• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅಸ್ಸಾಂನ ಮೋತಿ ಭಾಯಿಯ ಈ ಗುಣವನ್ನೇ ಎಲ್ಲ ಮುಸ್ಲಿಮರು ಅಳವಡಿಸಿಕೊಂಡರೆ ಎಷ್ಟು ಚೆಂದ ಅಲ್ಲವೇ?

TNN Correspondent Posted On June 24, 2018


  • Share On Facebook
  • Tweet It

ದೇಶದ ಎಷ್ಟೋ ಭಾಗಗಳಲ್ಲಿ, ಹಳ್ಳಿಗಳಲ್ಲಿ ಮುಸ್ಲಿಮರು ಹಿಂದೂಗಳು ಸೇರಿ ಎಲ್ಲ ಧರ್ಮದವರೊಂದಿಗೆ ಸೌಹಾರ್ದತೆಯೊಂದಿಗೆ

ಬಾಳುತ್ತಾರೆ. ಆದರೆ ಕೆಲವು ಮುಸ್ಲಿಂ ಮೂಲಭೂತವಾದಿಗಳಿಂದ, ಮದರಸಾಗಳ ದ್ವೇಷ ಬಿತ್ತುವ ಮಾತುಗಳಿಂದ ಇತ್ತೀಚೆಗೆ

ತುಂಬ ಮುಸ್ಲಿಮರು ಲವ್ ಜಿಹಾದ್, ಮತಾಂತರ ಸೇರಿ ಸಮಾಜದ ಶಾಂತಿಗೆ ಧಕ್ಕೆಯಾಗುವ ಹಲವು ವಿಚಾರಗಳಲ್ಲಿ

ತೊಡಗಿದ್ದಾರೆ.

ಆದರೆ ಅಸ್ಸಾಂನ ಕಮ್ರುಪ್ ಗ್ರಾಮಾಂತರ ಜಿಲ್ಲೆಯ ರೊಂಗ್ ಮೊಹೊಲ್ ಗ್ರಾಮದಲ್ಲಿ ಮೋತಿ ಭಾಯಿ ಎಂಬ ಮುಸ್ಲಿಮರನ್ನು

ನೋಡಿದರೆ ಹೆಮ್ಮೆಯೆನಿಸುತ್ತದೆ. ಇದ್ದರೆ ಇಂತಹ ಮುಸ್ಲಿಮರಿರಬೇಕು, ಅಳವಡಿಸಿಕೊಂಡರೆ ಇಂತಹ ಆದರ್ಶ

ಅಳವಡಿಸಿಕೊಳ್ಳಬೇಕು ಎನಿಸುತ್ತದೆ ಹಾಗೂ ಎಲ್ಲ ಮುಸ್ಲಿಮರೂ ಹೀಗೆಯೇ ಇದ್ದರೆ ಎಷ್ಟು ಚೆಂದ ಅಲ್ಲವೇ ಎನಿಸುತ್ತದೆ.

ಹೌದು, ಕಳೆದ 48 ವರ್ಷಗಳಿಂದ ಮೋತಿ ಭಾಯಿ ರೋಂಗ್ ಮೊಹೊಲ್ ಗ್ರಾಮದಲ್ಲಿ ಹಿಂದೂ ಮುಸ್ಲಿಮರ ನಡುವೆ

ಸೌಹಾರ್ದತೆಯ ಸೇತುವೆ ನಿರ್ಮಾಣ ಮಾಡುತ್ತಿದ್ದು, ಪ್ರಸ್ತುತ ಅದನ್ನು ಗಟ್ಟಿಯಾಗಿ ನಿರ್ಮಿಸಿದ್ದಾರೆ. ಆ ಮೂಲಕ ಇಡೀ

ಗ್ರಾಮದ ಹಿಂದೂ ಹಾಗೂ ಮುಸ್ಲಿಮರಿಗೆ ಇವರು ಮೋತಿ ಭಾಯಿಯಾಗಿಯೇ ಪ್ರಸಿದ್ಧರಾಗಿದ್ದಾರೆ.

ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದೇಳುವ ಮೋತಿ ಭಾಯಿ, ಮೊದಲು ಮೋತಿಯುರ್ ರಹಮಾನ್ ಮಸೀದಿಗೆ ತೆರಳಿ

ನಮಾಜು ಮಾಡುತ್ತಾರೆ. ಅಲ್ಲಿ ನಮಾಜು ಮಾಡಿದ ಬಳಿಕ, ಸೀದಾ ಶಿವ ದೇವಾಲಯಕ್ಕೆ ಬರುತ್ತಾರೆ. ಇಲ್ಲಿ ಭಕ್ತರು ಶಿವನಿಗೆ

ಪ್ರಾರ್ಥನೆ, ಪೂಜೆ ಸಲ್ಲಿಸಿದ ಬಳಿಕ ಮೋತಿ ಭಾಯಿಯೂ ಕೈ ಮುಗಿಯುತ್ತಾರೆ. ಬಳಿಕ ಇದೇ ಮೋತಿ ಭಾಯಿಯೇ ಗುಡಿಯ ಕಸ

ಗುಡಿಸಿ, ನೀರು ಚಿಮುಕಿಸಿ ಸ್ವಚ್ಛಗೊಳಿಸುತ್ತಾರೆ.

ಆದರೆ ಮುಸ್ಲಿಮನಾದರೂ ಹಿಂದೂ ದೇವಾಲಯಕ್ಕೆ ಸಲ್ಲಿಸುವ ಮೋತಿ ಭಾಯಿಯ ಈ ಕಾರ್ಯಕ್ಕೆ ಯಾವ ಮುಸ್ಲಿಮರೂ

ಅಡ್ಡಿಯಾಗಿಲ್ಲ. ಯಾವ ಹಿಂದೂಗಳು ತಕರಾರು ತೆಗೆದಿಲ್ಲ. ಬದಲಾಗಿ ಮುಸ್ಲಿಮರ ಹಬ್ಬದಲ್ಲಿ ಇಡೀ ಹಿಂದೂಗಳು

ಪಾಲ್ಗೊಳ್ಳುತ್ತಾರೆ. ಶಿವರಾತ್ರಿಯಂದು ಇಡೀ ಮುಸ್ಲಿಮರು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಹೀಗೆಯೇ ಮುಸ್ಲಿಮರು

ಸೌಹಾರ್ದತೆ ಮೆರೆದರೆ ಎಷ್ಟು ಚೆಂದ ಅಲ್ಲವೇ?

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search