• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನನಗೆ ರಾಹುಲ್ ಗಾಂಧಿ ಮುಖ ಕಂಡರೇನೇ ಆಗುವುದಿಲ್ಲ ಎಂದು ಹೇಳಿದ್ದು ಯಾರು ಗೊತ್ತಾ?

TNN Correspondent Posted On June 29, 2018


  • Share On Facebook
  • Tweet It

ಡೆಹ್ರಾಡೂನ್: ರಾಹುಲ್ ಗಾಂಧಿ! ಈ ಹೆಸರು ಕಾಂಗ್ರೆಸ್ ಮುಖಂಡರಿಗೆ ವಿನೀತ ಭಾವ ಮೂಡಿಸುತ್ತದೆ. ಇವರೇ ನಮ್ಮ ನಾಯಕ ಎಂದು ಬೀಗುವಂತೆ ಮಾಡುತ್ತದೆ. ಆದರೆ ಬೇರೆಯವರಿಗೆ ಮಾತ್ರ ರಾಹುಲ್ ಗಾಂಧಿ ಮಾತಿಗೆ ನಿಂತರೆ ನಗು ಬರುತ್ತದೆ. ಸಾಮಾಜಿಕ ಜಾಲತಾಣದಲ್ಲಂತೂ ರಾಹುಲ್ ಗಾಂಧಿಯವರನ್ನು ಟ್ರೋಲ್ ಮಾಡುವವರ ಸಂಖ್ಯೆ ಅಪಾರವಾಗಿದೆ. ದೃಶ್ಯಮಾಧ್ಯಮಗಳೂ ಅವರ ಹೇಳಿಕೆಗಳನ್ನು ಹಾಸ್ಯವಾಗಿ ತೋರಿಸುತ್ತವೆ.

ಇಂತಹ ರಾಹುಲ್ ಗಾಂಧಿಯವರು ಈಗಾಗಲೇ ಲೋಕಸಭೆ ಚುನಾವಣೆಗೆ ಸಿದ್ಧರಾಗಿದ್ದಾರೆ. ತಮ್ಮ ನೇತೃತ್ವದಲ್ಲಿ ಯುಪಿಎ ಚುನಾವಣೆ ನಡೆದು, ಗೆಲ್ಲುವ ಮೂಲಕ ದೇಶದ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಈಗಾಗಲೇ ಅವರು ತಾವೇ ಮುಂದಿನ ಪ್ರಧಾನಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಸಹ.

ಆದರೆ ಇಂತಹ ಮುಖಂಡ ರಾಹುಲ್ ಗಾಂಧಿಯವರ ಮುಖ ಎಂದರೇನೆ ನನಗೆ ಇಷ್ಟವಿಲ್ಲ ಎಂದು ಅಂತಾರಾಷ್ಟ್ರೀಯ ಗಾಯತ್ರಿ ಪರಿವಾರ ಹಿಂದೂ ಸಂಘಟನೆಯ ಮುಖಂಡ ಪ್ರಣವ್ ಪಾಂಡ್ಯ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಮುಖ ನೋಡಲು ನಾವು ಬಯಸುವುದಿಲ್ಲ ಎಂದಿದ್ದಾರೆ.

ನಾವು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ನಾಯಕರೆಂದು ಒಪ್ಪುತ್ತೇವೆಯೇ ಹೊರತು, ರಾಹುಲ್ ಗಾಂಧಿಯವರನ್ನು ಒಪ್ಪುವುದಿಲ್ಲ. ನಾವು ಅವರ ಮುಖವನ್ನು ನೋಡಲು ಇಷ್ಟಪಡುವುದಿಲ್ಲ. ಅವರು ಬೇಕಾದರೆ ಭೇಟಿಯಾಗಲು ನಮ್ಮ ಬಳಿ ಬರಬಹುದು ಎಂದು ತಿಳಿಸಿದ್ದಾರೆ.

ಈಗಾಗಲೇ ಪ್ರಣವ್ ಪಾಂಡೆ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ಆರೆಸ್ಸೆಸ್ ಮುಖಂಡರನ್ನೂ ಪಾಂಡೆ ಭೇಟಿಯಾಗಿ ಚರ್ಚಿಸಿದ್ದಾರೆ. ಆದಾಗ್ಯೂ ಅಮಿತ್ ಶಾ ಅವರು ಪ್ರಣವ್ ಪಾಂಡೆ ಸೇರಿ ಹಲವು ಹಿಂದೂ ಸಂಘಟನೆಗಳ ಮುಖಂಡರನ್ನು ಭೇಟಿಯಾಗಿದ್ದಾರೆ.

  • Share On Facebook
  • Tweet It


- Advertisement -


Trending Now
ಮಂಗಳೂರಿನ ಕಥೆ ಏನಾಗಿತ್ತು?
Tulunadu News November 29, 2023
42 ಕೋಟಿ ಮನೆಯಲ್ಲಿ ಸಿಕ್ಕಿದ್ದ ಅಂಬಿಕಾಪತಿ ಸಾವಿನ ಬಗ್ಗೆ ಕೆಂಪಣ್ಣ ಹೇಳಿದ್ದೇನು?
Tulunadu News November 28, 2023
Leave A Reply

  • Recent Posts

    • ಮಂಗಳೂರಿನ ಕಥೆ ಏನಾಗಿತ್ತು?
    • 42 ಕೋಟಿ ಮನೆಯಲ್ಲಿ ಸಿಕ್ಕಿದ್ದ ಅಂಬಿಕಾಪತಿ ಸಾವಿನ ಬಗ್ಗೆ ಕೆಂಪಣ್ಣ ಹೇಳಿದ್ದೇನು?
    • ಕಾಂತಾರಾ - 1 ತುಳು ಭಾಷೆಗೆ ಡಬ್ ಆಗಲ್ವಾ?
    • ಮೀನಿನ ರೇಟ್ ಜಾಸ್ತಿ ಆಗಲು ಏನು ಕಾರಣ ಗೊತ್ತಾ?
    • ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ!
    • ದುಬಾರಿ ಗಿಫ್ಟ್ ಸಿಗದ ಕೋಪ, ಹೆಂಡತಿ ಹೊಡೆದು ಗಂಡ ಮೃತ್ಯು!
    • ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಜೋರು ಮಾಡಬಾರದಾ?
    • ಸರಕಾರಕ್ಕೆ ಶಾಲೆಯಲ್ಲಿ ಶಿಕ್ಷಣಕ್ಕಿಂತ ಆಹಾರವೇ ಮುಖ್ಯವಾಯಿತೇ!
    • ಬಸ್ ಕಂಡಕ್ಟರ್ ಗೆ ಚಾಕು ಹಾಕಿದವನ ಕಾಲಿಗೆ ಶೂಟ್ ಮಾಡಿ ಬಂಧಿಸಿದ ಯುಪಿ ಪೊಲೀಸರು
    • ಚೀನಾದಲ್ಲಿ ಮತ್ತೊಂದು ಸೋಂಕು, ಎಚ್ಚರವಹಿಸಲು ಭಾರತ ನಿರ್ಧಾರ
  • Popular Posts

    • 1
      ಮಂಗಳೂರಿನ ಕಥೆ ಏನಾಗಿತ್ತು?
    • 2
      42 ಕೋಟಿ ಮನೆಯಲ್ಲಿ ಸಿಕ್ಕಿದ್ದ ಅಂಬಿಕಾಪತಿ ಸಾವಿನ ಬಗ್ಗೆ ಕೆಂಪಣ್ಣ ಹೇಳಿದ್ದೇನು?
    • 3
      ಕಾಂತಾರಾ - 1 ತುಳು ಭಾಷೆಗೆ ಡಬ್ ಆಗಲ್ವಾ?
    • 4
      ಮೀನಿನ ರೇಟ್ ಜಾಸ್ತಿ ಆಗಲು ಏನು ಕಾರಣ ಗೊತ್ತಾ?
    • 5
      ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search