Tulunadu News September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Tulunadu News September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search