• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರು ವಿವಿಯ ಲೇಡಿಸ್ ಟಾಯ್ಲೆಟ್ ಮೊಬೈಲ್ ಕ್ಯಾಮೆರಾ ಪ್ರಕರಣಕ್ಕೆ 2 ವರ್ಷ!

Tulunadu News Posted On August 1, 2018


  • Share On Facebook
  • Tweet It

ಭರ್ತಿ 2 ವರ್ಷಗಳಾಗುತ್ತಾ ಬಂದಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಯುವತಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಸೆಟ್ ಮಾಡಿದ ಘಟನೆ. ಅದು ಬೆಳಕಿಗೆ ಬರುವಾಗಲೇ ಸುಮಾರು ಹದಿನೈದು ದಿನ ತಡವಾಗಿತ್ತು. ಅದು ಮಾಧ್ಯಮಗಳಲ್ಲಿ ಬರದಂತೆ ಮಂಗಳೂರು ವಿವಿಯ ಅನೈತಿಕ ಕೃತ್ಯಗಳ ರಕ್ಷಣಾ ತಂಡ ಆಫ್ ಭೈರಪ್ಪ ಸಂಪೂರ್ಣ ಪ್ರಯತ್ನ ಮಾಡಿತ್ತು. ಆದರೆ ಅಗಸ್ಟ್ 31, 2016 ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಯಾವುದೋ ವಿಷಯ ಚರ್ಚೆಯಾದಾಗ ಅದರ ನಡುವೆ ಈ ವಿಷಯ ನುಸುಳಿದೆ. ಅಲ್ಲಿಂದ ಅದು ಪತ್ರಿಕೆಗಳಲ್ಲಿ ಬಂದಿದೆ. ನಂತರ ಟಿವಿ ವಾಹಿನಿಗಳಲ್ಲಿ ಚರ್ಚೆಯಾಗಿದೆ. ಯುವತಿಯರ ಟಾಯ್ಲೆಟಿನಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟವನು ಯಾರು ಎಂದು ಎಲ್ಲರಿಗೂ ಗೊತ್ತಾಗಿದೆ. ಅವನ ಸಂತೋಷ.

ಸಂತೋಷನನ್ನು ಪೊಲೀಸರು ಬಂಧಿಸಿದ್ದರು. ಭೈರಪ್ಪನವರು ಆವತ್ತು ಈ ವಿಷಯ ಬಹಿರಂಗೊಂಡ ನಂತರ ಬೇರೆ ದಾರಿ ಇಲ್ಲದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ಆಗ ಪೊಲೀಸ್ ಕಮೀಷನರ್ ಆಗಿದ್ದ ಚಂದ್ರಶೇಖರ್ ಅವರು ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದರು. ಸಂತೋಷ್ ಯಾವ ಅಂಗಡಿಯಿಂದ ಮೊಬೈಲ್ ಖರೀದಿಸಿದ್ದ ಎಂದು ತನಿಖೆ ಮೂಲಕ ಪತ್ತೆ ಹಚ್ಚಿದ್ದರು. ನಂತರ ಆ ಮೊಬೈಲ್ ಅಂಗಡಿಗೆ ತೆರಳಿ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಈ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿರುವುದು ಸ್ಪಷ್ಟವಾಗಿತ್ತು. ಆರೋಪಿ ಸಂತೋಷ್ ಮೇಲೆ ಭಾರತೀಯ ದಂಡ ಸಂಹಿತೆ 354 ಕಲಾಂ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಐಪಿಸಿ 354 ಅಂದರೆ ಮಹಿಳೆಯ ಮಾನಕ್ಕೆ ಕುಂದುತರುವ ಯತ್ನ. ನಿಜಕ್ಕೂ ಸಂತೋಷ್ ಮಾಡಿದ ದುಷ್ಕತ್ಯ ಚಿಕ್ಕದಲ್ಲವೇ ಅಲ್ಲ. ಇನ್ನು ತಾನು ಸಿಕ್ಕಿಬೀಳುವುದಿಲ್ಲವೆಂದು ಆರೋಪಿಗೆ ಸಂಪೂರ್ಣ ಧೈರ್ಯ ಇತ್ತು ಎಂದು ತನಿಖೆಯಿಂದ ಗೊತ್ತಾಗಿದೆ. ಈ ಕುರಿತು 84 ಹೆಣ್ಣುಮಕ್ಕಳನ್ನು ವಿಚಾರಿಸಲಾಗಿತ್ತು. ಸಂತೋಷನ ಗೆಳೆಯರನ್ನು ಮಾತನಾಡಿಸಿದಾಗ ಸಂತೋಷನಿಗೆ ತಾನು ಸಿಕ್ಕಿಬೀಳುವ ಚಾನ್ಸೆ ಇರಲಿಲ್ಲ ಎನ್ನುವ ಧೈರ್ಯ ಇತ್ತು ಎಂದು ಕೂಡ ಗೊತ್ತಾಗಿದೆ. ಹೀಗೆ ಪೊಲೀಸರು ಸೂಕ್ತವಾಗಿ ತನಿಖೆ ಮಾಡಿದ ಪರಿಣಾಮವಾಗಿ ಅನೇಕ ಹೆಣ್ಣುಮಕ್ಕಳು ನಿಟ್ಟುಸಿರುಬಿಟ್ಟಿದ್ದರು. ಕೊಣಾಜೆ ಪೊಲೀಸರ ತನಿಖೆಯ ವೇಗ ಕಂಡು ಖುಷಿಗೊಂಡ ಪೊಲೀಸ್ ಕಮೀಷನರ್ ಚಂದ್ರಶೇಖರ್ ಅವರು ಪೊಲೀಸ್ ಸಿಬ್ಬಂದಿಗಳಿಗೆ ಹತ್ತು ಸಾವಿರ ಇನಾಮು ಕೂಡ ನೀಡಿ ಪ್ರೋತ್ಸಾಹ ನೀಡಿದ್ದರು. ಇನ್ನೇನೂ ಸಂತೋಷನಿಗೆ ಈ ಪ್ರಕರಣದಲ್ಲಿ ಶಿಕ್ಷೆಯಾಗುತ್ತದೆ ಎಂದೇ ಎಲ್ಲರೂ ನಂಬಿದ್ದರು.

ಇಲ್ಲಿಯ ತನಕ ವರದಿ ಇಲ್ಲ..

ಆದರೆ ಈ ನಡುವೆ ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರೊಬ್ಬರು ಭೈರಪ್ಪನವರಿಗೆ ಹೋಗಿ ಪ್ರಕರಣ ಹಿಂದಕ್ಕೆ ಪಡೆದುಕೊಳ್ಳುವಂತೆ ಮನವೊಲಿಸಿದರು. ಯಾಕೆಂದರೆ ಸಂತೋಷ್ ಆ ಸಿಂಡಿಕೇಟ್ ಸದಸ್ಯನ ಜಾತಿ ಬಾಂಧವನಾಗಿದ್ದ. ತನ್ನ ಸಿಂಡಿಕೇಟ್ ಸದಸ್ಯನಿಗಾಗಿ ಭೈರಪ್ಪ ಕೊಣಾಜೆ ಪೊಲೀಸ್ ಠಾಣೆಯ ಅಧಿಕಾರಿಗೆ ಫೋನ್ ಮಾಡಿ ನೀವು ಈ ಕೇಸಿನಲ್ಲಿ ಮುಂದುವರೆಯುವುದು ಬೇಡಾ, ನಾವು ಈ ಪ್ರಕರಣವನ್ನು ಹಿಂದಕ್ಕೆ ಪಡೆದುಕೊಳ್ಳುತ್ತೇವೆ, ಸಂತೋಷ್ ಗೆ ಮಂಗಳೂರು ವಿವಿಯ ಆಂತರಿಕ ಸಮಿತಿಯಿಂದಲೇ ತನಿಖೆ ಮಾಡಿ ಶಿಕ್ಷೆ ನೀಡುತ್ತೇವೆ ಎಂದು ತಿಳಿಸಿದರು.

ಅದರ ನಂತರ ಲೇಡಿಸ್ ಟಾಯ್ಲೆಟಿನಲ್ಲಿ ಮೊಬೈಲ್ ಇಟ್ಟು ವಿದ್ಯಾರ್ಥಿನಿಯರ ವಿಡಿಯೋ ತೆಗೆಯುತ್ತಿದ್ದ ಸಂತೋಷನ ಪ್ರಕರಣವನ್ನು ವಿವಿಯ ಸ್ಪರ್ಶ ಎನ್ನುವ ಸಮಿತಿಗೆ ನೀಡಲಾಯಿತು. ಈ ಅಗಸ್ಟಿಗೆ ಈ ಪ್ರಕರಣ ನಡೆದು ಎರಡು ವರ್ಷಗಳಾಗುತ್ತಾ ಬಂತು. ಸ್ಪರ್ಶ ಸಮಿತಿ ಇಲ್ಲಿಯ ತನಕ ಯಾವುದೇ ವರದಿ ನೀಡಿಲ್ಲ. ಸಂತೋಷನ ಮೇಲೆ ಇಲ್ಲಿಯ ತನಕ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ಮಧ್ಯೆ ಇತ್ತೀಚೆಗೆ ಭೈರಪ್ಪ ನಿವೃತ್ತಿ ಹೊಂದಿದ್ದಾರೆ. ಅವರೊಂದಿಗೆ ಒಂದು ಸೆನ್ಸಿಟಿವ್ ಪ್ರಕರಣ ಕೂಡ ಹಳ್ಳ ಹಿಡಿದಿದೆ. ಅಷ್ಟಕ್ಕೂ ಈ ಪ್ರಕರಣ ಮುಚ್ಚಿ ಹಾಕಲು ತನು, ಮನ, ಧನ ಹಾಕಿ ಶ್ರಮಿಸಿದ ಯಾರಿಗೂ ಮಾನವೀಯತೆನೆ ಇಲ್ವಾ ಎನ್ನುವ ಪ್ರಶ್ನೆ ಉಳಿದಿದೆ. ಒಂದು ವೇಳೆ ತಮ್ಮ ಮನೆಯ ಸ್ನಾನಗೃಹ, ಶೌಚಾಲಯದಲ್ಲಿ ಯಾರಾದರೂ ಮೊಬೈಲ್ ಕ್ಯಾಮೆರಾ ಇಟ್ಟು ವಿಡಿಯೋ ಮಾಡಿದಿದ್ದರೆ ಹೀಗೆ ಎಲ್ಲರೂ ಅದನ್ನು ಮುಚ್ಚಿಹಾಕುತ್ತಿದ್ದರಾ? ಒಟ್ಟಿನಲ್ಲಿ ಸಂತೋಷ ಪ್ರಕರಣ ಇಂತಹದೇ ಕೆಟ್ಟ ಮನಸ್ಸಿನ ಬೇರೆಯವರಿಗೆ ಹೀಗೆ ಮಾಡಲು ಭೈರಪ್ಪ ಅಂಡ್ ಟೀಮ್ ಧೈರ್ಯ ಕೊಟ್ಟ ಹಾಗೆ ಆಗಿದೆ. ಹುಡುಗಿಯರೇ ನಿಮ್ಮ ಹುಶಾರಿನಲ್ಲಿ ನೀವಿರಿ ಎನ್ನುವುದು ನಮ್ಮ ಕಳಕಳಿ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search