• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

35 ವರ್ಷದಿಂದ ಜನರಲ್ ಬಿಪಿನ್ ರಾವತ್ ಅವರು ಸಿನೆಮಾ ನೋಡಿಲ್ಲ. ಕಾರಣ ಕೇಳಿದರೇ ಹೆಮ್ಮೆ ಎನಿಸುತ್ತೆ

TNN Correspondent Posted On July 5, 2018


  • Share On Facebook
  • Tweet It

ದೆಹಲಿ: ಭಾರತೀಯ ಸೈನಿಕರು ತಮ್ಮ ಕುಟುಂಬವನ್ನು ಬಿಟ್ಟು, ತಮ್ಮ ಪ್ರಾಣ ಪಣಕ್ಕಿಟ್ಟು ದೇಶ ರಕ್ಷಣೆಗೆ ಹೋರಾಡುತ್ತಾರೆ. ಅದರ ಜೊತೆಗೆ ಆಗಾಗ ಸ್ವಲ್ಪ ಮನರಂಜನೆಗೆ ತಮ್ಮ ಶಿಬಿರದಲ್ಲೇ ಹಾಡು, ಕುಣಿತ ಮಾಡುತ್ತಾರೆ. ಇದೂ ಕೂಡ ವಿರಳಾತೀ ವಿರಳ ಎನ್ನಬಹುದು. ಇನ್ನು ಪ್ರಸ್ತುತ ದಿನಗಳಲ್ಲಿ ಯಾವುದೇ ಹುದ್ದೇಯಲ್ಲಿದ್ದರೂ ಸಿನೆಮಾ ನೋಡದವರು ಸಿಗುವುದು ಕಡಿಮೆ. ಅದರಲ್ಲೂ ಉನ್ನತ ಹುದ್ದೆಯಲ್ಲಿದ್ದವರು ತಮ್ಮ ಕೆಲಸದ ಒತ್ತಡದ ಮಧ್ಯೆ ಸಿನೆಮಾ ನೋಡುವುದು ಸಾಮಾನ್ಯ . ಆದರೇ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್  ಬಿಪಿನ್ ರಾವತ್  ಅವರು, 35 ವರ್ಷದಿಂದ ಸಿನೆಮಾವನ್ನೇ ನೋಡಿಲ್ಲ, ನನಗೆ ಮೂರು ಗಂಟೆ ಒಂದೇ ಕಡೆ ಕೂಡಲು  ಸಮಯ ಸಿಕ್ಕಿಲ್ಲ ಎಂಬ ಸತ್ಯವನ್ನು ಹೊರ ಹಾಕಿದ್ದಾರೆ. ಈ ಒಂದು ಮಾತು ಸೈನಿಕರಲ್ಲಿರುವ ಕಾರ್ಯತ್ಪರತೆ, ದೇಶ ಭಕ್ತಿಗೆ ಸಾಕ್ಷಿಯಾಗಿ ನಿಂತಿದೆ.

ದೆಹಲಿಯ ಪಬ್ಲಿಕ್ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳೊಂದಿಗಿನ ಸಂವಾದದ ವೇಳೆ 8ನೇ ತರಗತಿ ವಿದ್ಯಾರ್ಥಿ ಶ್ರೀವೋಮ್  ಕಶ್ಯಪ್  ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಶ್ವದ ಬಲಿಷ್ಠ ಸೈನಿಕ ಪಡೆಯ ಮುಖ್ಯಸ್ಥರಾಗಿರುವ ಜನರಲ್ ಬಿಪಿನ್ ರಾವತ್ ಅವರು ಕಳೆದ 35 ವರ್ಷದಿಂದ ಸಿನೆಮಾವನ್ನೇ ನೋಡಿಲ್ಲ ಎಂದು ಹೇಳಿದ್ದಾರೆ. ನನಗೆ 35 ವರ್ಷದಿಂದ ಸಿನೆಮಾ ನೋಡಲು ಮೂರು ಘಂಟೆ ಸಮಯ ದೊರಕ್ಕಿಲ್ಲ ಎಂಬ ಉತ್ತರವನ್ನು ನೀಡುವ ಮೂಲಕ ದೇಶಸೇವೆಗೆ ಅವರ ಕೊಡುಗೆ ಎಂಥಾದ್ದು ಎಂಬುದನ್ನು ತಿಳಿಸಿದ್ದಾರೆ.

ಅಲ್ಲದೇ ವಿದ್ಯಾರ್ಥಿಗಳಿಗೆ ಮಹತ್ವದ ಸಲಹೆಯನ್ನು ನೀಡಿರುವ ಅವರು ‘ಕಠಿಣ ಪರಿಶ್ರಮ ಪಡಿ. ಯಶಸ್ಸು ದೊರೆಯುತ್ತದೆ. ಜೀವನದಲ್ಲಿ ವಿಫಲರಾದವರನ್ನು ನೋಡದೇ ಮುನ್ನಡೆಯಿರಿ. ದೇಶಸೇವೆ ಮಾಡಲು ಮಕ್ಕಳು ಭವಿಷ್ಯದಲ್ಲಿ ಸೇನೆ ಸೇರಬೇಕು ಎಂದು ಹೇಳಿದರು.

ಭಾರತೀಯ ಸೇನೆಗೆ 1978 ಡಿಸೆಂಬರ್ 16ರಂದು  ಭಾರತೀಯ ಸೇನೆಗೆ ಸೇರ್ಪಡೆಯಾಗಿರುವ ರಾವತ್ ನಾನಾ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅವರ ದೇಶ ಸೇವೆ ಆರಂಭವಾಗಿ ಸುಮಾರು 40 ವರ್ಷಗಳಾಗಿದ್ದು, ಸುಮಾರು 35 ವರ್ಷದಿಂದ ಸಿನೆಮಾವನ್ನೇ ನೋಡಿಲ್ಲ. ನನಗೆ ಸಿನೆಮಾ ನೋಡಲು ಮೂರು ಘಂಟೆ ಸಮಯ ಸಿಕ್ಕಿಲ್ಲ ಎಂಬ ಅವರ ಮಾತು ಎಂಥವರಿಗೂ ದೇಶ ಸೇವಕನ ಕಾರ್ಯ ವೈಖರಿಗೆ ಹೆಮ್ಮೆ ಮೂಡಿಸದೇ ಇರದು. ಇಂಥವರಿಂದಲ್ಲವೇ ಭಾರತ  ರಕ್ಷಣಾ ವ್ಯವಸ್ಥೆ ಇಷ್ಟು ಬಲಿಷ್ಠವಾಗಿರುವುದು.

  • Share On Facebook
  • Tweet It


- Advertisement -


Trending Now
ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
Tulunadu News September 28, 2023
ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
Tulunadu News September 28, 2023
Leave A Reply

  • Recent Posts

    • ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
    • ಕಾಂಗ್ರೆಸ್ಸಿಗೆ ಇ.0.ಡಿ.ಯಾ ಮೈತ್ರಿಕೂಟದ ಒಳಗೆನೆ ಸ್ಪರ್ಧೆ!
    • ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
  • Popular Posts

    • 1
      ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • 2
      ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • 3
      ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • 4
      ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • 5
      ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search